Viral: ’70 ವರ್ಷದ ನನ್ನ ತಾಯಿ ನನಗಾಗಿ ಹಾಸಿಗೆ ಅಣಿಗೊಳಿಸುತ್ತಾರೆ’; ಕ್ಲಾಸ್ ತೆಗೆದುಕೊಂಡ ನೆಟ್ಟಿಗರು

Woman and Religion : ಇದು ಧರ್ಮವಲ್ಲ, ಧರ್ಮದ ಹೆಸರಿನಲ್ಲಿ ತಾಯಿಯನ್ನು ಶೋಷಿಸುತ್ತಿದ್ದೀರಿ ಎಂದಿದ್ದಾರೆ ಹಲವರು. ಆಕೆ ಪ್ರೀತಿಯಿಂದ ಮಾಡಿದರೆ ಮಾಡಲಿ ಬಿಡಿ ಎಂದು ಕೆಲವರಷ್ಟೇ ಈ ವ್ಯಕ್ತಿಯನ್ನು ಬೆಂಬಲಿಸಿದ್ದಾರೆ. ನೀವೇನಂತೀರಿ?

Viral: '70 ವರ್ಷದ ನನ್ನ ತಾಯಿ ನನಗಾಗಿ ಹಾಸಿಗೆ ಅಣಿಗೊಳಿಸುತ್ತಾರೆ'; ಕ್ಲಾಸ್ ತೆಗೆದುಕೊಂಡ ನೆಟ್ಟಿಗರು
70 ವರ್ಷದ ತಾಯಿ ಮಗನಿಗಾಗಿ ಹಾಸಿಗೆ ಅಣಿಗೊಳಿಸಿಟ್ಟಿರುವುದು.
Follow us
|

Updated on:Jul 11, 2023 | 2:55 PM

Mother : ಕಿಶೋರ್ ಕೆ. ಸ್ವಾಮಿ ಎಂಬ ವ್ಯಕ್ತಿ ಈ ಫೋಟೋ ಟ್ವೀಟ್ ಮಾಡಿ, ‘ನಾನು ಮನೆಗೆ ಹೋಗುವುದರೊಳಗೆ ನನ್ನ 70 ವರ್ಷದ ನನ್ನ ತಾಯಿ ನನ್ನ ಹಾಸಿಗೆಯನ್ನು ಅಣಿಗೊಳಿಸಿರುತ್ತಾರೆ. ಗೃಹಿಣಿಯ ಶಕ್ತಿ ಎಂದರೆ ಇದು. ಹಾಗಂತ ಆಕೆ ಇದನ್ನು ಕಡ್ಡಾಯವಾಗಿ ಮಾಡಲೇಬೇಕೆಂದೇನೂ ಇಲ್ಲ. ಆದರೆ ಇದನ್ನಾಕೆ ಪ್ರೀತಿಯಿಂದ ಮಾಡುತ್ತಾರೆ. ನಮ್ಮ ಧರ್ಮವು ರೂಢಿಸಿಕೊಂಡಿರುವ ಇಂಥ ಮೌಲ್ಯವ್ಯವಸ್ಥೆಯಿಂದಾಗಿಯೇ ಸಮಾಜವು ರಕ್ಷಿಸಲ್ಪಡುತ್ತದೆ’ ಹೀಗೆಂದು ನೋಟ್​ ಬರೆದಿದ್ದಾರೆ. ಇವರ ಈ ನಡೆವಳಿಕೆ ಮತ್ತು ಆಲೋಚನಾ ವಿಧಾನದಿಂದ ನೆಟ್ಟಿಗರು ಕಿಶೋರ್ ಎಂಬುವವರನ್ನು ತರಾಟೆಗೆ ತೆರೆದುಕೊಂಡಿದ್ದಾರೆ.

ಸುಮಾರು 73,000 ಜನರು ಈ ಟ್ವೀಟ್ ನೋಡಿದ್ದಾರೆ. ಸುಮಾರು 500 ಜನರು ಕೋಟ್ ಮಾಡಿದ್ದಾರೆ. ಸುಮಾರು 40 ಜನರು ರೀಟ್ವೀಟ್ ಮಾಡಿದ್ದಾರೆ. ಇದು ಧರ್ಮವಲ್ಲ, ಧರ್ಮದ ಹೆಸರಲ್ಲಿ ನೀವು ಹಿರಿಯರನ್ನು ಶೋಷಿಸುತ್ತಿದ್ದೀರಿ ಎಂದಿದ್ದಾರೆ ಕೆಲವರು. ಈ ವಯಸ್ಸಿನಲ್ಲಿ ನೀವು ನಿಮ್ಮ ತಾಯಿಯ ಹಾಸಿಗೆಯನ್ನು ಅಣಿಗೊಳಿಸಬೇಕೇ ವಿನಾ ಅವರಿಂದ ಇದೆಲ್ಲವನ್ನು ನಿರೀಕ್ಷಿಸಬಾರದು. ಇದು ನಾಚಿಕೆ ತರುವಂಥ ವಿಷಯ, ಆದರೆ ಇದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೀರಿ, ಛೆ… ಎಂದು ಝಾಡಿಸಿದ್ದಾರೆ ಒಬ್ಬರು.

ಇದನ್ನೂ ಓದಿ : Viral Video: ಭಾರತದ ಉಕ್ಕಿನ ಮಹಿಳೆ; ಈಕೆಯ ಸಾಹಸಕ್ಕೆ ದಂಗಾಗಿರುವ ನೆಟ್ಟಿಗರು

ತಾಯ್ತನವನ್ನೇ ಅರ್ಥ ಮಾಡಿಕೊಳ್ಳದ ಕೆಲ ಹೆಣ್ಣುಮಕ್ಕಳು ಹೀಗೆ ಪ್ರತಿಕ್ರಿಯಿಸಿದ್ದು ಅಚ್ಚರಿ ತಂದಿದೆ. ನಿಮ್ಮ ತಾಯಿಯೂ ನಿಮಗೂ ಹೀಗೆ ಮಾಡಿದರೆ ಖಂಡಿತ ನೀವೂ ಸಂತೋಷಪಡುತ್ತೀರಿ. ಆಕೆಗೆ ಹೀಗೆಲ್ಲ ಮಾಡಬೇಡ ಎಂದು ನೀವು ಹೇಳಬೇಡಿ. ಅದು ಆಕೆಯ ಸಂತೋಷ ಎಂದಿದ್ದಾರೆ ಒಬ್ಬರು. ಅವರಾಗಿಯೇ ಅದನ್ನು ಖುಷಿಯಿಂದ ಮಾಡುವಾಗ ಯಾಕೆ ಬೇಡ ಎನ್ನಬೇಕು ಎಂದು ಕೆಲವರಷ್ಟೇ ಪ್ರಶ್ನಿಸಿದ್ದಾರೆ. ಆದರೆ ಅನೇಕರು ಚೆನ್ನಾಗಿ ಬೈದಿದ್ದಾರೆ.

ನೀವೇನಂತೀರಿ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 2:52 pm, Tue, 11 July 23

20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್