AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹೀಂದ್ರಾ ಕಂಪನಿ ವಾಹನವನ್ನು ಕಚ್ಚಿ ಎಳೆದ ಹುಲಿ: ವಿಡಿಯೋ ಹಂಚಿಕೊಂಡ ಆನಂದ್​ ಮಹೀಂದ್ರಾ

ವಾಹನವನ್ನು ಹುಲಿ ಕಚ್ಚಿ ಎಳೆಯುತ್ತಿದ್ದ ವೇಳೆ ವೀಡಿಯೋ ಚಿತ್ರೀಕರಿಸುತ್ತಿದ್ದ ಇತರ ವಾಹನದಲ್ಲಿದ್ದ ಜನರು ಹುಲಿಯನ್ನು ಓಡಿಸಲು ಯತ್ನಿಸಿದ್ದಾರೆ. ಆದರೂ ಹುಲಿ ಮಹೀಂದ್ರಾ xylo ವಾಹನವನ್ನು ಎಳೆದಿದೆ.

ಮಹೀಂದ್ರಾ ಕಂಪನಿ ವಾಹನವನ್ನು ಕಚ್ಚಿ ಎಳೆದ ಹುಲಿ: ವಿಡಿಯೋ ಹಂಚಿಕೊಂಡ ಆನಂದ್​ ಮಹೀಂದ್ರಾ
Follow us
TV9 Web
| Updated By: Digi Tech Desk

Updated on:Dec 31, 2021 | 5:29 PM

ಕೆಲವು ದಿನಗಳ ಹಿಂದೆ ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನವೊಂದರ ಹಿಂಭಾಗವನ್ನು ಹುಲಿ ಕಚ್ಚಿ ಎಳೆಯುತ್ತಿರುವ ವಿಡಿಯೋ ವೈರಲ್​ ಆಗಿತ್ತು. ಇದೀಗ ಅದರ ವಿಡಿಯೋವನ್ನು ಆನಂದ್​ ಮಹೀಂದ್ರಾ ಹಂಚಿಕೊಂಡಿದ್ದಾರೆ. ಪ್ರವಾಸಿಗರು ತೆರಳುತ್ತಿದ್ದ ಮಹೀಂದ್ರಾ ಎಸ್​ಯುವಿ ವಾಹನವನ್ನು ದಾರಿ ಮಧ್ಯೆ ನಿಲ್ಲಿಸಲಾಗಿತ್ತು. ಈ ವೇಳೆ ಎಸ್​ಯುವಿ ವಾಹನದ ಹಿಂದೆ ಓಡಾಡುತ್ತಿದ್ದ ಹುಲಿಯೊಂದು ಗಾಡಿಯ ಬಳಿ ಬಂದು ಹಿಂಭಾಗವನ್ನು ಕಚ್ಚಿ ಎಳೆದಿದೆ. ನಂತರ ಅದನ್ನು ಬಿಟ್ಟು ಮುಂದೆ ಹೋಗಿದೆ. ಆದರೆ ಮತ್ತೆ ಪುನಃ ಬಂದು ಎಸ್​ಯುವಿ ವಾಹನವನ್ನು ಬಾಯಿಯಿಂದ ಕಚ್ಚಿ ಹಿಂದಕ್ಕೆ ಎಳೆದಿದೆ.

ಈ ವೇಳೆ ವಾಹನದಲ್ಲಿದ್ದ ಮಹಿಳೆ ಓ ದೇವರೇ ಎಂದು ಕಿರುಚಿದ್ದಾರೆ. ಈ ವಿಡಿಯೋವನ್ನು ಆನಂದ್​ ಮಹೀಂದ್ರಾ ಹಂಚಿಕೊಂಡಿದ್ದು ಇದು ಊಟಿ ಮೈಸೂರಿಗೆ ಹೋಗುವ ದಾರಿಯ ಮಧ್ಯೆ ಕಂಡುಬಂದ ವಿಡಿಯೋವಾಗಿದೆ. ವಾಹನವು ಮಹೀಂದ್ರಾ xylo ಆಗಿದೆ. ಹೀಗಾಗಿ ಅದನ್ನು ಕಚ್ಚಿದ್ದರಲ್ಲಿ ಆಶ್ಚರ್ಯವಿಲ್ಲ.  ಮಹೀಂದ್ರಾ ಸಂಸ್ಥೆಯ  ವಾಹನವು ರುಚಿಕರವಾಗಿದೆ ಎಂದು ನಂಬುತ್ತೇನೆ ಎಂದಿದ್ದಾರೆ.

