AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ’70 ವರ್ಷದ ನನ್ನ ತಾಯಿ ನನಗಾಗಿ ಹಾಸಿಗೆ ಅಣಿಗೊಳಿಸುತ್ತಾರೆ’; ಕ್ಲಾಸ್ ತೆಗೆದುಕೊಂಡ ನೆಟ್ಟಿಗರು

Woman and Religion : ಇದು ಧರ್ಮವಲ್ಲ, ಧರ್ಮದ ಹೆಸರಿನಲ್ಲಿ ತಾಯಿಯನ್ನು ಶೋಷಿಸುತ್ತಿದ್ದೀರಿ ಎಂದಿದ್ದಾರೆ ಹಲವರು. ಆಕೆ ಪ್ರೀತಿಯಿಂದ ಮಾಡಿದರೆ ಮಾಡಲಿ ಬಿಡಿ ಎಂದು ಕೆಲವರಷ್ಟೇ ಈ ವ್ಯಕ್ತಿಯನ್ನು ಬೆಂಬಲಿಸಿದ್ದಾರೆ. ನೀವೇನಂತೀರಿ?

Viral: '70 ವರ್ಷದ ನನ್ನ ತಾಯಿ ನನಗಾಗಿ ಹಾಸಿಗೆ ಅಣಿಗೊಳಿಸುತ್ತಾರೆ'; ಕ್ಲಾಸ್ ತೆಗೆದುಕೊಂಡ ನೆಟ್ಟಿಗರು
70 ವರ್ಷದ ತಾಯಿ ಮಗನಿಗಾಗಿ ಹಾಸಿಗೆ ಅಣಿಗೊಳಿಸಿಟ್ಟಿರುವುದು.
ಶ್ರೀದೇವಿ ಕಳಸದ
|

Updated on:Jul 11, 2023 | 2:55 PM

Share

Mother : ಕಿಶೋರ್ ಕೆ. ಸ್ವಾಮಿ ಎಂಬ ವ್ಯಕ್ತಿ ಈ ಫೋಟೋ ಟ್ವೀಟ್ ಮಾಡಿ, ‘ನಾನು ಮನೆಗೆ ಹೋಗುವುದರೊಳಗೆ ನನ್ನ 70 ವರ್ಷದ ನನ್ನ ತಾಯಿ ನನ್ನ ಹಾಸಿಗೆಯನ್ನು ಅಣಿಗೊಳಿಸಿರುತ್ತಾರೆ. ಗೃಹಿಣಿಯ ಶಕ್ತಿ ಎಂದರೆ ಇದು. ಹಾಗಂತ ಆಕೆ ಇದನ್ನು ಕಡ್ಡಾಯವಾಗಿ ಮಾಡಲೇಬೇಕೆಂದೇನೂ ಇಲ್ಲ. ಆದರೆ ಇದನ್ನಾಕೆ ಪ್ರೀತಿಯಿಂದ ಮಾಡುತ್ತಾರೆ. ನಮ್ಮ ಧರ್ಮವು ರೂಢಿಸಿಕೊಂಡಿರುವ ಇಂಥ ಮೌಲ್ಯವ್ಯವಸ್ಥೆಯಿಂದಾಗಿಯೇ ಸಮಾಜವು ರಕ್ಷಿಸಲ್ಪಡುತ್ತದೆ’ ಹೀಗೆಂದು ನೋಟ್​ ಬರೆದಿದ್ದಾರೆ. ಇವರ ಈ ನಡೆವಳಿಕೆ ಮತ್ತು ಆಲೋಚನಾ ವಿಧಾನದಿಂದ ನೆಟ್ಟಿಗರು ಕಿಶೋರ್ ಎಂಬುವವರನ್ನು ತರಾಟೆಗೆ ತೆರೆದುಕೊಂಡಿದ್ದಾರೆ.

ಸುಮಾರು 73,000 ಜನರು ಈ ಟ್ವೀಟ್ ನೋಡಿದ್ದಾರೆ. ಸುಮಾರು 500 ಜನರು ಕೋಟ್ ಮಾಡಿದ್ದಾರೆ. ಸುಮಾರು 40 ಜನರು ರೀಟ್ವೀಟ್ ಮಾಡಿದ್ದಾರೆ. ಇದು ಧರ್ಮವಲ್ಲ, ಧರ್ಮದ ಹೆಸರಲ್ಲಿ ನೀವು ಹಿರಿಯರನ್ನು ಶೋಷಿಸುತ್ತಿದ್ದೀರಿ ಎಂದಿದ್ದಾರೆ ಕೆಲವರು. ಈ ವಯಸ್ಸಿನಲ್ಲಿ ನೀವು ನಿಮ್ಮ ತಾಯಿಯ ಹಾಸಿಗೆಯನ್ನು ಅಣಿಗೊಳಿಸಬೇಕೇ ವಿನಾ ಅವರಿಂದ ಇದೆಲ್ಲವನ್ನು ನಿರೀಕ್ಷಿಸಬಾರದು. ಇದು ನಾಚಿಕೆ ತರುವಂಥ ವಿಷಯ, ಆದರೆ ಇದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೀರಿ, ಛೆ… ಎಂದು ಝಾಡಿಸಿದ್ದಾರೆ ಒಬ್ಬರು.

ಇದನ್ನೂ ಓದಿ : Viral Video: ಭಾರತದ ಉಕ್ಕಿನ ಮಹಿಳೆ; ಈಕೆಯ ಸಾಹಸಕ್ಕೆ ದಂಗಾಗಿರುವ ನೆಟ್ಟಿಗರು

ತಾಯ್ತನವನ್ನೇ ಅರ್ಥ ಮಾಡಿಕೊಳ್ಳದ ಕೆಲ ಹೆಣ್ಣುಮಕ್ಕಳು ಹೀಗೆ ಪ್ರತಿಕ್ರಿಯಿಸಿದ್ದು ಅಚ್ಚರಿ ತಂದಿದೆ. ನಿಮ್ಮ ತಾಯಿಯೂ ನಿಮಗೂ ಹೀಗೆ ಮಾಡಿದರೆ ಖಂಡಿತ ನೀವೂ ಸಂತೋಷಪಡುತ್ತೀರಿ. ಆಕೆಗೆ ಹೀಗೆಲ್ಲ ಮಾಡಬೇಡ ಎಂದು ನೀವು ಹೇಳಬೇಡಿ. ಅದು ಆಕೆಯ ಸಂತೋಷ ಎಂದಿದ್ದಾರೆ ಒಬ್ಬರು. ಅವರಾಗಿಯೇ ಅದನ್ನು ಖುಷಿಯಿಂದ ಮಾಡುವಾಗ ಯಾಕೆ ಬೇಡ ಎನ್ನಬೇಕು ಎಂದು ಕೆಲವರಷ್ಟೇ ಪ್ರಶ್ನಿಸಿದ್ದಾರೆ. ಆದರೆ ಅನೇಕರು ಚೆನ್ನಾಗಿ ಬೈದಿದ್ದಾರೆ.

ನೀವೇನಂತೀರಿ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 2:52 pm, Tue, 11 July 23

