Viral: ಬೆಂಗಳೂರಿಗಿಂತ ಜರ್ಮನಿಯೇ ಬೆಸ್ಟ್; ಬೆಂಗಳೂರಿನ ಟೆಕ್ಕಿ ಹೀಗೆಂದಿದ್ದೇಕೆ ಗೊತ್ತಾ?

ಬದುಕು ನಿಂತ ನೀರಲ್ಲ, ಸದಾ ಹರಿಯುತ್ತಿರಬೇಕು. ಹೀಗಾಗಿ ಬದುಕು ಹೇಗೆ ಬರುತ್ತದೆಯೋ ಹಾಗೆ ಸ್ವೀಕರಿಸಬೇಕು. ಇದೀಗ ಬೆಂಗಳೂರಿನ ಇಂಜಿನಿಯರ್ ರೊಬ್ಬರು ಬೆಂಗಳೂರಿನಲ್ಲಿನ ತನ್ನ ದಿನಚರಿಗಿಂತ ಜರ್ಮನಿಯಲ್ಲಿ ಜೀವನವು ಶಾಂತ ಮತ್ತು ಸಮತೋಲಿತವಾಗಿದೆ ಎಂದಿದ್ದು, ಈ ರೀತಿ ಅನಿಸಲು ಕಾರಣವನ್ನು ನೀಡಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಬೆಂಗಳೂರಿಗಿಂತ ಜರ್ಮನಿಯೇ ಬೆಸ್ಟ್; ಬೆಂಗಳೂರಿನ ಟೆಕ್ಕಿ ಹೀಗೆಂದಿದ್ದೇಕೆ ಗೊತ್ತಾ?
ಸಾಂದರ್ಭಿಕ ಚಿತ್ರ
Image Credit source: Pinterest

Updated on: May 21, 2026 | 5:19 PM

ಬದುಕಿನಲ್ಲಿ ನಾನಾ ರೀತಿಯ ಅನುಭವವಾಗುತ್ತದೆ. ಬದುಕಿನಲ್ಲಿ ಎಲ್ಲವನ್ನು ಒಪ್ಪಿಕೊಳ್ಳಬೇಕು, ಆದರೆ ಸಣ್ಣ ಪುಟ್ಟ ಬದಲಾವಣೆಗಳು ಅತ್ಯಗತ್ಯ. ಇದೀಗ ಬೆಂಗಳೂರಿನ ಟೆಕ್ಕಿಯೊಬ್ಬರು ಬೆಂಗಳೂರಿನ (Bengaluru) ದಿನಚರಿಯನ್ನು ಜರ್ಮನಿಯಲ್ಲಿನ ತಮ್ಮ ಜೀವನದೊಂದಿಗೆ ಹೋಲಿಸಿಕೊಂಡಿದ್ದಾರೆ. ಈ ವೇಳೆ ಜರ್ಮನಿಯ ಜೀವನವೇ ಬೆಸ್ಟ್ ಎಂದು ಹೇಳಿದ್ದಾರೆ. ಈ ಟೆಕ್ಕಿ ಮಾಡಿದ ಪೋಸ್ಟ್ ಆನ್‌ಲೈನ್‌ನಲ್ಲಿ ಚರ್ಚೆಗೆ ನಾಂದಿ ಹಾಡಿದೆ.

