AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ವಾಹನ ಅಡ್ಡಗಟ್ಟಿ ನರ್ತಿಸಿದ ಈ ಬ್ಯಾಲೆ ನರ್ತಕಿಯರು

Ducks Surround Car : ಈ ರಮ್ಯತೆಯ ಎದುರು ಈ ಗಾಡಿಯಲ್ಲಿರುವವರು ಶರಣಾಗದೆ ವಿಧಿಯೇ ಇರಲಿಲ್ಲ. ನೋಡಿ ಈ 14 ಸೆಕೆಂಡುಗಳ ಆಹ್ಲಾದಕರ ದೃಶ್ಯ.

Viral Video: ವಾಹನ ಅಡ್ಡಗಟ್ಟಿ ನರ್ತಿಸಿದ ಈ ಬ್ಯಾಲೆ ನರ್ತಕಿಯರು
ಬಾತುಕೋಳಿಗಳ ರೋಡ್ ಷೋ
TV9 Web
| Edited By: |

Updated on:Aug 22, 2022 | 3:38 PM

Share

Ducks Surround Car : ಸೋಮವಾರ ಆಫೀಸಿಗೆ ಬರುವುದರಷ್ಟು ಕಷ್ಟದ ಕೆಲಸ ಬಹುಶಃ ಬದುಕಿನಲ್ಲಿ ಮತ್ತೊಂದಿಲ್ಲ ಎನ್ನಿಸಿಬಿಡುತ್ತದೆ ಒಮ್ಮೊಮ್ಮೆ. ಏಕೆಂದರೆ ಮಹಾನಗರದ ಸಂಚಾರ ವ್ಯವಸ್ಥೆಯನ್ನು ಟ್ರಾಫಿಕ್​ ಎಂಬ ಭೂತ ಅಲ್ಲೋಕಲ್ಲೋಲ ಮಾಡಿಬಿಟ್ಟಿರುತ್ತದೆ. ಹಳ್ಳಿಗಳಲ್ಲಾದರೆ ಕುರಿಹಿಂಡು ಬಂತೋ, ಹಸುಗಳು ಅಡ್ಡಗಟ್ಟಿದವೋ ಎನ್ನಬಹುದು. ಕಾಡಲ್ಲಾದರೆ ಆನೆಗಳು ಅಡ್ಡಗಟ್ಟಿದ್ದವೋ ಹುಲಿಗಳು ತಡೆದಿದ್ದವೋ ಎನ್ನಬಹುದು. ಆದರೆ ಅಂಥ ಯಾವುದೇ ವಾತಾವರಣವಿಲ್ಲದೆಯೂ ಈ ವಿಡಿಯೋದಲ್ಲಿರುವ ವಾಹನಗಳು ರಸ್ತೆಮಧ್ಯೆ ನಿಂತಿದ್ದು ಯಾಕೆ?  ಕಾರಣ ಕೇಳಿದರೆ ಚೂರು ನಗು ಬರಬಹುದು. ಆದರೆ ಇದು ಅಪರೂಪದ ವಾಸ್ತವದೃಶ್ಯ! ಈ ವಿಡಿಯೋ ಅನ್ನು 65,000 ವೋಟ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.

14 ಸೆಕೆಂಡಿನ ಈ ವಿಡಿಯೋದಲ್ಲಿ ಈ ನೂರಾರು ಬಾತುಕೋಳಿಗಳು MPV ವಾಹನಗಳನ್ನು ಅಡ್ಡಗಟ್ಟಿವೆ! ಅಡ್ಡಗಟ್ಟಿವೆ ಎಂದು ಹೇಳಲು ಮನಸ್ಸು ಬಾರದು. ನುರಿತ ಬ್ಯಾಲೆ ನೃತ್ಯಗಾರ್ತಿಯರಂತೆ ಲಯಬದ್ಧವಾಗಿ ಈ ಹಿಂಡು ಸಾಗುವುದನ್ನು ನೋಡಿದಾಗ ಎಂಥ ಕಲಾತ್ಮಕ ದೃಶ್ಯವಿದು! ಎನ್ನಿಸದೇ ಇರದು. ಪ್ರಾಣಿ ಪಕ್ಷಿಗಳಿಗೂ ಮಾನವನ ಸಾಂಗತ್ಯ ತುಸುಹೊತ್ತಾದರೂ ಬೇಕೆನ್ನುವುದು ಸಹಜ ಅಲ್ಲವೆ? ಯಾವ ಗುಂಗಿನಲ್ಲಿ ಈ ಸವಾರಿಗರು ಹೊರಟಿದ್ದರೋ ಈ ದೃಶ್ಯ ನೋಡಿ ಅವರ ಮನಸ್ಸು ಅರಳಿರಲು ಸಾಕು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಮತ್ತಷ್ಟು ಇಂಥ ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:08 pm, Mon, 22 August 22

