Viral: ಬೆಂಗಳೂರಲ್ಲಿ 1.4 ಲಕ್ಷ ರೂ ಸಂಬಳ ಇದ್ರೂ , ಊರಲ್ಲಿ ಸಿಗುವ 40 ಸಾವಿರದಲ್ಲೇ ನಾನು ಶ್ರೀಮಂತ; ಯುವಕ ಹೀಗೆಂದಿದ್ದೇಕೆ?

ಯುವಕ ಯುವತಿಯರಿಗೆ ಬೆಂಗಳೂರು ಅಂದ್ರೆ ಅದೇನೋ ಸೆಳೆತ. ಹೀಗಾಗಿ ಓದು ಮುಗಿಯುತ್ತಿದ್ದಂತೆ ಬೆಂಗಳೂರಿನತ್ತ ಮುಖ ಮಾಡುವವರೇ ಹೆಚ್ಚು. ಆದರೆ ಹುಟ್ಟೂರು ಬಿಟ್ಟು ಮಾಯನಗರಿಗೆ ಬಂದ ಬಳಿಕ ವಾಸ್ತವ ಬದುಕಿನ ಅರಿವಾಗುತ್ತದೆ. ಇದೀಗ ಯುವಕನೊಬ್ಬನಿಗೆ ಬೆಂಗಳೂರಿಗಿಂತ ತನ್ನ ಊರೇ ವಾಸಿ ಎಂದೆನಿಸಿದೆ. ಈ ಯುವಕನಿಗೆ ಹೀಗೆ ಅನಿಸಲು ಅದರ ಹಿಂದಿನ ಕಾರಣವನ್ನು ಪೋಸ್ಟ್‌ನಲ್ಲಿ ವಿವರಿಸಿದ್ದಾನೆ. ಈ ಕುರಿತಾದ ಕಂಪ್ಲೀಟ್ ಸ್ಟೋರಿ ಇಲ್ಲಿದೆ.

Viral: ಬೆಂಗಳೂರಲ್ಲಿ 1.4 ಲಕ್ಷ ರೂ ಸಂಬಳ ಇದ್ರೂ , ಊರಲ್ಲಿ ಸಿಗುವ 40 ಸಾವಿರದಲ್ಲೇ ನಾನು ಶ್ರೀಮಂತ; ಯುವಕ ಹೀಗೆಂದಿದ್ದೇಕೆ?
ಸಾಂದರ್ಭಿಕ ಚಿತ್ರ
Image Credit source: Pinterest

Updated on: Jun 05, 2026 | 7:50 PM

ಒಂದೊಳ್ಳೆ ಜಾಬ್ ಸಿಗ್ಬೇಕು, ಲೈಫ್ ಸೆಟ್ಲ್ ಮಾಡ್ಕೊಳ್ಬೇಕು ಹೀಗೆ ಸಾಕಷ್ಟು ಆಸೆ ಹೊತ್ತು ಬೆಂಗಳೂರಿಗೆ (Bengaluru) ಬರ್ತಾರೆ. ಆದ್ರೆ ದಿನ ಕಳೆದಂತೆ ನಮ್ಮ ಊರು ನೆನಪಾಗುತ್ತದೆ, ಇಲ್ಲಿನ ಬದುಕಿಗಿಂತ ತಮ್ಮ ಊರೇ ಉತ್ತಮ ಎಂದೇನಿಸುತ್ತದೆ. ಇದೀಗ ಬೆಂಗಳೂರಿನಲ್ಲಿ 1.4 ಲಕ್ಷ ರೂಪಾಯಿ ದುಡಿಯುತ್ತಿದ್ದ ಈ ಯುವಕ ತನ್ನ ಊರಲ್ಲಿ 40 ಸಾವಿರ ರೂ ಸಂಪಾದನೆ ಮಾಡ್ತಾ ಇದ್ದಾನೆ. ಕಡಿಮೆ ಸಂಬಳ ಆದ್ರೂ ತನ್ನ ಹುಟ್ಟೂರಿನಲ್ಲಿ ನೆಮ್ಮದಿ ಖುಷಿಯಿದೆಯಂತೆ. ಯುವಕ ಮಾಡಿದ ರೆಡ್ಡಿಟ್ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

r/ India Money ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಹಂಚಿಕೊಳ್ಳಲಾದ ಪೋಸ್ಟ್ ಗೆ ಯುವಕನೊಬ್ಬ ನನ್ನ ಹುಟ್ಟೂರಿನಲ್ಲಿ ಪಟ್ಟಣದಲ್ಲಿ
40 ಸಾವಿರ ರೂ ಸಂಬಳ, ಬೆಂಗಳೂರಿನ 1.4L ಲಕ್ಷ ರೂಗಿಂತ ಹೆಚ್ಚು ಶ್ರೀಮಂತಿಕೆ ಎನಿಸಿದ್ದು ಯಾಕೆ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾನೆ.

