AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಪಾನಿಪುರಿ ತಿನ್ನಲು ಹೋದ ಮದುಮಗಳ ವಿಡಿಯೋ ವೈರಲ್

ಈ ವೀಡಿಯೊವನ್ನು ಮದುಮಗಳೇ ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

Viral Video: ಪಾನಿಪುರಿ ತಿನ್ನಲು ಹೋದ ಮದುಮಗಳ ವಿಡಿಯೋ ವೈರಲ್
ಪಾನಿಪುರಿ ತಿನ್ನುತ್ತಿರುವ ವಧು
TV9 Web
| Edited By: |

Updated on: Dec 31, 2021 | 1:11 PM

Share

ಯುವಕರಿಗಿಂತಲೂ ಯುವತಿಯರಿಗೆ ಪಾನಿಪುರಿ, ಮಸಾಲಪುರಿ ಎಂದರೆ ತುಸು ಹೆಚ್ಚೇ ಪ್ರೀತಿ. ಇಲ್ಲೊಬ್ಬಳು ಮದುಮಗಳು ತನ್ನ ಮದುವೆಯ ರಿಸೆಪ್ಷನ್ ಮುಗಿಯುತ್ತಿದ್ದಂತೆ ಫುಡ್ ಕೌಂಟರ್​ನತ್ತ ಹೋಗಿ ಸೀದಾ ಪಾನಿಪುರಿ ಕೊಡುವವನ ಎದುರು ನಿಂತಿದ್ದಾಳೆ. ಪಾನಿಪುರಿ ಟೇಸ್ಟ್ ಮಾಡಲೆಂದು ಹೋದ ಆಕೆ ಆಮೇಲೆ ಏನು ಮಾಡಿದಳು ಎಂಬುದನ್ನು ನೀವೇ ವಿಡಿಯೋದಲ್ಲಿ ನೋಡಿ.

ಭಾರತದಲ್ಲಿನ ಎಲ್ಲಾ ಬೀದಿ ಆಹಾರಗಳಲ್ಲಿ, ಪಾನಿ ಪುರಿ ಎಲ್ಲರ ಮೆಚ್ಚಿನ ಆಹಾರಗಳಲ್ಲಿ ಒಂದಾಗಿದೆ. ಪಾನಿ ಪುರಿಯನ್ನು ಇಷ್ಟಪಡದವರೇ ಇಲ್ಲ ಎನ್ನಬಹುದು. ಗರಿಗರಿ ಪೂರಿ, ಮಸಾಲೆಯ ಹೂರಣ, ಖಾರ-ಹುಳಿ ಹದವಾಗಿ ಬೆರೆತ ಪಾನಿಯನ್ನು ನೆನಸಿಕೊಂಡರೆ ಬಾಯಲ್ಲಿ ನೀರೂರದೆ ಇರಲು ಸಾಧ್ಯವೇ ಇಲ್ಲ. ಇನ್​ಸ್ಟಾಗ್ರಾಂನಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ವಧು ಮತ್ತು ವರರು ತಮ್ಮ ಮದುವೆಯಲ್ಲಿ ರುಚಿಕರವಾದ ಪಾನಿ ಪುರಿಗಾಗಿ ಕಾಯುತ್ತಿರುವುದನ್ನು ಕಾಣಬಹುದು. ಸುಂದರವಾಗಿ ಸಿಂಗಾರಗೊಂಡ ವಧುವಿನ ಕೈಗೆ ಪಾನಿಪುರಿಯನ್ನು ಕೊಡುತ್ತಿದ್ದಂತೆ ಅದನ್ನು ನೋಡಿದ ಆಕೆ ‘ಇದು ಗೋಧಿಯಿಂದ ಮಾಡಿದ ಪುರಿ. ನನಗೆ ಬೇಡ’ ಎಂದು ಗಂಡನಿಗೆ ಆ ಪಾನಿಪುರಿಯನ್ನು ಕೊಡುತ್ತಾಳೆ. ಆಕೆ ಹಾಗೆ ಹೇಳಿದ ಕೂಡಲೆ ಆಕೆಯ ಗೆಳೆಯರು ಮತ್ತು ಸಂಬಂಧಿಕರು ಜೋರಾಗಿ ನಗುತ್ತಾರೆ.

ಆಕೆ ಕೊಟ್ಟ ಪಾನಿಪುರಿಯನ್ನು ತೆಗೆದುಕೊಂಡು ಆಕೆಯ ಗಂಡ ಆಚೆ ಹೋಗುತ್ತಾನೆ. ಈ ವೀಡಿಯೊವನ್ನು ಮದುಮಗಳೇ ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದಾದ ಸ್ವಲ್ಪ ಹೊತ್ತಿನ ನಂತರ ಆ ವಧು ತಡೆಯಲಾಗದೆ ತನ್ನ ಮೆಚ್ಚಿನ ಪಾನಿ ಪುರಿಯನ್ನು ತಿನ್ನುತ್ತಾಳೆ.

ಈ ವಿಡಿಯೋವನ್ನು ಸುಮಾರು 8.37 ಲಕ್ಷ ಜನರು ವೀಕ್ಷಿಸಿದ್ದಾರೆ. ಈ ವಿಡಿಯೋಗೆ 20.2 ಸಾವಿರ ಲೈಕ್​ಗಳು ಸಿಕ್ಕಿವೆ. ಆಕೆಯ ಪಾನಿಪುರಿ ಪ್ರೀತಿಗೆ ಹಲವು ಪಾನಿಪುರಿ ಪ್ರಿಯರು ಕಮೆಂಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: Viral Video: ಸಮೋಸಾಕ್ಕೆ ಜಾಮೂನ್​ ಸೇರಿಸಿ ತಿಂದ ಫುಡ್​ ಬ್ಲಾಗರ್​: ಕೆಟ್ಟ ರುಚಿ ಎಂದ ನೆಟ್ಟಿಗರು

Viral Video: ಉದ್ದಿನ ದೋಸೆ, ನೀರ್ ದೋಸೆಯೆಲ್ಲ ಹಳೇದಾಯ್ತು; ಫ್ರೂಟ್ ದೋಸೆ ಮಾಡೋದು ಹೇಗಂತ ಗೊತ್ತಾ?

Follow Us
Web contact
Web contact

TV9 Kannada

Read More
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​