AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Breakup Benefits: ನಿಮ್ಗೊತ್ತಾ ಬ್ರೇಕಪ್‌ನಿಂದಲೂ ಹಲವಾರು ಪ್ರಯೋಜನಗಳಿವೆಯಂತೆ

ಪ್ರೇಮ ಸಂಬಂಧ ಎನ್ನುವಂತಹದ್ದು ಎಷ್ಟು ಸುಂದರವಾದ ಬಂಧವೋ, ಆ ಪ್ರೇಮ ಸಂಬಂಧ ಮುರಿದು ಬಿದ್ದಾಗ ಅಂದರೆ ಬ್ರೇಕಪ್‌ ಆದಾಗ ಅಷ್ಟೇ ನೋವಾಗುತ್ತದೆ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಹುಡುಗ ಅಥವಾ ಹುಡುಗಿ ಕೈ ಕೊಟ್ಟರೆ ಮನಸ್ಸಿಗಾಗುವ ನೋವು ಅಷ್ಟಿಷ್ಟಲ್ಲ. ಇದೇ ನೋವಿನಲ್ಲಿ, ಪ್ರೇಮಿಯ ನೆನಪಿನಲ್ಲಿ ಪ್ರಾಣವನ್ನೇ ಕಳೆದುಕೊಂಡವರು ಇದ್ದಾರೆ. ಭಿನ್ನಾಭಿಪ್ರಾಯ, ಮನಸ್ತಾಪಗಳಿಂದ ಉಂಟಾಗುವ ಬ್ರೇಕಪ್‌ಗಳಿಂದ ಮನಸ್ಸಿಗೆ ಗುಣಪಡಿಸಲಾಗದ ನೋವಾಗುವುದು ಖಂಡಿತ. ಅದೇ ರೀತಿ ಬ್ರೇಕಪ್‌ನಿಂದ ಹಲವಾರು ಪ್ರಯೋಜನಗಳು ಕೂಡಾ ಇವೆಯಂತೆ. ಹಾಗಾದ್ರೆ ಬ್ರೇಕಪ್‌ನಿಂದ ಆಗುವಂತಹ ಪ್ರಯೋಜನಗಳಾದರೂ ಏನು ಎಂಬುದನ್ನು ನೋಡೋಣ ಬನ್ನಿ.

ಮಾಲಾಶ್ರೀ ಅಂಚನ್​
|

Updated on: May 06, 2025 | 7:58 PM

Share
ಪ್ರೇಮ ಸಂಬಂಧ ಮುರಿದು ಬಿದ್ದಾಗ ಅದರಿಂದ ನೀವು ಹಲವು ಪಾಠಗಳು ಮತ್ತು ಹಲವು ಅನುಭವಗಳನ್ನು ಕಲಿಯುತ್ತೀರಿ. ಈ ಅನುಭವಗಳು ನಿಮ್ಮನ್ನು ಮೊದಲಿಗಿಂತ ಹೆಚ್ಚು ಜವಾಬ್ದಾರಿಯುತವಾಗಿಸುತ್ತದೆ. ಜೊತೆಗೆ ಎಂತಹವರ ಜೊತೆ ಸಂಬಂಧ ಬೆಳೆಸಬೇಕು ಮತ್ತು ಸಂಬಂಧ ಹಾಳಾಗಲು ಕಾರಣಗಳೇನು ಎಂಬ ಅಂಶಗಳ ಬಗ್ಗೆ ನೀವು ತಿಳಿದುಕೊಳ್ಳುತ್ತೀರಿ. ಅಂದರೆ ನೀವು ಬ್ರೇಕಪ್‌ ನಂತರ ಪ್ರೀತಿ-ಪ್ರೇಮದ ವಿಷಯದಲ್ಲಿ ತುಂಬಾನೇ ಮೆಚ್ಯೂರ್ಡ್‌ ಆಗಿ ವರ್ತಿಸುತ್ತೀರಿ ಅಂತಾನೇ ಹೇಳಬಹುದು.

