AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೂರದೂರಿನಿಂದ ಮಗಳು ಆಗಮಿಸಿ ಸರ್ಪ್ರೈಸ್ ನೀಡಿದರೆ ತಂದೆಗೆ ಎಷ್ಟು ಖುಷಿಯಾಗುತ್ತದೆ?; ಭಾವುಕ ವಿಡಿಯೋ ನೋಡಿ

Viral Video: ಕ್ರಿಸ್​ಮಸ್ ಹಬ್ಬಕ್ಕೆ ಊರಿಗೆ ಆಗಮಿಸಿದ ಯುವತಿಯೊಬ್ಬಳು, ತನ್ನ ತಂದೆಗೆ ಸರ್ಪ್ರೈಸ್ ನೀಡಿದ್ದಾರೆ. ಈ ಸಂದರ್ಭದ ಭಾವುಕ ಸನ್ನಿವೇಶ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದನ್ನು ನೋಡಿ ನೆಟ್ಟಿಗರು ಭಾವುಕರಾಗಿದ್ದಾರೆ.

ದೂರದೂರಿನಿಂದ ಮಗಳು ಆಗಮಿಸಿ ಸರ್ಪ್ರೈಸ್ ನೀಡಿದರೆ ತಂದೆಗೆ ಎಷ್ಟು ಖುಷಿಯಾಗುತ್ತದೆ?; ಭಾವುಕ ವಿಡಿಯೋ ನೋಡಿ
ವಿಡಿಯೋದಿಂದ ಸೆರೆಹಿಡಿಯಲಾದ ಚಿತ್ರ
TV9 Web
| Edited By: |

Updated on: Dec 12, 2021 | 3:11 PM

Share

ಎಲ್ಲರಿಗೂ ಅವರವರ ಕುಟುಂಬದೊಂದಿಗೆ ಸಮಯ ಕಳೆಯುವುದೆಂದರೆ ಅದು ಅತ್ಯಂತ ಖುಷಿಯ ವಿಚಾರ. ಅದರಲ್ಲೂ ಹಲವು ಕಾರಣಗಳಿಂದಾಗಿ ದೂರದೂರುಗಳಲ್ಲಿ ಇರುವ ವ್ಯಕ್ತಿಗಳು, ಮರಳಿ ಕುಟುಂಬವನ್ನು ಭೇಟಿ ಮಾಡುವಾಗ ಆಗುವ ಆನಂದ ಅಷ್ಟಿಷ್ಟಲ್ಲ. ಸದ್ಯ ವಿದೇಶಗಳಲ್ಲಿ ಕ್ರಿಸ್​ಮಸ್ ಸಂಭ್ರಮ ಜೋರಾಗಿದೆ. ಬೇರೆಬೇರೆ ದೇಶಗಳಲ್ಲಿ ಇರುವವರು ತಮ್ಮ ತಮ್ಮ ಸ್ವದೇಶಕ್ಕೆ ಮರಳಿ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ. ಸದ್ಯ ಅಂತರ್ಜಾಲದಲ್ಲಿ ಇಂತಹ ವಿಶೇಷ ಸಂದರ್ಭವೊಂದು ವೈರಲ್ ಆಗಿದ್ದು, ನೆಟ್ಡಿಗರು ವಿಡಿಯೋ ನೋಡಿ ಭಾವುಕರಾಗಿದ್ದಾರೆ. ಮಗಳೊಬ್ಬಳು ವಯಸ್ಸಾದ ತಂದೆಯನ್ನು ಭೇಟಿಯಾಗಿ ಸರ್ಪ್ರೈಸ್ ನೀಡಿದ್ದಾಳೆ. ಈ ವಿಡಿಯೋ ನೋಡುಗರ ಮನಗೆದ್ದಿದೆ.

