AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಒಂದು ಬದಿ ಬ್ಲ್ಯಾಕ್​ ಅಂಡ್​ ವೈಟ್​ ಪ್ರಿಂಟೌಟ್​ಗೆ 9 ರೂಪಾಯಿ; ಡೆಲಿವರಿ ಚಾರ್ಜ್​ 25 ರೂ. !

Blinkit: ಒಂದು ಪುಟ ಪ್ರಿಂಟೌಟ್​ಗೆ ರೂ 9. ಡೆಲಿವರಿ ಶುಲ್ಕ ಪ್ರತ್ಯೇಕ. ಇದು ಗ್ರೋಸರಿ ಮತ್ತು ಗೂಡ್ಸ್​ ಅಪ್ಲಿಕೇಶನ್​ ಬ್ಲಿಂಕಿಟ್​ನ ಹೊಸ ಸೌಲಭ್ಯ. ನೆಟ್ಟಿಗರು ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

Viral Video: ಒಂದು ಬದಿ ಬ್ಲ್ಯಾಕ್​ ಅಂಡ್​ ವೈಟ್​ ಪ್ರಿಂಟೌಟ್​ಗೆ 9 ರೂಪಾಯಿ; ಡೆಲಿವರಿ ಚಾರ್ಜ್​ 25 ರೂ. !
TV9 Web
| Edited By: |

