AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BMTC: ನೋಡಿ ಸ್ವಾಮಿ ನಿಮ್ಮ ಸೇವೆಗೂ ಮುನ್ನ ನಾವು ರೆಡಿಯಾಗೋದು ಹೀಗೆ

ಈ ಸರ್ಕಾರಿ ಬಸ್ಸುಗಳು ಧೂಳಿನಿಂದ ತುಂಬಿರುತ್ತವೆ, ಅಲ್ಲದೆ  ಕೆಲವೊಬ್ಬರು ಗೂಡ್ಕಾ ಅಡಿಕೆ ಎಲೆ ತಿಂದು ಕಿಟಲಿ ಪಕ್ಕದಲ್ಲೇ ಉಗಿದಿರುತ್ತಾರೆ, ಇದನ್ನೆಲ್ಲಾ ಪ್ರತಿನಿತ್ಯ ಸ್ವಚ್ಛಗೊಳಿಸುವುದಿಲ್ಲ ಎಂಬಿತ್ಯಾದಿ ಕಾರಣಗಳಿಂದ ಅನೇಕರು ಸರ್ಕಾರಿ ಬಸ್ಸುಗಳಲ್ಲಿ  ಓಡಾಡಲು ಮೂಗು ಮುರಿಯುತ್ತಾರೆ. ಆದ್ರೆ ನಿಮಗೆ ಗೊತ್ತಾ ಪಯಾಣಿಕರಿಗೆ ಸೇವೆಯನ್ನು ಒದಗಿಸುವ ಮುನ್ನ ಪ್ರತಿನಿತ್ಯ ಸರ್ಕಾರಿ ಬಸ್ಸುಗಳನ್ನು ಎಷ್ಟು ಸ್ವಚ್ಛಗೊಳಿಸಲಾಗುತ್ತೆ ಅಂತಾ, ಇಲ್ಲಿದೆ ನೋಡಿ ವಿಡಿಯೋ .

BMTC: ನೋಡಿ ಸ್ವಾಮಿ ನಿಮ್ಮ ಸೇವೆಗೂ ಮುನ್ನ ನಾವು ರೆಡಿಯಾಗೋದು ಹೀಗೆ
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Dec 19, 2023 | 4:24 PM

Share

ಕೆಲವೊಬ್ಬರು  ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳನ್ನು ಬಳಕೆ ಮಾಡುವುದು ತೀರಾ ಕಡಿಮೆ, ಯಾವಾಗಲೂ  ಖಾಸಗಿ ವಾಹನಗಳಲ್ಲಿಯೇ ಓಡಾಡುತ್ತಿರುತ್ತಾರೆ. ಅದ್ರಲ್ಲೂ ಕೆಲವೊಬ್ಬರು ಸರ್ಕಾರಿ ಬಸ್ಸುಗಳು ಧೂಳಿನಿಂದ ತುಂಬಿರುತ್ತವೆ,  ಬಸ್ ಸೀಟುಗಳಲ್ಲಿಯೂ ಕೂಡಾ ಧೂಳು ಗಲೀಜು ಹಾಗೇನೆ ಇರುತ್ತವೆ, ಅಲ್ಲದೆ ಕೆಲವು ಪ್ರಯಾಣಿಕರು ಗೂಡ್ಕಾ, ಎಲೆ ಅಡಿಕೆ ತಿಂದು ಕಿಟಕಿ ಪಕ್ಕದಲ್ಲಿಯೇ ಉಗಿದಿರುತ್ತಾರೆ, ಇದನ್ನೆಲ್ಲಾ ಸಿಬ್ಬಂದಿಗಳು ಪ್ರತಿನಿತ್ಯ ಸ್ವಚ್ಛಗೊಳಿಸುವುದಿಲ್ಲ  ಎಂಬ ಕಾರಣಕ್ಕೆ ಸರ್ಕಾರಿ ಬಸ್ಸುಗಳಲ್ಲಿ ಓಡಾಡಲು ಒಲ್ಲೇ ಎನ್ನುತ್ತಾರೆ. ಆದ್ರೆ ಪ್ರಯಾಣಿಕರಿಗೆ ಸೇವೆಯನ್ನು ಒದಗಿಸುವ ಮುನ್ನ ಬಸ್ಸುಗಳನ್ನು ಸ್ವಚ್ಛಗೊಳಿಸಿ ಹೇಗೆ ಸಿದ್ಧಗೊಳಿಸಲಾಗುತ್ತದೆ ಗೊತ್ತಾ,  ಇಲ್ಲಿದೆ ನೋಡಿ ವಿಡಿಯೋ

