AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಲುಂಗೀಧಾರಿ ಬೇರ್​ ಗ್ರಿಲ್ಸ್​; ‘ಜಂಗಲ್​ ಸರ್ವೈವರ್‘ನ ಮುಂದಿನ ಅತಿಥಿ ಯಾರು?

Jungle Survival : ನೀಲ್ ಆಲಿವರ್, ಅನ್ನೇಕಾ ರೈಸ್​, ರಿಚರ್ಡ್​ ಬ್ರ್ಯಾನ್​ಸನ್​, ವಿರಾಟ ಕೊಹ್ಲಿ, ಅಕ್ಷಯ್​ ಕುಮಾರ್, ವಿಕ್ಕಿ ಕೌಶಲ್​, ರಣವೀರ್​ ಸಿಂಗ್​, ತಲೈವಾ ರಜನೀಕಾಂತ... ಮುಂತಾದವರ ಹೆಸರುಗಳ ಹೊಳೆಯನ್ನೇ ಹರಿಸಿದ್ದಾರೆ ನೆಟ್ಟಿಗರು.

Viral: ಲುಂಗೀಧಾರಿ ಬೇರ್​ ಗ್ರಿಲ್ಸ್​; ‘ಜಂಗಲ್​ ಸರ್ವೈವರ್‘ನ ಮುಂದಿನ ಅತಿಥಿ ಯಾರು?
ಜಂಗಲ್​ ಸರ್ವೈವರ್ ರಿಯಾಲಿಟಿ ಷೋನ ನಿರೂಪಕ, ಸಾಹಸಿ ಬೇರ್ ಗ್ರಿಲ್ಸ್​
ಶ್ರೀದೇವಿ ಕಳಸದ
|

Updated on: Jun 26, 2023 | 12:44 PM

Share

Bear Grylls : ಜಂಗಲ್​ ಸರ್ವೈವಲ್​ (Jungle Survival) ರಿಯಾಲಿಟಿ ಷೋನ ಖ್ಯಾತ ನಿರೂಪಕ ಮತ್ತು ಸಾಹಸಿಗ ಬೇರ್ ಗ್ರಿಲ್ಸ್​ ಲುಂಗಿ ಧರಿಸಿದ ತಮ್ಮ ಫೋಟೋ ಟ್ವೀಟ್ ಮಾಡಿ ‘ಮ್ಯಾನ್​ ವರ್ಸಸ್​ ವೈಲ್ಡ್​’ (Man v/s Wild)ನ  ಮುಂದಿನ ಎಪಿಸೋಡ್​ಗೆ ಯಾರು ಅತಿಥಿ ಎಂದು ಕೇಳಿದ್ದಾರೆ. ಈ ಟ್ವೀಟ್​ ವೀಕ್ಷಕರನ್ನು ಕುತೂಹಲಕ್ಕೆ ಕೆಡವಿದೆ. ಸ್ಕಾಟಿಷ್​ ಹೈಲ್ಯಾಂಡ್ಸ್​ನ (Scottish Highlands) ನದೀತಟದಲ್ಲಿ ಈ ಫೋಟೋ ತೆಗೆಯಲಾಗಿದೆ. ಈ ಟ್ವೀಟ್​ಗೆ ನೆಟ್ಟಗರು ಉತ್ಸಾಹದಿಂದ ಪ್ರತಿಕ್ರಿಯಿಸಿದ್ದಾರೆ.

ಶರ್ಟ್​ ಕೆಳಗೆ ಧರಿಸಿದ ಉಡುಪು ಎಂಥದು ಇದು ಎಂದು ಅನೇಕರು ಕೇಳಿದ್ದಾರೆ. ಇದು ಭಾರತೀಯರು ಧರಿಸುವ ಲುಂಗಿ ಎಂದು ಹಲವರು ಹೇಳಿದ್ದಾರೆ. ಬಾಂಗ್ಲಾದೇಶದ ಸಾಂಪ್ರದಾಯಿಕ ಉಡುಪು ಇದು ಎಂದಿದ್ದಾರೆ ಮತ್ತೊಂದಿಷ್ಟು ಜನ. ಓಹ್ ಲುಂಗಿಡ್ಯಾನ್ಸ್​ ಸ್ಟೈಲ್​! ಎಂದು ಅಚ್ಚರಿಪಟ್ಟಿದ್ಧಾರೆ ಕೆಲವರು. ಲುಂಗೀಮ್ಯಾನ್​, ಎಸಿ ಪ್ಯಾಂಟ್, ಗಾಳಿ ಬೀಸಿದರೆ ಅಷ್ಟೇ, ಹುಷಾರಾಗಿರಿ​ ಎಂದು ಕಾಲೆಳೆದಿದ್ದಾರೆ ಇನ್ನೂ ಒಂದಿಷ್ಟು ಜನ.