ತನುಜ್ (Tanuj) ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್ ನಲ್ಲಿ ಜರ್ಮನಿಯಿಂದ ಬೆಂಗಳೂರಿಗೆ ಸ್ಥಳಾಂತರಗೊಂಡ ಬಳಿಕ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ತಮ್ಮ ದೈನಂದಿನ ವೇಳಾಪಟ್ಟಿಯನ್ನು ಬದಲಾಯಿಸಿದ್ದೇನೆ. ಬೆಂಗಳೂರಿನಲ್ಲಿ, ನಾನು ಕಾರು ಮತ್ತು ಟ್ರಕ್ ಶಬ್ದಕ್ಕೆ ಎಚ್ಚರಗೊಳ್ಳುತ್ತೇನೆ. ಬೆಳಿಗ್ಗೆ ವಾಕಿಂಗ್ ಗೆ ಹೋಗುತ್ತೇನೆ ಇಲ್ಲವಾದರೆ ಗೇಟೆಡ್ ಸೊಸೈಟಿಯೊಳಗೆ ಓಡುತ್ತೇನೆ. ಆಫೀಸಿನಿಂದ ತಲುಪಲು 1.5 ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿ ಕಳೆಯುತ್ತೇನೆ, ಕಡಿಮೆ ವಾಸ್ತವಿಕ ಕೆಲಸದೊಂದಿಗೆ ಹೆಚ್ಚಿನ ಮೀಟಿಂಗ್‌ನಲ್ಲಿ ಹಾಜರಾಗುತ್ತೇನೆ. ಸಹೋದ್ಯೋಗಿಗಳೊಂದಿಗೆ ಊಟ ಮಾಡುತ್ತೇನೆ, ಎಲ್ಲೆಡೆ ಹರಟೆಯೊಂದಿಗೆ ಚಹಾ ಹಾಗೂ ಆಟದ ವಿರಾಮಗಳನ್ನು ಮುಗಿಸುತ್ತೇನೆ. ಮನೆಗೆ ಹಿಂದಿರುಗಿದ ನಂತರವೂ, ಮೀಟಿಂಗ್ ರಾತ್ರಿ 10 ಗಂಟೆಯವರೆಗೆ ಮುಂದುವರಿಯುತ್ತವೆ ಎಂದು ವಾಸ್ತವ ಸ್ಥಿತಿಯನ್ನು ವಿವರಿಸಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

ಆದರೆ, ಜರ್ಮನಿಯಲ್ಲಿ, ನಾನು ಸಂಪೂರ್ಣ ಶಾಂತವಾಗಿ ಎಚ್ಚರಗೊಳ್ಳುತ್ತಿದ್ದೆ. ಶುದ್ಧ ಗಾಳಿಯೊಂದಿಗೆ ಪ್ರಕೃತಿಯಲ್ಲಿ ಓಡುತ್ತಿದ್ದೆ.. ಸಾರ್ವಜನಿಕ ಸಾರಿಗೆಯನ್ನು ಬಳಸಿಕೊಂಡು ಪ್ರಯಾಣಿಸುತ್ತಿದ್ದೆ. ಕಡಿಮೆ ಮಾತು, ಆದರೆ ಕೆಲಸದ ಮೇಲೆ ಹೆಚ್ಚು ಗಮನ. ಹೆಚ್ಚಿನ ದಿನಗಳಲ್ಲಿ ಒಂಟಿಯಾಗಿ ಊಟ ಹಾಗೂ ಯಾವುದೇ ಯಾದೃಚ್ಛಿಕ ವಿರಾಮಗಳಿಲ್ಲದೆ ಎಲ್ಲೆಡೆ ಮೌನವನ್ನು ಅನುಭವಿಸಿದೆ ಕೆಲಸದ ನಂತರ ನನ್ನ ಲ್ಯಾಪ್‌ಟಾಪ್ ಅನ್ನು ಎಂದಿಗೂ ತೆರೆಯಲಿಲ್ಲ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಹೈದರಾಬಾದ್​​ನಲ್ಲಿ ಇರುವಂತೆ ಬೆಂಗಳೂರು ರಸ್ತೆಗಳು ಯಾಕಿಲ್ಲ? ಕೆನಡಾ ವ್ಯಕ್ತಿಯ ವಿಡಿಯೋ ವೈರಲ್

ಮೇ 19 ರಂದು ಮಾಡಲಾದ ಪೋಸ್ಟ್ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಜರ್ಮನಿಯಲ್ಲಿ ಕೆಲಸದ ನಿರ್ವಹಣೆ ಎಲ್ಲರಿಗೂ ಮಾದರಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ಬದುಕಿನ ಎಲ್ಲಾ ಅನುಭವಗಳನ್ನು ಅನುಭವಿಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಎರಡು ದೇಶಗಳ ನಡುವಿನ ಹೋಲಿಕೆ ಅದ್ಭುತ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 5:17 pm, Thu, 21 May 26

Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Follow Us