AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೀಲ್​​ಚೇರ್​​​ನಲ್ಲಿ ಆಫ್ರಿಕಾದ ಅತಿ ಎತ್ತರದ ಪರ್ವತವನ್ನು ಏರಿದ ದಿವ್ಯಾಂಗ; ವಿಡಿಯೋ ವೈರಲ್​​​

ಯುಕೆಯ ಮಾರ್ಟಿನ್ ಹಿಬರ್ಟ್ ಅವರು ಗಾಲಿಕುರ್ಚಿ (wheelchair) ನಲ್ಲಿ ಕುಳಿತು ಆಫ್ರಿಕಾದ ಎತ್ತರದ ಬೆಟ್ಟ ಕಿಲಿಮಂಜಾರೋ ಪರ್ವತವನ್ನು ಏರಿದಿದ್ದಾರೆ.

ವೀಲ್​​ಚೇರ್​​​ನಲ್ಲಿ ಆಫ್ರಿಕಾದ ಅತಿ ಎತ್ತರದ ಪರ್ವತವನ್ನು ಏರಿದ ದಿವ್ಯಾಂಗ; ವಿಡಿಯೋ ವೈರಲ್​​​
ಆಫ್ರಿಕಾದ ಅತಿ ಎತ್ತರದ ಪರ್ವತವನ್ನು ಏರಿದ ವಿಕಲಾಂಗImage Credit source: India Today
TV9 Web
| Edited By: |

Updated on:Jun 15, 2022 | 6:06 PM

Share

ನಮ್ಮ ಜೀವನದಲ್ಲಿ ಅನೇಕ ಜನರು ನಮಗೆ ಸ್ಪೂರ್ತಿಯ ಚಿಲುಮೆಯಾಗಿರುತ್ತಾರೆ. ಅವರ ಸಾಧನೆಯನ್ನು ಕಂಡು ನಿಬ್ಬೆರಗಾಗಿರುತ್ತೇವೆ. ಅದರಲ್ಲು ವಿಶೇಷವಾಗಿ ಸಾಮಾನ್ಯ ಜನರು ಮಾಡಲು ಆಗದಂತಹ ಸಾಧನೆಗಳನ್ನು ವಿಶೇಷ ಚೇತನ ವ್ಯಕ್ತಿಗಳು ಮಾಡಿರುವುದನ್ನು ನೋಡಿದ್ದೇವೆ. ಅದು ನಮಗೆ ಸ್ಪೂರ್ತಿಯ ಚಿಲುಮೆಯಾಗಿರುತ್ತದೆ. ಅದೆರೀತಿಯಾಗಿ ಯುಕೆಯ ಮಾರ್ಟಿನ್ ಹಿಬರ್ಟ್ ಸಾಧನೆ ನಿಮಗೆ ಸ್ಪೂರ್ತಿಯಾಗಬಹದು.

ಯುಕೆಯ (UK) ಅಂಗವೈಕಲ್ಯ (Disability) ಮಾರ್ಟಿನ್ ಹಿಬರ್ಟ್ ಅವರು ಕಾಲುಗಳನ್ನು ಕಳೆದುಕೊಂಡಿದ್ದು ಗಾಲಿಕುರ್ಚಿ (wheelchair) ನಲ್ಲಿ ಕುಳಿತು ಆಫ್ರಿಕಾದ (Africa) ಎತ್ತರದ ಬೆಟ್ಟ ಕಿಲಿಮಂಜಾರೋ ಪರ್ವತವನ್ನು ಏರಿದಿದ್ದಾರೆ. ಆಶ್ಚರ್ಯವಾದರು ಇದು ಸತ್ಯ.  45 ವರ್ಷದ ಮಾರ್ಟಿನ್ ಹಿಬರ್ಟ್ ಅವರು 2017 ರಲ್ಲಿ ಈ ಪ್ರದೇಶದಲ್ಲಿ ಬಾಂಬ್ ದಾಳಿಯ ನಂತರ ಪಾರ್ಶ್ವವಾಯುವಿಗೆ ಒಳಗಾಗಿದ್ದರು.