ರಾಹುಲ್ ಗಾಂಧಿಗೆ ಕಪ್ಪು ಬಾವುಟ ತೋರಿದ ಬಿಜೆಪಿ ಕಾರ್ಯಕರ್ತರು
ರಾಹುಲ್ ಗಾಂಧಿಗೆ ಕಪ್ಪು ಬಾವುಟ ತೋರಿದ ಬಿಜೆಪಿ ಕಾರ್ಯಕರ್ತರು
ಎಲ್ಲವೂ ಓದಿದ್ರೂ ಪರೀಕ್ಷೆ ಹಾಲ್‌ನಲ್ಲಿ ಕೂತಾಗ ಮರೆತು ಹೋಗುವುದು ಯಾಕೆ?
ಎಲ್ಲವೂ ಓದಿದ್ರೂ ಪರೀಕ್ಷೆ ಹಾಲ್‌ನಲ್ಲಿ ಕೂತಾಗ ಮರೆತು ಹೋಗುವುದು ಯಾಕೆ?
ಮಂಡ್ಯ: ಪ್ರೀತಿಸಿ ಮದುವೆಯಾದ ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಾವ!
ಮಂಡ್ಯ: ಪ್ರೀತಿಸಿ ಮದುವೆಯಾದ ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಾವ!
ಸಿಎಂ ಸಿದ್ದರಾಮಯ್ಯರ ಟ್ವೀಟ್ ಬಗ್ಗೆ ಕೇಂದ್ರ ಸಚಿವ ಹೆಚ್​ಡಿಕೆ ಲೇವಡಿ
ಸಿಎಂ ಸಿದ್ದರಾಮಯ್ಯರ ಟ್ವೀಟ್ ಬಗ್ಗೆ ಕೇಂದ್ರ ಸಚಿವ ಹೆಚ್​ಡಿಕೆ ಲೇವಡಿ
ಕಮಿಷನ್​​ ಪಡೆಯುವಾಗಲೇ ಶಾಸಕ ಲಾಕ್​, ಇಲ್ಲಿದೆ ಎಕ್ಸ್​​ಕ್ಲೂಸಿವ್ ವಿಡಿಯೋ
ಕಮಿಷನ್​​ ಪಡೆಯುವಾಗಲೇ ಶಾಸಕ ಲಾಕ್​, ಇಲ್ಲಿದೆ ಎಕ್ಸ್​​ಕ್ಲೂಸಿವ್ ವಿಡಿಯೋ
ಅಭಿಮಾನಿಗಳ ಆ ಒಂದು ಮಹತ್ ಕಾರ್ಯಕ್ಕೆ ಜೈಲಿನಿಂದಲೇ ಧನ್ಯವಾದ ಹೇಳಿದ ದರ್ಶನ್
ಅಭಿಮಾನಿಗಳ ಆ ಒಂದು ಮಹತ್ ಕಾರ್ಯಕ್ಕೆ ಜೈಲಿನಿಂದಲೇ ಧನ್ಯವಾದ ಹೇಳಿದ ದರ್ಶನ್
ಹೆಲಿಕಾಪ್ಟರ್ ಘಟಕಕ್ಕೆ ವಿದ್ಯುತ್ ಕಟ್ ಮಾಡಿ ಎಂದ ಕೊತ್ತೂರು ಶಾಸಕ!
ಹೆಲಿಕಾಪ್ಟರ್ ಘಟಕಕ್ಕೆ ವಿದ್ಯುತ್ ಕಟ್ ಮಾಡಿ ಎಂದ ಕೊತ್ತೂರು ಶಾಸಕ!
ಕಾಂಗ್ರೆಸ್ ಕುರ್ಚಿ ಕದನ: ಖರ್ಗೆ ಭೇಟಿ ಬಳಿಕ ಜಾರಕಿಹೊಳಿ ಸ್ಫೋಟಕ ಮಾಹಿತಿ
ಕಾಂಗ್ರೆಸ್ ಕುರ್ಚಿ ಕದನ: ಖರ್ಗೆ ಭೇಟಿ ಬಳಿಕ ಜಾರಕಿಹೊಳಿ ಸ್ಫೋಟಕ ಮಾಹಿತಿ
ಬಂಧನದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಫಸ್ಟ್ ರಿಯಾಕ್ಷನ್
ಬಂಧನದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಫಸ್ಟ್ ರಿಯಾಕ್ಷನ್
ವೈರಿಯ ಮನೆಗೆ ಬೆಂಕಿ ಹಚ್ಚಲು ಹೋದವನ ಕಾರೇ ಬೆಂಕಿಗಾಹುತಿ
ವೈರಿಯ ಮನೆಗೆ ಬೆಂಕಿ ಹಚ್ಚಲು ಹೋದವನ ಕಾರೇ ಬೆಂಕಿಗಾಹುತಿ