ಟವೆಲ್ ಸುತ್ತಿಕೊಂಡೇ ದೆಹಲಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ ಯುವಕ; ವಿಡಿಯೋ ವೈರಲ್

Delhi Metro : ‘ನಮ್ಮ ಮನೆಯ ಟ್ಯಾಂಕಿನಲ್ಲಿ ನೀರು ಖಾಲಿಯಾಗಿದೆ. ಆಫೀಸಿಗೆ ಹೋಗಿ ಸ್ನಾನ ಮಾಡುತ್ತೇನೆ.’ ಎಂದು ಟವೆಲ್ ಸುತ್ತಿಕೊಂಡು ದೆಹಲಿಯ ಮೆಟ್ರೋ ರೈಲನ್ನು ಹತ್ತಿದ್ದಾರೆ ಈ ಯುವಕ. ಮುಂದೆ?

ಟವೆಲ್ ಸುತ್ತಿಕೊಂಡೇ ದೆಹಲಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ ಯುವಕ; ವಿಡಿಯೋ ವೈರಲ್
ಟವೆಲ್ ಸುತ್ತಿಕೊಂಡೇ ದೆಹಲಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ ಯುವಕ
Follow us
| Updated By: ಶ್ರೀದೇವಿ ಕಳಸದ

Updated on:Dec 09, 2022 | 3:46 PM

Viral Video : ಶರ್ಟ್​ ಹಾಕಿಕೊಂಡು ಟವೆಲ್ ಸುತ್ತಿಕೊಂಡು ಬಂದಿದ್ದರೆ ಪ್ಯಾಂಟ್ ಹಾಕಿಕೊಳ್ಳಲು ಮರೆತಿದ್ದಾರೆ ಎನ್ನಬಹುದಿತ್ತು. ಆದರೆ ಈತ ಶರ್ಟನ್ನೂ ಹಾಕಿಲ್ಲ ಪ್ಯಾಂಟನ್ನೂ. ಟವೆಲ್ ಸುತ್ತಿಕೊಂಡು ಬಂದಿದ್ದು ಯಾಕೆ ಹಾಗಿದ್ದರೆ? ನೆಟ್ಟಿಗರೆಲ್ಲ ಒಂದೇ ಸಮ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ದೆಹಲಿಯ ಮೆಟ್ರೋ ರೈಲಿನಲ್ಲಿ ಇವರು ಹೀಗೇ ಈ ಅವತಾರದಲ್ಲಿಯೇ ಪ್ರಯಾಣಿಸಿದ ಉದ್ದೇಶವೇನು? ಅಲ್ಲಿದ್ದ ಪ್ರಯಾಣಿಕರಿಗೆಲ್ಲ ಇದು ಅತಿರೇಕ ಎನ್ನಿಸಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by ??मोहित गौहर ?? (@mohitgauhar)

ಮನೆಯ ಟ್ಯಾಂಕ್​ನಲ್ಲಿ ನೀರು ಖಾಲಿಯಾಗಿತ್ತು, ಹಾಗಾಗಿ ನಾನು ಈವತ್ತು ಆಫೀಸಿನಲ್ಲಿಯೇ ಸ್ನಾನ ಮಾಡೋಣ ಎಂದು ಹೊರಟಿದ್ದೇನೆ-  ಎಂಬ ನೋಟ್​ ಬರೆದು ಈ ವಿಡಿಯೋ ಟ್ವೀಟ್ ಮಾಡಿದ್ದಾರೆ ಮೋಹಿತ್​ ಗೌಹಾರ್ ಎನ್ನುವವರು. 3 ಮಿಲಿಯನ್​ ಜನ ನೋಡಿದ್ದಾರೆ ಈ ವಿಡಿಯೋ ಅನ್ನು.

ನೋಡದೆ ಇನ್ನೇನು? ಯಾರಾದರೂ ಹೀಗೆ ಟವೆಲ್ ಸುತ್ತಿಕೊಂಡು ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಾರಾ? ಹುಚ್ಚೋ, ಬೆಪ್ಪೋ, ಇನ್ನೊಂದೇನೋ ಅಂತ ಅನ್ನಿಸೋದು ಸಹಜ ಅಲ್ವಾ? ಸುಮ್ಮನೆ ಒಂದುಕಡೆ ನಿಂತಿದ್ದರೆ ಆ ಮಾತು ಬೇರೆ. ತನ್ನ ಮುಖ ಕಂಡಲ್ಲಿ ಕೂದಲು ಸರಿ ಮಾಡಿಕೊಳ್ಳುವುದು, ಕಂಪಾರ್ಟ್​ಮೆಂಟ್​ ತುಂಬಾ ಓಡಾಡುವುದು ಹೀಗೆ ಅಲ್ಲಿದ್ದ ಎಲ್ಲರ ಗಮನ ಸೆಳೆಯಲು ನೋಡುವುದು.

ಇದನ್ನೂ ನೋಡಿ : 12 ವರ್ಷಗಳ ನಂತರ ತನ್ನ ಮನೆಗೆ ಬಂದ ಯುವಕ; ವಿಡಿಯೋ ವೈರಲ್

ನೆಟ್ಟಿಗರಂತೂ ತಮಗೆ ತೋಚಿದಂತೆ ಪ್ರತಿಕ್ರಿಯಿಸಿದ್ದಾರೆ. ಕೆಲವರು ವ್ಯಂಗ್ಯವಾಡಿದ್ಧಾರೆ. ಇನ್ನೂ ಹಲವರು ಶ್ಲಾಘಿಸಿದ್ಧಾರೆ. ಶಭಾಷ್​! ಹೀಗೆ ಓಡಾಡೋದಕ್ಕೆ ಧೈರ್ಯ ಬೇಕು, ಮೆಚ್ಚಿದೆ ಎಂದಿದ್ದಾರೆ ಮತ್ತೊಬ್ಬರು. ಅತಿಯಾದ ಆತ್ಮವಿಶ್ವಾಸ ಬೇಕು ಹೀಗೆಲ್ಲಾ ಮಾಡಲು ಅದು ನಿಮಗಿದೆ ಎಂದಿದ್ದಾರೆ ಮಗದೊಬ್ಬರು.

ಅಂದಹಾಗೆ ಮೋಹಿತ್ ವಿಡಿಯೋ ಕ್ರಿಯೇಟರ್​ ಎಂದು ಇವರ ಇನ್​ಸ್ಟಾ ಬಯೋ ಹೇಳುತ್ತದೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ   

Published On - 3:00 pm, Fri, 9 December 22

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