ಇದನ್ನು ಓದಿ: ಪಶುವೈದ್ಯರನ್ನು ದನಗಳ ಚಿಕಿತ್ಸೆಗೆಂದು ಕರೆದು ಮದುವೆ ಮಾಡಿಸಿದ ಸ್ಥಳೀಯರು

ಬಾಂಬ್ ದಾಳಿಯ ನಂತರ, ಹಿಬರ್ಟ್ ಅವರ ಬೆನ್ನುಹುರಿಗೆ ತೀವ್ರವಾದ ಗಾಯಗಳಾಗಿತ್ತು. ಇದರಿಂದಾಗಿ ಅವರು ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಅಂಗವೈಕಲ್ಯ ಅವರ ಉತ್ಸಾಹವನ್ನು ಕುಗ್ಗಿಸಲಿಲ್ಲ. ಅವರು ವಿಶೇಷವಾಗಿ ಮಾರ್ಪಡಿಸಿದ ಗಾಲಿಕುರ್ಚಿಯ ಮೂಲಕ ಆಫ್ರಿಕಾದ ಅತಿ ಎತ್ತರದ ಪರ್ವತವನ್ನು ಏರಿದರು.

ಹಿಬರ್ಟ್ ಅವರು ತಮ್ಮ ಫೇಸ್‌ಬುಕ್ ಪ್ರೊಫೈಲ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಅವರು ಆರೋಹಣದ ಸಮಯದಲ್ಲಿ ಎದುರಿಸಿದ ಸವಾಲುಗಳ ಬಗ್ಗೆ ಮಾತನಾಡಿದ್ದಾರೆ. ಅವರು ಸ್ನೇಹಿತರ ಸಹಾಯದಿಂದ ಈ ಸಾಧನೆಯನ್ನು ಪ್ರಾರಂಭಿಸಿದರು. “ಇಲ್ಲಿ, ನಾವು ಕಿಲಿಮಂಜಾರೊದ ತುದಿಯಲ್ಲಿದ್ದೇವೆ. ಐದು ವರ್ಷಗಳ ಹಿಂದೆ, ನಾನು ಆಸ್ಪತ್ರೆಯಲ್ಲಿದ್ದೆ, ಅಷ್ಟೇನೂ ಚಲಿಸಲು ಸಾಧ್ಯವಾಗಲಿಲ್ಲ. ಮತ್ತು ಇಲ್ಲಿ ನಾನು, ಐದು ವರ್ಷಗಳ ನಂತರ ಕಿಲಿಮಂಜಾರೊದ ತುದಿಯಲ್ಲಿದ್ದೇನೆ, ”ಎಂದು ಅವರು ಹೇಳಿದರು.

ಇದನ್ನು ಓದಿ: ಟ್ರಾಫಿಕ್ ಮಧ್ಯೆ ಸ್ಕೂಟಿಯಲ್ಲಿ ವಿಶ್ರಾಂತಿ ಪಡೆಯುವುದನ್ನು ನೀವು ಎಂದಾದರೂ ನೋಡಿದ್ದೀರಾ? ಇಲ್ಲಿದೆ ವೈರಲ್ ವಿಡಿಯೋ

ನೆಟ್ಟಿಗರು ಹಿಬರ್ಟ್‌ನ ಸಾಧನೆಗೆ ಬೆರಗಾಗಿದ್ದಾರೆ ಮತ್ತು ಪೋಸ್ಟ್‌ಗೆ ಅಭಿನಂದನಾ ಸಂದೇಶಗಳ ಸುರಿಮಳೆಗೈದರು. ಅವರ ಸಾಧನೆಗಳು ಎಷ್ಟು ಸ್ಪೂರ್ತಿದಾಯಕವಾಗಿದ್ದವು ಎಂಬುದರ ಕುರಿತು ಅನೇಕರು ಬರೆದಿದ್ದಾರೆ. ಅದು ಅವರನ್ನು ಗಟ್ಟಿಯಾಗಿಸುವಂತೆ ಮಾಡಿತು.

ಇನ್ನಷ್ಟು ಟ್ರೆಂಡಿಂಗ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 6:05 pm, Wed, 15 June 22

ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ
ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್
ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ
ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