AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಬೆಂಕಿಯಿಂದ ಈ ನಾಯಿಮರಿಗಳನ್ನು ರಕ್ಷಿಸಿದ ಅಮೇಝಾನ್ ಲೇಡಿ ಡ್ರೈವರ್

Dog Love : ಅಮೇಝಾನ್​ ಡೆಲಿವರಿಗೆಂದು ಈ ಯುವತಿ ಗ್ರಾಹಕರ ಮನೆಗೆ ಹೋಗಿದ್ದಾರೆ. ಒಳಗೆ ಬೆಂಕಿ ಹೊತ್ತಿ ಉರಿಯುತ್ತಿದ್ದುದನ್ನು ಗಮನಿಸಿ ಈ ಮೂರೂ ನಾಯಿಮರಿಗಳನ್ನು ರಕ್ಷಿಸಿದ್ದಾರೆ. ನೆಟ್ಟಿಗರು ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Viral Video : ಬೆಂಕಿಯಿಂದ ಈ ನಾಯಿಮರಿಗಳನ್ನು ರಕ್ಷಿಸಿದ ಅಮೇಝಾನ್ ಲೇಡಿ ಡ್ರೈವರ್
ಅಮೇಝಾನ್ ಲೇಡಿ ಡ್ರೈವರ್ ಈ ನಾಯಿಮರಿಯನ್ನು ರಕ್ಷಿಸುತ್ತಿರುವುದು
TV9 Web
| Edited By: ಶ್ರೀದೇವಿ ಕಳಸದ|

Updated on:Sep 06, 2022 | 3:41 PM

Share

Viral : ಅಮೆರಿಕದಲ್ಲಿರುವ ಕೊಲಂಬಿಯಾ ಕೌಂಟಿ ಫೈರ್​ ರೆಸ್ಕ್ಯೂ ತನ್ನ ಅಧಿಕೃತ ಫೇಸ್​ಬುಕ್​ ಪುಟದಲ್ಲಿ ಮೇಲ್ಕಂಡ ಚಿತ್ರಗಳನ್ನು ಹಂಚಿಕೊಂಡಿದೆ. ಇಲ್ಲಿರುವ ಈ ಯುವತಿ ಅಮೇಝಾನ್​ ಡೆಲಿವರಿ ಡ್ರೈವರ್. ಬೆಂಕಿ ಹೊತ್ತಿ ಉರಿಯುತ್ತಿದ್ದ ಮನೆಯಿಂದ ನಾಯಿಮರಿಗಳನ್ನು ರಕ್ಷಿಸಿದ್ದಾರೆ. ತನ್ನ ಜೀವ ಪಣಕ್ಕಿಟ್ಟು ಒಟ್ಟು ಮೂರು ನಾಯಿಮರಿಗಳ ಜೀವ ಉಳಿಸಿ ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ. ಕೆಚ್ಚೆದೆಯ ಈ ಯುವತಿಯ ಕಥೆಯನ್ನು ಕೌಂಟಿ ಫೈರ್​ ರೆಸ್ಕ್ಯೂ ಫೇಸ್​ಬುಕ್​ನಲ್ಲಿ ಹಂಚಿಕೊಳ್ಳುತ್ತಿದ್ದಂತೆ ಅನೇಕರು ಈ ಪೋಸ್ಟ್​ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈತನಕ 541 ಜನರು ಈ ಪೋಸ್ಟ್​ ರೀಶೇರ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಆಗಸ್ಟ್​ 31ರಂದು ಈ ಪೋಸ್ಟ್ ಮಾಡಲಾಗಿದೆ. ‘ಮನೆಯಲ್ಲಿ ಮಾಲಿಕರು ಇಲ್ಲದ ವೇಳೆಯಲ್ಲಿ ಮನೆಗೆ ಬೆಂಕಿ ಬಿದ್ದಿದೆ. ಆಗ ಬೆಂಕಿಗೆ ಆಹುತಿಯಾಗುತ್ತಿದ್ದ ಈ ನಾಯಿಮರಿಗಳ ಜೀವವನ್ನು ಈ ಯುವತಿ ಉಳಿಸಿದ್ದಾರೆ. ಹೊಗೆಯಿಂದಾಗಿ ಉಸಿರಾಟದ ತೊಂದರೆಗೆ ಒಳಗಾಗಿದ್ದ ಮೂರು ನಾಯಿಮರಿಗಳ ಆರೈಕೆ ಮಾಡಿ ಕಾಪಾಡಿದ್ದಾರೆ. ಹೊಗೆಯನ್ನು ಗಮನಿಸಿ 911 ಗೆ ಕರೆ ಮಾಡಿ ಅಮೇಝಾನ್ ಡ್ರೈವರ್​ಗೆ ಧನ್ಯವಾದಗಳು’ ಎಂದು ಪೋಸ್ಟ್​ನ ಒಕ್ಕಣೆ ಹೇಳುತ್ತದೆ. 700ಕ್ಕೂ ಹೆಚ್ಚು ಲೈಕ್ಸ್​ ಈ ಪೋಸ್ಟ್​ಗೆ ಒದಗಿದೆ.

ಈ ಯುವತಿಗೆ ಧನ್ಯವಾದ ಹೇಳಿದ ನಾಯಿಮರಿಗಳ ಪೋಷಕಿ, ‘ತುಂಬಾ ಧನ್ಯವಾದಗಳು ನನ್ನ ಮರಿಗಳನ್ನು ರಕ್ಷಿಸಿದ್ದಕ್ಕೆ. ಇವು ನನ್ನ ಮಗಳು ತುಂಬಾ ಪ್ರೀತಿಸುವ ನಾಯಿಮರಿಗಳು. ಆಸ್ಪತ್ರೆಯಲ್ಲಿರುವ ಅವು ಆರೋಗ್ಯವಾಗಿವೆ. ಧನ್ಯವಾದ ಎಷ್ಟು ಹೇಳಿದರೂ ಸಾಕಾಗದು’ ಎಂದಿದ್ದಾರೆ.

ಫೇಸ್​ಬುಕ್ ಖಾತೆದಾರರು, ಪ್ರತಿಕ್ರಿಯೆಗಳ ಮೂಲಕ ಡ್ರೈವರ್​ಗೆ ಅಭಿನಂದನೆಗಳ ಮಳೆ ಸುರಿಸಿದ್ದಾರೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:40 pm, Tue, 6 September 22

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು