AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳದ ಪೊಲೀಸ್​ ತಮಿಳಿನ ‘ಮುಂಬೇ ವಾ’ ಹಾಡಿದ್ದಕ್ಕೆ ನೆಟ್ಟಿಗರೆಲ್ಲ ವಾಹ್​

Kerala Police : ಕೇರಳ ಪೊಲೀಸರ ಅಧೀಕೃತ ಟ್ವಿಟರ್​ ಪುಟದಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವಿರಾಮದ ಸಮಯದಲ್ಲಿ ಈ ಪೊಲೀಸ್​ ತಮಿಳು ಸಿನೆಮಾದ ಈ ಹಾಡನ್ನು ಹಾಡಿದ್ಧಾರೆ.

ಕೇರಳದ ಪೊಲೀಸ್​ ತಮಿಳಿನ ‘ಮುಂಬೇ ವಾ’ ಹಾಡಿದ್ದಕ್ಕೆ ನೆಟ್ಟಿಗರೆಲ್ಲ ವಾಹ್​
ಕೇರಳದ ಪೊಲೀಸ್​ ತಮಿಳು ಹಾಡನ್ನು ಹಾಡುತ್ತಿರುವುದು
TV9 Web
| Edited By: |

Updated on: Dec 09, 2022 | 4:02 PM

Share

Viral Video : ಪೊಲೀಸ್ ಎಂದಾಕ್ಷಣ ಸದಾ ಸಿಡುಕು ಮೋರೆ, ದೊಡ್ಡ ಧ್ವನಿ, ಕೈಯಲ್ಲೊಂದು ಲಾಟಿ… ನಮ್ಮ ಸಿನೆಮಾಗಳು ಪೊಲೀಸರನ್ನು ಹೀಗೆ ತೋರಿಸಿ ತೋರಿಸಿ ನಮ್ಮ ಮನಸಿನೊಳಗೆ ಅವರ ಚಿತ್ರವನ್ನು ಹೀಗೆಯೇ ಎಂಬಂತೆ ಅಚ್ಚಾಗಿಸಿಬಿಟ್ಟಿವೆ. ಆದರೆ ಟ್ರಾಫಿಕ್​ನಲ್ಲಿಯೋ ಅಥವಾ ದಾರಿಯಲ್ಲೋ ಪೊಲೀಸರು ಒಬ್ಬೊಬ್ಬರೇ ಓಡಾಡುತ್ತಿರುವಾಗಲೋ, ಮಾತನಾಡಿಸಿ ನೋಡಿ ಅವರೂ ನಮ್ಮಂತೆಯೇ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಹಾಡಿರುವ ಪೊಲೀಸರನ್ನು ಗಮನಿಸಿ. ಇವರು ಕೇರಳದ ಪೊಲೀಸ್​ ಇಲಾಖೆಯಲ್ಲಿದ್ದಾರೆ. ತಮಿಳು ಸಿನೆಮಾ ‘ಸಿಲ್ಲೋನು ಓರು ಕಾದಲ್​’ನ  ‘ಮುಂಬೆ ವಾ’ ಹಾಡನ್ನು ಹಾಡಿದ್ದಾರೆ. ಮೂಲದಲ್ಲಿ ಈ ಹಾಡನ್ನು ಹಾಡಿದ್ದು ಶ್ರೇಯಾ ಘೋಷಾಲ್​ ಮತ್ತು ನರೇಶ್ ಅಯ್ಯರ್.

ಇಷ್ಟು ಭಾವಪೂರ್ಣವಾಗಿ ಈ ಹಾಡನ್ನು ಹಾಡಿದ ಈ ಪೊಲೀಸ್ ಯಾರಿಗೆ ತಾನೆ ಇಷ್ಟವಾಗಲ್ಲ? ಕೇರಳ ಪೊಲೀಸರ ಅಧೀಕೃತ ಟ್ವಿಟರ್​ ಪುಟದಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವಿರಾಮದ ವೇಳೆಯಲ್ಲಿ ಈ ಹಾಡನ್ನು ಈ ಪೊಲೀಸ್ ಹಾಡಿದ್ದಾರೆ. 8,000ಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ಸುಮಾರು 500 ಜನರು ಇದನ್ನು ಇಷ್ಟಪಟ್ಟಿದ್ದಾರೆ.

ತುಂಬಾ ಒಳ್ಳೆಯ ಧ್ವನಿಯನ್ನು ಹೊಂದಿದ್ದೀರಿ ಎಂದು ಅನೇಕರು ಹೊಗಳಿದ್ದಾರೆ. ಅದ್ಭುತವಾಗಿದೆ ನಿಮ್ಮ ಕಂಠ, ಹಾಡುವುದನ್ನು ಬಿಡಬೇಡಿ ಎಂದಿದ್ದಾರೆ ಹಲವರು.

ಉಳಿದ ಪೊಲೀಸರು ಎಷ್ಟು ಖುಷಿಯಿಂದ ಇವರ ಹಾಡನ್ನು ವಿಡಿಯೋ ಮಾಡುತ್ತಿದ್ಧಾರೆ ಎಂಬುದನ್ನು ಗಮನಿಸಿದರಾ?

ಇದನ್ನು ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