Updated on:Aug 22, 2022 | 12:32 PM

Share

Blinkit :ನಿಮ್ಮ ಶಾಲಾಕಾಲೇಜು ದಿನಗಳನ್ನು ಒಮ್ಮೆ ನೆನಪಿಸಿಕೊಳ್ಳಿ, ಆ ಹತ್ತಿರ ಇದ್ದ ಒಂದೇ ಒಂದು ಝೆರಾಕ್ಸ್​ ಅಂಗಡಿ. ಅಲ್ಲಿ ಒಬ್ಬರ ಮೇಲೊಬ್ಬರು ಮುಗಿಬಿದ್ದು ಐವತ್ತು ಪೈಸೆ, ಒಂದು ರೂಪಾಯಿ ನಾಣ್ಯ ಹಿಡಿದುಕೊಂಡು ಒಂದೊಂದು ಪ್ರತಿಗಾಗಿ ಕಾಯುತ್ತಿದ್ದದ್ದು… ಈಗಲೂ ಆ ಝೆರಾಕ್ಸ್​ ಕಾಲ ಹಾಗೇ ಇದೆ. ಜೊತೆಗೆ ಪ್ರಿಂಟರ್ ಕಾಲವೂ. ಎರಡೂ ಒಟ್ಟೊಟ್ಟಿಗೇ ಚಲಿಸುತ್ತಿವೆ. ಆದರೆ ಆನ್​ಲೈನ್​ ಕಲಿಕೆ ಶುರುವಾದಾಗಿನಿಂದ ಪ್ರಿಂಟೌಟ್​ಗೆ ಬೇಡಿಕೆ ಹೆಚ್ಛೇ ಆಯಿತು. ಮುಕ್ಕಾಲು ಜನರು ಪ್ರಿಂಟರ್​ ಅಂಗಡಿಗೆ ಓಡುವುದು ಅನಿವಾರ್ಯವಾಯಿತು. ಪ್ರಿಂಟೌಟ್​ ಕುರಿತಂತೆ ಬ್ಲಿಂಕಿಟ್​ ಪರಿಚಯಿಸಿದ ಹೊಸ ವ್ಯವಸ್ಥೆ ಅಚ್ಚರಿ ಮತ್ತು ಆಘಾತಕಾರಿ ಅನ್ನಿಸುವಂತಿದೆ ಎನ್ನುತ್ತಿದ್ದಾರೆ ನೆಟ್ಟಿಗರು.  ಹಾಗಾಗಿಯೇ ನೆಟ್ಟಿಗರು ಈ ಹೊಸ ಸೌಲಭ್ಯದ ಬಗ್ಗೆ ಮಿಶ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದಿನಸಿ ಮತ್ತು ನಿತ್ಯಬಳಕೆಯ ಸಾಮಾನುಗಳನ್ನು ವಿತರಿಸುವ ಬ್ಲಿಂಕಿಟ್​ ಅಪ್ಲಿಕೇಶನ್ (ಹಳೆಯ ಹೆಸರು ಗ್ರೋಫರ್ಸ್) ಹೊಸ ಪ್ರಿಂಟ್‌ಔಟ್ ಸೌಲಭ್ಯವನ್ನು ಆರಂಭಿಸಿದೆ. ಕಪ್ಪುಬಿಳುಪಿನ ಪ್ರತಿ ಪುಟಕ್ಕೆ ರೂ. 9, ಬಣ್ಣದ ಪುಟಕ್ಕೆ ರೂ.19 ಶುಲ್ಕ ವಿಧಿಸಿದೆ. ಸದ್ಯ ಗುರುಗ್ರಾಮ್‌ನಲ್ಲಿ ಈ ಸೌಲಭ್ಯವನ್ನು ಪ್ರಾರಂಭಿಸಿದೆ. ಪ್ರತಿ ಪ್ರಿಂಟಿಂಗ್ ಆರ್ಡರ್‌ಗೆ ರೂ. 25 ವಿತರಣಾ ಶುಲ್ಕ ಪ್ರತ್ಯೇಕವಾಗಿರುತ್ತದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಕೆಲವರು ಈ ನಿರ್ಧಾರವನ್ನು ಸ್ವಾಗತಿಸಿದರೆ, ಇನ್ನೂ ಕೆಲವರು ಬೆಲೆಯ ವಿವರ ನೋಡಿ ಬೆಚ್ಚಿಬಿದ್ದಿದ್ದಾರೆ. ಮುದ್ರಣ ಮಳಿಗೆಗಳಲ್ಲಿ ಎರಡೂ ಬದಿ ಮುದ್ರಣ ವೆಚ್ಚ ಕೇವಲ ರೂ. ಎರಡರಿಂದ ಮೂರು. ಆದರೆ ಬ್ಲಿಂಕಿಟ್​ನ ಈ ಯೋಜನೆ ತುಟ್ಟಿಯದ್ದಾಗಿದೆ. ಇದು ವಿಫಲವಾಗುವ ಸಾಧ್ಯತೆ ಇದೆ ಎಂಬ ಚರ್ಚೆ ನೆಟ್ಟಿಗರಲ್ಲಿ ಶುರುವಾಗಿದೆ.

ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಿಮಗೆ ಈ ಸೌಲಭ್ಯ ಸೂಕ್ತವೆನ್ನಿಸಿತೆ?

ಮತ್ತಷ್ಟು ಇಂಥ ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:06 pm, Mon, 22 August 22

