AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತನ್ನನ್ನು ಸ್ವೀಟ್ ಬೇಬಿ ಎಂದು ಕರೆದುಕೊಂಡ ಪಕ್ಷಿ: ಮನುಷ್ಯರಂತೆ ಮಾತನಾಡುವ ಪಕ್ಷಿಯ ಕ್ಯೂಟ್​ ವೀಡಿಯೋ ವೈರಲ್​

ಇಲ್ಲೊಂದು ನೀಲಿ ಬಣ್ಣದ ಗಿಳಿ ಅಥವಾ ಬೀಟ್​ಬಾಕ್ಸಿಂಗ್​ ಎನ್ನುವ ಪಕ್ಷಿ ಮುದ್ದಾಗಿ ಮಾತನಾಡುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.  ಪಕ್ಷಿ ಸ್ಪಷ್ಟವಾಗಿ ಮಾತನಾಡುವುದನ್ನು ಕಂಡು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ತನ್ನನ್ನು ಸ್ವೀಟ್ ಬೇಬಿ ಎಂದು ಕರೆದುಕೊಂಡ ಪಕ್ಷಿ: ಮನುಷ್ಯರಂತೆ ಮಾತನಾಡುವ ಪಕ್ಷಿಯ ಕ್ಯೂಟ್​ ವೀಡಿಯೋ ವೈರಲ್​
ವೀಡಿಯೋದಿಂದ ಸೆರೆಹಿಡಿದ ಚಿತ್ರ
TV9 Web
| Edited By: |

Updated on: Dec 29, 2021 | 1:05 PM

Share

ಪಕ್ಷಿಗಳು ಯಾವುದೇ ಇರಲಿ ಅವು ನೋಡಲು ತುಂಬಾ ಮುದ್ದಾಗಿ ಕಾಣುತ್ತವೆ. ಅವುಗಳು ಮಾತನಾಡಿದರೆ? ಹೌದು ನೀವು ಓದುತ್ತಿರುವುದು ನಿಜ ಪಕ್ಷಿಗಳು ಕೂಡ ಮಾನವರಂತೆ ಮಾತನಾಡಬಲ್ಲವು. ಅಂತಹ ಪಕ್ಷಿಗಳು ನೋಡಲು ಇನ್ನೂ ಚೆಂದ. ಇಲ್ಲೊಂದು ನೀಲಿ ಬಣ್ಣದ ಗಿಳಿ ಅಥವಾ ಬೀಟ್​ಬಾಕ್ಸಿಂಗ್​ ಎನ್ನುವ ಪಕ್ಷಿ ಮುದ್ದಾಗಿ ಮಾತನಾಡುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.  ಪಕ್ಷಿ ಸ್ಪಷ್ಟವಾಗಿ ಮಾತನಾಡುವುದನ್ನು ಕಂಡು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಬಬಲ್ಸ್​ ಎನ್ನುವ ಹೆಸರಿನ ಈ ಪಕ್ಷಿ ಮಾತನಾಡುವ ವೀಡಿಯೋವನ್ನು ಪಾರೋಟ್ಸ್​ ಹಾವ್​ ಫನ್​ ಎನ್ನುವ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಡಿಸೆಂಬರ್ 8 ರಂದು ಹಂಚಿಕೊಂಡ ಈ ವಿಡಿಯೋ ಸಖತ್​ ವೈರಲ್​ ಆಗಿದೆ. ಈ ವೀಡಿಯೋ 6.9 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು ನೆಟ್ಟಿಗರ ಮನಸೆಳೆದಿದೆ.

ವೀಡಿಯೋದಲ್ಲಿ ಪಕ್ಷಿಯು ವ್ಯಕ್ತಿಯ ಭುಜದ ಮೇಲೆ ಕುಳಿತಿರುತ್ತದೆ. ನಂತರ ಅದರ ಬಳಿ ಆ ವ್ಯಕ್ತಿ ಸಣ್ಣ ಮೈಕ್​ಅನ್ನು ಹಿಡಿಯುತ್ತಾನೆ ಆಗ ಪಕ್ಷಿ ಒಹ್​ ಹಾಯ್​ !ಎಂದು ಮೊದಲು ಸ್ಪಷ್ಟವಾಗಿ ಮನುಷ್ಯರಂತೆ ಉಚ್ಚರಿಸುತ್ತದೆ. ನಂತರ ಮುಂದುವರೆದು ಮಾತನಾಡಿ, ನಾನು ಅತ್ಯಂತ ಖುಷಿಯ ಪಕ್ಷಿ, ಸ್ವೀಟ್​ ಬಬಲ್ಸ್​ ಎಂದು ಹೇಳಿಕೊಳ್ಳುತ್ತದೆ. ಪಕ್ಷಿಯು ಅಕ್ಷರಗಳನ್ನು ಸ್ಪಷ್ವವಾಗಿ ಉಚ್ಚರಿಸುತ್ತದೆ. ಇದು ನೋಡುಗರನ್ನು ಸೆಳೆದಿದೆ.

ಮಾತನಾಡುವ ಗಿಳಿಗಳನ್ನು ನೋಡಿದ್ದೇವೆ ಆದರೆ ಇಷ್ಟು ಸ್ಪಷ್ಟವಾಗಿ ಮಾತನಾಡುವ ಪಕ್ಷಿಯನ್ನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇವೆ ಎಂದು ನೆಟ್ಟಿಗರು ಕಾಮೆಂಟ್​ ಮಾಡಿದ್ದಾರೆ. ಇನ್ನೂ ಕೆಲವರು ವಾವ್​ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪಕ್ಷಿಯ ಧ್ವನಿಗೆ ಮೈಕ್​ ಹಿಡಿದ ಕಾರಣ ಧ್ವನಿ ಇನ್ನಷ್ಟು ಸ್ಪಷ್ಟವಾಗಿ ಕೇಳಿಸುತ್ತಿದ್ದು, ಮತ್ತೆ ಮತ್ತೆ ಕೇಳಬೇಕಿನಿಸುವಷ್ಟು ಮಧುರ ಧ್ವನಿ ಪಕ್ಷಿಯದ್ದಾಗಿದೆ.

ಇದನ್ನೂ ಓದಿ:

ತಮಿಳುನಾಡಿನ ಪಕ್ಷಿಧಾಮಗಳಲ್ಲೀಗ ಫ್ಲೆಮಿಂಗೋ ವಲಸೆ ಹಕ್ಕಿಗಳ ಕಲರವ: ವೀಡಿಯೋ ವೈರಲ್​

ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