AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಪಾನಿಪುರಿ ತಿನ್ನಲು ಹೋದ ಮದುಮಗಳ ವಿಡಿಯೋ ವೈರಲ್

ಈ ವೀಡಿಯೊವನ್ನು ಮದುಮಗಳೇ ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

Viral Video: ಪಾನಿಪುರಿ ತಿನ್ನಲು ಹೋದ ಮದುಮಗಳ ವಿಡಿಯೋ ವೈರಲ್
ಪಾನಿಪುರಿ ತಿನ್ನುತ್ತಿರುವ ವಧು
TV9 Web
| Edited By: |

Updated on: Dec 31, 2021 | 1:11 PM

Share

ಯುವಕರಿಗಿಂತಲೂ ಯುವತಿಯರಿಗೆ ಪಾನಿಪುರಿ, ಮಸಾಲಪುರಿ ಎಂದರೆ ತುಸು ಹೆಚ್ಚೇ ಪ್ರೀತಿ. ಇಲ್ಲೊಬ್ಬಳು ಮದುಮಗಳು ತನ್ನ ಮದುವೆಯ ರಿಸೆಪ್ಷನ್ ಮುಗಿಯುತ್ತಿದ್ದಂತೆ ಫುಡ್ ಕೌಂಟರ್​ನತ್ತ ಹೋಗಿ ಸೀದಾ ಪಾನಿಪುರಿ ಕೊಡುವವನ ಎದುರು ನಿಂತಿದ್ದಾಳೆ. ಪಾನಿಪುರಿ ಟೇಸ್ಟ್ ಮಾಡಲೆಂದು ಹೋದ ಆಕೆ ಆಮೇಲೆ ಏನು ಮಾಡಿದಳು ಎಂಬುದನ್ನು ನೀವೇ ವಿಡಿಯೋದಲ್ಲಿ ನೋಡಿ.

ಭಾರತದಲ್ಲಿನ ಎಲ್ಲಾ ಬೀದಿ ಆಹಾರಗಳಲ್ಲಿ, ಪಾನಿ ಪುರಿ ಎಲ್ಲರ ಮೆಚ್ಚಿನ ಆಹಾರಗಳಲ್ಲಿ ಒಂದಾಗಿದೆ. ಪಾನಿ ಪುರಿಯನ್ನು ಇಷ್ಟಪಡದವರೇ ಇಲ್ಲ ಎನ್ನಬಹುದು. ಗರಿಗರಿ ಪೂರಿ, ಮಸಾಲೆಯ ಹೂರಣ, ಖಾರ-ಹುಳಿ ಹದವಾಗಿ ಬೆರೆತ ಪಾನಿಯನ್ನು ನೆನಸಿಕೊಂಡರೆ ಬಾಯಲ್ಲಿ ನೀರೂರದೆ ಇರಲು ಸಾಧ್ಯವೇ ಇಲ್ಲ. ಇನ್​ಸ್ಟಾಗ್ರಾಂನಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ವಧು ಮತ್ತು ವರರು ತಮ್ಮ ಮದುವೆಯಲ್ಲಿ ರುಚಿಕರವಾದ ಪಾನಿ ಪುರಿಗಾಗಿ ಕಾಯುತ್ತಿರುವುದನ್ನು ಕಾಣಬಹುದು. ಸುಂದರವಾಗಿ ಸಿಂಗಾರಗೊಂಡ ವಧುವಿನ ಕೈಗೆ ಪಾನಿಪುರಿಯನ್ನು ಕೊಡುತ್ತಿದ್ದಂತೆ ಅದನ್ನು ನೋಡಿದ ಆಕೆ ‘ಇದು ಗೋಧಿಯಿಂದ ಮಾಡಿದ ಪುರಿ. ನನಗೆ ಬೇಡ’ ಎಂದು ಗಂಡನಿಗೆ ಆ ಪಾನಿಪುರಿಯನ್ನು ಕೊಡುತ್ತಾಳೆ. ಆಕೆ ಹಾಗೆ ಹೇಳಿದ ಕೂಡಲೆ ಆಕೆಯ ಗೆಳೆಯರು ಮತ್ತು ಸಂಬಂಧಿಕರು ಜೋರಾಗಿ ನಗುತ್ತಾರೆ.

ಆಕೆ ಕೊಟ್ಟ ಪಾನಿಪುರಿಯನ್ನು ತೆಗೆದುಕೊಂಡು ಆಕೆಯ ಗಂಡ ಆಚೆ ಹೋಗುತ್ತಾನೆ. ಈ ವೀಡಿಯೊವನ್ನು ಮದುಮಗಳೇ ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದಾದ ಸ್ವಲ್ಪ ಹೊತ್ತಿನ ನಂತರ ಆ ವಧು ತಡೆಯಲಾಗದೆ ತನ್ನ ಮೆಚ್ಚಿನ ಪಾನಿ ಪುರಿಯನ್ನು ತಿನ್ನುತ್ತಾಳೆ.

ಈ ವಿಡಿಯೋವನ್ನು ಸುಮಾರು 8.37 ಲಕ್ಷ ಜನರು ವೀಕ್ಷಿಸಿದ್ದಾರೆ. ಈ ವಿಡಿಯೋಗೆ 20.2 ಸಾವಿರ ಲೈಕ್​ಗಳು ಸಿಕ್ಕಿವೆ. ಆಕೆಯ ಪಾನಿಪುರಿ ಪ್ರೀತಿಗೆ ಹಲವು ಪಾನಿಪುರಿ ಪ್ರಿಯರು ಕಮೆಂಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: Viral Video: ಸಮೋಸಾಕ್ಕೆ ಜಾಮೂನ್​ ಸೇರಿಸಿ ತಿಂದ ಫುಡ್​ ಬ್ಲಾಗರ್​: ಕೆಟ್ಟ ರುಚಿ ಎಂದ ನೆಟ್ಟಿಗರು

Viral Video: ಉದ್ದಿನ ದೋಸೆ, ನೀರ್ ದೋಸೆಯೆಲ್ಲ ಹಳೇದಾಯ್ತು; ಫ್ರೂಟ್ ದೋಸೆ ಮಾಡೋದು ಹೇಗಂತ ಗೊತ್ತಾ?

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್