ಇನ್ಸ್ಟಾಗ್ರಾಂ ಬಳಕೆದಾರರಾದ ಮೆಕ್ ಮೆಕ್ಲಾಚ್ಲಾನ್ ಎಂಬುವವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಅದರ ಹಿನ್ನೆಲೆಯನ್ನು ಬರೆದಿದ್ದಾರೆ. ಅವರ ಸಹೋದರಿ ದೂರದ ಸ್ವಿಟ್ಜರ್​​ಲ್ಯಾಂಡ್​ನಲ್ಲಿ 12 ವರ್ಷಗಳಿಂದ ವಾಸವಾಗಿದ್ದಾರೆ. ಆದ್ದರಿಂದ ಕುಟುಂಬದೊಂದಿಗಿನ ಭೇಟಿ ಅಪರೂಪವಾಗಿತ್ತಂತೆ. ಕುಟುಂಬದವರೊಂದಿಗೆ ಕ್ರಿಸ್​ಮಸ್ ಸಮಯವನ್ನು ಕಳೆಯಲು ಆಗಮಿಸಿದ ಅವರು ತಂದೆಗೆ ಸರ್​ಪ್ರೈಸ್ ನೀಡಿದ್ದಾರೆ.

ವಿಡಿಯೋದಲ್ಲಿ ಕಾಣುವಂತೆ, ಯುವತಿ ಕಾರಿನ ಹಿಂಭಾಗದಲ್ಲಿ ಕುಳಿತಿದ್ದಾರೆ. ತಂದೆ ಬಂದು ಕಾರಿನ ಡಿಕ್ಕಿಯನ್ನು ತೆಗೆಯುತ್ತಾರೆ. ಆಗ ಮಗಳನ್ನು ನೋಡಿ ಅಚ್ಚರಿಗೊಳಗಾಗುವ ತಂದೆ, ಭಾವುಕರಾಗುತ್ತಾರೆ. ತಂದೆ- ಮಗಳ ಬಾಂಧವ್ಯದ ಈ ಅಪರೂಪದ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವೈರಲ್ ವಿಡಿಯೋ ಇಲ್ಲಿದೆ:

ವಿಡಿಯೋವನ್ನು ಹಂಚಿಕೊಂಡ ಮೆಗ್ ಮೆಕ್ಲಾಚಾನ್ ಸಹೋದರಿಯ ಆಗಮನದಿಂದ ಅತ್ಯಂತ ಸಂತಸಗೊಂಡಿದ್ದಾರೆ. ಅಲ್ಲದೇ ಆಕೆಯ ಭೇಟಿ ಕ್ರಿಸ್​ಮಸ್ ಹಬ್ಬವನ್ನು ಮತ್ತಷ್ಟು ಸುಂದರವಾಗಿಸಲಿದೆ ಎಂದು ಬರೆದಿದ್ದಾರೆ. ಮೂರು ದಿನಗಳ ಹಿಂದೆ ಹಂಚಿಕೊಂಡ ಈ ವಿಡಿಯೋ ಈಗ ವೈರಲ್ ಆಗಿದ್ದು, ನೆಟ್ಟಿಗರು ನೋಡಿ ಭಾವುಕರಾಗಿದ್ದಾರೆ. ಅಲ್ಲದೇ ವಿವಿಧ ರೀತಿಯ ಕಾಮೆಂಟ್​ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ವಿಡಿಯೋ ನೋಡಿ ನಿಮಗೇನನ್ನಿಸಿತು?

ಇದನ್ನೂ ಓದಿ:

ನೆಚ್ಚಿನ ಸಂಗಾತಿಯೊಂದಿಗೆ ಗೋವಾದ ಕಡಲತೀರದಲ್ಲಿ ವಿವಾಹವಾಗುವ ಬಯಕೆ ಹೊಂದಿದ್ದೀರಾ? ಇಲ್ಲಿದೆ ಪೂರ್ಣ ಮಾಹಿತಿ

