AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಗುದದ್ವಾರದಲ್ಲಿ ಮೊಬೈಲ್​ ಅಡಗಿಸಿಟ್ಟು ಪೇಚಾಟಕ್ಕೆ ಸಿಲುಕಿದ ಖೈದಿ

ಖೈದಿಯೊಬ್ಬ ಯಾರಿಗೂ ತಿಳಿಯದಂತೆ ಜೈಲಿಗೆ ಮೊಬೈಲ್​​​ ಕೊಂಡೊಯ್ಯಲು ಸಖತ್​​ ಆಗಿ ಪ್ಲಾನ್​ ಮಾಡಿದ್ದಾನೆ. ಆದರೆ ಜೈಲಿನ ಗೇಟ್‌ ಬಳಿ ಭದ್ರತಾ ಸಿಬ್ಬಂದಿಗಳನ್ನು ಕಂಡು ಬೆಚ್ಚಿ ಬಿದ್ದಿದ್ದಾನೆ. ಹೀಗಾಗಿ ಸಿಕ್ಕಿಬೀಳುವ ಭಯದಿಂದ ಗುದದ್ವಾರದೊಳಗೆ ಮೊಬೈಲ್ ಬಚ್ಚಿಟ್ಟಿದ್ದಾನೆ.

Viral News: ಗುದದ್ವಾರದಲ್ಲಿ ಮೊಬೈಲ್​ ಅಡಗಿಸಿಟ್ಟು ಪೇಚಾಟಕ್ಕೆ ಸಿಲುಕಿದ ಖೈದಿ
ಸಾಂದರ್ಭಿಕ ಚಿತ್ರImage Credit source: Pinterest
ಅಕ್ಷತಾ ವರ್ಕಾಡಿ
|

Updated on:Feb 05, 2024 | 5:13 PM

Share

ಕೋಲ್ಕತ್ತಾ: ಜೈಲಿನಲ್ಲಿ ಖೈದಿಗಳಿಗೆ ಮೊಬೈಲ್ ಫೋನ್ ಬಳಕೆ ನಿಷೇಧಿಸಿದ್ದರೂ ಕೂಡ ಖೈದಿಯೊಬ್ಬ ಯಾರಿಗೂ ತಿಳಿಯದಂತೆ ಮೊಬೈಲ್​​​ ಕೊಂಡೊಯ್ಯಲು ಸಖತ್​​ ಆಗಿ ಪ್ಲಾನ್​ ಮಾಡಿದ್ದಾನೆ. ಜೈಲು ಪ್ರವೇಶಿಸುವ ಮೊದಲು,ಭದ್ರತಾ ಸಿಬ್ಬಂದಿಗಳ ಕೈಗೆ ಸಿಕ್ಕಿಬೀಳುವ ಭಯದಿಂದ ಗುದದ್ವಾರದೊಳಗೆ ಮೊಬೈಲ್ ಬಚ್ಚಿಟ್ಟಿದ್ದಾನೆ. ಗುದದ್ವಾರದಲ್ಲಿ ಮೊಬೈಲ್​ ಅಡಗಿಸಿಟ್ಟು ಪೇಚಾಟಕ್ಕೆ ಸಿಲುಕಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು, ಇದೀಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಘಟನೆ ಬರುಯಿಪುರ ಕೇಂದ್ರ ಸುಧಾರಣಾ ಕೇಂದ್ರದಲ್ಲಿ ನಡೆದಿದೆ.

ಖೈದಿ ಅಸ್ಲಾಂ ಶೇಖ್(30) ಭಾನುವಾರ ಮಧ್ಯಾಹ್ನ ಬರುಯಿಪುರ ನ್ಯಾಯಾಲಯದಿಂದ ಬರುಯಿಪುರ ಸುಧಾರಣಾ ಸೌಲಭ್ಯಕ್ಕೆ ತೆರಳಿದ್ದರು. ಜೈಲಿಗೆ ಬರುವ ಮುನ್ನ ತನ್ನ ಬಳಿ ಮೊಬೈಲ್ ಇಟ್ಟುಕೊಂಡಿದ್ದ ಅಸ್ಲಾಂ. ಆದರೆ ಜೈಲಿನ ಗೇಟ್‌ ಬಳಿ ಭದ್ರತಾ ತಪಾಸಣೆ ಕಂಡು ಅಸ್ಲಾಂ ಬೆಚ್ಚಿಬಿದ್ದಿದ್ದರು. ಹೀಗಾಗಿ ಸಿಕ್ಕಿಬೀಳುವ ಭಯದಿಂದ ಗುದದ್ವಾರದೊಳಗೆ ಮೊಬೈಲ್ ಬಚ್ಚಿಟ್ಟಿದ್ದಾನೆ. ಆದರೆ ಈತನ ಮಾಸ್ಟರ್​​ ಪ್ಲಾನ್​​ನಿಂದ​​​ ಪಚೀತಿಗೆ ಸಿಲುಕಿಕೊಂಡಿದ್ದಾನೆ.

ಇದನ್ನೂ ಓದಿ: ಗೂಢಚಾರಿಕೆ ಆರೋಪದಡಿ ಪೊಲೀಸ್​​ ವಶದಲ್ಲಿದ್ದ ಪಾರಿವಾಳಕ್ಕೆ ಕಡೆಗೂ ಬಿಡುಗಡೆ

ಹೇಗಾದರೂ ಮಾಡಿ ಅಸ್ಲಾಂ ಗುದದ್ವಾರದಿಂದ ಮೊಬೈಲ್ ತೆಗೆಯಲು ಯತ್ನಿಸಿದ್ದಾನೆ. ಆದರೆ ಹಲವಾರು ಪ್ರಯತ್ನಗಳ ಹೊರತಾಗಿಯೂ (ಹಲವಾರು ಬಾಳೆಹಣ್ಣುಗಳನ್ನು ತಿನ್ನುವ ಮೂಲಕ ಅದನ್ನು ಹೊರಹಾಕಲು ಪ್ರಯತ್ನಿಸಿದರು) ಅಸ್ಲಾಮ್ನ ಗುದದ್ವಾರದಿಂದ ಮೊಬೈಲ್ ಫೋನ್ ಅನ್ನು ಹೊರತೆಗೆಯಲು ಸಾಧ್ಯವಾಗಲಿಲ್ಲ. ಅಷ್ಟೊತ್ತಿಗಾಗಲೇ ಆತನ ಪೇಚಾಟ ಕಂಡು ಪೊಲೀಸರಿಗೆ ಮಾಹಿತಿ ತಿಳಿದಿದೆ. ನಂತರ ಆತನನ್ನು ಬರುಯಿಪುರ ರಾಜ್ಯ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅಲ್ಲಿ ವೈದ್ಯರು ಪ್ರಯತ್ನಿಸಿದರೂ ಮೊಬೈಲ್ ಅನ್ನು ಹೊರತರಲು ಸಾಧ್ಯವಾಗಲಿಲ್ಲ. ಇದರ ನಂತರ, ಅಸ್ಲಾಮ್ ಅವರನ್ನು ಬರುಯಿಪುರ ಆಸ್ಪತ್ರೆಯಿಂದ ಕೋಲ್ಕತ್ತಾದ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಸದ್ಯ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 5:11 pm, Mon, 5 February 24

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