AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video:’ಕೊರೋನಾ ವಡೆ’ ತಯಾರಿಸಿ ರೆಸಿಪಿ ವಿಡಿಯೋ ಹಂಚಿಕೊಂಡ ಮಹಿಳೆ

ಮಹಿಳೆ ಒಬ್ಬರು ಕೊರೋನಾ ವಡಾ ಎನ್ನುವ ತಿನಿಸೊಂದನ್ನು ತಯಾರಿಸಿದ್ದಾರೆ. ತಿನಿಸನ್ನು ತಯಾರಿಸುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿ ನೆಟ್ಟಿಗರೇ ಹೌಹಾರಿದ್ದಾರೆ.

Viral Video:'ಕೊರೋನಾ ವಡೆ' ತಯಾರಿಸಿ ರೆಸಿಪಿ ವಿಡಿಯೋ ಹಂಚಿಕೊಂಡ ಮಹಿಳೆ
ಕೊರೋನಾ ವಡಾ
TV9 Web
| Edited By: |

Updated on:Jan 22, 2022 | 6:04 PM

Share

ಕಳೆದ ಎರಡು ವರ್ಷಗಳಿಂದ ಜಗತ್ತು ಕೊರೋನಾ (Corona)ದಿಂದ ಬೇಸತ್ತು ಹೋಗಿದೆ. ವೈರಸ್​ ಹೇಗಿರಬಹುದೆಂದು ಕಲ್ಪಿಸಿಕೊಂಡು ಹಲವಾರು ಮೇಮೇಗಳು ಬಂದುಹೋಗಿವೆ. ಇನ್ನು ಬರುತ್ತಲೇ ಇದೆ. ಏಕೆಂದರೆ ಕೊರೋನಾ ಓಮಿಕ್ರಾನ್ (Omicron)​ ರೂಪ ಪಡೆದು ಜನರನ್ನು ಕಾಡುತ್ತಿದೆ. ಈ ನಡುವೆ ಕೊರೋನಾವನ್ನೇ ವಿವಿಧ ರೀತಿಯಲ್ಲಿ  ಟ್ರೋಲ್​ ಮಾಡಲಾಗಿದೆ. ಇಲ್ಲೊಂದು ವಿಡಿಯೋ ಕೊರೋನಾ ವೈರಸ್​ ಅನ್ನೇ ನಾಚಿಸುವಂತೆ ಮಾಡಿದೆ. ಹೌದು ಮಹಿಳೆ ಒಬ್ಬರು ಕೊರೋನಾ ವಡಾ (Corona Vada) ಎನ್ನುವ ತಿನಿಸೊಂದನ್ನು ತಯಾರಿಸಿದ್ದಾರೆ. ತಿನಿಸನ್ನು ತಯಾರಿಸುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿ ನೆಟ್ಟಿಗರೇ ಹೌಹಾರಿದ್ದಾರೆ.

ವಿಡಿಯೋದಲ್ಲಿ ಮೊದಲು ಅಕ್ಕಿಹಿಟ್ಟಿಗೆ ಜೀರಿಗೆ, ಉಪ್ಪು, ನೀರು ಹಾಕಿ ವಿಶ್ರಣಮಾಡಿ ಬೌಲ್​ ನಲ್ಲಿ ಇರಿಸುತ್ತಾರೆ. ನಂತರ ಒಗ್ಗರಣೆ ಪಾತ್ರೆಗೆ ಒಗ್ಗರಣೆ ಹಾಕಿ ಬೇಯಿಸಿದ ಆಲೂಗಡ್ಡೆಯನ್ನು ಹಾಕುತ್ತಾರೆ. ಅದು ಆಲೂಗಡ್ಡೆ ಪಲ್ಯವಾಗುತ್ತದೆ, ನಂತರ ಕಲಸಿಟ್ಟ ಅಕ್ಕಿ ಹಿಟ್ಟಿನ ಒಳಗೆ ಆಲೂಗಡ್ಡೆ ಪಲ್ಯವನ್ನು ತುಂಬಿಸಿ ಅಕ್ಕಿಯಲ್ಲಿ ಹೊರಳಾಡಿಸುತ್ತಾರೆ. ನಂತರ ಅದನ್ನು ಕುಕ್ಕರ್​ನಲ್ಲಿಟ್ಟು ಬೇಯಿಸುತ್ತಾರೆ. ಅಕ್ಕಿಯಲ್ಲಿ ನೆನೆಸಿದ ಕಾರಣ ಅದು ಅನ್ನವಾಗಿ ಕೊರೋನಾ  ವೈರಸ್​ನಂತೆ ಕಾಣುತ್ತದೆ. ಇದರ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ವಿಡಿಯೋಕ್ಕೆ ಭಾರತದ ಮಹಿಳೆ ಎಲ್ಲದರ ರುವಾರಿ ಎಂದು ಕ್ಯಾಪ್ಷನ್​ ನೀಡಲಾಗಿದೆ. ಸದ್ಯ ವಿಡಿಯೋ 4 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ.ವಿಡಿಯೋವನ್ನು mimipi ಎನ್ನುವ ಟ್ವಿಟರ್​ ಬಳಕೆದಾರರು ಹಂಚಿಕೊಂಡಿದ್ದಾರೆ, ಈ ಆಹಾರವನ್ನು ನೀವೂ ತಯಾರಿಸಿ ಸವಿಯಬಹುದಾಗಿದೆ.

ವಿವಿಧ ರೀತಿಯ ಆಹಾರಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲ ಆಗಾಗ ವೈರಲ್​ ಆಗುತ್ತಲೇ ಇರುತ್ತವೆ. ಕೆಲವು ದಿನಗಳ ಹಿಂದೆ ನೂಡಲ್ಸ್​ನಲ್ಲಿ ಮಹಿಳೆಯೊಬ್ಬರು ಸ್ಕಾರ್ಪ್​ ಹೊಲಿದ ಮಹಿಳೆಯ ವಿಡಿಯೋ ವೈರಲ್​ ಆಗಿತ್ತು.

ಇದನ್ನೂ ಓದಿ:

Viral Video: ಮೊಬೈಲ್​ನಲ್ಲಿ ತಮ್ಮದೇ ರೀತಿ ಇರುವ ಪ್ರಾಣಿಗಳನ್ನು ನೋಡಿ ಗೊಂದಲಕ್ಕೊಳಗಾದ ಕೋತಿಗಳು

Published On - 6:03 pm, Sat, 22 January 22

ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು