AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬಾಲ್​ ತಳ್ಳಿದಂತೆ 4 ಜನರಿದ್ದ ಕಾರನ್ನು ತಳ್ಳಿ ಪಲ್ಟಿಯಾಗಿಸಿದ ಆನೆ

ಕೋಪಗೊಂಡ ಆನೆಯೊಂದು 4 ಜನರಿದ್ದ ಕಾರನ್ನು ಕಾಲಿನಲ್ಲಿ ಉರುಳಿಸಿ ಚೆಂಡಿನಂತೆ ತಳ್ಳಿದ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Viral Video: ಬಾಲ್​ ತಳ್ಳಿದಂತೆ 4 ಜನರಿದ್ದ ಕಾರನ್ನು ತಳ್ಳಿ ಪಲ್ಟಿಯಾಗಿಸಿದ ಆನೆ
ಕಾರನ್ನು ಪಲ್ಟಿಮಾಡುತ್ತಿರುವ ಆನೆ
TV9 Web
| Edited By: |

Updated on: Jan 18, 2022 | 3:51 PM

Share

ಸಾಮಾನ್ಯವಾಗಿ ಆನೆ (Elephant) ಎದುರಿಗೆ ಬಂದು ಒಂದು ಬಾರಿ ಘೀಳಿಟ್ಟರೆ  ಜೀವ ಬಾಯಿಗೆ ಬಂದಂತಹ ಅನುಭವವಾಗುತ್ತದೆ. ಅಂತಹದ್ದರಲ್ಲಿ ಕುಳಿತಿದ್ದ ಕಾರನ್ನೇ ಚೆಂಡಿನಂತೆ ಉರುಳಿಸಿದರೆ ಏನಾಗಬಹುದು? ಹೌದು ಇಂತಹದ್ದೊಂದು ಘಟನೆ ದಕ್ಷಿಣ ಆಫ್ರಿಕಾದ iSimangaliso ವೆಟ್ಲ್ಯಾಂಡ್ (iSimangaliso Wetland )  ಎನ್ನುವ ಪಾರ್ಕ್​ನಲ್ಲಿ ನಡೆದಿದೆ. ಕೋಪಗೊಂಡ ಆನೆಯೊಂದು 4 ಜನರಿದ್ದ ಕಾರನ್ನು ಕಾಲಿನಲ್ಲಿ ಉರುಳಿಸಿ ಚೆಂಡಿನಂತೆ ತಳ್ಳಿದ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಝುಲುಲ್ಯಾಂಡ್​  ಅಬ್ಸರ್ವರ್​ ( Zululand Observer) ಎನ್ನುವ ಯುಟ್ಯೂಬ್​ ಚಾನಲ್ (Youtube Channel)​ ಒಂದು ಇದರ ವಿಡಿಯೋ ಹಂಚಿಕೊಂಡಿದ್ದರು ನೆಟ್ಟಿಗರು ವಿಡಿಯೋ ನೋಡಿ ಹೌಹಾರಿದ್ದಾರೆ. ವಿಡಯೋವನ್ನು ದೃಶ್ಯ ನಡೆಯುತ್ತಿರುವ ಪ್ರದೇಶದಿಂದ ಕೊಂಚ ದೂರದಲ್ಲಿ ಸೆರೆಹಿಡಿಯಲಾಗಿದೆ.

ವಿಡಿಯೋದಲ್ಲಿ ಆನೆ ಕಾರನ್ನು ಕಾಲಿನಿಂದ ತಳ್ಳಿ ಪಲ್ಟಿಮಾಡುತ್ತಿರುವುದನ್ನು ಕಾಣಬಹುದು. ಕಾರಿನಲ್ಲಿ ಗಂಡ ಹಂಡತಿ ಹಾಗೂ  8 ಮತ್ತು 10 ವರ್ಷದ ಇಬ್ಬರು ಮಕ್ಕಳು ಇದ್ದರು ಎಂದು ವರದಿಯಾಗಿದೆ. ಕಾರನ್ನು ಪಲ್ಟಿ ಮಾಡಿದ ನಂತರ ಆನೆ ಅಲ್ಲಿಂದ ತೆರಳಿದ್ದು, ಬಳಿಕ ಕಾರಿನಲ್ಲಿದ್ದವನ್ನು ರಕ್ಷಿಸಲಾಗಿದೆ ಎಂದು ಡೈಲಿ ಮೇಲ್​ ವರದಿ ಮಾಡಿದೆ. ವರದಿಯ ಪ್ರಕಾರ ಕಾರಿನಲ್ಲಿದ್ದ ಕುಟುಂಬದವರು ಮಾತನಾಡಿ, ಎಲ್ಲರೂ ಭಯಗೊಂಡಿದ್ದೆವು, ಜೀವವೇ ಹೋಯಿತು ಎಂದುಕೊಂಡಿದ್ದೆವು. ಅದೃಷ್ಟವಶಾತ್​ ಬದುಕುಳಿದಿದ್ದೇವೆ ಎಂದಿದ್ದಾರೆ.

ಆನೆಗಳೇ ಹಾಗೆ ಕೋಪಗೊಂಡರೆ ಎಂತಹ ವಸ್ತುಗಳೇ ಆಗಲಿ, ಮನುಷ್ಯರನ್ನೇ ಆಗಲಿ ಕಾಲಿನಿಂದ ತುಳಿದು ಬಿಡುತ್ತವೆ. ಆನೆಯ ಕಾಲ್ತುಳಿತಕ್ಕೆ ಸಿಕ್ಕಮೆಲೆ ಬದುಕುಳಿಯುವ ಅಥವಾ ವಸ್ತು ಅದೇ ರೀತಿ ಇರಲಿದೆ ಎನ್ನುವುದು ಊಹೆಯೇ ಸರಿ.

ಇದನ್ನೂ ಓದಿ:

ಪ್ಯಾರಾಗ್ಲೈಡಲಿಂಗ್ ವೇಳೆ ಭಯಗೊಂಡು ಕೂಗಿದ ಮಹಿಳೆ: ವಿಡಿಯೋ ವೈರಲ್​

Follow Us
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ
ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ
ಲಿಂಗನಮಕ್ಕಿ ಡ್ಯಾಮ್ ಹಿನ್ನೀರು ಇಳಿಕೆ: ನಿಂತಿದ್ದ ಲಾಂಚ್ ಮತ್ತೆ ಶುರು
ಲಿಂಗನಮಕ್ಕಿ ಡ್ಯಾಮ್ ಹಿನ್ನೀರು ಇಳಿಕೆ: ನಿಂತಿದ್ದ ಲಾಂಚ್ ಮತ್ತೆ ಶುರು