Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಕಿಯ ಕಾಲು ಮುಟ್ಟಿ ನೃತ್ಯಾಭ್ಯಾಸ ಮಾಡಿಸಿದ್ದ ಬಿರ್ಜೂ ಮಹಾರಾಜ್​: ಸರಳ ವ್ಯಕ್ತಿತ್ವದ ಕಥಕ್​ ನೃತ್ಯ ಪಟುವಿನ ವಿಡಿಯೋ ವೈರಲ್​

ಪುಟ್ಟ ಬಾಲಕಿಗೆ ಕಥಕ್​ ಕಲಿಸುವ ವೇಳೆ ಆಕೆಯ ಕಾಲುಗಳನ್ನು ಮುಟ್ಟಿ ಪ್ರೀತಿಯಿಂದ ಕಲಾಭ್ಯಾಸ ಮಾಡಿಸುತ್ತಿರುವ ವಿಡಿಯೋವೊಂದು ವೈರಲ್​ ಆಗಿದೆ. ಇದು ಪಂಡಿತ್​ ಬಿರ್ಜೂ ಅವರ ಸರಳ, ಸಜ್ಜನಿಕೆಯ ವ್ಯಕ್ತಿತ್ವ ಎಂದು ನೆಟ್ಟಿಗರು ಬಿರ್ಜೂ ಅವರನ್ನು ಕಳೆದುಕೊಂಡಿದುದರ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.

ಬಾಲಕಿಯ ಕಾಲು ಮುಟ್ಟಿ ನೃತ್ಯಾಭ್ಯಾಸ ಮಾಡಿಸಿದ್ದ ಬಿರ್ಜೂ ಮಹಾರಾಜ್​: ಸರಳ ವ್ಯಕ್ತಿತ್ವದ ಕಥಕ್​ ನೃತ್ಯ ಪಟುವಿನ ವಿಡಿಯೋ ವೈರಲ್​
ಬಿರ್ಜೂ ಮಹಾರಾಜ್​
Follow us
TV9 Web
| Updated By: Pavitra Bhat Jigalemane