ವಾಹನವನ್ನು ಹುಲಿ ಕಚ್ಚಿ ಎಳೆಯುತ್ತಿದ್ದ ವೇಳೆ ವಿಡಿಯೋ ಚಿತ್ರೀಕರಿಸುತ್ತಿದ್ದ ಇತರ ವಾಹನದಲ್ಲಿದ್ದ ಜನರು ಹುಲಿಯನ್ನು ಓಡಿಸಲು ಯತ್ನಿಸಿದ್ದಾರೆ. ಆದರೂ ಹುಲಿ ಮಹೀಂದ್ರಾ xylo ವಾಹನವನ್ನು ಎಳೆದಿದೆ. ಇದನ್ನು ನೋಡಿ ಜನರು ಒಂದು ಕ್ಷಣ ಗಾಬರಿಗೊಂಡಿದ್ದರು. ಆನಂದ್​ ಮಹೀಂದ್ರಾ ಹಂಚಿಕೊಂಡ ವಿಡಿಯೋ 24 ಸಾವಿರಕ್ಕೂ ಅಧಿಕ ಲೈಕ್ಸ್​ ಗಳಿಸಿದ್ದು ನಟ್ಟಿಗರು ಅಚ್ಚರಿ ವ್ಯಕ್ತಪಡಿಸಿ ಕಾಮೆಂಟ್​ ಮಾಡಿದ್ದಾರೆ.

ಆನಂದ್​ ಮಹೀಂದ್ರಾ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಉದ್ಯಮಿ. ಟ್ವಿಟರ್​ನಲ್ಲಿ 8 ಮಿಲಿಯನ್​ಗೂ ಅಧಿಕ ಫಾಲೋವರ್ಸ್​ ಹೊಂದಿರುವ ಅವರು ಅಪೂರೂಪದ ಘಟನೆಗಳ ವೀಡಿಯೋಗಳನ್ನು, ವಿಷಯಗಳನ್ನು ಜನರೊಂದಿಗೆ ಹಂಚಿಕೊಳ್ಳುತ್ತಾರೆ.

ಇದನ್ನೂ ಓದಿ:

ಈ ದೇಶಗಳಲ್ಲಿ ಈಗಾಗಲೇ ಹೊಸ ವರ್ಷ ಬಂದಾಯ್ತು! ಕೊನೆಯದಾಗಿ 2022ನ್ನು ಸ್ವಾಗತಿಸೋದು ಯಾವ ರಾಷ್ಟ್ರ ಗೊತ್ತಾ?

