AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಮೂರು ತಿಂಗಳ ಬಳಿಕ ಮಹಿಳೆಯ ಬೆನ್ನು ಮೂಳೆಯಲ್ಲಿ ಪತ್ತೆಯಾದ ಬುಲೆಟ್​

ಮೂರು ತಿಂಗಳ ಕಾಲ ಬೆನ್ನು ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಸಿಟಿ ಸ್ಕ್ಯಾನ್​  ಮಾಡಿಸಿದ ವೇಳೆ  ಬೆನ್ನಿನ ಮೂಳೆಯಲ್ಲಿ ಬುಲೆಟ್​ ಪತ್ತೆಯಾದ ಅಘಾತಕಾರಿ ಘಟನೆ ನಡೆದಿದೆ.

Viral News: ಮೂರು ತಿಂಗಳ ಬಳಿಕ ಮಹಿಳೆಯ ಬೆನ್ನು ಮೂಳೆಯಲ್ಲಿ ಪತ್ತೆಯಾದ ಬುಲೆಟ್​
ಮಹಿಳೆಯ ದೇಹದಲ್ಲಿ ಪತ್ತೆಯಾದ ಬುಲೆಟ್​
TV9 Web
| Edited By: |

Updated on:Jan 22, 2022 | 11:29 AM

Share

ಮೂರು ತಿಂಗಳ ಕಾಲ ಬೆನ್ನು ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಸಿಟಿ ಸ್ಕ್ಯಾನ್​ (CT Scan)  ಮಾಡಿಸಿದ ವೇಳೆ  ಬೆನ್ನಿನ ಮೂಳೆಯಲ್ಲಿ ಬುಲೆಟ್ (Bullet)​ ಪತ್ತೆಯಾದ ಅಘಾತಕಾರಿ ಘಟನೆ ನಡೆದಿದೆ. ಇಸ್ರೇಲ್​ನಲ್ಲಿ ಈ ಘಟನೆ ನಡೆದಿದ್ದು, ಆದಿ ಬ್ಲೋಯ್ (Adi Bloy )ಎನ್ನುವ ಮಹಿಳೆಯ ದೇಹದಲ್ಲಿ ಬುಲೆಟ್​ ಅನ್ನು ವೈದ್ಯರು ಪತ್ತೆ ಮಾಡಿದ್ದಾರೆ. ಮೂರು ತಿಂಗಳ ಹಿಂದೆ ಆದಿ ಬ್ಲೋಯ್ ಪ್ಯಾಲಿಸ್ಟೇನಿಯಾನದ ಪ್ಯಾಸಗೋಟ್​ ವೈನರಿಗೆ ಗೆಳತಿಯ ಮದುವೆಗೆ ತೆರಳಿದ್ದರು. ಈ ವೇಳೆ ಆಕೆಗೆ ಇದ್ದಕಿದ್ದ ಹಾಗೇ ದೇಹದಲ್ಲಿ ಅಗಾಧ ನೋವು ಕಾಣಿಸಕೊಂಡಿತ್ತು, ಪರೀಕ್ಷಿಸಿಕೊಂಡಾಗ ಚಿಕ್ಕದೊಂದು ಗಾಯ ಮತ್ತು  ಸ್ವಲ್ಪ ರಕ್ತ ಕಾಣಿಸಕೊಂಡಿತ್ತು.  ಈ ವೇಳೆ ಆಕೆಯ ಜೊತೆಗಿದ್ದ ಇತರ ಸ್ನೇಹಿತರು ಏನೂ ಆಗಿಲ್ಲವೆಂದು ಮತ್ತೆ  ಸಮಾರಂಭದಲ್ಲಿ ತೊಡಗಿಕೊಳ್ಳುವಂತೆ ಮಾಡಿದ್ದರು.