ಮೆಹಂದಿ ಸಮಾರಂಭದಲ್ಲಿ ಮಿಂಚಿದ ಕತ್ರಿನಾ, ವಿಕ್ಕಿ; ಇಲ್ಲಿದೆ ಮಸ್ತ್ ಫೋಟೋ ಆಲ್ಬಂ

Follow Us
ಬಿಜೆಪಿ ಶಾಸಕರೇ ಅವರ ವಿರುದ್ಧ ಇದ್ದಾರೆ ಎಂದ ಸುರ್ಜೇವಾಲಾ
ಬಿಜೆಪಿ ಶಾಸಕರೇ ಅವರ ವಿರುದ್ಧ ಇದ್ದಾರೆ ಎಂದ ಸುರ್ಜೇವಾಲಾ
ಜೈಲಲ್ಲಿ ಪವಿತ್ರಾ ಗೌಡಗೆ ಕೆಲಸ ಮಾಡಿಕೊಡಲು ಆಳುಗಳು ಇದ್ದಾರೆ: ಸಂಧ್ಯಾ ಆರೋಪ
ಜೈಲಲ್ಲಿ ಪವಿತ್ರಾ ಗೌಡಗೆ ಕೆಲಸ ಮಾಡಿಕೊಡಲು ಆಳುಗಳು ಇದ್ದಾರೆ: ಸಂಧ್ಯಾ ಆರೋಪ
ವಡೋದರಾದಲ್ಲಿ 4 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಲ್ಕೋಹಾಲ್ ಬಾಟಲಿಗಳ ಧ್ವಂಸ
ವಡೋದರಾದಲ್ಲಿ 4 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಲ್ಕೋಹಾಲ್ ಬಾಟಲಿಗಳ ಧ್ವಂಸ
ಪರಿಷತ್‌ ಚುನಾವಣೆ: ಗೆಲುವು ಬೆನ್ನಲ್ಲೇ ತಿಪ್ಪಣ್ಣಪ್ಪ ಕಮಕನೂರು ಭಾವುಕ
ಪರಿಷತ್‌ ಚುನಾವಣೆ: ಗೆಲುವು ಬೆನ್ನಲ್ಲೇ ತಿಪ್ಪಣ್ಣಪ್ಪ ಕಮಕನೂರು ಭಾವುಕ
ಸಚಿನ್ ಕ್ರಿಕೆಟ್ ದೇವರಾದರೆ, ವೈಭವ್ ದೇವರ ಮಗ
ಸಚಿನ್ ಕ್ರಿಕೆಟ್ ದೇವರಾದರೆ, ವೈಭವ್ ದೇವರ ಮಗ
ಬಿಜೆಪಿ ಅಭ್ಯರ್ಥಿಗಳಿಗೆ ಕಷ್ಟ ಆಗಿದ್ಯಾಕೆ? ರಘು ಕೌಟಿಲ್ಯ ಏನಂದ್ರು ನೋಡಿ
ಬಿಜೆಪಿ ಅಭ್ಯರ್ಥಿಗಳಿಗೆ ಕಷ್ಟ ಆಗಿದ್ಯಾಕೆ? ರಘು ಕೌಟಿಲ್ಯ ಏನಂದ್ರು ನೋಡಿ
ಪರಿಷತ್​​ ಚುನಾವಣೆ ಫಲಿತಾಂಶ: ಕಾಂಗ್ರೆಸ್​​ ನಾಯಕರಿಂದ ಸುದ್ದಿಗೋಷ್ಠಿ
ಪರಿಷತ್​​ ಚುನಾವಣೆ ಫಲಿತಾಂಶ: ಕಾಂಗ್ರೆಸ್​​ ನಾಯಕರಿಂದ ಸುದ್ದಿಗೋಷ್ಠಿ
ಸಂಪೂರ್ಣ ಬತ್ತಿದ ಕಾವೇರಿ: ಮೈಸೂರು, ಬೆಂಗಳೂರಲ್ಲಿ ಕುಡಿಯುವ ನೀರಿಗೂ ಬರ?
ಸಂಪೂರ್ಣ ಬತ್ತಿದ ಕಾವೇರಿ: ಮೈಸೂರು, ಬೆಂಗಳೂರಲ್ಲಿ ಕುಡಿಯುವ ನೀರಿಗೂ ಬರ?
ಮಾಜಿ ಸಂಸದೆ ಸುಮಲತಾ ಅಂಬರೀಶ್ ಬಗ್ಗೆ ರೇವಣ್ಣ ಅಚ್ಚರಿಯ ಹೇಳಿಕೆ
ಮಾಜಿ ಸಂಸದೆ ಸುಮಲತಾ ಅಂಬರೀಶ್ ಬಗ್ಗೆ ರೇವಣ್ಣ ಅಚ್ಚರಿಯ ಹೇಳಿಕೆ
ಪರಿಷತ್ ಚುನಾವಣೆ: ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಕಾಂಗ್ರೆಸ್​ ನಾಯಕರು
ಪರಿಷತ್ ಚುನಾವಣೆ: ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಕಾಂಗ್ರೆಸ್​ ನಾಯಕರು