AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಕಂಠಪೂರ್ತಿ ಕುಡಿದು ರಸ್ತೆ ಮಧ್ಯೆ ಕಿರುಚಿ, ಕುಣಿದಾಡಿದ ಯುವತಿ; ಅಮಲಿನಲ್ಲಿ ಅವಾಂತರ

ಹುಡುಗಿಯ ಉಪಟಳ ಸಹಿಸಲಾಗದ ಜನ ನಂತರ ಪೊಲೀಸರಿಗೆ ಕರೆ ಮಾಡಿದ್ದರು. ಆದರೆ ಪೊಲೀಸರು ಬರುವುದಕ್ಕೂ ಮೊದಲೇ ಆಕೆಯ ಸ್ನೇಹಿತರ ಕಾರು ಬಂದ ಕಾರಣ ಅವಳು ಕಾರು ಹತ್ತಿ ಕಾಲ್ಕಿತ್ತಿದ್ದಾಳೆ.

Video: ಕಂಠಪೂರ್ತಿ ಕುಡಿದು ರಸ್ತೆ ಮಧ್ಯೆ ಕಿರುಚಿ, ಕುಣಿದಾಡಿದ ಯುವತಿ; ಅಮಲಿನಲ್ಲಿ ಅವಾಂತರ
ಕುಡಿದು ಕೂಗಾಡಿದ ಯುವತಿ
TV9 Web
| Edited By: |

Updated on:Sep 04, 2021 | 1:48 PM

Share

ಮಹಾರಾಷ್ಟ್ರ (Maharashtra)ದ ಅಂಬರ್​ನಾಥ್​ ಫೂರ್ವದಲ್ಲಿರುವ ಗೋವಿಂದ ಸೇತುವೆ ಬಳಿಯ ಡಿಪಿ ರಸ್ತೆ (DP Road)ಯಲ್ಲಿ ಹುಡುಗಿಯೊಬ್ಬಳು ನಿನ್ನೆ ರಾತ್ರಿ ಸಿಕ್ಕಾಪಟೆ ತೊಂದರೆ ನೀಡಿದ್ದಾಳೆ. ಕಂಠಪೂರ್ತಿ ಕುಡಿದು ಬೇಕಾಬಿಟ್ಟಿ ನಡೆದಾಡಿದ್ದಾಳೆ. ರಸ್ತೆ ಮಧ್ಯೆ ನಿಂತು ವಾಹನ ಸವಾರರಿಗೆ ತೊಂದರೆ ಕೊಟ್ಟಿದ್ದಾಳೆ. ಈ ವಿಡಿಯೋ ಇದೀಗ ಸೋಷಿಯಲ್​ ಮೀಡಿಯಾ (Social Media)ಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ. ಅಮಲಿನಲ್ಲಿ ಅವಾಂತರ ಸೃಷ್ಟಿಸಿದ ಯುವತಿಯ ವಿಡಿಯೋ ಕಳೆದ ಒಂದು ತಾಸಿನಿಂದಲೂ ಹರಿದಾಡುತ್ತಿದೆ.

ಜೀನ್ಸ್​ಪ್ಯಾಂಟ್​, ಕೆಂಪು ಬಣ್ಣದ ಟಾಪ್​ ಧರಿಸಿರುವ ಯುವತಿ ರಸ್ತೆ ಮಧ್ಯೆ ನಿಂತು ಗಲಾಟೆ ಮಾಡಿದ್ದಾಳೆ. ವಾಹನ ಸವಾರರನ್ನು ತಡೆದು, ಸವಾರರಿಗೆ ಬಾಯಿಗೆ ಬಂದಂತೆ ಬೈದಿದ್ದಾಳೆ. ಆಕೆ ಆಟವನ್ನು ನೋಡಿ ಹಲವರು ತಮ್ಮ ಗಾಡಿ ನಿಲ್ಲಿಸಿದ್ದಾರೆ. ಆಕೆಯ ಬಳಿ ಮಾತನಾಡಲೂ ಕೆಲವರು ಪ್ರಯತ್ನಿಸಿದ್ದಾರೆ. ಆದರೆ ಹುಡುಗಿ ತನ್ನ ಮೇಲೆ ಸಂಪೂರ್ಣವಾಗಿ ನಿಯಂತ್ರಣ ಕಳೆದುಕೊಂಡಿದ್ದಳು. ಅಲ್ಲಿದ್ದವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದನ್ನು ವಿಡಿಯೋದಲ್ಲಿ ನೋಡಬಹುದು.

