AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಗುದದ್ವಾರದಲ್ಲಿ ಮೊಬೈಲ್​ ಅಡಗಿಸಿಟ್ಟು ಪೇಚಾಟಕ್ಕೆ ಸಿಲುಕಿದ ಖೈದಿ

ಖೈದಿಯೊಬ್ಬ ಯಾರಿಗೂ ತಿಳಿಯದಂತೆ ಜೈಲಿಗೆ ಮೊಬೈಲ್​​​ ಕೊಂಡೊಯ್ಯಲು ಸಖತ್​​ ಆಗಿ ಪ್ಲಾನ್​ ಮಾಡಿದ್ದಾನೆ. ಆದರೆ ಜೈಲಿನ ಗೇಟ್‌ ಬಳಿ ಭದ್ರತಾ ಸಿಬ್ಬಂದಿಗಳನ್ನು ಕಂಡು ಬೆಚ್ಚಿ ಬಿದ್ದಿದ್ದಾನೆ. ಹೀಗಾಗಿ ಸಿಕ್ಕಿಬೀಳುವ ಭಯದಿಂದ ಗುದದ್ವಾರದೊಳಗೆ ಮೊಬೈಲ್ ಬಚ್ಚಿಟ್ಟಿದ್ದಾನೆ.

Viral News: ಗುದದ್ವಾರದಲ್ಲಿ ಮೊಬೈಲ್​ ಅಡಗಿಸಿಟ್ಟು ಪೇಚಾಟಕ್ಕೆ ಸಿಲುಕಿದ ಖೈದಿ
ಸಾಂದರ್ಭಿಕ ಚಿತ್ರImage Credit source: Pinterest
Follow us
ಅಕ್ಷತಾ ವರ್ಕಾಡಿ
|

Updated on:Feb 05, 2024 | 5:13 PM

ಕೋಲ್ಕತ್ತಾ: ಜೈಲಿನಲ್ಲಿ ಖೈದಿಗಳಿಗೆ ಮೊಬೈಲ್ ಫೋನ್ ಬಳಕೆ ನಿಷೇಧಿಸಿದ್ದರೂ ಕೂಡ ಖೈದಿಯೊಬ್ಬ ಯಾರಿಗೂ ತಿಳಿಯದಂತೆ ಮೊಬೈಲ್​​​ ಕೊಂಡೊಯ್ಯಲು ಸಖತ್​​ ಆಗಿ ಪ್ಲಾನ್​ ಮಾಡಿದ್ದಾನೆ. ಜೈಲು ಪ್ರವೇಶಿಸುವ ಮೊದಲು,ಭದ್ರತಾ ಸಿಬ್ಬಂದಿಗಳ ಕೈಗೆ ಸಿಕ್ಕಿಬೀಳುವ ಭಯದಿಂದ ಗುದದ್ವಾರದೊಳಗೆ ಮೊಬೈಲ್ ಬಚ್ಚಿಟ್ಟಿದ್ದಾನೆ. ಗುದದ್ವಾರದಲ್ಲಿ ಮೊಬೈಲ್​ ಅಡಗಿಸಿಟ್ಟು ಪೇಚಾಟಕ್ಕೆ ಸಿಲುಕಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು, ಇದೀಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಘಟನೆ ಬರುಯಿಪುರ ಕೇಂದ್ರ ಸುಧಾರಣಾ ಕೇಂದ್ರದಲ್ಲಿ ನಡೆದಿದೆ.

ಖೈದಿ ಅಸ್ಲಾಂ ಶೇಖ್(30) ಭಾನುವಾರ ಮಧ್ಯಾಹ್ನ ಬರುಯಿಪುರ ನ್ಯಾಯಾಲಯದಿಂದ ಬರುಯಿಪುರ ಸುಧಾರಣಾ ಸೌಲಭ್ಯಕ್ಕೆ ತೆರಳಿದ್ದರು. ಜೈಲಿಗೆ ಬರುವ ಮುನ್ನ ತನ್ನ ಬಳಿ ಮೊಬೈಲ್ ಇಟ್ಟುಕೊಂಡಿದ್ದ ಅಸ್ಲಾಂ. ಆದರೆ ಜೈಲಿನ ಗೇಟ್‌ ಬಳಿ ಭದ್ರತಾ ತಪಾಸಣೆ ಕಂಡು ಅಸ್ಲಾಂ ಬೆಚ್ಚಿಬಿದ್ದಿದ್ದರು. ಹೀಗಾಗಿ ಸಿಕ್ಕಿಬೀಳುವ ಭಯದಿಂದ ಗುದದ್ವಾರದೊಳಗೆ ಮೊಬೈಲ್ ಬಚ್ಚಿಟ್ಟಿದ್ದಾನೆ. ಆದರೆ ಈತನ ಮಾಸ್ಟರ್​​ ಪ್ಲಾನ್​​ನಿಂದ​​​ ಪಚೀತಿಗೆ ಸಿಲುಕಿಕೊಂಡಿದ್ದಾನೆ.