ಚಿಕ್ಕಬಳ್ಳಾಪುರ: 1 ಕೋಟಿ 11 ಲಕ್ಷ ರೂ ಮೌಲ್ಯದ ಕುದುರೆಗೆ ಅದ್ದೂರಿ ಸ್ವಾಗತ
ಚಿಕ್ಕಬಳ್ಳಾಪುರ: 1 ಕೋಟಿ 11 ಲಕ್ಷ ರೂ ಮೌಲ್ಯದ ಕುದುರೆಗೆ ಅದ್ದೂರಿ ಸ್ವಾಗತ
ಸಿಬ್ಬಂದಿಯನ್ನ ಹೆದರಿಸಿ ಮಸಾಜ್​ ಮಾಡಿಸಿಕೊಂಡ ಮುಖ್ಯಶಿಕ್ಷಕಿ: ವಿಡಿಯೋ ವೈರಲ್
ಸಿಬ್ಬಂದಿಯನ್ನ ಹೆದರಿಸಿ ಮಸಾಜ್​ ಮಾಡಿಸಿಕೊಂಡ ಮುಖ್ಯಶಿಕ್ಷಕಿ: ವಿಡಿಯೋ ವೈರಲ್
ಬೀದರ್‌ನ ಐತಿಹಾಸಿಕ ಗುರುದ್ವಾರಕ್ಕೆ ಮತ್ತೊಮ್ಮೆ ಬಾಂಬ್ ಬೆದರಿಕೆ
ಬೀದರ್‌ನ ಐತಿಹಾಸಿಕ ಗುರುದ್ವಾರಕ್ಕೆ ಮತ್ತೊಮ್ಮೆ ಬಾಂಬ್ ಬೆದರಿಕೆ
ಬೆಂಗಳೂರಿನ ಹಲವೆಡೆ ಮಳೆ: ಸಿಲಿಕಾನ್ ಸಿಟಿ ಮತ್ತಷ್ಟು ಕೂಲ್ ಕೂಲ್
ಬೆಂಗಳೂರಿನ ಹಲವೆಡೆ ಮಳೆ: ಸಿಲಿಕಾನ್ ಸಿಟಿ ಮತ್ತಷ್ಟು ಕೂಲ್ ಕೂಲ್
ನಾವು ಆಯುರ್ವೇದಿಕ್ ಡಾಕ್ಟರ್ ಇದ್ದಂಗೆ, ನಮ್ಮದು ಸ್ಲೋ ಇರುತ್ತೆ: ಜಾರಕಿಹೊಳಿ
ನಾವು ಆಯುರ್ವೇದಿಕ್ ಡಾಕ್ಟರ್ ಇದ್ದಂಗೆ, ನಮ್ಮದು ಸ್ಲೋ ಇರುತ್ತೆ: ಜಾರಕಿಹೊಳಿ
ಲಾಸ್ ಏಂಜಲೀಸ್​​ನಲ್ಲಿ ಡೆಲ್ಟಾ ವಿಮಾನ ತುರ್ತು ಭೂಸ್ಪರ್ಶ
ಲಾಸ್ ಏಂಜಲೀಸ್​​ನಲ್ಲಿ ಡೆಲ್ಟಾ ವಿಮಾನ ತುರ್ತು ಭೂಸ್ಪರ್ಶ
ವೇಗವಾಗಿ ಬಂದ ಆಂಬ್ಯುಲೆನ್ಸ್​ ಕನ್ವಾರಿಯಾಗಳಿಗೆ ಡಿಕ್ಕಿ, ಇಬ್ಬರು ಸಾವು
ವೇಗವಾಗಿ ಬಂದ ಆಂಬ್ಯುಲೆನ್ಸ್​ ಕನ್ವಾರಿಯಾಗಳಿಗೆ ಡಿಕ್ಕಿ, ಇಬ್ಬರು ಸಾವು
ಹೆರಿಗೆಗೆಂದು ತವರಿಗೆ ಹೋದ ಟೆಕ್ಕಿ ಪತ್ನಿ, ಫ್ಲ್ಯಾಟ್​ ಮಾರಿ ಪತಿ ಪರಾರಿ
ಹೆರಿಗೆಗೆಂದು ತವರಿಗೆ ಹೋದ ಟೆಕ್ಕಿ ಪತ್ನಿ, ಫ್ಲ್ಯಾಟ್​ ಮಾರಿ ಪತಿ ಪರಾರಿ
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್​​ ಮುಕ್ತಿಗೆ ಪೊಲೀಸರಿಂದ ಮೆಗಾ ಪ್ಲ್ಯಾನ್
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್​​ ಮುಕ್ತಿಗೆ ಪೊಲೀಸರಿಂದ ಮೆಗಾ ಪ್ಲ್ಯಾನ್
ವಿಯೆಟ್ನಾಂನ ಹಾ ಲಾಂಗ್ ಕೊಲ್ಲಿಯಲ್ಲಿ ಹಡಗು ಮಗುಚಿ 34 ಮಂದಿ ಸಾವು
ವಿಯೆಟ್ನಾಂನ ಹಾ ಲಾಂಗ್ ಕೊಲ್ಲಿಯಲ್ಲಿ ಹಡಗು ಮಗುಚಿ 34 ಮಂದಿ ಸಾವು