AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ‘ಆದಿಪುರುಷ’ದ ಲಂಕೇಶ; ಸೈಫ್​ ಅಲಿ ಖಾನ್​ ಎಐ ಕಲಾವಿದರ ಕೈಗೆ ಸಿಕ್ಕಾಗ

Saif Ali Khan: ಆದಿಪುರುಷ ಸಿನೆಮಾದಲ್ಲಿರುವ ಲಂಕೇಶನಿಗಿಂತ ಉತ್ತಮವಾಗಿ ಇಲ್ಲಿ ಚಿತ್ರಿಸಲಾಗಿದೆ. ಕಲಾವಿದರಿಗೆ ಅಭಿನಂದನೆಗಳು ಎಂದು ನೆಟ್ಟಿಗರು ಎಐ ಕಲಾವಿದ ಸಾಹಿದ್ ಅವರನ್ನು ಶ್ಲಾಘಿಸುತ್ತಿದ್ಧಾರೆ.

Viral: 'ಆದಿಪುರುಷ'ದ ಲಂಕೇಶ; ಸೈಫ್​ ಅಲಿ ಖಾನ್​ ಎಐ ಕಲಾವಿದರ ಕೈಗೆ ಸಿಕ್ಕಾಗ
ಆದಿಪುರುಷದಲ್ಲಿ 'ರಾವಣ' ಪಾತ್ರಧಾರಿ ಸೈಫ್​ ಅಲಿ ಖಾನ್​ ಎಐ ಕಲಾವಿದರ ಸೃಷ್ಟಿಯಲ್ಲಿ
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on:Jun 26, 2023 | 1:44 PM

Share

Lankesh : ಇತ್ತೀಚಿನ ದಿನಗಳಲ್ಲಿ ಎಐ ಕಲಾವಿದರು ಸಾಕಷ್ಟು ಚುರುಕಿನಿಂದ ತಮ್ಮ ಕಲಾಪ್ರೌಢಿಮೆ ಮೆರೆಯುತ್ತಿದ್ದಾರೆ. ಎಲಾನ್​ ಮಸ್ಕ್​ನನ್ನು ಭಾರತೀಯ ಅಳಿಯನನ್ನಾಗಿಸಿದ್ದು, ಮಗುವಾಗಿಸಿದ್ದೂ ನಿಮಗೆ ನೆನಪಿರಬಹುದು. ಹಾಗೆಯೇ ವೃಂದಾವನಕ್ಕೆ ಝ್ಯೂಕರ್​ಬರ್ಗ್​, ಮುಕೇಶ್​ ಅಂಬಾನಿ, ಎಲಾನ್​ ಮಸ್ಕ್​ ಮುಂತಾದ ಪ್ರಸಿದ್ಧರು ಹೋಳಿಯಾಡಲು ಬಂದಿದ್ದೂ. ಇದೀಗ ಆದಿಪುರುಷ (Adipurush) ಸಿನೆಮಾದಲ್ಲಿ ಲಂಕೇಶ ಪಾತ್ರಧಾರಿ ಸೈಫ್​ ಅಲಿ ಖಾನ್​ನ ಎಐನಲ್ಲಿ ಸೃಷ್ಟಿಸಿದ್ಧಾರೆ ಈ ಕಲಾವಿದರು. ಭಲೇ ಭಲೇ ಜೈ ರಾವಣ್​! ಸಿನೆಮಾಕ್ಕಿಂತ ಇಲ್ಲಿಯೇ ಈ ರಾವಣನನ್ನು ಅದ್ಭುತವಾಗಿ ಚಿತ್ರಿಸಿದ್ದೀರಿ ಎನ್ನುತ್ತಿದ್ದಾರೆ ನೆಟ್ಟಿಗರು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by SK MD ABU SAHID (@sahixd)

ಕೃತಕ ಬುದ್ಧಿಮತ್ತೆ (Artificial Intelligence) ಎನ್ನುವುದು ನಮ್ಮ ನಿತ್ಯಜೀವನದ ಪ್ರಮುಖ ಅಂಶ ಎಂಬಂತಾಗಿದೆ. ಡಿಜಿಟಲ್​ ಕಾಲದ ಕಲಾವಿದರಿಗಂತೂ ಇದು ಇನ್ನಿಲ್ಲದ ಹುರುಪು ತುಂಬುತ್ತಿದೆ. ಅಂತೆಯೇ ಟ್ರೆಂಡಿಂಗ್​​ನಲ್ಲಿರುವ ಸೆಲೆಬ್ರಿಟಿಗಳ ಚಿತ್ರಗಳನ್ನು ಮರುರೂಪಿಸುವಲ್ಲಿ ಕಲಾವಿದರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಸಾಹಿದ್​ ಎಂಬ ( SK MD ABU SAHID) ಕಲಾವಿದರ ಸೃಷ್ಟಿಸಿದ ಎಐ ಚಿತ್ರಗಳನ್ನು ಈ ಹಿಂದೆಯೂ ನೀವು ನೋಡಿದ್ದೀರಿ. ಇದೀಗ  ರಾವಣ ಪಾತ್ರಧಾರಿ ಸೈಫ್​ ಅಲಿ ಖಾನ್​ರನ್ನು ಮರುರೂಪಿಸಿದ್ದಾರೆ ಇದೇ ಕಲಾವಿದರು.

ಇದನ್ನೂ ಓದಿ : Viral: ಲುಂಗೀಧಾರಿ ಬೇರ್​ ಗ್ರಿಲ್ಸ್​; ‘ಜಂಗಲ್​ ಸರ್ವೈವರ್‘ನ ಮುಂದಿನ ಅತಿಥಿ ಯಾರು?

ಜೂ. 17ರಂದು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದೆ. ಸುಮಾರು 5,000 ಜನರು ಇಷ್ಟಪಟ್ಟಿದ್ದಾರೆ. ಆದಿಪುರುಷನ ಲಂಕೇಶನಿಗಿಂತಲೂ ಇದು ಅತ್ಯುತ್ತಮವಾಗಿದೆ. ತುಂಬಾ ಅಚ್ಚುಕಟ್ಟಾಗಿ ಕಲೆಯನ್ನು ನಿರ್ವಹಿಸಿದ್ದೀರಿ, ನಿಮಗೆ ಅಭಿನಂದನೆ ಎಂದು ನೆಟ್ಟಿಗರು ಕಲಾವಿದರನ್ನು ಪ್ರಶಂಸಿಸುತ್ತಿದ್ದಾರೆ. ರಾವಣನ ಈ ಅವತಾರಗಳನ್ನು ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:41 pm, Mon, 26 June 23

Follow Us
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