ಇದನ್ನೂ ಓದಿ: ಗೂಢಚಾರಿಕೆ ಆರೋಪದಡಿ ಪೊಲೀಸ್​​ ವಶದಲ್ಲಿದ್ದ ಪಾರಿವಾಳಕ್ಕೆ ಕಡೆಗೂ ಬಿಡುಗಡೆ

ಹೇಗಾದರೂ ಮಾಡಿ ಅಸ್ಲಾಂ ಗುದದ್ವಾರದಿಂದ ಮೊಬೈಲ್ ತೆಗೆಯಲು ಯತ್ನಿಸಿದ್ದಾನೆ. ಆದರೆ ಹಲವಾರು ಪ್ರಯತ್ನಗಳ ಹೊರತಾಗಿಯೂ (ಹಲವಾರು ಬಾಳೆಹಣ್ಣುಗಳನ್ನು ತಿನ್ನುವ ಮೂಲಕ ಅದನ್ನು ಹೊರಹಾಕಲು ಪ್ರಯತ್ನಿಸಿದರು) ಅಸ್ಲಾಮ್ನ ಗುದದ್ವಾರದಿಂದ ಮೊಬೈಲ್ ಫೋನ್ ಅನ್ನು ಹೊರತೆಗೆಯಲು ಸಾಧ್ಯವಾಗಲಿಲ್ಲ. ಅಷ್ಟೊತ್ತಿಗಾಗಲೇ ಆತನ ಪೇಚಾಟ ಕಂಡು ಪೊಲೀಸರಿಗೆ ಮಾಹಿತಿ ತಿಳಿದಿದೆ. ನಂತರ ಆತನನ್ನು ಬರುಯಿಪುರ ರಾಜ್ಯ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅಲ್ಲಿ ವೈದ್ಯರು ಪ್ರಯತ್ನಿಸಿದರೂ ಮೊಬೈಲ್ ಅನ್ನು ಹೊರತರಲು ಸಾಧ್ಯವಾಗಲಿಲ್ಲ. ಇದರ ನಂತರ, ಅಸ್ಲಾಮ್ ಅವರನ್ನು ಬರುಯಿಪುರ ಆಸ್ಪತ್ರೆಯಿಂದ ಕೋಲ್ಕತ್ತಾದ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಸದ್ಯ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 5:11 pm, Mon, 5 February 24

ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಭಾರತದ ಷರತ್ತುಗಳನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಯದುವೀರ್
ಭಾರತದ ಷರತ್ತುಗಳನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಯದುವೀರ್
ಮೈಸೂರು ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಸಂಸದ ಯದುವೀರ್ ಮಹತ್ವದ ಮಾಹಿತಿ
ಮೈಸೂರು ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಸಂಸದ ಯದುವೀರ್ ಮಹತ್ವದ ಮಾಹಿತಿ
ಮಳೆಗಾಲವನ್ನು ನೆನಪಿಸಿಕೊಳ್ಳಲೂ ಸಾಯಿ ಲೇಔಟ್ ಜನ ತಯಾರಿಲ್ಲ!
ಮಳೆಗಾಲವನ್ನು ನೆನಪಿಸಿಕೊಳ್ಳಲೂ ಸಾಯಿ ಲೇಔಟ್ ಜನ ತಯಾರಿಲ್ಲ!
ಸೋಫಿಯಾ ಮಾವನ ಮನೆ ಮೇಲೆ ದಾಳಿ ನಡೆಸುವ ಮನಸ್ಥಿತಿ ಕನ್ನಡಿಗರು ಕ್ಷಮಿಸಲಾರರು
ಸೋಫಿಯಾ ಮಾವನ ಮನೆ ಮೇಲೆ ದಾಳಿ ನಡೆಸುವ ಮನಸ್ಥಿತಿ ಕನ್ನಡಿಗರು ಕ್ಷಮಿಸಲಾರರು
ನೆಚ್ಚಿನ ನಾಯಕಿಯ ಯಶಸ್ಸಿಗೆ ಹರಕೆ ತೀರಿಸಿದ ಡ್ರೋನ್ ಪ್ರತಾಪ್
ನೆಚ್ಚಿನ ನಾಯಕಿಯ ಯಶಸ್ಸಿಗೆ ಹರಕೆ ತೀರಿಸಿದ ಡ್ರೋನ್ ಪ್ರತಾಪ್