AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏನ್​​ ತಲೆ ಗುರು ಇವಂದು​​: ಚೆನ್ನಾಗಿ ರೆಸ್ಟೋರೆಂಟ್​​​ಗಳಲ್ಲಿ  ತಿನ್ನುವುದು, ಬಿಲ್ ಬರುವಾಗ ಹಾರ್ಟ್ ಅಟ್ಯಾಕ್ ನಾಟಕವಾಡುವುದು!

ಈ ಪ್ರಪಂಚವೇ ಒಂದು  ರಂಗಭೂಮಿ. ಇಲ್ಲಿ ಜನರು ಒಂದಲ್ಲಾ ಒಂದು ರೀತಿಯ ಸಣ್ಣಪುಟ್ಟ ಸುಳ್ಳುಗಳನ್ನು ಹೇಳುತ್ತಾ, ನಾಟಕವಾಡುತ್ತಾ ಬದುಕುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ಭೂಪ  ರೆಸ್ಟೋರೆಂಟ್ಗಳಲ್ಲಿ ಚೆನ್ನಾಗಿ ತಿಂದು ಭಾರಿ ಮೊತ್ತದ ಬಿಲ್ ಪಾವತಿ ಮಾಡಲು ನಾನ್ನಿಂದ ಸಾಧ್ಯವಿಲ್ಲ ಎಂದು  ಹಾರ್ಟ್ ಅಟ್ಯಾಕ್ ನಾಟಕವನ್ನಾಡಿ ಕೊನೆಗೆ ಇದೀಗ ಪೋಲಿಸರ ಅಥಿತಿಯಾಗಿದ್ದಾನೆ.

ಏನ್​​ ತಲೆ ಗುರು ಇವಂದು​​: ಚೆನ್ನಾಗಿ ರೆಸ್ಟೋರೆಂಟ್​​​ಗಳಲ್ಲಿ  ತಿನ್ನುವುದು, ಬಿಲ್ ಬರುವಾಗ ಹಾರ್ಟ್ ಅಟ್ಯಾಕ್ ನಾಟಕವಾಡುವುದು!
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Edited By: |

Updated on:Oct 20, 2023 | 5:01 PM

Share

ಪ್ರಪಂಚದಾದ್ಯಂತ ಅನೇಕ ಜನರು ಒಂದಲ್ಲಾ ಒಂದು ರೀತಿಯಲ್ಲಿ ಮೋಸ ಮಾಡುತ್ತಾ, ಮುಗ್ಧ ಜನರಿಗೆ ಟೋಪಿ ಹಾಕುತ್ತಾ ಜೀವನ ನಡೆಸುತ್ತಿರುತ್ತಾರೆ. ಮೋಸ ಹೋಗುವವರು ಇರುವವರೆಗೂ  ಮೋಸ ಮಾಡುವವರು ಇದ್ದೇ ಇರುತ್ತಾರೆ. ಹೀಗೆ ಅದೆಷ್ಟೋ ಮೋಸದ ಕತೆಗಳನ್ನು ನಾವು ನೋಡಿರುತ್ತೇವೆ. ಅದೇ ರೀತಿ ಇಲ್ಲೊಂದು ಇಂತಹದ್ದೇ ವಿಚಿತ್ರ ಮೋಸದ ಕತೆಯೊಂದು ಬೆಳಕಿಗೆ ಬಂದಿದೆ.  50 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ದೊಡ್ಡ ದೊಡ್ಡ  ಹೋಟೆಲ್ ಹಾಗೂ ರೆಸ್ಟೋರೆಂಟ್​ಗಳಿಗೆ  ಹೋಗಿ ಚೆನ್ನಾಗಿ ತಿಂದು ನಂತರ ಬಿಲ್ ಪಾವತಿ ಮಾಡುವ ಸಮಯದಲ್ಲಿ ಹೃದಯಾಘಾತದ ನಾಟಕವನ್ನಾಡಿ ಬಿಲ್ ಪಾವತಿ ಮಾಡದೆ ಎಸ್ಕೇಪ್ ಆಗುತ್ತಿದ್ದ. ಈತ ಒಂದಲ್ಲಾ ಎರಡಲ್ಲಾ ಬರೋಬ್ಬರಿ 20 ರೆಸ್ಟೋರೆಂಟ್ಗಳಲ್ಲಿ ಈ ರೀತಿಯ ನಾಟಕವನ್ನಾಡಿ ಹೋಟೆಲ್ ಮಾಲೀಕರಿಗೆ ಪಂಗನಾಮ ಹಾಕಿದ್ದಾನೆ. ಕಳ್ಳರೂ ಎಷ್ಟೇ ಜಾನತಣದಿಂದ ತಪ್ಪು ಮಾಡಿದರು ಕೊನೆಗೆ ಒಂದಲ್ಲಾ ಒಂದು ದಿನ  ಸಿಕ್ಕಿ ಹಾಕಿಕೊಳ್ಳುತ್ತಾರೆ.  ಅದೇ ರೀತಿ ಈಗ ಈತನ ನಾಟಕಕ್ಕೂ ತೆರೆಬಿದ್ದಿದ್ದು,  ಬಿಟ್ಟಿ ಭರ್ಜರಿ ಭೋಜನದ ಆಸೆಗೆ ಬಿದ್ದು, ಇದೀಗ ಜೈಲು ಸೇರಿದ್ದಾನೆ.

ಸ್ಪೇನ್ ದೇಶದ ಬ್ಲಾಂಕಾ ಎಂಬ ಪ್ರದೇಶದ ಅಲಿಕಾಂಟೆ ನಗರದಲ್ಲಿ ಈ ಘಟನೆ ನಡೆದಿದ್ದು,  ಈ ಭೂಪ ಹಲವು ಸಮಯಗಳಿಂದ ಇಲ್ಲಿನ ಪ್ರಸಿದ್ಧ ಹೋಟೆಲ್ ಮತ್ತು ರೆಸ್ಟೋರೆಂಟ್ಗಳಿಗೆ ಹೋಗಿ ಚೆನ್ನಾಗಿ ತಿಂದು ನಂತರ ಬಿಲ್ ಪಾವತಿ ಮಾಡಬೇಕಾಗುತ್ತದೆ ಎಂಬ ಕಾರಣಕ್ಕೆ ಹೃದಯಾಘಾತದ ನಾಟಕವನ್ನಾಡುತ್ತಾನೆ. ಇದನ್ನು ನಿಜವೆಂದು ನಂಬುವ ರೆಸ್ಟೋರೆಂಟ್ ಸಿಬ್ಬಂದಿಗಳು ಮಾನವೀಯತೆಯ ದೃಷ್ಟಿಯಿಂದ  ಈತನ ಊಟದ ಬಿಲ್ ಅನ್ನು ಲೆಕ್ಕಿಸದೆ ಆತನನ್ನು ಆಸ್ಪತ್ರೆಗೆ ಸಾಗಿಸುತ್ತಾರೆ. ಒಂದಲ್ಲಾ ಎರಡಲ್ಲಾ ಬರೋಬ್ಬರಿ 20 ರೆಸ್ಟೋರೆಂಟ್​​ಗಳಲ್ಲಿ ಹಾರ್ಟ್ ಅಟ್ಯಾಕ್ ನಾಟಕವನ್ನಾಡಿ,  ಕೊನೆಯಲ್ಲಿ ಪೋಲಿಸರ ಅಥಿತಿಯಾಗಿದ್ದಾನೆ.

ಇದನ್ನೂ ಓದಿ: ಇದು ವಿಶ್ವದ ಅತೀ ಖಾರದ ಮೆಣಸು, ವಿಶ್ವ ದಾಖಲೆ ಸೇರಿದ ಪೆಪ್ಪರ್ ಎಕ್ಸ್

ಇತ್ತೀಚಿಗಷ್ಟೇ  ಅಲಿಕಾಂಟೆ ನಗರದಲ್ಲಿನ ಎಲ್ ಬ್ಯೂನ್ ಕಮರ್ ಎಂಬ ರೆಸ್ಟೋರೆಂಟ್ಗೆ ಹೋಗಿದ್ದ, ಈತ ಅಲ್ಲಿ ಸುಮಾರು 36 ಡಾಲರ್ ಬೆಲೆಯ ಸಮುದ್ರಾಹಾರ ಮತ್ತು ವಿಸ್ಕಿಯನ್ನು ಸೇವಿಸುತ್ತಾನೆ. ಹಾಗೂ ಇತ ಬಿಲ್ ಪಾವತಿಸುವ ವೇಳೆ, ಈ ಹಿಂದೆ ಮಾಡಿದಂತೆ  ಇಲ್ಲಿಯೂ ಹೃದಯಾಘಾತದ ನಾಟಕವನ್ನಾಡುತ್ತಾನೆ. ಆದರೆ ಈತನ ನಾಟಕಕ್ಕೆ ಮರುಳಾಗದ ಹೋಟೆಲ್ ಸಿಬ್ಬಂದಿ ಅಂಬ್ಯುಲೆನ್ಸ್ ಬದಲಿಗೆ ಪೋಲಿಸರಿಗೆ ಫೋನ್ ಮಾಡಿದ್ದಾನೆ. ಪೋಲಿಸರು ಸ್ಥಳಕ್ಕೆ ಧಾವಿಸಿದಾಗ ಈತನ ಮೋಸದ ಕತೆ ಬೆಳಕಿಗೆ  ಬಂದಿದೆ. ಇದೀಗ ಈತ ಪೋಲಿಸರ ಅಥಿತಿಯಾಗಿದ್ದಾನೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 5:01 pm, Fri, 20 October 23

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