ಇದನ್ನೂ ಓದಿ : Viral Video: ಎಲ್ಲಿಯ ಉಡುಪಿ ಎಲ್ಲಿಯ ಚಿಕ್ಕಬಳ್ಳಾಪುರ; ಇಲ್ಲಿದೆ ಗಣೇಶ್ ಮತ್ತು ಶ್ರೀವಿದ್ಯಾ ಕಲಾಹೂರಣ

ನೀಲ್ ಆಲಿವರ್, ಅನ್ನೇಕಾ ರೈಸ್​, ಇವಾನ್​ ಮ್ಯಾಕ್​ಗ್ರಿಗೋರ್, ರಿಚರ್ಡ್​ ಬ್ರ್ಯಾನ್​ಸನ್​, ವಿರಾಟ ಕೊಹ್ಲಿ, ಅಕ್ಷಯ್​ ಕುಮಾರ್, ವಿಕ್ಕಿ ಕೌಶಲ್​, ರಣವೀರ್​ ಸಿಂಗ್​, ತಲೈವಾ ರಜನೀಕಾಂತ… ಹೀಗೆ ಪ್ರಸಿದ್ಧ ವ್ಯಕ್ತಿಗಳ ಹೆಸರುಗಳ ಪಟ್ಟಿಯನ್ನೇ ಟ್ವೀಟಿಗರು ನೀಡಿದ್ದಾರೆ. ಒಟ್ಟಿನಲ್ಲಿ ಊಹಾಪೋಹಗಳ ನಡುವೆ ಈ ಟ್ವೀಟ್ ಶರವೇಗದಲ್ಲಿ ವೈರಲ್ ಆಗುತ್ತಿದೆ. ಕೆಲ ಮೂಲಗಳ ಪ್ರಕಾರ, ಪ್ರಿಯಾಂಕಾ ಛೋಪ್ರಾ ಮತ್ತು ವಿರಾಟ್ ಕೊಹ್ಲಿ ಅವರೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ನಿಮ್ಮ ಊಹೆಯಂತೆ ಯಾವ ಸೆಲೆಬ್ರಿಟಿ ಈ ಷೋನಲ್ಲಿ ಭಾಗವಹಿಸಲಿದ್ದಾರೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಮ್ಯಾಕ್ಸ್ ನಿರ್ದೇಶಕನ ಜೊತೆ ಸುದೀಪ್ ಮತ್ತೊಂದು ಸಿನಿಮಾ; ಸುದ್ದಿಗೋಷ್ಠಿ ಲೈವ್
ಮ್ಯಾಕ್ಸ್ ನಿರ್ದೇಶಕನ ಜೊತೆ ಸುದೀಪ್ ಮತ್ತೊಂದು ಸಿನಿಮಾ; ಸುದ್ದಿಗೋಷ್ಠಿ ಲೈವ್
ಉತ್ಸಾಹದಿಂದ ಕೆಲಸ ಮಾಡುತ್ತಿರುವ ಸಚಿವ ಮಧು ಬಂಗಾರಪ್ಪ ಗಮನಹರಿಸುವರೇ?
ಉತ್ಸಾಹದಿಂದ ಕೆಲಸ ಮಾಡುತ್ತಿರುವ ಸಚಿವ ಮಧು ಬಂಗಾರಪ್ಪ ಗಮನಹರಿಸುವರೇ?
VIDEO: ಅದ್ಭುತ ಕ್ಯಾಚ್ ಹಿಡಿದು ಮ್ಯಾಚ್ ಗೆಲ್ಲಿಸಿದ ಚಾರ್ಲಿ
VIDEO: ಅದ್ಭುತ ಕ್ಯಾಚ್ ಹಿಡಿದು ಮ್ಯಾಚ್ ಗೆಲ್ಲಿಸಿದ ಚಾರ್ಲಿ
ಹಾಸನ ಜಿಲ್ಲಾಸ್ಪತ್ರೆಯನ್ನು ಮುಚ್ಚುವುದೇ ಒಳಿತು: ರೇವಣ್ಣ, ಶಾಸಕ
ಹಾಸನ ಜಿಲ್ಲಾಸ್ಪತ್ರೆಯನ್ನು ಮುಚ್ಚುವುದೇ ಒಳಿತು: ರೇವಣ್ಣ, ಶಾಸಕ
4 ಸಿಕ್ಸ್, 8 ಫೋರ್: 56 ಎಸೆತಗಳಲ್ಲಿ ಪಂದ್ಯ ಮುಗಿಸಿದ ಮ್ಯಾಕ್ಸಿ ಪಡೆ
4 ಸಿಕ್ಸ್, 8 ಫೋರ್: 56 ಎಸೆತಗಳಲ್ಲಿ ಪಂದ್ಯ ಮುಗಿಸಿದ ಮ್ಯಾಕ್ಸಿ ಪಡೆ
Daily Devotional: ಮುಖದ ಮೇಲೆ ಮಚ್ಚೆ ಎಲ್ಲಿದ್ದರೆ ಅದೃಷ್ಟ ತಿಳಿಯಿರಿ
Daily Devotional: ಮುಖದ ಮೇಲೆ ಮಚ್ಚೆ ಎಲ್ಲಿದ್ದರೆ ಅದೃಷ್ಟ ತಿಳಿಯಿರಿ
Daily Horoscope: ಸ್ವಾತಿ ನಕ್ಷತ್ರದ ಪ್ರಭಾವದಿಂದಾಗಿ ಈ ರಾಶಿಗಳಿಗೆ ಶುಭಫಲ
Daily Horoscope: ಸ್ವಾತಿ ನಕ್ಷತ್ರದ ಪ್ರಭಾವದಿಂದಾಗಿ ಈ ರಾಶಿಗಳಿಗೆ ಶುಭಫಲ
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