Updated on:Jan 18, 2022 | 12:02 PM

ಖ್ಯಾತ ಕಥಕ್​ ನೃತ್ಯಪಟು, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಬಿರ್ಜೂ ಮಹರಾಜ್​ (Birju Maharaj )ಇಂದು ನಮ್ಮೊಂದಿಗಿಲ್ಲ. ಆದರೆ ಅವರ ಕಲಾ ಸೇವೆ, ಅವರ ಆದರ್ಶಗಳು ಸದಾ ಜೀವಂತವಾಗಿರುತ್ತವೆ. ಪಂಡಿತ್​ ಬಿರ್ಜೂ ಮಹಾರಾಜ್ (Pandith Birju Maharaj)​​ ಅವರ ನಿಧನಕ್ಕೆ ಇಡೀ ದೇಶ ಕಂಬನಿ ಮಿಡಿದಿದೆ.  ಈ ನಡುವೆ ಬಿರ್ಜೂ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಪುಟ್ಟ ಬಾಲಕಿಗೆ ಕಥಕ್ (Kathak)​ ಕಲಿಸುವ ವೇಳೆ ಆಕೆಯ ಕಾಲುಗಳನ್ನು ಮುಟ್ಟಿ ಪ್ರೀತಿಯಿಂದ ಕಲಾಭ್ಯಾಸ ಮಾಡಿಸುತ್ತಿರುವ ವಿಡಿಯೋವೊಂದು ವೈರಲ್​ ಆಗಿದೆ. ಇದು ಪಂಡಿತ್​ ಬಿರ್ಜೂ ಅವರ ಸರಳ, ಸಜ್ಜನಿಕೆಯ ವ್ಯಕ್ತಿತ್ವ ಎಂದು ನೆಟ್ಟಿಗರು ಬಿರ್ಜೂ ಅವರನ್ನು ಕಳೆದುಕೊಂಡಿದುದರ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋವನ್ನು ಟ್ವಿಟರ್​ನಲ್ಲಿ Sarvan_K86 ಎನ್ನುವವರು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಮೊದಲು ಬಿರ್ಜೋ ಪುಟ್ಟ ಬಾಲಕಿಗೆ ಒಂದು ಜೋಡಿ ಗೆಜ್ಜೆಯನ್ನು ನೀಡುತ್ತಾರೆ ನಂತರ ಆಕೆಯ ಹಣೆಗೆ ತಿಲಕವನ್ನು ಇಡುತ್ತಾರೆ. ಆ ಬಳಿಕ ನೃತ್ಯದ ಆರಂಭದಲ್ಲಿ ಹೆಗೆ ನಮಸ್ಕರಿಸಬೇಕು ಎನ್ನುವುದನ್ನು ಬಾಲಕಿಯ ಕಾಲನ್ನು ಮುಟ್ಟಿ ನಮಸ್ಕರಿಸಿಯೇ ತೋರಿಸುತ್ತಾರೆ. ಕಥಕ್​ ವಿದ್ವಾಂಸ ಬಿರ್ಜೂ ಮಹಾರಾಜ್​ ಅವರ ಈ ಸರಳ ವ್ಯಕ್ತಿತ್ವಕ್ಕೆ ನೋಡುಗರು ಮಾರುಹೋಗಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಕಥಕ್​ ಮಾಂತ್ರಿಕ ಬಿರ್ಜೂ ಮಹಾರಾಜ್​ ಅವರ ಮೂಲ ಹೆಸರು ಬ್ರಿಜ್​​ ಮೋಹನ್​ ನಾಥ್ ಮಿಶ್ರಾ. ಅವರು 1937ರ ಫೆಬ್ರವರಿ 4ರಂದು ಉತ್ತರ ಪ್ರದೇಶದ ಹಂಡಿಯಾದಲ್ಲಿ ಜನಿಸಿದ್ದರು.  ಬಾಲ್ಯದಲ್ಲೇ ನೃತ್ಯದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಅವರು ಕಥಕ್​ ಮಾಂತ್ರಿಕ ಎಂದೇ ಹೆಸರು ಪಡೆದರು. ಬಿರ್ಜೂ ಅವರ ಕಲಾ ಸೇವೆಗೆ 1986 ರಲ್ಲಿ ಭಾರತದ ಅತ್ಯನ್ನತ ಗೌರವಗಳಲ್ಲಿ ಒಂದಾದ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. 83 ವರ್ಷದ ಬಿರ್ಜೂ ಮಹಾರಾಜ್​  ಭಾನುವಾರ (ಜ. 16)ರಂದು ತಡರಾತ್ರಿ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ:

ಗೂಗಲ್​ ಮೀಟ್​ನಲ್ಲಿ ಸಂಬಂಧಿಗಳಿಗೆ ಆಹ್ವಾನ; ಜೊಮಾಟೋ ಮೂಲಕ ಊಟ: ಇದು ಕೊರೋನಾ ಕಾಲದ ವಿಭಿನ್ನ ಮದುವೆ

