Viral: ಲುಂಗೀಧಾರಿ ಬೇರ್​ ಗ್ರಿಲ್ಸ್​; ‘ಜಂಗಲ್​ ಸರ್ವೈವರ್‘ನ ಮುಂದಿನ ಅತಿಥಿ ಯಾರು?

Jungle Survival : ನೀಲ್ ಆಲಿವರ್, ಅನ್ನೇಕಾ ರೈಸ್​, ರಿಚರ್ಡ್​ ಬ್ರ್ಯಾನ್​ಸನ್​, ವಿರಾಟ ಕೊಹ್ಲಿ, ಅಕ್ಷಯ್​ ಕುಮಾರ್, ವಿಕ್ಕಿ ಕೌಶಲ್​, ರಣವೀರ್​ ಸಿಂಗ್​, ತಲೈವಾ ರಜನೀಕಾಂತ... ಮುಂತಾದವರ ಹೆಸರುಗಳ ಹೊಳೆಯನ್ನೇ ಹರಿಸಿದ್ದಾರೆ ನೆಟ್ಟಿಗರು.

Viral: ಲುಂಗೀಧಾರಿ ಬೇರ್​ ಗ್ರಿಲ್ಸ್​; ‘ಜಂಗಲ್​ ಸರ್ವೈವರ್‘ನ ಮುಂದಿನ ಅತಿಥಿ ಯಾರು?
ಜಂಗಲ್​ ಸರ್ವೈವರ್ ರಿಯಾಲಿಟಿ ಷೋನ ನಿರೂಪಕ, ಸಾಹಸಿ ಬೇರ್ ಗ್ರಿಲ್ಸ್​
Follow us
|

Updated on: Jun 26, 2023 | 12:44 PM

Bear Grylls : ಜಂಗಲ್​ ಸರ್ವೈವಲ್​ (Jungle Survival) ರಿಯಾಲಿಟಿ ಷೋನ ಖ್ಯಾತ ನಿರೂಪಕ ಮತ್ತು ಸಾಹಸಿಗ ಬೇರ್ ಗ್ರಿಲ್ಸ್​ ಲುಂಗಿ ಧರಿಸಿದ ತಮ್ಮ ಫೋಟೋ ಟ್ವೀಟ್ ಮಾಡಿ ‘ಮ್ಯಾನ್​ ವರ್ಸಸ್​ ವೈಲ್ಡ್​’ (Man v/s Wild)ನ  ಮುಂದಿನ ಎಪಿಸೋಡ್​ಗೆ ಯಾರು ಅತಿಥಿ ಎಂದು ಕೇಳಿದ್ದಾರೆ. ಈ ಟ್ವೀಟ್​ ವೀಕ್ಷಕರನ್ನು ಕುತೂಹಲಕ್ಕೆ ಕೆಡವಿದೆ. ಸ್ಕಾಟಿಷ್​ ಹೈಲ್ಯಾಂಡ್ಸ್​ನ (Scottish Highlands) ನದೀತಟದಲ್ಲಿ ಈ ಫೋಟೋ ತೆಗೆಯಲಾಗಿದೆ. ಈ ಟ್ವೀಟ್​ಗೆ ನೆಟ್ಟಗರು ಉತ್ಸಾಹದಿಂದ ಪ್ರತಿಕ್ರಿಯಿಸಿದ್ದಾರೆ.

ಶರ್ಟ್​ ಕೆಳಗೆ ಧರಿಸಿದ ಉಡುಪು ಎಂಥದು ಇದು ಎಂದು ಅನೇಕರು ಕೇಳಿದ್ದಾರೆ. ಇದು ಭಾರತೀಯರು ಧರಿಸುವ ಲುಂಗಿ ಎಂದು ಹಲವರು ಹೇಳಿದ್ದಾರೆ. ಬಾಂಗ್ಲಾದೇಶದ ಸಾಂಪ್ರದಾಯಿಕ ಉಡುಪು ಇದು ಎಂದಿದ್ದಾರೆ ಮತ್ತೊಂದಿಷ್ಟು ಜನ. ಓಹ್ ಲುಂಗಿಡ್ಯಾನ್ಸ್​ ಸ್ಟೈಲ್​! ಎಂದು ಅಚ್ಚರಿಪಟ್ಟಿದ್ಧಾರೆ ಕೆಲವರು. ಲುಂಗೀಮ್ಯಾನ್​, ಎಸಿ ಪ್ಯಾಂಟ್, ಗಾಳಿ ಬೀಸಿದರೆ ಅಷ್ಟೇ, ಹುಷಾರಾಗಿರಿ​ ಎಂದು ಕಾಲೆಳೆದಿದ್ದಾರೆ ಇನ್ನೂ ಒಂದಿಷ್ಟು ಜನ.

ಇದನ್ನೂ ಓದಿ : Viral Video: ಎಲ್ಲಿಯ ಉಡುಪಿ ಎಲ್ಲಿಯ ಚಿಕ್ಕಬಳ್ಳಾಪುರ; ಇಲ್ಲಿದೆ ಗಣೇಶ್ ಮತ್ತು ಶ್ರೀವಿದ್ಯಾ ಕಲಾಹೂರಣ

ನೀಲ್ ಆಲಿವರ್, ಅನ್ನೇಕಾ ರೈಸ್​, ಇವಾನ್​ ಮ್ಯಾಕ್​ಗ್ರಿಗೋರ್, ರಿಚರ್ಡ್​ ಬ್ರ್ಯಾನ್​ಸನ್​, ವಿರಾಟ ಕೊಹ್ಲಿ, ಅಕ್ಷಯ್​ ಕುಮಾರ್, ವಿಕ್ಕಿ ಕೌಶಲ್​, ರಣವೀರ್​ ಸಿಂಗ್​, ತಲೈವಾ ರಜನೀಕಾಂತ… ಹೀಗೆ ಪ್ರಸಿದ್ಧ ವ್ಯಕ್ತಿಗಳ ಹೆಸರುಗಳ ಪಟ್ಟಿಯನ್ನೇ ಟ್ವೀಟಿಗರು ನೀಡಿದ್ದಾರೆ. ಒಟ್ಟಿನಲ್ಲಿ ಊಹಾಪೋಹಗಳ ನಡುವೆ ಈ ಟ್ವೀಟ್ ಶರವೇಗದಲ್ಲಿ ವೈರಲ್ ಆಗುತ್ತಿದೆ. ಕೆಲ ಮೂಲಗಳ ಪ್ರಕಾರ, ಪ್ರಿಯಾಂಕಾ ಛೋಪ್ರಾ ಮತ್ತು ವಿರಾಟ್ ಕೊಹ್ಲಿ ಅವರೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ನಿಮ್ಮ ಊಹೆಯಂತೆ ಯಾವ ಸೆಲೆಬ್ರಿಟಿ ಈ ಷೋನಲ್ಲಿ ಭಾಗವಹಿಸಲಿದ್ದಾರೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