Published On - 4:29 pm, Fri, 31 December 21

ಆಪರೇಷನ್​ ಸಿಂಧೂರ್: ಇಂದೊಂದು ಸಂತೋಷದ ಸಂಗತಿ, ಮೃತ ಮಂಜುನಾಥ್​ ತಾಯಿ
ಆಪರೇಷನ್​ ಸಿಂಧೂರ್: ಇಂದೊಂದು ಸಂತೋಷದ ಸಂಗತಿ, ಮೃತ ಮಂಜುನಾಥ್​ ತಾಯಿ
ಭಾರತದ ದಾಳಿಯಿಂದ ಕಂಗಾಲಾದ ಪಾಕಿಸ್ತಾನದಿಂದ ಮತ್ತೊಮ್ಮೆ ಹೇಡಿತನ
ಭಾರತದ ದಾಳಿಯಿಂದ ಕಂಗಾಲಾದ ಪಾಕಿಸ್ತಾನದಿಂದ ಮತ್ತೊಮ್ಮೆ ಹೇಡಿತನ
ಆಪರೇಷನ್ ಸಿಂಧೂರ್: ಯುದ್ಧವಾದರೆ ನಾವೂ ಸಿದ್ಧ ಎಂದ ಬಾಗಲಕೋಟೆ ಮಾಜಿ ಯೋಧರು
ಆಪರೇಷನ್ ಸಿಂಧೂರ್: ಯುದ್ಧವಾದರೆ ನಾವೂ ಸಿದ್ಧ ಎಂದ ಬಾಗಲಕೋಟೆ ಮಾಜಿ ಯೋಧರು
ಭಾರತೀಯ ಸೇನೆಯಿರುವಾಗ ನಮಗ್ಯಾವ ಭಯವೂ ಇಲ್ಲ: ಪ್ರವಾಸಿಗರು
ಭಾರತೀಯ ಸೇನೆಯಿರುವಾಗ ನಮಗ್ಯಾವ ಭಯವೂ ಇಲ್ಲ: ಪ್ರವಾಸಿಗರು
ಆಪರೇಷನ್ ಸಿಂಧೂರವನ್ನು ಹಣೆಗೆ ತಿಲಕ ಇಟ್ಟುಕೊಂಡೇ ಹೊಗಳಿದ ಸಿಎಂ ಸಿದ್ದರಾಮಯ್ಯ
ಆಪರೇಷನ್ ಸಿಂಧೂರವನ್ನು ಹಣೆಗೆ ತಿಲಕ ಇಟ್ಟುಕೊಂಡೇ ಹೊಗಳಿದ ಸಿಎಂ ಸಿದ್ದರಾಮಯ್ಯ
ಮನೆಮಾಳಿಗೆ ಮೇಲೆ ನಿಂತು ಧ್ವಂಸಗೊಂಡಿರುವ ಮಸೀದಿಯನ್ನು ವೀಕ್ಷಿಸಿದ ಜನ
ಮನೆಮಾಳಿಗೆ ಮೇಲೆ ನಿಂತು ಧ್ವಂಸಗೊಂಡಿರುವ ಮಸೀದಿಯನ್ನು ವೀಕ್ಷಿಸಿದ ಜನ
ಎಚ್ಚರಿಕೆಯನ್ನು ಹಗುರವಾಗಿ ತೆಗೆದುಕೊಂಡ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ!
ಎಚ್ಚರಿಕೆಯನ್ನು ಹಗುರವಾಗಿ ತೆಗೆದುಕೊಂಡ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ!
‘ಭಾಷೆ-ಸಂಸ್ಕೃತಿಗೆ ಗೌರವಿಸಬೇಕು’; ಸೋನು ನಿಗಮ್​ಗೆ ರಾಗಿಣಿ ಕಿವಿಮಾತು
‘ಭಾಷೆ-ಸಂಸ್ಕೃತಿಗೆ ಗೌರವಿಸಬೇಕು’; ಸೋನು ನಿಗಮ್​ಗೆ ರಾಗಿಣಿ ಕಿವಿಮಾತು
Live: ಆಪರೇಷನ್ ಸಿಂಧೂರ್ ಬೆನ್ನಲ್ಲೇ ಸೇನಾಧಿಕಾರಿಗಳಿಂದ ಸುದ್ದಿಗೋಷ್ಠಿ
Live: ಆಪರೇಷನ್ ಸಿಂಧೂರ್ ಬೆನ್ನಲ್ಲೇ ಸೇನಾಧಿಕಾರಿಗಳಿಂದ ಸುದ್ದಿಗೋಷ್ಠಿ
ಭಾರತದ ಬಲಿಷ್ಠ ಸೇನೆಯನ್ನು ತಡವಿರುವ ಪಾಕ್ ಪತರುಗುಟ್ಟಿದೆ: ಮಾಜಿ ಸೈನಿಕರು
ಭಾರತದ ಬಲಿಷ್ಠ ಸೇನೆಯನ್ನು ತಡವಿರುವ ಪಾಕ್ ಪತರುಗುಟ್ಟಿದೆ: ಮಾಜಿ ಸೈನಿಕರು