ಆಕೆಯ ಉಪಟಳ ಸಹಿಸಲಾಗದ ಜನ ನಂತರ ಪೊಲೀಸರಿಗೆ ಕರೆ ಮಾಡಿದ್ದರು. ಆದರೆ ಪೊಲೀಸರು ಬರುವುದಕ್ಕೂ ಮೊದಲೇ ಆಕೆಯ ಸ್ನೇಹಿತರ ಕಾರು ಬಂದ ಕಾರಣ ಅವಳು ಕಾರು ಹತ್ತಿ ಕಾಲ್ಕಿತ್ತಿದ್ದಾಳೆ. ಈ ರೋಡಿನಲ್ಲಿ ಪದೇಪದೆ ಇಂಥ ಘಟನೆ ನಡೆಯುತ್ತಿದೆ. ಪೊಲೀಸರು ಇಲ್ಲಿ ಗಸ್ತು ಹೆಚ್ಚಿಸಬೇಕು. ರಾತ್ರಿ ಕುಡಿದು ಓಡಾಡುವವರು, ಗಲಾಟೆ ಮಾಡುವವರನ್ನು ನಿಯಂತ್ರಿಸಬೇಕು ಎಂದು ಸ್ಥಳೀಯ ನಾಗರಿಕರು ಎಚ್ಚರಿಸಿದ್ದಾರೆ.

ಇಂಥದ್ದೇ ಘಟನೆ ನಡೆದಿತ್ತು ! ಕೆಲವು ದಿನಗಳ ಹಿಂದೆಯೂ ಇಂಥದ್ದೇ ಒಂದು ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿತ್ತು. ಯುವತಿಯೊಬ್ಬಳು ಭರ್ಜರಿ ಕುಡಿದು ಪುಣೆಯ ತಿಲಕ್ ರಸ್ತೆಯ ಹೀರಾಭಾಗ್ ಚೌಕ್​ನಲ್ಲಿ ನೆಲಕ್ಕೆ ಬಿದ್ದು ಹೊರಳಾಡಿದ್ದಳು. ಮಧ್ಯ ರಸ್ತೆಯಲ್ಲಿ ಯೋಗಾಸನ ಮಾಡಿದ ವಿಡಿಯೋ ವೈರಲ್ ಆಗಿತ್ತು. ಆ ಯುವತಿ ಕೂಡ ಜೀನ್ಸ್​ ಮತ್ತು ಕೆಂಪು ಬಣ್ಣದ ಟಾಪ್​ ಧರಿಸಿದ್ದಳು. ಅಂದು ಆ ಯುವತಿ ಉದ್ದಕ್ಕೆ ಮಲಗಿ ವಾಹನಗಳನ್ನು ನೋಡುತ್ತಿದ್ದಳು. ಸ್ಥಳೀಯರು ಏನೂ ಮಾಡಲು ತೋಚದೆ ಪೊಲೀಸರಿಗೆ ದೂರು ನೀಡಿದ್ದರು. ಅಲ್ಲಿಗೆ ಬಂದ ಪೊಲೀಸರು ಯುವತಿಯನ್ನು ಕರೆದುಕೊಂಡು ಹೋಗಿದ್ದರು.

ಇದನ್ನೂ ಓದಿ: ಕುಡಿದು ರೈಲಿನಲ್ಲಿ ಅರೆ ನಗ್ನವಾಗಿ ಓಡಾಡಿದ ಜೆಡಿಯು ಶಾಸಕ ನನ್ನ ಚಿನ್ನದ ಉಂಗುರ ಕಿತ್ತುಕೊಂಡರು; ಸಹ ಪ್ರಯಾಣಿಕ ದೂರು

ಕರ್ನಾಟಕ ಭೂ ಕಂದಾಯ ಕಾಯಿದೆಯಡಿ ಆದಾಯ ಮಿತಿಗೆ ತಿದ್ದುಪಡಿ ತರಲು ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ

Published On - 1:47 pm, Sat, 4 September 21

ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಸೋನಲ್-ತರುಣ್ ಗೃಹಪ್ರವೇಶ; ಇಲ್ಲಿದೆ ಸುಂದರ ವಿಡಿಯೋ
ಸೋನಲ್-ತರುಣ್ ಗೃಹಪ್ರವೇಶ; ಇಲ್ಲಿದೆ ಸುಂದರ ವಿಡಿಯೋ
ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ
ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ
ಜನಾರ್ದನ ರೆಡ್ಡಿ ಮನೆ ಮುಂದಿನ ಸಂಘರ್ಷದ ಭೀಕರತೆ ಬಿಚ್ಚಿಟ್ಟ ವಿಡಿಯೋ
ಜನಾರ್ದನ ರೆಡ್ಡಿ ಮನೆ ಮುಂದಿನ ಸಂಘರ್ಷದ ಭೀಕರತೆ ಬಿಚ್ಚಿಟ್ಟ ವಿಡಿಯೋ
ಮೋಸದಿಂದ ಕೊನೆಯ ಕ್ಯಾಪ್ಟನ್ ಆದ್ರಾ ಧನುಷ್? ಬಿಗ್ ಬಾಸ್ ಪ್ರಶ್ನೆ
ಮೋಸದಿಂದ ಕೊನೆಯ ಕ್ಯಾಪ್ಟನ್ ಆದ್ರಾ ಧನುಷ್? ಬಿಗ್ ಬಾಸ್ ಪ್ರಶ್ನೆ