AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬಾಲ್​ ತಳ್ಳಿದಂತೆ 4 ಜನರಿದ್ದ ಕಾರನ್ನು ತಳ್ಳಿ ಪಲ್ಟಿಯಾಗಿಸಿದ ಆನೆ

ಕೋಪಗೊಂಡ ಆನೆಯೊಂದು 4 ಜನರಿದ್ದ ಕಾರನ್ನು ಕಾಲಿನಲ್ಲಿ ಉರುಳಿಸಿ ಚೆಂಡಿನಂತೆ ತಳ್ಳಿದ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Viral Video: ಬಾಲ್​ ತಳ್ಳಿದಂತೆ 4 ಜನರಿದ್ದ ಕಾರನ್ನು ತಳ್ಳಿ ಪಲ್ಟಿಯಾಗಿಸಿದ ಆನೆ
ಕಾರನ್ನು ಪಲ್ಟಿಮಾಡುತ್ತಿರುವ ಆನೆ
TV9 Web
| Edited By: |

Updated on: Jan 18, 2022 | 3:51 PM

Share

ಸಾಮಾನ್ಯವಾಗಿ ಆನೆ (Elephant) ಎದುರಿಗೆ ಬಂದು ಒಂದು ಬಾರಿ ಘೀಳಿಟ್ಟರೆ  ಜೀವ ಬಾಯಿಗೆ ಬಂದಂತಹ ಅನುಭವವಾಗುತ್ತದೆ. ಅಂತಹದ್ದರಲ್ಲಿ ಕುಳಿತಿದ್ದ ಕಾರನ್ನೇ ಚೆಂಡಿನಂತೆ ಉರುಳಿಸಿದರೆ ಏನಾಗಬಹುದು? ಹೌದು ಇಂತಹದ್ದೊಂದು ಘಟನೆ ದಕ್ಷಿಣ ಆಫ್ರಿಕಾದ iSimangaliso ವೆಟ್ಲ್ಯಾಂಡ್ (iSimangaliso Wetland )  ಎನ್ನುವ ಪಾರ್ಕ್​ನಲ್ಲಿ ನಡೆದಿದೆ. ಕೋಪಗೊಂಡ ಆನೆಯೊಂದು 4 ಜನರಿದ್ದ ಕಾರನ್ನು ಕಾಲಿನಲ್ಲಿ ಉರುಳಿಸಿ ಚೆಂಡಿನಂತೆ ತಳ್ಳಿದ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಝುಲುಲ್ಯಾಂಡ್​  ಅಬ್ಸರ್ವರ್​ ( Zululand Observer) ಎನ್ನುವ ಯುಟ್ಯೂಬ್​ ಚಾನಲ್ (Youtube Channel)​ ಒಂದು ಇದರ ವಿಡಿಯೋ ಹಂಚಿಕೊಂಡಿದ್ದರು ನೆಟ್ಟಿಗರು ವಿಡಿಯೋ ನೋಡಿ ಹೌಹಾರಿದ್ದಾರೆ. ವಿಡಯೋವನ್ನು ದೃಶ್ಯ ನಡೆಯುತ್ತಿರುವ ಪ್ರದೇಶದಿಂದ ಕೊಂಚ ದೂರದಲ್ಲಿ ಸೆರೆಹಿಡಿಯಲಾಗಿದೆ.

ವಿಡಿಯೋದಲ್ಲಿ ಆನೆ ಕಾರನ್ನು ಕಾಲಿನಿಂದ ತಳ್ಳಿ ಪಲ್ಟಿಮಾಡುತ್ತಿರುವುದನ್ನು ಕಾಣಬಹುದು. ಕಾರಿನಲ್ಲಿ ಗಂಡ ಹಂಡತಿ ಹಾಗೂ  8 ಮತ್ತು 10 ವರ್ಷದ ಇಬ್ಬರು ಮಕ್ಕಳು ಇದ್ದರು ಎಂದು ವರದಿಯಾಗಿದೆ. ಕಾರನ್ನು ಪಲ್ಟಿ ಮಾಡಿದ ನಂತರ ಆನೆ ಅಲ್ಲಿಂದ ತೆರಳಿದ್ದು, ಬಳಿಕ ಕಾರಿನಲ್ಲಿದ್ದವನ್ನು ರಕ್ಷಿಸಲಾಗಿದೆ ಎಂದು ಡೈಲಿ ಮೇಲ್​ ವರದಿ ಮಾಡಿದೆ. ವರದಿಯ ಪ್ರಕಾರ ಕಾರಿನಲ್ಲಿದ್ದ ಕುಟುಂಬದವರು ಮಾತನಾಡಿ, ಎಲ್ಲರೂ ಭಯಗೊಂಡಿದ್ದೆವು, ಜೀವವೇ ಹೋಯಿತು ಎಂದುಕೊಂಡಿದ್ದೆವು. ಅದೃಷ್ಟವಶಾತ್​ ಬದುಕುಳಿದಿದ್ದೇವೆ ಎಂದಿದ್ದಾರೆ.

ಆನೆಗಳೇ ಹಾಗೆ ಕೋಪಗೊಂಡರೆ ಎಂತಹ ವಸ್ತುಗಳೇ ಆಗಲಿ, ಮನುಷ್ಯರನ್ನೇ ಆಗಲಿ ಕಾಲಿನಿಂದ ತುಳಿದು ಬಿಡುತ್ತವೆ. ಆನೆಯ ಕಾಲ್ತುಳಿತಕ್ಕೆ ಸಿಕ್ಕಮೆಲೆ ಬದುಕುಳಿಯುವ ಅಥವಾ ವಸ್ತು ಅದೇ ರೀತಿ ಇರಲಿದೆ ಎನ್ನುವುದು ಊಹೆಯೇ ಸರಿ.

ಇದನ್ನೂ ಓದಿ:

ಪ್ಯಾರಾಗ್ಲೈಡಲಿಂಗ್ ವೇಳೆ ಭಯಗೊಂಡು ಕೂಗಿದ ಮಹಿಳೆ: ವಿಡಿಯೋ ವೈರಲ್​

ಪುಸ್ತಕ ಹಿಡಿದುಕೊಂಡು ಓದಲು ಕುಳಿತಾಗಲೇ ನಿದ್ದೆ ಬರುತ್ತಾ?
ಪುಸ್ತಕ ಹಿಡಿದುಕೊಂಡು ಓದಲು ಕುಳಿತಾಗಲೇ ನಿದ್ದೆ ಬರುತ್ತಾ?
ರಾಜ್ಯ ಸರ್ಕಾರದ ಹಿರಿಯ ಸಚಿವರಲ್ಲೇ ಅಸಮಾಧಾನ: ಬೇಸರಕ್ಕೆ ಕಾರಣ ಇಲ್ಲಿದೆ
ರಾಜ್ಯ ಸರ್ಕಾರದ ಹಿರಿಯ ಸಚಿವರಲ್ಲೇ ಅಸಮಾಧಾನ: ಬೇಸರಕ್ಕೆ ಕಾರಣ ಇಲ್ಲಿದೆ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?