AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳದ ಪೊಲೀಸ್​ ತಮಿಳಿನ ‘ಮುಂಬೇ ವಾ’ ಹಾಡಿದ್ದಕ್ಕೆ ನೆಟ್ಟಿಗರೆಲ್ಲ ವಾಹ್​

Kerala Police : ಕೇರಳ ಪೊಲೀಸರ ಅಧೀಕೃತ ಟ್ವಿಟರ್​ ಪುಟದಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವಿರಾಮದ ಸಮಯದಲ್ಲಿ ಈ ಪೊಲೀಸ್​ ತಮಿಳು ಸಿನೆಮಾದ ಈ ಹಾಡನ್ನು ಹಾಡಿದ್ಧಾರೆ.

ಕೇರಳದ ಪೊಲೀಸ್​ ತಮಿಳಿನ ‘ಮುಂಬೇ ವಾ’ ಹಾಡಿದ್ದಕ್ಕೆ ನೆಟ್ಟಿಗರೆಲ್ಲ ವಾಹ್​
ಕೇರಳದ ಪೊಲೀಸ್​ ತಮಿಳು ಹಾಡನ್ನು ಹಾಡುತ್ತಿರುವುದು
TV9 Web
| Edited By: ಶ್ರೀದೇವಿ ಕಳಸದ|

Updated on: Dec 09, 2022 | 4:02 PM

Share

Viral Video : ಪೊಲೀಸ್ ಎಂದಾಕ್ಷಣ ಸದಾ ಸಿಡುಕು ಮೋರೆ, ದೊಡ್ಡ ಧ್ವನಿ, ಕೈಯಲ್ಲೊಂದು ಲಾಟಿ… ನಮ್ಮ ಸಿನೆಮಾಗಳು ಪೊಲೀಸರನ್ನು ಹೀಗೆ ತೋರಿಸಿ ತೋರಿಸಿ ನಮ್ಮ ಮನಸಿನೊಳಗೆ ಅವರ ಚಿತ್ರವನ್ನು ಹೀಗೆಯೇ ಎಂಬಂತೆ ಅಚ್ಚಾಗಿಸಿಬಿಟ್ಟಿವೆ. ಆದರೆ ಟ್ರಾಫಿಕ್​ನಲ್ಲಿಯೋ ಅಥವಾ ದಾರಿಯಲ್ಲೋ ಪೊಲೀಸರು ಒಬ್ಬೊಬ್ಬರೇ ಓಡಾಡುತ್ತಿರುವಾಗಲೋ, ಮಾತನಾಡಿಸಿ ನೋಡಿ ಅವರೂ ನಮ್ಮಂತೆಯೇ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಹಾಡಿರುವ ಪೊಲೀಸರನ್ನು ಗಮನಿಸಿ. ಇವರು ಕೇರಳದ ಪೊಲೀಸ್​ ಇಲಾಖೆಯಲ್ಲಿದ್ದಾರೆ. ತಮಿಳು ಸಿನೆಮಾ ‘ಸಿಲ್ಲೋನು ಓರು ಕಾದಲ್​’ನ  ‘ಮುಂಬೆ ವಾ’ ಹಾಡನ್ನು ಹಾಡಿದ್ದಾರೆ. ಮೂಲದಲ್ಲಿ ಈ ಹಾಡನ್ನು ಹಾಡಿದ್ದು ಶ್ರೇಯಾ ಘೋಷಾಲ್​ ಮತ್ತು ನರೇಶ್ ಅಯ್ಯರ್.

ಇಷ್ಟು ಭಾವಪೂರ್ಣವಾಗಿ ಈ ಹಾಡನ್ನು ಹಾಡಿದ ಈ ಪೊಲೀಸ್ ಯಾರಿಗೆ ತಾನೆ ಇಷ್ಟವಾಗಲ್ಲ? ಕೇರಳ ಪೊಲೀಸರ ಅಧೀಕೃತ ಟ್ವಿಟರ್​ ಪುಟದಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವಿರಾಮದ ವೇಳೆಯಲ್ಲಿ ಈ ಹಾಡನ್ನು ಈ ಪೊಲೀಸ್ ಹಾಡಿದ್ದಾರೆ. 8,000ಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ಸುಮಾರು 500 ಜನರು ಇದನ್ನು ಇಷ್ಟಪಟ್ಟಿದ್ದಾರೆ.

ತುಂಬಾ ಒಳ್ಳೆಯ ಧ್ವನಿಯನ್ನು ಹೊಂದಿದ್ದೀರಿ ಎಂದು ಅನೇಕರು ಹೊಗಳಿದ್ದಾರೆ. ಅದ್ಭುತವಾಗಿದೆ ನಿಮ್ಮ ಕಂಠ, ಹಾಡುವುದನ್ನು ಬಿಡಬೇಡಿ ಎಂದಿದ್ದಾರೆ ಹಲವರು.

ಉಳಿದ ಪೊಲೀಸರು ಎಷ್ಟು ಖುಷಿಯಿಂದ ಇವರ ಹಾಡನ್ನು ವಿಡಿಯೋ ಮಾಡುತ್ತಿದ್ಧಾರೆ ಎಂಬುದನ್ನು ಗಮನಿಸಿದರಾ?

ಇದನ್ನು ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Follow Us
‘ಬುಲ್ಲಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುನೀತ್ ನೆನಪು ಮಾಡಿಕೊಂಡ ಊರ್ವಶಿ
‘ಬುಲ್ಲಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುನೀತ್ ನೆನಪು ಮಾಡಿಕೊಂಡ ಊರ್ವಶಿ
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು