AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Pic: ಈ ಚಿತ್ರದಲ್ಲಿ ನೀವು ಚಿರತೆಯನ್ನು ಕಾಣಬಲ್ಲಿರಾ? ಬುದ್ದಿಗೆ ಗುದ್ದು ನೀಡುವ ಚಿತ್ರ ನೋಡಿ ತಲೆಕೆಡಿಸಿಕೊಂಡ ನೆಟ್ಟಿಗರು

ಅಮಿತ್​ ಮೆಹ್ರಾ ಎನ್ನುವವರು ಈ ಫೋಟೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ಮರದಂತೆ ಕಾಣುವ ಚಿತ್ರದಲ್ಲಿ ಚಿರತೆಯನ್ನು ಹುಡುಕಲು ನೆಟ್ಟಿಗರು ತಲೆಕೆಡಿಸಿಕೊಂಡಿದ್ದಾರೆ.  ಹಲವು ಮಂದಿ ಚಿರತೆಯನ್ನು ಹುಡುಕಲು ಪ್ರಯತ್ನಿಸಿ ವಿಫಲವಾಗಿದ್ದಾರೆ.

Viral Pic: ಈ ಚಿತ್ರದಲ್ಲಿ ನೀವು ಚಿರತೆಯನ್ನು ಕಾಣಬಲ್ಲಿರಾ? ಬುದ್ದಿಗೆ ಗುದ್ದು ನೀಡುವ ಚಿತ್ರ ನೋಡಿ ತಲೆಕೆಡಿಸಿಕೊಂಡ ನೆಟ್ಟಿಗರು
TV9 Web
| Edited By: |

Updated on:Dec 31, 2021 | 5:30 PM

Share

ಸಾಮಾಜಿಕ ಜಾಲತಾಣ ಸದಾ ಹೊಸತರೊಂದಿಗೆ ಕೂಡಿರುತ್ತದೆ. ನೆಟ್ಟಿಗರನ್ನು ಸದಾ ಆಕರ್ಷಿಸುವ ಜಾಲತಾಣಗಳು ಬುದ್ದಿಗೂ ಗುದ್ದು ನೀಡುವ ಚಾಲೆಂಜ್​ಗಳನ್ನು ನೀಡುತ್ತವೆ. ಕೆಲವು ಮನರಂಜನೆ ನೀಡುವ ವಿಷಯಗಳಾಗಿದ್ದರೆ ಇನ್ನು ಕೆಲವು ಯೋಚಿಸುವ ವಿಚಾರಗಳಾಗಿರುತ್ತವೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ  ಚಿರತೆಯನ್ನು ಹುಡುಕುವ ಚಿತ್ರವೊಂದು ಹರಿದಾಡುತ್ತಿದೆ. ಕಾಡಿನಲ್ಲಿ ಇರುವ ಮರವೊಂದರ ಫೋಟೋವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದ್ದು ಅದರಲ್ಲಿ ಚಿರತೆಯಿದೆ ಗುರುತಿಸಿ ಎಂದಿದ್ದಾರೆ.

ಅಮಿತ್​ ಮೆಹ್ರಾ ಎನ್ನುವವರು ಈ ಫೋಟೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ಮರದಂತೆ ಕಾಣುವ ಚಿತ್ರದಲ್ಲಿ ಚಿರತೆಯನ್ನು ಹುಡುಕಲು ನೆಟ್ಟಿಗರು ತಲೆಕೆಡಿಸಿಕೊಂಡಿದ್ದಾರೆ.  ಹಲವು ಮಂದಿ ಚಿರತೆಯನ್ನು ಹುಡುಕಲು ಪ್ರಯತ್ನಿಸಿ ವಿಫಲವಾಗಿದ್ದಾರೆ.  ಹಲವರು ಇದು ಟ್ರಿಕ್​ ಪ್ರಶ್ನೆಯೇ ಎಂದು ಕಾಮೆಂಟ್​ ಮಾಡಿದ್ದಾರೆ. ಸದ್ಯ ನೆಟ್ಟಿಗರು ಫೋಟೋ ನೋಡಿ ಚಿರತೆಯನ್ನು ಹುಡುಕಲು ಯತ್ನಿಸಿದ್ದಾರೆ.

ಈ ನಡುವೆ ಹಲವರು ಮರದಂತೆ ಕಾಣುವ ಚಿತ್ರದಲ್ಲಿ ಚಿರತೆಯನ್ನು ಹುಡುಕಿ ಕಾಮೆಂಟ್​ ಮಾಡಿದ್ದಾರೆ.  ಕೆಲವರು ಚಿರತೆ ಮರದ ಮಧ್ಯದ ಕೆಳಗೆ ಬಲಭಾಗದಲ್ಲಿ ಒಣ ಮರ ಮತ್ತು ಹುಲ್ಲಿನಿಂದ ಅಂದವಾಗಿ ಮರೆಮಾಚಿಕೊಂಡು ಕುಳಿತಿದೆ ಎಂದು ಕಾಮೆಂಟ್​ ಮಾಡಿದ್ದು. ತಾವು ಚಿತ್ರದಲ್ಲಿ ಚಿರತೆಯನ್ನು ಹುಡುಕಿದ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. ಚಿರತೆಯನ್ನು ಪತ್ತೆಹಚ್ಚಿದ ಜನರು ಚಿತ್ರವನ್ನು ರೀಟ್ವೀಟ್​ ಮಾಡಿ ಶೇರ್​ಮಾಡಿದ್ದಾರೆ, ಇನ್ನು ಹಲವರು ಹಿಂಟ್​ ನೀಡುವ ಮೂಲಕ ಚಿತ್ರವನ್ನು ಹಂಚಿಕೊಂಡಿದ್ದಾರೆ.

ವೈರಲ್​ ಆದ ಚಿತ್ರ 1500ಕ್ಕೂ ಹೆಚ್ಚು ಲೈಕ್ಸ್​ಗಳನ್ನು ಗಳಿಸಿದ್ದು, ಹಲವರು ಚಿರತೆ ಗುರುತಿಸಿ ಖುಷಿಪಟ್ಟಿದ್ದಾರೆ. ಚಿರತೆ ಕಾಡಿನ ಸುಂದರ ಪ್ರಾಣಿಗಳಲ್ಲಿ ಒಂದಾಗಿದೆ. ಚಿರತೆಗಳು ತಮ್ಮ ವೇಗದ ಓಟದಿಂದ ಹೆಚ್ಚು ಹೆಸರುವಾಸಿಯಾಗಿದೆ.  ಚಿತ್ರದಲ್ಲಿರುವ ಮರವಾಗಲೀ ಕಾಡಲಾಗಲೀ ಯಾವ ಸ್ಥಳದ್ದು ಎಂದು ತಿಳಿದಿಲ್ಲ. ಅದರೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್​ ಆಗಿದ್ದು ನೆಟ್ಟಿಗರ ಬುದ್ದಿಗೆ ಸವಾಲನ್ನು ನೀಡಿದೆ.

ಇದನ್ನೂ ಓದಿ:

Viral Photo: ಈ ಚಿತ್ರದಲ್ಲಿ ನಿಮಗೆ ಎಷ್ಟು ಕುದುರೆ ಕಾಣುತ್ತಿದೆ? ಸರಿಯಾದ ಉತ್ತರಕ್ಕಾಗಿ ತಲೆ ಕೆಡಿಸಿಕೊಂಡ ನೆಟ್ಟಿಗರು

Published On - 3:12 pm, Fri, 31 December 21

Follow Us
ಇಂದು ಆಷಾಢ ಮಾಸದ ಆಡಿ ಶುಕ್ರವಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಮಾಸದ ಆಡಿ ಶುಕ್ರವಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್