AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಪ್ರಾಣಿ ಸಂಗ್ರಹಾಲಯದಿಂದ ತಪ್ಪಿಸಿಕೊಳ್ಳಲು ಬೇಲಿ ಹತ್ತಿದ ತುಂಟ ಪಾಂಡಾ; ವಾಪಸ್​ ಕರೆತರಲು ಜೈಲು ಸಿಬ್ಬಂದಿ ಮಾಡಿದ್ದೇನು?

ಬೀಜಿಂಗ್​ನಲ್ಲಿರುವ ಈ ಮೃಗಾಲಯ ತನ್ನ ಟ್ವಿಟರ್​ ಖಾತೆ Weibo ದಲ್ಲಿ ಈ ಬಗ್ಗೆ ಪೋಸ್ಟ್ ಹಾಕಿದೆ. ಮೆಂಗ್​ ಲ್ಯಾನ್​ ಪಾಂಡಾ ಇದುವರೆಗೆ ಯಾವುದೇ ಸಾರ್ವಜನಿಕರ ಸಂಪರ್ಕಕ್ಕೂ ಬಂದಿರಲಿಲ್ಲ. ಹಾಗೇ, ಪ್ರಾಣಿ ಸಂಗ್ರಹಾಲಯದಲ್ಲಿ ಸಂದರ್ಶಕರು ಭೇಟಿ ಕೊಡುವ ಪ್ರದೇಶದಲ್ಲೂ ಇರಲಿಲ್ಲ.

Video: ಪ್ರಾಣಿ ಸಂಗ್ರಹಾಲಯದಿಂದ ತಪ್ಪಿಸಿಕೊಳ್ಳಲು ಬೇಲಿ ಹತ್ತಿದ ತುಂಟ ಪಾಂಡಾ; ವಾಪಸ್​ ಕರೆತರಲು ಜೈಲು ಸಿಬ್ಬಂದಿ ಮಾಡಿದ್ದೇನು?
ಝೂದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವ ಪಾಂಡಾ
TV9 Web
| Updated By: Lakshmi Hegde|

Updated on: Dec 20, 2021 | 1:57 PM

Share

ಇಂಟರ್​ನೆಟ್​​ನಲ್ಲಿ ವೈರಲ್​ ಆಗುವ ಕೆಲವು ವಿಡಿಯೋಗಳು ಸಿಕ್ಕಾಪಟೆ ಖುಷಿ ಮೂಡಿಸುತ್ತವೆ.  ಅದರಲ್ಲೂ ಪ್ರಾಣಿಗಳ ವಿಡಿಯೋಗಳೆಂತೂ ಮನಸಿಗೆ ಮುದ ನೀಡುವುದರಲ್ಲಿ ಎರಡು ಮಾತಿಲ್ಲ. ಇದೀಗ ಚೀನಾದ ಬೀಜಿಂಗ್​​ನಲ್ಲಿರುವ ಪ್ರಾಣಿ ಸಂಗ್ರಹಾಲಯದಲ್ಲಿ ದೊಡ್ಡದಾಗ ಪಾಂಡಾವೊಂದು ಝೂನಿಂದ ತಪ್ಪಿಸಿಕೊಳ್ಳುತ್ತಿರುವ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರಂತೂ ಸಿಕ್ಕಾಪಟೆ ಮೆಚ್ಚಿಕೊಂಡಿದ್ದಾರೆ.  ಅಂದಹಾಗೆ ಈ ಪಾಂಡಾದ ಹೆಸರು ಮೆಂಗ್​ ಲ್ಯಾನ್​. ಕೇವಲ 6ವರ್ಷ. ಇದು ಹೇಗಾದರೂ ಸರಿ ಝೂದಿಂದ ತಪ್ಪಿಸಿಕೊಂಡೇಬಿಡಬೇಕು ಎಂದು, ಆರು ಅಡಿಗಳಷ್ಟು ಎತ್ತರದ ಲೋಹದ ಬೇಲಿಯನ್ನು ಹತ್ತಿ, ಅಲ್ಲೆಲ್ಲ ಓಡಾಡಿದೆ. ಪ್ರಾಣಿ ಸಂಗ್ರಹಾಲಯಕ್ಕೆ ಭೇಟಿ ಕೊಟ್ಟಿದ್ದ ಹಲವರು ಅದನ್ನೆಲ್ಲ ನಿಂತು ನೋಡಿದ್ದಾರೆ.  