ಪ್ರೇಮ ಸಂಬಂಧ ಮುರಿದು ಬಿದ್ದಾಗ ಅದರಿಂದ ನೀವು ಹಲವು ಪಾಠಗಳು ಮತ್ತು ಹಲವು ಅನುಭವಗಳನ್ನು ಕಲಿಯುತ್ತೀರಿ. ಈ ಅನುಭವಗಳು ನಿಮ್ಮನ್ನು ಮೊದಲಿಗಿಂತ ಹೆಚ್ಚು ಜವಾಬ್ದಾರಿಯುತವಾಗಿಸುತ್ತದೆ. ಜೊತೆಗೆ ಎಂತಹವರ ಜೊತೆ ಸಂಬಂಧ ಬೆಳೆಸಬೇಕು ಮತ್ತು ಸಂಬಂಧ ಹಾಳಾಗಲು ಕಾರಣಗಳೇನು ಎಂಬ ಅಂಶಗಳ ಬಗ್ಗೆ ನೀವು ತಿಳಿದುಕೊಳ್ಳುತ್ತೀರಿ. ಅಂದರೆ ನೀವು ಬ್ರೇಕಪ್‌ ನಂತರ ಪ್ರೀತಿ-ಪ್ರೇಮದ ವಿಷಯದಲ್ಲಿ ತುಂಬಾನೇ ಮೆಚ್ಯೂರ್ಡ್‌ ಆಗಿ ವರ್ತಿಸುತ್ತೀರಿ ಅಂತಾನೇ ಹೇಳಬಹುದು.

1 / 7
ಲವ್‌ ಬ್ರೇಕಪ್‌ ಎಷ್ಟೇ ನೋವನ್ನು ನೀಡಿದರೂ ಅದು ಬಹಳಷ್ಟು ಪಾಠವನ್ನು ನಿಮಗೆ ಕಲಿಸುತ್ತದೆ. ಬಿಟ್ಟು ಹೋದವರ ಮುಂದೆ ತಲೆ ಎತ್ತಿ ನಿಲ್ಲುತ್ತೇನೆ ಎಂಬ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಯಾವುದೇ ಸಮಸ್ಯೆಗಳನ್ನು ಎದುರಿಸಿ ನಿಲ್ಲಬಲ್ಲೆವು, ಜೀವನದಲ್ಲಿ ಯಾರನ್ನು ಸುಲಭವಾಗಿ ನಂಬಬಾರದು ಎಂಬುದನ್ನು ಕಲಿಸುತ್ತದೆ. ಒಟ್ಟಾರೆಯಾಗಿ ಬ್ರೇಕಪ್‌ ನೋವಿನಿಂದ ಕೂಡಿದ್ದರೂ ಇದು ನಿಮ್ಮ ಜೀವನದಲ್ಲಿ ಆತ್ಮವಿಶ್ವಾಸ, ಬದುಕುವ ಛಲವನ್ನು ಹೆಚ್ಚಿಸುವುದು ಸುಳ್ಳಲ್ಲ.

ಲವ್‌ ಬ್ರೇಕಪ್‌ ಎಷ್ಟೇ ನೋವನ್ನು ನೀಡಿದರೂ ಅದು ಬಹಳಷ್ಟು ಪಾಠವನ್ನು ನಿಮಗೆ ಕಲಿಸುತ್ತದೆ. ಬಿಟ್ಟು ಹೋದವರ ಮುಂದೆ ತಲೆ ಎತ್ತಿ ನಿಲ್ಲುತ್ತೇನೆ ಎಂಬ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಯಾವುದೇ ಸಮಸ್ಯೆಗಳನ್ನು ಎದುರಿಸಿ ನಿಲ್ಲಬಲ್ಲೆವು, ಜೀವನದಲ್ಲಿ ಯಾರನ್ನು ಸುಲಭವಾಗಿ ನಂಬಬಾರದು ಎಂಬುದನ್ನು ಕಲಿಸುತ್ತದೆ. ಒಟ್ಟಾರೆಯಾಗಿ ಬ್ರೇಕಪ್‌ ನೋವಿನಿಂದ ಕೂಡಿದ್ದರೂ ಇದು ನಿಮ್ಮ ಜೀವನದಲ್ಲಿ ಆತ್ಮವಿಶ್ವಾಸ, ಬದುಕುವ ಛಲವನ್ನು ಹೆಚ್ಚಿಸುವುದು ಸುಳ್ಳಲ್ಲ.