ಇಂಡಿಯನ್​ ಎಕ್ಸ್​ಪ್ರೆಸ್​ ವರದಿಯ ಪ್ರಕಾರ ಆದಿ ಬ್ಲೋಯ್ ಅವರಿಗೆ ದಿನದಿಂದ ದಿನಕ್ಕೆ  ದೇಹದಲ್ಲಿ ನೋವು, ಸ್ನಾಯು ಸೆಳೆತ ಹೆಚ್ಚಾಗುತ್ತಲೇ ಇತ್ತು. ಹಲವು ಬಾರಿ ವೈದ್ಯರ ಬಳಿ ತೋರಿಸಿದಾಗಲೂ ನೋವಿಗೆ ಮಾತ್ರೆಯನ್ನು ತೆಗೆದುಕೊಂಡಿದ್ದರು. ಕೊನೆಗೆ ಮೂರು ತಿಂಗಳ ಬಳಿಕವೂ ನೋವು ವಾಸಿಯಾಗದ ಕಾರಣ ಸಿಟಿ ಸ್ಕ್ಯಾನ್​ ಮಾಡಿಸಿದ್ದಾರೆ. ಈ ವೇಳೆ ಆಕೆಯ ದೇಹದಲ್ಲಿ ಬುಲೆಟ್​ ಪತ್ತೆಯಾಗಿದೆ. 5.6 ಎಂಎಂ ಗಾತ್ರದ ಬುಲೆಟ್​ ಪತ್ತೆಯಾಗಿದ್ದು ವೈದ್ಯರೇ ಶಾಕ್​ ಆಗಿದ್ದಾರೆ. ಕೊನೆಗೆ ಶಸ್ತ್ರ ಚಿಕಿತ್ಸೆ ಮೂಲಕ ವೈದ್ಯರು ಬುಲೆಟ್​ ಅನ್ನು ಹೊರತೆಗೆದಿದ್ದಾರೆ.

ಈ ಕುರಿತು ಆದಿ ಬ್ಲೋಯ್ ಚಾನೆಲ್​ 12 ಮಾಧ್ಯಮದಲ್ಲಿ ಸಂದರ್ಶನದ ವೇಳೆ ಹೇಳಿಕೊಂಡಿದ್ದಾರೆ. ಸಂದರ್ಶನದ ವೆಳೆ ನಾನಿ, ತೀವ್ರವಾದ ಬೆನ್ನು ನೋವು, ಕುತ್ತಿಗೆ ನೋವು ಮತ್ತು ಮಾನಸಿಕ ಹಿಂಸೆಯನ್ನು ಅನುಭವಿಸಿದ್ದೇನೆ. ನನಗೆ ಓಡಾಡಲು ಕೂಡ ಸಾಧ್ಯವಾಗದಷ್ಟು ನೋವು ಕಾಡುತ್ತಿತ್ತು ಎಂದು ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ:

