Sign In

By signing in or creating an account, you agree with Associated Broadcasting Company's Terms & Conditions and Privacy Policy.

12 ವರ್ಷಗಳ ನಂತರ ತನ್ನ ಮನೆಗೆ ಬಂದ ಯುವಕ; ವಿಡಿಯೋ ವೈರಲ್

Reunion : ‘10 ವರ್ಷದವನಿದ್ದಾಗ ನನ್ನ ಅಮ್ಮ, ಅಜ್ಜಿ ಮತ್ತು ಸಂಬಂಧಿಕರನ್ನೆಲ್ಲ ನೋಡಿದ್ದಷ್ಟೇ. ಮತ್ತೀಗ ನಾನು ಅವರನ್ನು ಭೇಟಿಯಾಗಲು ಬರುವ ವಿಷಯವನ್ನು ಅವರಿಗೆ ಬೇಕೆಂದೇ ತಿಳಿಸಿರಲಿಲ್ಲ.’

12 ವರ್ಷಗಳ ನಂತರ ತನ್ನ ಮನೆಗೆ ಬಂದ ಯುವಕ; ವಿಡಿಯೋ ವೈರಲ್
ಹನ್ನೆರಡು ವರ್ಷಗಳ ನಂತರ ತನ್ನ ಮನೆಗೆ ಬಂದಾಗ
Follow us
TV9 Web
| Updated By: ಶ್ರೀದೇವಿ ಕಳಸದ

Updated on: Dec 09, 2022 | 1:56 PM

Viral Video : ಮನೆಮಂದಿಯನ್ನೆಲ್ಲ ಬಿಟ್ಟು ಊರು, ರಾಜ್ಯ, ದೇಶ ಹೀಗೆ ಎಲ್ಲೆಂದರಲ್ಲಿ ವಲಸೆ ಹೋಗುವುದು ಅನಿವಾರ್ಯ. ಬದುಕನ್ನು ಕಟ್ಟಿಕೊಳ್ಳುವ ನೆಪದಲ್ಲಿ ಏನೆಲ್ಲ ಕಳೆದುಕೊಳ್ಳಬೇಕು, ಏನೆಲ್ಲ ಸುತ್ತಬೇಕು ಏನೆಲ್ಲ ಪಡೆದುಕೊಳ್ಳಲೂಬೇಕು. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. 12 ವರ್ಷಗಳ ನಂತರ ಈ ಯುವಕ ತನ್ನ ಮನೆಗೆ ಬಂದಿದ್ದಾನೆ. ಹೇಳದೇ ಬಂದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾನೆ. ಇಡೀ ಬಿಲ್ಡಿಂಗ್​ನ ಮಂದಿಯೆಲ್ಲ ಈ ಭಾವುಕ ಕ್ಷಣಗಳಿಗೆ ಸಾಕ್ಷಿಯಾಗಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Varun Harpale (@varun_harpale)

@varun_harpale ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ವರುಣ ತನ್ನಸಂಬಂಧಿಕರನ್ನೆಲ್ಲ ನೋಡಿದ್ದು ಹತ್ತು ವರ್ಷದವರಿದ್ದಾಗ. ಆನಂತರ ಇದೀಗಲೇ ಅವರು ಎಲ್ಲರನ್ನೂ ಭೇಟಿಯಾಗುತ್ತಿರುವುದು. ‘ವಲಸೆಯ ವಿಷಯವಾಗಿ ಕೆಲ ಸಮಸ್ಯೆಗಳನ್ನು ಎದುರಿಸುತ್ತಿದ್ದೆ. ಹಾಗಾಗಿ ಭಾರತಕ್ಕೆ ಪ್ರಯಾಣಿಸಲು ನನಗೆ ಅವಕಾಶ ಸಿಕ್ಕಿರಲಿಲ್ಲ. ಅಂತೂ 12 ವರ್ಷಗಳ ನಂತರ ನನ್ನ ಕುಟುಂಬವನ್ನು ಭೇಟಿಯಾದೆ. ನನ್ನ ಭೇಟಿಯ ಬಗ್ಗೆ ಕುಟುಂಬ ಸದಸ್ಯರಿಗೆ ತಿಳಿಸದೆ ಎಲ್ಲರಿಗೂ ಸರ್​​ಪ್ರೈಝ್​ ನೀಡಲು ನಿರ್ಧರಿಸಿದೆ’ ಎಂಬ ನೋಟ್​ ಬರೆದು ವಿಡಿಯೋ ಅಪ್​ಲೋಡ್ ಮಾಡಿದ್ಧಾರೆ ವರುಣ್.