2 / 7
ಮುಕ್ತವಾಗಿ ಬದಕುವ, ಯಾರ ಹಂಗಿಲ್ಲದೆ ಬದುಕುವ ಕಲೆಯನ್ನು ನೀವು ಕಲಿಯುತ್ತೀರಿ. ಜೀವನದಲ್ಲಿ ಯಾರು ಶಾಶ್ವತವಲ್ಲ, ಒಂಟಿ ಜೀವನವೇ ಲೇಸು ಎಂಬ ಪಾಠವನ್ನು ಕಲಿಸುತ್ತದೆ. ಬ್ರೇಕಪ್‌ ಬಳಿಕ ಯಾರ ತಂಟೆ ತಕರಾರು ಇಲ್ಲದೆ ನೆಮ್ಮದಿಯಾಗಿ ನಿಮ್ಮಿಚ್ಛೆಯಂತೆ ಜೀವನ ಸಾಗಿಸಬಹುದು, ನಿಮ್ಮ ಗುರಿಯನ್ನು ಸಾಧಿಸಬಹುದು. ಮತ್ತು  ಇತರರ ಅಭಿಪ್ರಾಯಗಳನ್ನು ತೆಗೆದುಕೊಳ್ಳುವ ಯಾವುದೇ ಅವಶ್ಯಕತೆ ನಿಮಗಿರುವುದಿಲ್ಲ ಮತ್ತು ನೀವು ಅಂದುಕೊಂಡ ರೀತಿ ನೀವು ಜೀವನ ನಡೆಸಬಹುದು.

ಮುಕ್ತವಾಗಿ ಬದಕುವ, ಯಾರ ಹಂಗಿಲ್ಲದೆ ಬದುಕುವ ಕಲೆಯನ್ನು ನೀವು ಕಲಿಯುತ್ತೀರಿ. ಜೀವನದಲ್ಲಿ ಯಾರು ಶಾಶ್ವತವಲ್ಲ, ಒಂಟಿ ಜೀವನವೇ ಲೇಸು ಎಂಬ ಪಾಠವನ್ನು ಕಲಿಸುತ್ತದೆ. ಬ್ರೇಕಪ್‌ ಬಳಿಕ ಯಾರ ತಂಟೆ ತಕರಾರು ಇಲ್ಲದೆ ನೆಮ್ಮದಿಯಾಗಿ ನಿಮ್ಮಿಚ್ಛೆಯಂತೆ ಜೀವನ ಸಾಗಿಸಬಹುದು, ನಿಮ್ಮ ಗುರಿಯನ್ನು ಸಾಧಿಸಬಹುದು. ಮತ್ತು ಇತರರ ಅಭಿಪ್ರಾಯಗಳನ್ನು ತೆಗೆದುಕೊಳ್ಳುವ ಯಾವುದೇ ಅವಶ್ಯಕತೆ ನಿಮಗಿರುವುದಿಲ್ಲ ಮತ್ತು ನೀವು ಅಂದುಕೊಂಡ ರೀತಿ ನೀವು ಜೀವನ ನಡೆಸಬಹುದು.

3 / 7
ಪ್ರೀತಿಯಲ್ಲಿರುವಾಗ ಹೆಚ್ಚಿನ ಜನರು ತಮ್ಮ ಬಗ್ಗೆಅಂದರೆ ಸೆಲ್ಫ್‌ ಕೇರ್‌ ಬಗ್ಗೆ ಅಷ್ಟಾಗಿ ಗಮನ ಹರಿಸುವುದಿಲ್ಲ. ಆದರೆ, ಒಬ್ಬಂಟಿಯಾಗಿರುವಾಗ, ಅನೇಕರು  ಆರೋಗ್ಯ, ಸೌಂದರ್ಯ ಮತ್ತು ಫಿಟ್‌ನೆಸ್‌ನತ್ತ ಹೆಚ್ಚು ಗಮನ ಹರಿಸುತ್ತಾರೆ. ಈ ಅಂಶ ಬ್ರೇಕಪ್‌ ಬಳಿಕ ನಿಮಗೊಂದು ಹೊಸ ಮತ್ತು ಸುಂದರ ಜೀವನವನ್ನು ನೀಡುತ್ತೇ ಅಂತಾನೇ ಹೇಳಬಹುದು.

