
ಬೆಟ್ಟಿಂಗ್ ಆ್ಯಪ್ ಪ್ರಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರಾದ ಶಿಖರ್ ಧವನ್ (Shikhar Dhawan) ಹಾಗೂ ಸುರೇಶ್ ರೈನಾ (Suresh Raina) ಅವರಿಗೆ ಸಂಬಂಧಿಸಿದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ. ಇಬ್ಬರು ಕ್ರಿಕೆಟಿಗರಿಗೆ ಸೇರಿರುವ ಒಟ್ಟು 11.14 ಕೋಟಿ ರೂ ಮೊತ್ತದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ತಾತ್ಕಾಲಿಕವಾಗಿ 2002 ರ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಮುಟ್ಟುಗೋಲು ಹಾಕಿಕೊಂಡಿದೆ. ಇದೀಗ ಈ ಬಗ್ಗೆ ಕರ್ನಾಟಕ ಮೂಲದ ತೆಲಂಗಾಣ ಕೇಡರ್ನ ಐಪಿಎಸ್ ಅಧಿಕಾರ ಹಾಗೂ ಹೈದರಬಾದ್ ಪೊಲೀಸ್ ಆಯುಕ್ತರಾಗಿರುವ ವಿಶ್ವನಾಥ್ ಸಿ ಸಜ್ಜನರ್ ಅವರು ಶಿಖರ್ ಧವನ್ ಹಾಗೂ ಸುರೇಶ್ ರೈನಾ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ಜನರಲ್ಲಿ ತಪ್ಪು ಕಲ್ಪನೆಯನ್ನು ಸೃಷ್ಟಿಸಿ,ಅವರ ದಾರಿ ತಪ್ಪಿಸುವವರು ಸೆಲೆಬ್ರಿಟಿಗಳೇ? ಎಂದು ಪ್ರಶ್ನೆ ಮಾಡಿದ್ದಾರೆ. ವಿಶ್ವನಾಥ್ ಸಿ ಸಜ್ಜನರ್ ಅವರು ಎಕ್ಸ್ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. “ಇವರು ಭಾರತದ ಸೆಲೆಬ್ರಿಟಿಗಳಾ? ಜನರಿಂದ ಹಣ ಪಡೆದು ಆದರ್ಶ ವ್ಯಕ್ತಿಗಳು ಅಥವಾ ಆಟಗಾರರಾಗಲು ಹೇಗೆ ಸಾಧ್ಯ? ಬೆಟ್ಟಿಂಗ್ ಎನ್ನುವುದು ಯುವಕರಿಗೆ ಅಂಟಿರುವ ಸಾಂಕ್ರಾಮಿಕ ರೋಗ, ಇದರಿಂದ ಅವರ ಜೀವನ ಹಾಳಾಗಿದೆ. ಅದೆಷ್ಟೋ ಯುವಕರು ಈ ಬೆಟ್ಟಿಂಗ್ ಹುಚ್ಚಿನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಇಡೀ ಸಮಾಜಕ್ಕೆ ಮಾರಕವಾಗಿರುವ ಈ ಬೆಟ್ಟಿಂಗ್ ಬಗ್ಗೆ ಪ್ರಚಾರ ನೀಡುವವರು ಈ ಯುವಕರ ಸಾವಿಗೆ ಕಾರಣ ಅಲ್ಲವೇ? ಯುವಕರನ್ನು ಉದ್ದಾರ ಮಾಡುವ, ಅವರ ಜೀವನಕ್ಕೆ ಲಾಭ ಆಗುವ ಒಳ್ಳೆಯ ಮಾತುಗಳನ್ನು ಹೇಳಿ, ಅದು ಬಿಟ್ಟು ಅವರನ್ನು ನಾಶ ಮಾಡುವ ಅಥವಾ ಪ್ರಾಣ ಕಳೆದುಕೊಳ್ಳವ ವಿಷಯಗಳನ್ನು ಪ್ರಚಾರ ಮಾಡಬೇಡಿ” ಎಂದು ಹೇಳಿದ್ದಾರೆ.
వీళ్లేం సెలబ్రిటీలు?
అభిమానాన్ని కూడా సొమ్ము చేసుకునే వీళ్లు ఆదర్శనీయమైన ఆటగాళ్లు ఎలా అవుతారు?
బెట్టింగ్ మహామ్మారికి వ్యసనపరులై ఎంతో మంది యువకులు తమ జీవితాలను చేజేతులా నాశనం చేసుకుంటున్నారు. వేలాది మంది ఆత్మహత్యలకు పాల్పడ్డారు. సమాజాన్ని… pic.twitter.com/GWJIvSK7uF
— V.C. Sajjanar, IPS (@SajjanarVC) November 7, 2025
ಶಿಖರ್ ಧವ್ನ ಹಾಗೂ ಸುರೇಶ್ ರೈನಾ ಇಬ್ಬರೂ ವಿದೇಶಿ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಅಕ್ರಮ ಬೆಟ್ಟಿಂಗ್ ಪ್ಲಾಟ್ಫಾರ್ಮ್ 1xBet ಅನ್ನು ಪ್ರಚಾರ ಮಾಡಿದ್ದಾರೆ ಎಂಬುದು ಇಡಿ ತನಿಖೆಯಿಂದ ತಿಳಿದುಬಂದಿದೆ. ಹಾಗೆಯೇ ಇವರಿಬ್ಬರು 1xBet ಮತ್ತು ಅದರ ಅಂಗಸಂಸ್ಥೆಗಳನ್ನು ಉತ್ತೇಜಿಸಲು ವಿದೇಶಿ ಸಂಸ್ಥೆಗಳೊಂದಿಗೆ ಗೊತ್ತಿದ್ದೂ ಜಾಹೀರಾತು ಒಪ್ಪಂದಗಳನ್ನು ಮಾಡಿಕೊಂಡಿರುವುದು ಖಚಿತವಾಗಿದೆ. ಹೀಗಾಗಿ ಇವರಿಬ್ಬರ ಆಸ್ತಿಯನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಇದನ್ನೂ ಓದಿ: ಶಿಖರ್ ಧವನ್, ಸುರೇಶ್ ರೈನಾಗೆ ಸೇರಿದ 11.14 ಕೋಟಿ ಮೌಲ್ಯದ ಆಸ್ತಿ ಜಪ್ತಿ
ವಿಶ್ವನಾಥ್ ಸಿ ಸಜ್ಜನರ್ ಪ್ರಸ್ತುತ ತೆಲಂಗಾಣ ಕೇಡರ್ನ ಐಪಿಎಸ್ ಅಧಿಕಾರ ಹಾಗೂ ಹೈದರಬಾದ್ ಪೊಲೀಸ್ ಆಯುಕ್ತರಾಗಿದ್ದಾರೆ. ಈ ಹಿಂದೆ ಟಿಎಸ್ ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕೋವಿಡ್-19 ಸಮಯದಲ್ಲಿ ಭಾರೀ ಜನಪ್ರಿಯ ಅಧಿಕಾರಿಯಾಗಿದ್ದರು. ಇನ್ನು ರೌಡಿಗಳಿಗೆ, ಸಿಂಹಸ್ವಪ್ನ ಆಗಿದ್ದಾರೆ. ವಿಶ್ವನಾಥ್ ಸಿ ಸಜ್ಜನರ್ ಅವರು ಮೂಲತ ಕರ್ನಾಟಕದ ಹುಬ್ಬಳ್ಳಿಯವರು.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