ಇದೊಂದು ತುಂಟ ಪಾಂಡಾ ಎಂದು ನೆಟ್ಟಿಗರು ಕರೆದಿದ್ದಾರೆ. ಪ್ರಾಣಿ ಸಂಗ್ರಹಾಲಯದಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಇರುವ ಪ್ರದೇಶವನ್ನು, ಪ್ರಾಣಿಗಳನ್ನು ಕೂಡಿಹಾಕಿರುವ ಕೋಣೆಯಿಂದ ಬೇರ್ಪಡಿಸುವ ಬಫರ್​ ಝೋನ್​​ ಬಳಿ ಪಾಂಡಾ ಬೇಲಿ ಹತ್ತಿದೆ. ಅದಾದ ಬಳಿಕ ಅದಕ್ಕೆ ಊಟದ ಆಮಿಷ ತೋರಿಸಿ ವಾಪಸ್ ಕರೆದುಕೊಂಡು ಹೋಗಲಾಗಿದೆ.  ಆ ಪಾಂಡಾದ ಚಲನವಲನವನ್ನೇ ನೋಡುತ್ತಿರುವ ಜನರು ತಾವೂ ಕೂಡ ಮೊಬೈಲ್​ನಲ್ಲಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದಾರೆ.

ಬೀಜಿಂಗ್​ನಲ್ಲಿರುವ ಈ ಮೃಗಾಲಯ ತನ್ನ ಟ್ವಿಟರ್​ ಖಾತೆ Weibo ದಲ್ಲಿ ಈ ಬಗ್ಗೆ ಪೋಸ್ಟ್ ಹಾಕಿದೆ. ಮೆಂಗ್​ ಲ್ಯಾನ್​ ಪಾಂಡಾ ಇದುವರೆಗೆ ಯಾವುದೇ ಸಾರ್ವಜನಿಕರ ಸಂಪರ್ಕಕ್ಕೂ ಬಂದಿರಲಿಲ್ಲ. ಹಾಗೇ, ಪ್ರಾಣಿ ಸಂಗ್ರಹಾಲಯದಲ್ಲಿ ಸಂದರ್ಶಕರು ಭೇಟಿ ಕೊಡುವ ಪ್ರದೇಶದಲ್ಲೂ ಇರಲಿಲ್ಲ. ಆದರೆ ಅದೇನಾಯಿತೋ ಗೊತ್ತಿಲ್ಲ, ಬೇಲಿ ಹತ್ತಿ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿತು. ನಂತರ ಅಲ್ಲಿಯೇ ಇದ್ದ ಝೂ ಕೀಪರ್ ಪಾಂಡಾಕ್ಕೆ ಆಹಾರದ ಆಮಿಷ ತೋರಿಸಿದ. ಅದನ್ನು ನೋಡುತ್ತಿದ್ದಂತೆ ಪಾಂಡಾ ಬೇಲಿಯಿಂದ ಕೆಳಗೆ ಇಳಿಯಿತು. ಆಮೇಲೆ ಯಾವುದೇ ರೀತಿಯ ತೊಂದರೆಯನ್ನೂ ಕೊಡಲಿಲ್ಲ. ಅದರಷ್ಟಕ್ಕೆ ಝೂನಲ್ಲಿ ಆಟವಾಡುತ್ತಿತ್ತು. ಸಂತೋಷದಿಂದಲೇ ಇತ್ತು ಎಂದು ಹೇಳಿಕೊಂಡಿದೆ.  ಮೆಂಗ್ ಲ್ಯಾನ್​ ಮೊದಲಿನಿಂದಲೂ ಸ್ವಲ್ಪ ತುಂಟ ಸ್ವಭಾವವನ್ನೇ ಹೊಂದಿದೆ. ಆದರೆ ತಪ್ಪಿಸಿಕೊಳ್ಳಲು ಯತ್ನಿಸುತ್ತದೆ ಎಂದುಕೊಂಡಿರಲಿಲ್ಲ. ಇದೀಗ ಬೇಲಿಯ ಸುತ್ತಲ್ಲೂ ಇನ್ನಷ್ಟು ರೂಪಾಂತರ ಮಾಡಲಾಗುವುದು. ಮುಂದೆ ಇಂಥ ಪ್ರಯತ್ನಕ್ಕೆ ದಾರಿ ಮಾಡಿಕೊಡುವುದಿಲ್ಲ ಎಂದೂ ಝೂ ಹೇಳಿದೆ. ಅಂದಹಾಗೆ, ಈ ಪಾಂಡಾ 2015ರಲ್ಲಿ ಹುಟ್ಟಿದೆ. ಅದಾದ ಎರಡು ವರ್ಷಗಳ ನಂತರ ನಮ್ಮ ಝೂಕ್ಕೆ ಬಂದಿದೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿViral Video: ಕಾಡೆಮ್ಮೆಯ ಬೆನ್ನತ್ತಿ ಓಡಿದ ಹುಲಿರಾಯ; ಮೈ ಜುಮ್ಮೆನಿಸುವ ವಿಡಿಯೋ ಶೇರ್ ಮಾಡಿದ ರಣದೀಪ್ ಹೂಡಾ

ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಸಿದ್ದರಾಮಯ್ಯಗೆ ಈಗ ಅದರ ಮೇಲೆಯೇ ಶಂಕೆ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಸಿದ್ದರಾಮಯ್ಯಗೆ ಈಗ ಅದರ ಮೇಲೆಯೇ ಶಂಕೆ
ಬಿಜೆಪಿಯಲ್ಲಿ ಮೊದಲ ಹಂತದ ಶುದ್ಧೀಕರಣ ಕಾರ್ಯ ಮುಗಿದಿದೆ: ಸದಾನಂದಗೌಡ
ಬಿಜೆಪಿಯಲ್ಲಿ ಮೊದಲ ಹಂತದ ಶುದ್ಧೀಕರಣ ಕಾರ್ಯ ಮುಗಿದಿದೆ: ಸದಾನಂದಗೌಡ
ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು
ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು
ಶಾಸಕರ ಆಹ್ವಾನ ಬೇಕಿಲ್ಲ, ಮಂಡ್ಯ ಜನ ಜವಾಬ್ದಾರಿ ನೀಡಿದ್ದಾರೆ: ಹೆಚ್​ಡಿಕೆ
ಶಾಸಕರ ಆಹ್ವಾನ ಬೇಕಿಲ್ಲ, ಮಂಡ್ಯ ಜನ ಜವಾಬ್ದಾರಿ ನೀಡಿದ್ದಾರೆ: ಹೆಚ್​ಡಿಕೆ
ಡಿಕೆಶಿ ಪರವೋ, ಸಿದ್ದರಾಮಯ್ಯ ಪರವೋ? ಲಕ್ಷ್ಮೀ ಹೆಬ್ಬಾಳ್ಕರ್ ಏನಂದರು ನೋಡಿ!
ಡಿಕೆಶಿ ಪರವೋ, ಸಿದ್ದರಾಮಯ್ಯ ಪರವೋ? ಲಕ್ಷ್ಮೀ ಹೆಬ್ಬಾಳ್ಕರ್ ಏನಂದರು ನೋಡಿ!
ಪ್ರಯತ್ನಗಳಿಗಿಂತ ಪ್ರಾರ್ಥನೆ ಫಲ ನೀಡುತ್ತದೆ ಎಂದು ನಂಬಿದ್ದೇನೆ: ಶಿವಕುಮಾರ್
ಪ್ರಯತ್ನಗಳಿಗಿಂತ ಪ್ರಾರ್ಥನೆ ಫಲ ನೀಡುತ್ತದೆ ಎಂದು ನಂಬಿದ್ದೇನೆ: ಶಿವಕುಮಾರ್
ಹೊತ್ತಿ ಉರಿದ ಮೈಸೂರು-ಉದಯ್​ಪುರ ಪ್ಯಾಲೇಸ್ ಕ್ವೀನ್ ಎಕ್ಸ್​ಪ್ರೆಸ್​ ರೈಲು
ಹೊತ್ತಿ ಉರಿದ ಮೈಸೂರು-ಉದಯ್​ಪುರ ಪ್ಯಾಲೇಸ್ ಕ್ವೀನ್ ಎಕ್ಸ್​ಪ್ರೆಸ್​ ರೈಲು
ರಂದೀಪ್ ಸುರ್ಜೇವಾಲಾ ಭೇಟಿಯ ನಂತರ ಕೊಂಚ ಖಿನ್ನರಾಗಿರುವ ಡಿಸಿಎಂ
ರಂದೀಪ್ ಸುರ್ಜೇವಾಲಾ ಭೇಟಿಯ ನಂತರ ಕೊಂಚ ಖಿನ್ನರಾಗಿರುವ ಡಿಸಿಎಂ
ರಾಯಚೂರು: ಕಾಂಗ್ರೆಸ್ ನಾಯಕಿ ಮನೆ ರಸ್ತೆಗೇ ಇಲ್ಲ ಕಾಂಕ್ರೀಟ್ ಭಾಗ್ಯ!
ರಾಯಚೂರು: ಕಾಂಗ್ರೆಸ್ ನಾಯಕಿ ಮನೆ ರಸ್ತೆಗೇ ಇಲ್ಲ ಕಾಂಕ್ರೀಟ್ ಭಾಗ್ಯ!
ಆತ್ಮಹತ್ಯೆಗೆ ಯತ್ನ: ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಯುವತಿ ರಕ್ಷಣೆ
ಆತ್ಮಹತ್ಯೆಗೆ ಯತ್ನ: ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಯುವತಿ ರಕ್ಷಣೆ