ಪ್ರೀತಿಯಲ್ಲಿರುವಾಗ ಹೆಚ್ಚಿನ ಜನರು ತಮ್ಮ ಬಗ್ಗೆಅಂದರೆ ಸೆಲ್ಫ್‌ ಕೇರ್‌ ಬಗ್ಗೆ ಅಷ್ಟಾಗಿ ಗಮನ ಹರಿಸುವುದಿಲ್ಲ. ಆದರೆ, ಒಬ್ಬಂಟಿಯಾಗಿರುವಾಗ, ಅನೇಕರು ಆರೋಗ್ಯ, ಸೌಂದರ್ಯ ಮತ್ತು ಫಿಟ್‌ನೆಸ್‌ನತ್ತ ಹೆಚ್ಚು ಗಮನ ಹರಿಸುತ್ತಾರೆ. ಈ ಅಂಶ ಬ್ರೇಕಪ್‌ ಬಳಿಕ ನಿಮಗೊಂದು ಹೊಸ ಮತ್ತು ಸುಂದರ ಜೀವನವನ್ನು ನೀಡುತ್ತೇ ಅಂತಾನೇ ಹೇಳಬಹುದು.

4 / 7
ಪ್ರೀತಿಯಲ್ಲಿದ್ದಾಗ  ಪ್ರೇಮಿಗಳು ತಾವು ಪ್ರೀತಿಸುವ ವ್ಯಕ್ತಿಗಳಿಗೆ ಮಾತ್ರ ಸಮಯ ನೀಡುತ್ತಾರೆ. ಆದರೆ ಬ್ರೇಕಪ್‌ ನಂತರ ಯಾರೊಬ್ಬರಿಗೂ ಸಮಯ ಕೊಡುವ ಅವಶ್ಯಕತೆಯೇ ನಿಮಗೆ ಬರುವುದಿಲ್ಲ. ಆಗ ನೀವು ಆರಾಮವಾಗಿ  ನಿಮ್ಮ ಕುಟುಂಬ ಹಾಗೂ ಸ್ನೇಹಿತರ ಜೊತೆ ಸುಂದರ ಕ್ಷಣವನ್ನು ಕಳೆಯಬಹುದು.

ಪ್ರೀತಿಯಲ್ಲಿದ್ದಾಗ ಪ್ರೇಮಿಗಳು ತಾವು ಪ್ರೀತಿಸುವ ವ್ಯಕ್ತಿಗಳಿಗೆ ಮಾತ್ರ ಸಮಯ ನೀಡುತ್ತಾರೆ. ಆದರೆ ಬ್ರೇಕಪ್‌ ನಂತರ ಯಾರೊಬ್ಬರಿಗೂ ಸಮಯ ಕೊಡುವ ಅವಶ್ಯಕತೆಯೇ ನಿಮಗೆ ಬರುವುದಿಲ್ಲ. ಆಗ ನೀವು ಆರಾಮವಾಗಿ ನಿಮ್ಮ ಕುಟುಂಬ ಹಾಗೂ ಸ್ನೇಹಿತರ ಜೊತೆ ಸುಂದರ ಕ್ಷಣವನ್ನು ಕಳೆಯಬಹುದು.

5 / 7
ಪ್ರೀತಿಯಲ್ಲಿರುವಾಗ, ಜನರು ಹೆಚ್ಚಾಗಿ ತಮ್ಮ ನಿದ್ದೆಯನ್ನೂ ಪಕ್ಕಕ್ಕಿಟ್ಟು ಸಂಗಾತಿಗಳೊಂದಿಗೆ ತಡರಾತ್ರಿಯವರೆಗೆ ಮಾತನಾಡುತ್ತಾರೆ. ಇದರಿಂದ ನಿದ್ದೆ ವೇಸ್ಟ್‌ ಆಗುವುದರ ಜೊತೆಗೆ ಡಾರ್ಕ್‌ ಸರ್ಕಲ್‌ ಸಮಸ್ಯೆ ಕೂಡಾ ಕಾಣಿಸುತ್ತದೆ. ಆದರೆ ಬ್ರೇಕಪ್‌ ನಂತರ ನೀವು ಯಾರಿಗಾಗಿಯೂ ತಡ ರಾತ್ರಿತವರೆಗೆ ಸಮಯವನ್ನು ನೀವು ಅವಶ್ಯಕತೆಯೇ ಇರುವುದಿಲ್ಲ. ಚೆನ್ನಾಗಿ ನಿದ್ದೆ ಮಾಡುವ ಮೂಲಕ ನಿಮ್ಮ ಜೀವನವನ್ನು ಸುಧಾರಿಸಿಕೊಳ್ಳಬಹುದು.

