AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ರೈಲು ಹಳಿ ಮಧ್ಯೆ ಸಿಲುಕಿಕೊಂಡ ಸ್ಕೂಟರ್​; ಕೂದಲೆಳೆಯ ಅಂತರದಲ್ಲಿ ವ್ಯಕ್ತಿ ಪಾರು

ವ್ಯಕ್ತಿಯೋರ್ವ ತನ್ನ ಸ್ಕೂಟರ್​ ಜತೆ ರೈಲು ಹಳಿ ದಾಟುತ್ತಿರುತ್ತಾನೆ. ಹಳಿ ಮಧ್ಯದಲ್ಲಿ ಸ್ಕೂಟರ್​ ಸಿಲುಕಿಕೊಂಡಿದೆ. ಅದೇ ಸಮಯಕ್ಕೆ ಎದುರಿನಿಂದ ರೈ ಬರುವುದು ಕಾಣಿಸುತ್ತದೆ.

Viral Video: ರೈಲು ಹಳಿ ಮಧ್ಯೆ ಸಿಲುಕಿಕೊಂಡ ಸ್ಕೂಟರ್​; ಕೂದಲೆಳೆಯ ಅಂತರದಲ್ಲಿ ವ್ಯಕ್ತಿ ಪಾರು
ರೈಲು ಹಳಿ ಮಧ್ಯೆ ಸಿಲುಕಿಕೊಂಡ ಸ್ಕೂಟರ್
TV9 Web
| Edited By: |

Updated on:Jul 07, 2021 | 11:11 PM

Share

ರೈಲು ಹಳಿಯಲ್ಲಿ ಸೆರೆಯಾದ ಭಯಾನಕ ದೃಶ್ಯವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಹಳಿಯ ಮಧ್ಯೆ ವ್ಯಕ್ತಿಯ ದ್ವಿಚಕ್ರ ವಾಹನ ಸಿಲುಕಿಕೊಂಡಿದೆ. ಎದುರು ರೈಲು ಬರುತ್ತಿದ್ದರೂ ವ್ಯಕ್ತಿ ಹಳಿ ಬಿಟ್ಟು ಬರುತ್ತಿಲ್ಲ. ಇನ್ನೇನು ರೈಲ್ವೆ ಹತ್ತಿರಕ್ಕೆ ಬಂದೇ ಬಿಟ್ಟಿದೆ ಅನ್ನುವಷ್ಟರಲ್ಲಿ ವ್ಯಕ್ತಿ ಪಾರಾಗುತ್ತಾನೆ. ಕೂದಲೆಳೆಯ ಅಂತರದಲ್ಲಿ ವ್ಯಕ್ತಿಯ ಪ್ರಾಣ ಉಳಿದಿದೆ. ವಿಡಿಯೋ ನೋಡಿದ ನೆಟ್ಟಿಗರು ವ್ಯಕ್ತಿ ಸ್ಟಂಟ್​ ಮಾಡುತ್ತಿದ್ದನಾ? ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಕೆಲವರು, ಜೀವಕ್ಕಿಂತ ಸ್ಕೂಟರ್​ ಮುಖ್ಯವಾಗಿತ್ತೆ ಎಂದು ಪ್ರಶ್ನಿಸಿದ್ದಾರೆ. 