ರೆಡ್ಡಿಟ್ ಪೋಸ್ಟ್ ಇಲ್ಲಿದೆ

ಬೆಂಗಳೂರಿನಲ್ಲಿ ತಿಂಗಳಿಗೆ 1.4 ಲಕ್ಷ ರೂಪಾಯಿ ದುಡಿಯುತ್ತಿದ್ದೆ. ದೊಡ್ಡ ಸಿಟಿಯಲ್ಲಿ ಹೆಚ್ಚು ಸಂಬಳ ಬರೀ ಪೇಪರ್ ಮೇಲಿನ ಲೆಕ್ಕ. ನೋಡೋರಿಗೆ ಲಕ್ಷ ಲಕ್ಷ, ಆದರೆ ಈ ಬೆಂಗಳೂರಿನ ಲೈಫ್ ಸ್ಟೈಲ್ ಗೆ ಕೈಯಲ್ಲಿದ್ದ ದುಡ್ಡು ಖಾಲಿಯಾಗುತ್ತದೆ. ಬೆಂಗಳೂರು ಮತ್ತು ಹಾಗೂ ತನ್ನ ಹುಟ್ಟೂರಾದ ಉದಯಪುರದ ತಿಂಗಳ ಖರ್ಚು ವೆಚ್ಚಗಳ ಬಗ್ಗೆ ವಿವರಿಸಿದ್ದಾನೆ.

2BHK ಫ್ಲ್ಯಾಟ್ ಬಾಡಿಗೆ 30,000 ರೂ, ದಿನಸಿ 6,000 ರೂ, ಮನೆಗೆಲಸದವರು ಹಾಗೂ ವೈಫೈಗೆ 3,000 ರೂ, ಆನ್‌ಲೈನ್‌ ಫುಡ್‌ ಡೆಲಿವರಿ ಆಯಪ್‌ಗಳಿಗೆ 7,000 ರೂ, ಕ್ಯಾಬ್ ಗೆ 5,000 ರೂ, ವೀಕೆಂಡ್ ಪಾರ್ಟಿ, ಟ್ರಾವೆಲಿಂಗ್ 8,000 ರೂ ಎತ್ತಿಡಬೇಕಿತ್ತು. ಅದಲ್ಲದೇ, ಅಮೆಜಾನ್ ಆರ್ಡರ್‌ಗಳು, ಕ್ವಿಕ್ ಕಾಮರ್ಸ್ ಆಯಪ್‌ಗಳು, ಇನ್ನಿತರ ಖರ್ಚುಗಳು ಸೇರಿ ಎಷ್ಟು ದುಡ್ಡಿದ್ರು ಸಾಲದಾಗಿತ್ತು. ತಿಂಗಳಿಗೆ 1.4 ಲಕ್ಷ ರೂಪಾಯಿ ಸಂಬಳ ಬಂದ್ರೂ, ಖರ್ಚು ಮಾತ್ರ ವಿಪರೀತ, ದುಡ್ಡು ಮಾತ್ರ ಉಳಿತ್ತಿರಲಿಲ್ಲ ಎಂದು ಹೇಳಿದ್ದಾನೆ.

ಲಕ್ಷ ಸಂಬಳ ಇದ್ರೂ ನಗರದ ಲೈಫ್ ಸ್ಟೈಲ್ ಹಾಗೂ ಖರ್ಚುಗಳಿಗೆ ಮಾನಸಿಕವಾಗಿ ಕುಗ್ಗಿ ಹೋಗಿದ್ದೆ. ಹೀಗಾಗಿ ನನ್ನ ಹುಟ್ಟೂರು ಉದಯಪುರಕ್ಕೆ ಮರಳಿದೆ. ಊರಲ್ಲಿ ಕೆಲಸಕ್ಕೆ ಸೇರಿಕೊಂಡಾಗ ಮೊದ ಮೊದಲು ಸಂಬಳ ಕಡಿಮೆಯಿತ್ತು. 40 ಸಾವಿರ ರೂ ಸಿಗ್ತಾ ಇತ್ತು. ನನಗೆ ಹೆಚ್ಚು ಶ್ರೀಮಂತನಾದ ಹಾಗೆ ಅನಿಸುತ್ತಿದೆ. ಅದಕ್ಕಿಂತ ಹೆಚ್ಚು ಖುಷಿ, ನೆಮ್ಮದಿ, ಸಂತೋಷ, ಆರ್ಥಿಕ ಭದ್ರತೆ ನನ್ನ ಊರಲ್ಲಿದೆ ಎಂದು ಹೇಳಿಕೊಂಡಿದ್ದಾನೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ 1BHK ಮನೆಗೆ 45,000 ರೂ ಬಾಡಿಗೆ; ಕಠಿಣ ನಿರ್ಧಾರ ಕೈಗೊಂಡ ಉದ್ಯೋಗಿ

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನಿಮ್ಮ ನಿರ್ಧಾರ ನಿಮಗೆ ಸರಿಯೆನಿಸಿದರೆ ಸಾಕು ಎಂದು ಹೇಳಿದ್ದಾರೆ. ಇನ್ನೊಬ್ಬರು, ದುಡ್ಡಿಕ್ಕಿಂತ ನೆಮ್ಮದಿ ಮುಖ್ಯ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಬೆಂಗಳೂರಿನ ಜೀವನ ಶೈಲಿ ದುಬಾರಿ, ನಿಮ್ಮ ಮಾತು ನಾನು ಒಪ್ಪುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:46 pm, Fri, 5 June 26

Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Follow Us