ವರುಣ ಆರಂಭದಲ್ಲಿ ತನ್ನ ಚಿಕ್ಕಮ್ಮ, ಸಹೋದರಿಯರನ್ನು ಭೇಟಿಯಾಗುತ್ತಾರೆ. ನಂತರ ತನ್ನ ಅಮ್ಮ, ಅಜ್ಜಿಯನ್ನು ಭೇಟಿಯಾಗುತ್ತಾರೆ. ಪ್ರತಿಯೊಬ್ಬರೂ ಹರ್ಷದಿಂದ ಕಣ್ಣೀರಾಗುತ್ತಾರೆ, ಭಾವುಕರಾಗುತ್ತಾರೆ. ಈ ವಿಡಿಯೋ ಅನ್ನು ಈಗಾಗಲೇ 81,000ಕ್ಕಿಂತಲೂ ಹೆಚ್ಚು ಜನ ಇಷ್ಟಪಟ್ಟಿದ್ದಾರೆ. ಲಕ್ಷಾಂತರ ಜನರು ನೋಡಿದ್ದಾರೆ.

ಇದನ್ನೂ ನೋಡಿ : ಮೈಸೂರಿನಲ್ಲಿ ರೂ. 4ಕ್ಕೆ 100 ಕೆ.ಜಿ ಈರುಳ್ಳಿ; ಯಶಸ್ವಿ ವ್ಯಾಪಾರ ಮುಗಿಸಿದ ಜರ್ಮನಿಯ ಜೆನ್ನಿಫರ್

ನೆಟ್ಟಿಗರು ಪ್ರತಿಯೊಬ್ಬ ಕುಟುಂಬ ಸದಸ್ಯರ ಮುಖಭಾವವನ್ನು ಗಮನಿಸಿ ಪ್ರತಿಕ್ರಿಯಿಸಿದ್ದಾರೆ. ಅಜ್ಜಿಯ ಮುಖದ ಮೇಲೆ ಎಷ್ಟೊಂದು ಸಂತೋಷವಿದೆ ಗಮನಿಸಿ ಎಂದಿದ್ದಾರೆ ಕೆಲವರು. ಈ ವಿಡಿಯೋ ಪರಿಶುದ್ಧ ಪ್ರೀತಿಗೆ ಉದಾಹರಣೆ ಎಂದಿದ್ದಾರೆ ಹಲವರು. ಎಲ್ಲರ ಕಣ್ಣುಗಳೇ ಸಾಕು ಅವರಲ್ಲಿ ಈ ಸಂದರ್ಭದಿಂದ ಪ್ರೀತಿ ಹೇಗೆ ಸ್ಫುರಣಗೊಳ್ಳುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಎಂದಿದ್ದಾರೆ ಒಬ್ಬರು. ಈ ಸುಂದರ ಕ್ಷಣಗಳನ್ನು ಆ ದೇವರು ಸದಾ ಹೀಗೇ ಹಿಡಿದಿಟ್ಟಿರಲಿ ಎಂದಿದ್ದಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್​ಪ್ರೀತ್ ಬುಮ್ರಾ
ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್​ಪ್ರೀತ್ ಬುಮ್ರಾ
ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ
ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