ಎಲ್ಲವೂ ಓದಿದ್ರೂ ಪರೀಕ್ಷೆ ಹಾಲ್‌ನಲ್ಲಿ ಕೂತಾಗ ಮರೆತು ಹೋಗುವುದು ಯಾಕೆ?
ಎಲ್ಲವೂ ಓದಿದ್ರೂ ಪರೀಕ್ಷೆ ಹಾಲ್‌ನಲ್ಲಿ ಕೂತಾಗ ಮರೆತು ಹೋಗುವುದು ಯಾಕೆ?
ಮಂಡ್ಯ: ಪ್ರೀತಿಸಿ ಮದುವೆಯಾದ ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಾವ!
ಮಂಡ್ಯ: ಪ್ರೀತಿಸಿ ಮದುವೆಯಾದ ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಾವ!
ಸಿಎಂ ಸಿದ್ದರಾಮಯ್ಯರ ಟ್ವೀಟ್ ಬಗ್ಗೆ ಕೇಂದ್ರ ಸಚಿವ ಹೆಚ್​ಡಿಕೆ ಲೇವಡಿ
ಸಿಎಂ ಸಿದ್ದರಾಮಯ್ಯರ ಟ್ವೀಟ್ ಬಗ್ಗೆ ಕೇಂದ್ರ ಸಚಿವ ಹೆಚ್​ಡಿಕೆ ಲೇವಡಿ
ಕಮಿಷನ್​​ ಪಡೆಯುವಾಗಲೇ ಶಾಸಕ ಲಾಕ್​, ಇಲ್ಲಿದೆ ಎಕ್ಸ್​​ಕ್ಲೂಸಿವ್ ವಿಡಿಯೋ
ಕಮಿಷನ್​​ ಪಡೆಯುವಾಗಲೇ ಶಾಸಕ ಲಾಕ್​, ಇಲ್ಲಿದೆ ಎಕ್ಸ್​​ಕ್ಲೂಸಿವ್ ವಿಡಿಯೋ
ಅಭಿಮಾನಿಗಳ ಆ ಒಂದು ಮಹತ್ ಕಾರ್ಯಕ್ಕೆ ಜೈಲಿನಿಂದಲೇ ಧನ್ಯವಾದ ಹೇಳಿದ ದರ್ಶನ್
ಅಭಿಮಾನಿಗಳ ಆ ಒಂದು ಮಹತ್ ಕಾರ್ಯಕ್ಕೆ ಜೈಲಿನಿಂದಲೇ ಧನ್ಯವಾದ ಹೇಳಿದ ದರ್ಶನ್
ಹೆಲಿಕಾಪ್ಟರ್ ಘಟಕಕ್ಕೆ ವಿದ್ಯುತ್ ಕಟ್ ಮಾಡಿ ಎಂದ ಕೊತ್ತೂರು ಶಾಸಕ!
ಹೆಲಿಕಾಪ್ಟರ್ ಘಟಕಕ್ಕೆ ವಿದ್ಯುತ್ ಕಟ್ ಮಾಡಿ ಎಂದ ಕೊತ್ತೂರು ಶಾಸಕ!
ಕಾಂಗ್ರೆಸ್ ಕುರ್ಚಿ ಕದನ: ಖರ್ಗೆ ಭೇಟಿ ಬಳಿಕ ಜಾರಕಿಹೊಳಿ ಸ್ಫೋಟಕ ಮಾಹಿತಿ
ಕಾಂಗ್ರೆಸ್ ಕುರ್ಚಿ ಕದನ: ಖರ್ಗೆ ಭೇಟಿ ಬಳಿಕ ಜಾರಕಿಹೊಳಿ ಸ್ಫೋಟಕ ಮಾಹಿತಿ
ಬಂಧನದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಫಸ್ಟ್ ರಿಯಾಕ್ಷನ್
ಬಂಧನದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಫಸ್ಟ್ ರಿಯಾಕ್ಷನ್
ವೈರಿಯ ಮನೆಗೆ ಬೆಂಕಿ ಹಚ್ಚಲು ಹೋದವನ ಕಾರೇ ಬೆಂಕಿಗಾಹುತಿ
ವೈರಿಯ ಮನೆಗೆ ಬೆಂಕಿ ಹಚ್ಚಲು ಹೋದವನ ಕಾರೇ ಬೆಂಕಿಗಾಹುತಿ
‘ಸೀತಾಪಯಣ’ಕ್ಕೆ ಸಿಕ್ಕ ಪ್ರತಿಕ್ರಿಯೆಗೆ ಧನ್ಯವಾದ ಹೇಳಿದ ಉಪೇಂದ್ರ ಅಣ್ಣನ ಮಗ
‘ಸೀತಾಪಯಣ’ಕ್ಕೆ ಸಿಕ್ಕ ಪ್ರತಿಕ್ರಿಯೆಗೆ ಧನ್ಯವಾದ ಹೇಳಿದ ಉಪೇಂದ್ರ ಅಣ್ಣನ ಮಗ