Published On - 12:02 pm, Tue, 18 January 22

ಕೆಕೆಆರ್​ ಬೌಲರ್‌ಗಳ ಬೆವರಿಳಿಸಿದ ಪೂರನ್
ಕೆಕೆಆರ್​ ಬೌಲರ್‌ಗಳ ಬೆವರಿಳಿಸಿದ ಪೂರನ್
ಎಲುಬಿಲ್ಲದ ನಾಲಗೆ ಮೇಲೆ ಹತೋಟಿ ತಪ್ಪಿದರೆ ಗೌರವ ಸಿಗಲ್ಲ: ಚಲುವರಾಯಸ್ವಾಮಿ
ಎಲುಬಿಲ್ಲದ ನಾಲಗೆ ಮೇಲೆ ಹತೋಟಿ ತಪ್ಪಿದರೆ ಗೌರವ ಸಿಗಲ್ಲ: ಚಲುವರಾಯಸ್ವಾಮಿ
ಭಾರತಕ್ಕೆ ಆಗಮಿಸಿದ ದುಬೈ ಪ್ರಿನ್ಸ್ ಶೇಖ್ ಹಮ್ದಾನ್​ಗೆ ಚಂಡೆ ವಾದ್ಯದ ಸ್ವಾಗತ
ಭಾರತಕ್ಕೆ ಆಗಮಿಸಿದ ದುಬೈ ಪ್ರಿನ್ಸ್ ಶೇಖ್ ಹಮ್ದಾನ್​ಗೆ ಚಂಡೆ ವಾದ್ಯದ ಸ್ವಾಗತ
ಮಗಳ ಸಾಧನೆ ಕಂಡು ಮೂಕವಿಸ್ಮಿತನಾದ ತಂದೆಗೆ ಕಾಲೇಜು ಸಿಬ್ಬಂದಿಯಿಂದ ಸನ್ಮಾನ
ಮಗಳ ಸಾಧನೆ ಕಂಡು ಮೂಕವಿಸ್ಮಿತನಾದ ತಂದೆಗೆ ಕಾಲೇಜು ಸಿಬ್ಬಂದಿಯಿಂದ ಸನ್ಮಾನ
ಮುಂದಿನ ಹೋರಾಟ ಹೇಗೆ ಅಂತ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ: ಅಶೋಕ
ಮುಂದಿನ ಹೋರಾಟ ಹೇಗೆ ಅಂತ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ: ಅಶೋಕ
ವಿಜ್ಞಾನ ವಿಭಾಗದಲ್ಲಿ ಅಮೂಲ್ಯ ಫಸ್ಟ್: ಪರೀಕ್ಷೆ ತಯಾರಿ ಹೇಗಿತ್ತು?
ವಿಜ್ಞಾನ ವಿಭಾಗದಲ್ಲಿ ಅಮೂಲ್ಯ ಫಸ್ಟ್: ಪರೀಕ್ಷೆ ತಯಾರಿ ಹೇಗಿತ್ತು?
ಮೂರನೇ ಪರೀಕ್ಷೆ ಫಲಿತಾಂಶ ನಂತರವೇ ಪಾಸ್/ ಫೇಲ್ ಮಾರ್ಕ್ಸ್ ಕಾರ್ಡ್: ಸಚಿವ
ಮೂರನೇ ಪರೀಕ್ಷೆ ಫಲಿತಾಂಶ ನಂತರವೇ ಪಾಸ್/ ಫೇಲ್ ಮಾರ್ಕ್ಸ್ ಕಾರ್ಡ್: ಸಚಿವ
ವಾಟರ್ ಬಾಟಲ್ ಆರೋಗ್ಯಕ್ಕೆ ಮಾರಕ: ಆರೋಗ್ಯ ಸಚಿವರ ಸುದ್ದಿಗೋಷ್ಠಿ ಲೈವ್​
ವಾಟರ್ ಬಾಟಲ್ ಆರೋಗ್ಯಕ್ಕೆ ಮಾರಕ: ಆರೋಗ್ಯ ಸಚಿವರ ಸುದ್ದಿಗೋಷ್ಠಿ ಲೈವ್​
ದ್ವಿತೀಯ ಪಿಯು ಫಲಿತಾಂಶ: ಲಾರಿ ಡ್ರೈವರ್​ ಪುತ್ರಿ ಕರ್ನಾಟಕಕ್ಕೆ ಫಸ್ಟ್
ದ್ವಿತೀಯ ಪಿಯು ಫಲಿತಾಂಶ: ಲಾರಿ ಡ್ರೈವರ್​ ಪುತ್ರಿ ಕರ್ನಾಟಕಕ್ಕೆ ಫಸ್ಟ್
ಸರ್ಕಾರೀ ಕಾಲೇಜುಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಪ್ರಯತ್ನ: ಸಚಿವ
ಸರ್ಕಾರೀ ಕಾಲೇಜುಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಪ್ರಯತ್ನ: ಸಚಿವ