ಕೋಡಿನಿಂದ ಸಿಂಹವನ್ನು ಎತ್ತಿ ಎಸೆದು ಸ್ನೇಹಿತನನ್ನು ರಕ್ಷಿಸಿದ ಎಮ್ಮೆ; ವಿಡಿಯೋ ವೈರಲ್​

ಸಿಂಹ  ಭೇಟೆಯಾಡಲು ಬಂದ ಎಮ್ಮೆಯನ್ನು ಮತ್ತೊಂದು ಎಮ್ಮೆ ರಕ್ಷಿಸಿದ ಭಯಾನಕ ವಿಡಿಯೋ ವೈರಲ್​ ಆಗಿದೆ.  ಇನ್ಸ್ಟಾಗ್ರಾಮ್​ನಲ್ಲಿ ವಿಡಿಯೋ ವೈರಲ್​ ಆಗಿದೆ.

ಕೋಡಿನಿಂದ ಸಿಂಹವನ್ನು ಎತ್ತಿ ಎಸೆದು ಸ್ನೇಹಿತನನ್ನು ರಕ್ಷಿಸಿದ ಎಮ್ಮೆ; ವಿಡಿಯೋ ವೈರಲ್​
ಸಿಂಹ ಮತ್ತು ಎಮ್ಮೆಯ ಕಾದಾಟ
Follow us
| Updated By: Pavitra Bhat Jigalemane

Updated on:Jan 22, 2022 | 4:34 PM

ನಿಜವಾದ ಸ್ನೇಹ  ಕೇವಲ ಮನುಷ್ಯರಲ್ಲಿ ಮಾತ್ರವಲ್ಲ ಪ್ರಾಣಿಗಳಲ್ಲೂ ಇರುತ್ತವೆ. ಹಾಗೆ ನೋಡಿದರೆ ಮನುಷ್ಯರೇ ಸ್ನೇಹಿತ ಕಷ್ಟದಲ್ಲಿ ಸಿಲುಕಿರುವಾಗ ನುಣುಚಿಕೊಳ್ಳುತ್ತಾರೆ. ಆದರೆ ಪ್ರಾಣಿಗಳು ಹಾಗಲ್ಲ. ಒಂದು ಬಾರಿ ಸ್ನೇಹವನ್ನು ಬೆಸೆದುಕೊಂಡ ಮೇಲೆ ಎಂತಹ ಸಂದರ್ಭಗಳಲ್ಲೂ ಬಿಟ್ಟುಕೊಡುವುದಿಲ್ಲ. ಸಾಮಾನ್ಯವಾಗಿ ಕಾಡುಗಳಲ್ಲಿ ಪ್ರಾಣಿಗಳ ನಡುವೆ ಜಗಳ ಕಿತ್ತಾಟ ಸಹಜ. ಆದರೆ  ಜೀವ ತೆಗೆಯುವ ಪ್ರಾಣಿಗಳು ಎದುರು ಬಂದರೆ ಎಂದಿಗೂ ತಮ್ಮ ಜಾತಿಯನ್ನು ಪ್ರಾಣಿಗಳು ಬಿಟ್ಟುಕೊಡುವುದಿಲ್ಲ. ಅದಕ್ಕೆ ನಿದರ್ಶನ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ (Viral Video)​ ಆಗಿದೆ. ಸಿಂಹ (Lion) ಭೇಟೆಯಾಡಲು ಬಂದ ಎಮ್ಮೆಯನ್ನು ಮತ್ತೊಂದು ಎಮ್ಮೆ(Buffalo) ರಕ್ಷಿಸಿದ ಭಯಾನಕ ವಿಡಿಯೋ ವೈರಲ್​ ಆಗಿದೆ.  ಇನ್ಸ್ಗಾಗ್ರಾಮ್​ನಲ್ಲಿ ವಿಡಿಯೋ ವೈರಲ್​ ಆಗಿದೆ. ವೈಲ್ಡ್​ ಆನಿಮಲ್​ ಕ್ರಿಯೇಶನ್ (wild_animals_creation)​ ಎನ್ನುವ ಇನ್ಸ್ಟಾಗ್ರಾಮ್​ ಖಾತೆ ವಿಡಿಯೋವನ್ನು ಹಂಚಿಕೊಂಡಿದೆ. ಸದ್ಯ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, 43 ಸಾವಿರಕ್ಕೂ ಹೆಚ್ಚು ಲೈಕ್ಸ್​​ಗಳಿಸಿದೆ.

ವಿಡಿಯೋದಲ್ಲಿ ಎಮ್ಮೆಯೊಂದು ಮಲಗಿರುವುದನ್ನು ಕಾಣಬಹುದು. ಆ ಎಮ್ಮೆಯ ಬಳಿ ಸಿಂಹ ನಿಂತಿರುತ್ತದೆ. ತಕ್ಷಣ ಇನ್ನೊಂದು ಎಮ್ಮೆ ಬಂದು ಸಿಂಹವನ್ನು ತನ್ನ ಕೋಡಿನಲ್ಲಿ ಎತ್ತಿ ಬಿಸಾಕುವುದನ್ನು ಕಾಣಬಹುದು. ತನ್ನ ಸಹಚರ ಎಮ್ಮೆಯನ್ನು ರಕ್ಷಿಸಲು ಮತ್ತೊಂದು ಎಮ್ಮೆ ಸಿಂಹದ ಹೊಟ್ಟೆಗೆ ಕೊಂಬು ಹಾಕಿ ಎತ್ತಿ ಪಕ್ಕಕ್ಕೆ ಬಿಸಾಡುತ್ತದೆ. ಈ ಭಯಾನಕ ವಿಡಿಯೋ ಎಂತಹವರನ್ನೂ ಒಂದು ಬಾರಿ ಬೆಚ್ಚಿ ಬೀಳಿಸುತ್ತದೆ.

ವಿಡಿಯೋ ನೋಡಿ ನೆಟ್ಟಿಗರು ಕಣ್ಣರಳಿಸಿದ್ದು, ಎಮ್ಮೆಯ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಡಿಯೋ ನೋಡಿದ ಬಳಕೆದಾರರು  ಪ್ರೊಟೆಕ್ಟಿವ್​ ಹಾಗೂ ಸ್ನೇಹಿತನನ್ನು ಪ್ರೀತಿಸುವ ಎಮ್ಮೆಯನ್ನು ನೋಡಿ ಶ್ಲಾಘಿಸಿದ್ದಾರೆ. ಸ್ನೇಹವೆಂದರೆ ಹೀಗಿರಬೇಕು ಎಂದು ಉದ್ಘರಿಸಿದ್ದಾರೆ.

ಇದನ್ನೂ ಓದಿ:

ಡ್ಯಾನ್ಸ್​ ಮಾಡಿದ್ದಕ್ಕೆ ವಧುವಿಗೆ ಕಪಾಳಮೋಕ್ಷ ಮಾಡಿದ ವರ; ಅದೇ ಮಂಟಪದಲ್ಲಿ ಇನ್ನೊಂದು ವರನನ್ನು ಮದುವೆಯಾದ ವಧು

ನೂಡಲ್ಸ್​​ನಿಂದ ಸ್ಕಾರ್ಫ್ ಹೆಣೆದ ಮಹಿಳೆ; ವಿಡಿಯೋ ವೈರಲ್

Published On - 2:40 pm, Sat, 22 January 22

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