ಪ್ರೀತಿಯಲ್ಲಿರುವಾಗ, ಜನರು ಹೆಚ್ಚಾಗಿ ತಮ್ಮ ನಿದ್ದೆಯನ್ನೂ ಪಕ್ಕಕ್ಕಿಟ್ಟು ಸಂಗಾತಿಗಳೊಂದಿಗೆ ತಡರಾತ್ರಿಯವರೆಗೆ ಮಾತನಾಡುತ್ತಾರೆ. ಇದರಿಂದ ನಿದ್ದೆ ವೇಸ್ಟ್‌ ಆಗುವುದರ ಜೊತೆಗೆ ಡಾರ್ಕ್‌ ಸರ್ಕಲ್‌ ಸಮಸ್ಯೆ ಕೂಡಾ ಕಾಣಿಸುತ್ತದೆ. ಆದರೆ ಬ್ರೇಕಪ್‌ ನಂತರ ನೀವು ಯಾರಿಗಾಗಿಯೂ ತಡ ರಾತ್ರಿತವರೆಗೆ ಸಮಯವನ್ನು ನೀವು ಅವಶ್ಯಕತೆಯೇ ಇರುವುದಿಲ್ಲ. ಚೆನ್ನಾಗಿ ನಿದ್ದೆ ಮಾಡುವ ಮೂಲಕ ನಿಮ್ಮ ಜೀವನವನ್ನು ಸುಧಾರಿಸಿಕೊಳ್ಳಬಹುದು.

6 / 7
ಬ್ರೇಕಪ್‌ ಬಳಿಕ ಎಲ್ಲಾದರೂ ಹೋಗಬೇಕಾದರೆ ಯಾರ ಅನುವತಿಯನ್ನು ಪಡೆಯುವ, ಯಾವ ಬಟ್ಟೆ ಧರಿಸಬೇಕು ಎಂದು ಕೇಳುವ ಅವಶ್ಯಕತೆಯೇ ನಿಮಗೆ ಇರುವುದಿಲ್ಲ. ನೀವು ಇಷ್ಟಪಟ್ಟಂತೆ ಯಾರ ತಂಟೆಯು ಇಲ್ಲದೆ ಸ್ವತಂತ್ರ್ಯ ಜೀವನವನ್ನು ಬ್ರೇಕಪ್‌ ನಂತರ ನಡೆಸಬಹುದು. ಹಾಗಾಗಿ ಬ್ರೇಕಪ್‌ ಆಯಿತೆಂದು ನೋವಿನಲ್ಲಿ ಜೀವನವನ್ನು ಹಾಳು ಮಾಡುವ ಬದಲು ಸುಂದರ ಜೀವನವನ್ನು ರೂಪಿಸುವತ್ತ ಗಮನ ಹರಿಸಿ.

ಬ್ರೇಕಪ್‌ ಬಳಿಕ ಎಲ್ಲಾದರೂ ಹೋಗಬೇಕಾದರೆ ಯಾರ ಅನುವತಿಯನ್ನು ಪಡೆಯುವ, ಯಾವ ಬಟ್ಟೆ ಧರಿಸಬೇಕು ಎಂದು ಕೇಳುವ ಅವಶ್ಯಕತೆಯೇ ನಿಮಗೆ ಇರುವುದಿಲ್ಲ. ನೀವು ಇಷ್ಟಪಟ್ಟಂತೆ ಯಾರ ತಂಟೆಯು ಇಲ್ಲದೆ ಸ್ವತಂತ್ರ್ಯ ಜೀವನವನ್ನು ಬ್ರೇಕಪ್‌ ನಂತರ ನಡೆಸಬಹುದು. ಹಾಗಾಗಿ ಬ್ರೇಕಪ್‌ ಆಯಿತೆಂದು ನೋವಿನಲ್ಲಿ ಜೀವನವನ್ನು ಹಾಳು ಮಾಡುವ ಬದಲು ಸುಂದರ ಜೀವನವನ್ನು ರೂಪಿಸುವತ್ತ ಗಮನ ಹರಿಸಿ.

7 / 7
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us
ಫೈನಲ್​ನಲ್ಲಿ ಸಿಎಸ್​​ಕೆ ದಾಖಲೆ ಮುರಿದ ಆರ್​ಸಿಬಿ
ಫೈನಲ್​ನಲ್ಲಿ ಸಿಎಸ್​​ಕೆ ದಾಖಲೆ ಮುರಿದ ಆರ್​ಸಿಬಿ
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