ಈ ಒಂದು ವಿಶೇಷ ವಿಡಿಯೋವನ್ನು  ಬಿ.ಎಂ.ಟಿ.ಸಿ  (@BMTC_BENGALURU) ತನ್ನ ಅಧೀಕೃತ  X ಖಾತೆಯಲ್ಲಿ ಹಂಚಿಕೊಂಡಿದೆ.  ಹಾಗೂ ನೋಡಿ ಸ್ವಾಮಿ ನಿಮ್ಮ ಸೇವೆಗೂ ಮುನ್ನ ನಾವು ರೆಡಿಯಾಗುವುದು ಹೇಗೆ? Switch to public transport” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದೆ.  ವಿಡಿಯೋದಲ್ಲಿ ಪ್ರತಿನಿತ್ಯ ಪ್ರಯಾಣಿಕರಿಗೆ ಸೇವೆಯನ್ನು ಒದಗಿಸುವ ಮುನ್ನ ಸರ್ಕಾರಿ ಬಸ್ಸುಗಳನ್ನು ಹೇಗೆಲ್ಲಾ ಸ್ವಚ್ಛಗೊಳಿಸುಲಾಗುತ್ತದೆ ಎಂಬುದನ್ನು ಕಾಣಬಹುದು.

ವೈರಲ್​​ ವಿಡಿಯೋ ಇಲ್ಲಿದೆ:

53 ಸೆಕೆಂಡುಗಳ ಈ  ವಿಡಿಯೋದಲ್ಲಿ ಸ್ವಚ್ಛತಾ ಸಿಬ್ಬಂದಿಗಳು  ಬಸ್ಸಿನ ಪ್ರತಿಯೊಂದು ಸೀಟುಗಳನ್ನು ಸಾಬೂನು ನೀರಿನಿಂದ ತಿಕ್ಕಿ ತೊಳೆಯುವುದನ್ನು ಹಾಗೂ ಪ್ರತಿಯೊಂದು ಕಿಟಕಿ ಗ್ಲಾಸ್​​ಗಳನ್ನು ಚೆನ್ನಾಗಿ ಸ್ವಚ್ಛಗೊಳಿಸುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಟೊಮೆಟೊ ಕೆಚಪ್ ಅಂದ್ರೆ ಇಷ್ಟಾನಾ? ಈ ವಿಡಿಯೋ ನೋಡಿದ್ರೆ ಕೆಚಪ್ ತಿನ್ನಲ್ಲ 

ಡಿಸೆಂಬರ್ 17 ರಂದು ಹಂಚಿಕೊಳ್ಳಲಾದ ಈ ವಿಡಿಯೋ 16.4K ವೀಕ್ಷಣೆಗಳನ್ನು ಪಡೆದುಕೊಂಡಿದೆ ಹಾಗೂ ಹಲವಾರು ಲೈಕ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಸಿಬ್ಬಂದಿಗಳಿಗೆ ಬರಿಗೈಯಲ್ಲೇ ಕೆಲಸ ಮಾಡುವುದಕ್ಕಿಂತ, ಕೈಗವಸುಗಳನ್ನು ನೀಡಬಹುದಲ್ಲವೇʼ ಎಂದು  ಸಲಹೆ ನೀಡಿದ್ದಾರೆ. ಮತ್ತೊಬ್ಬ ಬಳಕೆದಾರರು ವಂದನೆಗಳು… ದಯಮಾಡಿ ಎಲ್ಲಾ ಡಿಪೋಗಳಲ್ಲೂ ಎಲ್ಲಾ ಬಸ್​​ಗಳನ್ನು ಹೀಗೆ ಸ್ವಚ್ಛಗೊಳಿಸಿʼ ಎಂದು ಹೇಳಿದ್ದಾರೆ.  ಇನ್ನೂ ಅನೇಕರು ಇದು ಒಳ್ಳೆಯ ಕೆಲಸ ಎಂದು ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ:

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