Viral: ಕೋತಿಮರಿ ವಿಡಿಯೋ ನೋಡಿ ಮಗನಿಗೆ ಹೋಲಿಸಿ ಕಾಮೆಂಟ್​ ಮಾಡಿದ ಎಲೋನ್ ​ಮಸ್ಕ್

Published On - 11:28 am, Sat, 22 January 22

Follow Us
‘ಅಯೋಗ್ಯ 2’ ಸಿನಿಮಾದ ಹೊಸ ಹಾಡಿನಲ್ಲಿ ಸತೀಶ್ ನೀನಾಸಂ ಮಾಸ್ ಅವತಾರ
‘ಅಯೋಗ್ಯ 2’ ಸಿನಿಮಾದ ಹೊಸ ಹಾಡಿನಲ್ಲಿ ಸತೀಶ್ ನೀನಾಸಂ ಮಾಸ್ ಅವತಾರ
ದೆಹಲಿಯಲ್ಲಿ ಭಾರಿ ಮಳೆಯಿಂದ ಕಟ್ಟಡ ಕುಸಿತ; ಓರ್ವ ಸಾವು
ದೆಹಲಿಯಲ್ಲಿ ಭಾರಿ ಮಳೆಯಿಂದ ಕಟ್ಟಡ ಕುಸಿತ; ಓರ್ವ ಸಾವು
ಇಂಡೋನೇಷ್ಯಾ ಪ್ರವಾಸ ಮುಗಿಸಿ ಮೆಲ್ಬೋರ್ನ್‌ಗೆ ಬಂದಿಳಿದ ಪ್ರಧಾನಿ ಮೋದಿ
ಇಂಡೋನೇಷ್ಯಾ ಪ್ರವಾಸ ಮುಗಿಸಿ ಮೆಲ್ಬೋರ್ನ್‌ಗೆ ಬಂದಿಳಿದ ಪ್ರಧಾನಿ ಮೋದಿ
ಅನ್ನಭಾಗ್ಯ ಫಲಾನುಭವಿಗಳಿಗೆ ಗುಡ್​ನ್ಯೂಸ್​​: ಶೀಘ್ರದಲ್ಲೇ ಇಂದಿರಾ ಕಿಟ್
ಅನ್ನಭಾಗ್ಯ ಫಲಾನುಭವಿಗಳಿಗೆ ಗುಡ್​ನ್ಯೂಸ್​​: ಶೀಘ್ರದಲ್ಲೇ ಇಂದಿರಾ ಕಿಟ್
ಏಷ್ಯಾಕಪ್ ಟ್ರೋಫಿ ಟೀಂ ಇಂಡಿಯಾ ಕೈ ಸೇರುವುದು ಯಾವಾಗ?
ಏಷ್ಯಾಕಪ್ ಟ್ರೋಫಿ ಟೀಂ ಇಂಡಿಯಾ ಕೈ ಸೇರುವುದು ಯಾವಾಗ?
ಕೆತ್ತಿಕಲ್‌ ಗುಡ್ಡ ಕುಸಿತಕ್ಕೆ ಸ್ಫೋಟಕ ಕಾರಣ ಬಿಚ್ಚಿಟ್ಟ ಪರಿಸರ ತಜ್ಞ
ಕೆತ್ತಿಕಲ್‌ ಗುಡ್ಡ ಕುಸಿತಕ್ಕೆ ಸ್ಫೋಟಕ ಕಾರಣ ಬಿಚ್ಚಿಟ್ಟ ಪರಿಸರ ತಜ್ಞ
ಕನ್ನಡಿಗರ ಬಗ್ಗೆ ಪ್ರೀತಿಯಿಂದ ಮಾತನಾಡಿ ‘ಟಾಕ್ಸಿಕ್’ ನಟಿ ಹುಮಾ ಖುರೇಷಿ
ಕನ್ನಡಿಗರ ಬಗ್ಗೆ ಪ್ರೀತಿಯಿಂದ ಮಾತನಾಡಿ ‘ಟಾಕ್ಸಿಕ್’ ನಟಿ ಹುಮಾ ಖುರೇಷಿ
2 ದಿನ ಕೆರೆಯಲ್ಲಿ ನರಳಾಡಿ ತನ್ನಷ್ಟಕ್ಕೇ ತಾನೆ ಆಚೆ ಬಂದ ಆನೆ
2 ದಿನ ಕೆರೆಯಲ್ಲಿ ನರಳಾಡಿ ತನ್ನಷ್ಟಕ್ಕೇ ತಾನೆ ಆಚೆ ಬಂದ ಆನೆ
ಮತ್ತೊಂದು ಕಲ್ಲು ಗಣಿಗಾರಿಕೆ ದುರಂತ: ಜೆಸಿಬಿ ಮೇಲೆ ಬಿದ್ದ ಬಂಡೆ
ಮತ್ತೊಂದು ಕಲ್ಲು ಗಣಿಗಾರಿಕೆ ದುರಂತ: ಜೆಸಿಬಿ ಮೇಲೆ ಬಿದ್ದ ಬಂಡೆ
ಸಿದ್ದರಾಮಯ್ಯನವರಿಂದ ದೂರ: ವಿಡಿಯೋ ವೈರಲ್ ಬಗ್ಗೆ ಜಾರಕಿಹೊಳಿ ಸ್ಪಷ್ಟನೆ
ಸಿದ್ದರಾಮಯ್ಯನವರಿಂದ ದೂರ: ವಿಡಿಯೋ ವೈರಲ್ ಬಗ್ಗೆ ಜಾರಕಿಹೊಳಿ ಸ್ಪಷ್ಟನೆ