ಗುಜರಾತ್​ನ ರೈಲು ಹಳಿ ಮಧ್ಯೆ ಈ ಘಟನೆ ಸಂಭವಿಸಿದೆ. ವ್ಯಕ್ತಿಯೋರ್ವ ತನ್ನ ಸ್ಕೂಟರ್​ ಜತೆ ಹಳಿ ದಾಟುತ್ತಿರುತ್ತಾನೆ. ಹಳಿ ಮಧ್ಯದಲ್ಲಿ ಸ್ಕೂಟರ್​ ಸಿಲುಕಿಕೊಂಡಿದೆ. ಒಂದಷ್ಟು ಸಮಯ ಸ್ಕೂಟರ್​ನ್ನು ಹಳಿಯಿಂದ ತಪ್ಪಿಸಲು ಪ್ರಯತ್ನಿಸುತ್ತಾನೆ. ಆದರೆ ಸಾಧ್ಯವಾಗುವುದಿಲ್ಲ. ಅದೇ ಸಮಯಕ್ಕೆ ಎದುರಿನಿಂದ ರೈಲು ಬರುವುದು ಕಾಣಿಸುತ್ತದೆ. ಆದರೂ ಸಹ ಹಳಿ ಬಿಟ್ಟು ಬರಲು ಆತ ಸಿದ್ಧನಿಲ್ಲ. ಭಯಾನಕ ದೃಶ್ಯ ನೋಡುತ್ತಿದ್ದಂತೆಯೇ ಮೈ ಜುಂ.. ಅನ್ನುವುದಂತೂ ಸತ್ಯ.

ವಿಡಿಯೋದಲ್ಲಿ ಗಮನಿಸುವಂತೆ, ಆದಷ್ಟು ಪ್ರಯತ್ನಿಸಿ ತನ್ನ ಸ್ಕೂಟರ್​ನ್ನು ಹಳಿಯಿಂದ ಬಿಡಿಸಲು ಯತ್ನಿಸಿದ್ದಾನೆ. ಆದರೂ ಕೂಡಾ ಆತನಿಂದ ಸ್ಕೂಟರ್ ಹಳಿಯಿಂದ ಈಚೆ ತರಲು ಸಾಧ್ಯವಾಗಲಿಲ್ಲ. ಹಳಿ ಎದುರು ಬರುತ್ತಿರುವುದನ್ನು ಕಂಡ ಆತ , ರೈಲಿನ ಚಾಲಕನಿಗೆ ನಿಲ್ಲಿಸುವಂತೆ ಕೈ ಮಾಡಿ ತೋರಿಸುತ್ತಾನೆ. ಅಷ್ಟರಲ್ಲಿಯೇ ರೈಲು ಹತ್ತಿರದಲ್ಲಿದೆ. ಕೂದಲೆಳೆಯ ಅಂತರದಲ್ಲಿ ಹಳಿ ಪಕ್ಕ ಹಾರಿ ತನ್ನ ಪ್ರಾಣವನ್ನು ಉಳಿಸಿಕೊಂಡಿದ್ದಾನೆ. ವಿಡಿಯೋದಲ್ಲಿ ಗಮನಿಸುವಂತೆ ವ್ಯಕ್ತಿಯ ಜೀವ ಉಳಿದಿದೆ. ಸ್ಕೂಟರ್​ ಹಳಿ ಮಧ್ಯದಲ್ಲೇ ಸಿಕ್ಕಿದ್ದರಿಂದ ರೈಲಿನ ಅಡಿಯಾಗಿದೆ.

ಇದನ್ನೂ ಓದಿ:

Viral Video: ಇಲ್ಲೋರ್ವ ವೃದ್ಧರು ಸ್ಯಾನಿಟೈಸರ್​ಅನ್ನು ಬಾಡಿಲೋಷನ್​ ಅಂತಾ ತಿಳಿದಿದ್ದಾರೋ ಏನೋ? ಮೈಕೈಗೆಲ್ಲಾ ಸವರಿಕೊಳ್ಳುತ್ತಿದ್ದಾರೆ

Viral Video: ರೈಲು ಹತ್ತುವಾಗ ಜಾರಿ ಬಿದ್ದ ವ್ಯಕ್ತಿಯ ಪ್ರಾಣ ಉಳಿಸಿದ ಆರ್​ಪಿಎಫ್​ ಕಾನ್​ಸ್ಟೇಬಲ್​

Published On - 4:35 pm, Fri, 11 June 21

Follow Us
Web contact
Web contact

TV9 Kannada

Read More
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