AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ತಾಯಿಯ ಭಾವಚಿತ್ರದೊಂದಿಗೆ ವಿವಾಹ ಮಂಟಪ ಏರಿದ ವಧು; ಭಾವನಾತ್ಮಕ ವಿಡಿಯೋ ನೋಡಿ

ತಾಯಿಯ ಪ್ರೀತಿಗೆ ಸಮನಾದುದು ಯಾವುದೂ ಇಲ್ಲ ಎನ್ನುತ್ತಾರೆ. ಜೀವನದ ಅತ್ಯುನ್ನತ ಘಟ್ಟವಾದ ವಿವಾಹದ ಸಂದರ್ಭದಲ್ಲಿ ಗತಿಸಿದ ತಾಯಿಯನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದ ವಧುವೊಬ್ಬಳು, ತಾಯಿಯ ಭಾವಚಿತ್ರದೊಂದಿಗೆ ಮದುವೆ ಮಂಟಪ ಪ್ರವೇಶಿಸಿದ್ದಾಳೆ. ಈ ಭಾವನಾತ್ಮಕ ಸನ್ನಿವೇಶದ ವಿಡಿಯೋ ವೈರಲ್ ಆಗಿದೆ.

Viral Video: ತಾಯಿಯ ಭಾವಚಿತ್ರದೊಂದಿಗೆ ವಿವಾಹ ಮಂಟಪ ಏರಿದ ವಧು; ಭಾವನಾತ್ಮಕ ವಿಡಿಯೋ ನೋಡಿ
ವಿಡಿಯೋದಿಂದ ಸೆರೆಹಿಡಿಯಲಾದ ಚಿತ್ರ
Follow us
TV9 Web
| Updated By: shivaprasad.hs

Updated on: Dec 19, 2021 | 6:18 PM

ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಸಂದರ್ಭದ ವಿಡಿಯೋಗಳು ಜನರ ಗಮನ ಸೆಳೆಯುತ್ತವೆ. ವಿವಾಹವೆನ್ನುವುದು ಹಲವು ಭಾವಗಳ ಸಂಗಮ. ಇಂತಹ ಭಾವನಾತ್ಮಕ ವಿಚಾರಗಳು ವಿಡಿಯೋದಲ್ಲಿ ಸೆರೆಯಾಗಿ ಜನರ ಕಣ್ಣನ್ನು ತೇವಗೊಳಿಸುವುದಿದೆ. ಸದ್ಯ ಅಂತರ್ಜಾಲದಲ್ಲಿ ಅಂಥದ್ದೇ ಒಂದು ವಿಡಿಯೋ ವೈರಲ್ ಆಗಿದ್ದು, ತಾಯಿಯ ಕುರಿತ ವಧುವಿನ ಪ್ರೀತಿಗೆ ಜನರು ತಲೆದೂಗಿದ್ದಾರೆ. ‘mahas photography official’ ಎಂಬ ಇನ್ಸ್ಟಾಗ್ರಾಂ ಖಾತೆಯಿಂದ ವಿಡಿಯೋ ಹಂಚಿಕೊಳ್ಳಲಾಗಿದ್ದು, ಇದು ಮೂಲತಃ ಪಾಕಿಸ್ತಾನದ ಇಸ್ಲಾಮಾಬಾದ್​​ನಲ್ಲಿನ ಸ್ಟುಡಿಯೋ ಆಗಿದೆ. ಈ ತಂಡವು ಮದುವೆಯೊಂದರಲ್ಲಿ ಸೆರೆಹಿಡಿದ ವಿಡಿಯೋ ಹಾಗೂ ಚಿತ್ರಗಳನ್ನು ಹಂಚಿಕೊಂಡಿದೆ. ಅವುಗಳಲ್ಲಿ ವಧುವೊಬ್ಬಳು ಗತಿಸಿದ ತನ್ನ ತಾಯಿಯ ಭಾವಚಿತ್ರವನ್ನು ಅಪ್ಪಿಕೊಂಡು, ತಂದೆಯೊಂದಿಗೆ ಮದುವೆ ಮಂಟಪಕ್ಕೆ ಬರುತ್ತಿರುವ ಚಿತ್ರಗಳು ಹಾಗೂ ವಿಡಿಯೋಗಳಿವೆ. ಬಹಳ ಭಾವನಾಪೂರ್ವಕವಾದ ಈ ಸಂದರ್ಭದ ವಿಡಿಯೋಗಳು ನೆಟ್ಟಿಗರಲ್ಲಿ ಕಣ್ಣೀರು ತರಿಸಿದೆ.

ವಿಡಿಯೋದ ಕ್ಯಾಪ್ಶನ್​ನಲ್ಲಿ, ‘‘ಎಲ್ಲಾ ಹೆಣ್ಣುಮಕ್ಕಳ ತಾಯಂದಿರು ಅವರೊಂದಿಗಿರುವುದಿಲ್ಲ, ನನ್ನ ತಾಯಿಯಂತೆ.. ಅಮ್ಮಾ, ನಿಮ್ಮನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ’’ ಎಂದು ಬರೆಯಲಾಗಿದೆ.

ವೈರಲ್ ಆಗಿರುವ ವಿಡಿಯೋ ಇಲ್ಲಿದೆ:

ಎರಡು ದಿನಗಳ ಹಿಂದೆ ವಿಡಿಯೋ ಶೇರ್ ಮಾಡಲಾಗಿದ್ದು, ಸುಮಾರು 2.8 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ. ಮತ್ತು ಈ ಸಂಖ್ಯೆ ಏರುತ್ತಲೇ ಇದೆ. ಅನೇಕರು ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಲು ಭಾವನಾತ್ಮಕ ಇಮೋಜಿಗಳನ್ನು ಬಳಸಿದ್ದಾರೆ.

ಅತ್ಯಂತ ಹೃದಯ ಸ್ಪರ್ಶಿ ದೃಶ್ಯವಿದು ಎಂದು ಬಹಳಷ್ಟು ಜನರು ಬರೆದಿದ್ದರೆ, ಮತ್ತಷ್ಟು ಜನರು ಇದು ಕಣ್ಣೀರನ್ನು ತರಿಸುತ್ತದೆ ಎಂದು ಬರೆದಿದ್ದಾರೆ. ಈ ವಿಡಿಯೋ ನೋಡಿದ ನಿಮಗೇನನ್ನಿಸಿತು?

ಇದನ್ನೂ ಓದಿ:

Hair Care Tips: ಚಳಿಗಾಲದಲ್ಲಿ ಕೂದಲಿಗೆ ಹಾನಿಯುಂಟು ಮಾಡುವ ಈ ಕೆಲಸಗಳನ್ನು ಮಾಡಬೇಡಿ

ಭಾರೀ ಮೊತ್ತಕ್ಕೆ ಹರಾಜಾದ ಸೂಪರ್​ ಮ್ಯಾನ್​ #1 ಕಾಮಿಕ್​ ಪುಸ್ತಕ: ಇಲ್ಲಿದೆ ಮಾಹಿತಿ

ಸರ್ವಪಕ್ಷ ಸಭೆ ಕರೆಯಲಿದ್ದೇನೆ, ಪಾಲಿಕೆ ಎಲ್ಲರಿಗೂ ಸೇರಿದ್ದು: ಶಿವಕುಮಾರ್
ಸರ್ವಪಕ್ಷ ಸಭೆ ಕರೆಯಲಿದ್ದೇನೆ, ಪಾಲಿಕೆ ಎಲ್ಲರಿಗೂ ಸೇರಿದ್ದು: ಶಿವಕುಮಾರ್
ತಾನು ಕೂಡಿಟ್ಟ ಹಣವನ್ನು ಭಾರತೀಯ ಸೇನೆಗೆ ದಾನ ಮಾಡಿದ ಬಾಲಕ
ತಾನು ಕೂಡಿಟ್ಟ ಹಣವನ್ನು ಭಾರತೀಯ ಸೇನೆಗೆ ದಾನ ಮಾಡಿದ ಬಾಲಕ
ಆಂಧ್ರಪ್ರದೇಶ ಮೂಲದ ಕಳ್ಳನಿಂದ ₹ 11 ಲಕ್ಷದ ವಾಹನಗಳು ವಶಕ್ಕೆ
ಆಂಧ್ರಪ್ರದೇಶ ಮೂಲದ ಕಳ್ಳನಿಂದ ₹ 11 ಲಕ್ಷದ ವಾಹನಗಳು ವಶಕ್ಕೆ
ರಾಕೇಶ್ ಪೂಜಾರಿ ನೋಡಲು ರಿಷಬ್ ಏಕೆ ಬರಲಿಲ್ಲ? ಕೊನೆಗೂ ಸಿಕ್ತು ಉತ್ತರ
ರಾಕೇಶ್ ಪೂಜಾರಿ ನೋಡಲು ರಿಷಬ್ ಏಕೆ ಬರಲಿಲ್ಲ? ಕೊನೆಗೂ ಸಿಕ್ತು ಉತ್ತರ
ನಾಗರಹೊಳೆಯಲ್ಲಿ ಕುಟುಂಬಸ್ಥರ ಜೊತೆ ಡಿಸಿಎಂ ಡಿಕೆ ಶಿವಕುಮಾರ್ ಸಫಾರಿ
ನಾಗರಹೊಳೆಯಲ್ಲಿ ಕುಟುಂಬಸ್ಥರ ಜೊತೆ ಡಿಸಿಎಂ ಡಿಕೆ ಶಿವಕುಮಾರ್ ಸಫಾರಿ
Daily Devotional: ಮನೆಯಲ್ಲಿ ಗಾಜಿನ ವಸ್ತುಗಳು ಒಡೆದು ಹೋದ್ರೆ ಅಶುಭವಾ?
Daily Devotional: ಮನೆಯಲ್ಲಿ ಗಾಜಿನ ವಸ್ತುಗಳು ಒಡೆದು ಹೋದ್ರೆ ಅಶುಭವಾ?
Daily horoscope: ಈ ರಾಶಿಯವರಿಗೆ ಇಂದು ಅತ್ಯಂತ ಶುಭಕರ ದಿನ
Daily horoscope: ಈ ರಾಶಿಯವರಿಗೆ ಇಂದು ಅತ್ಯಂತ ಶುಭಕರ ದಿನ
ಚೈತ್ರಾ ಕುಂದಾಪುರ ಮನೆಯಲ್ಲಿ ಕಿರಿಕ್ ಆಗಲು ಕಾರಣ ಏನು? ವಿವರಿಸಿದ ತಾಯಿ
ಚೈತ್ರಾ ಕುಂದಾಪುರ ಮನೆಯಲ್ಲಿ ಕಿರಿಕ್ ಆಗಲು ಕಾರಣ ಏನು? ವಿವರಿಸಿದ ತಾಯಿ
ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್