AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಒಂದು ಬಾರಿ ಕುಡಿದರೆ 2 ದಿನ ಬಾಯಾರಿಕೆ ಆಗಲ್ಲ; ಕಚ್ಚಾ ಬಾದಾಮ್ ಬಳಿಕ ಲಿಂಬೆ ಜ್ಯೂಸ್ ಮಾರುವವನ ವಿಡಿಯೋ ವೈರಲ್

ಈ ವೈರಲ್ ವಿಡಿಯೋದಲ್ಲಿ ಲಿಂಬೆ ಜ್ಯೂಸ್ ಮಾರಾಟಗಾರ ತನ್ನದೇ ಆದ ಸ್ಟೈಲ್​ನಲ್ಲಿ ನಿಂಬೆ ಪಾನಕವನ್ನು ತಯಾರಿಸುತ್ತಾರೆ. ಅಲ್ಲದೆ, ತಮ್ಮ ಗ್ರಾಹಕರನ್ನು ರಂಜಿಸಲು ತಮಾಷೆಯ ಜಿಂಗಲ್ ಅನ್ನು ಹಾಡುತ್ತಾರೆ.

Viral Video: ಒಂದು ಬಾರಿ ಕುಡಿದರೆ 2 ದಿನ ಬಾಯಾರಿಕೆ ಆಗಲ್ಲ; ಕಚ್ಚಾ ಬಾದಾಮ್ ಬಳಿಕ ಲಿಂಬೆ ಜ್ಯೂಸ್ ಮಾರುವವನ ವಿಡಿಯೋ ವೈರಲ್
ಲಿಂಬೆ ಜ್ಯೂಸ್ ಮಾರುತ್ತಿರುವ ಯುವಕ
TV9 Web
| Updated By: ಸುಷ್ಮಾ ಚಕ್ರೆ|

Updated on: Apr 11, 2022 | 4:40 PM

Share

ಮಾರಾಟಗಾರರು ಮತ್ತು ಸಣ್ಣ ವ್ಯಾಪಾರಿಗಳು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಗ್ರಾಹಕರನ್ನು ಆಕರ್ಷಿಸುವ ಮೂಲಕ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿರುವುದನ್ನು ನೀವು ಆಗಾಗ್ಗೆ ಗಮನಿಸಿರಬಹುದು. ಇತ್ತೀಚೆಗಷ್ಟೇ ರಸ್ತೆಯಲ್ಲಿ ಕಡಲೆ ಕಾಯಿ ಮಾರುವವನ ‘ಕಚ್ಚಾ ಬಾದಾಮ್‘ ಹಾಡು ಭಾರೀ ಪ್ರಸಿದ್ಧಿ ಪಡೆದಿತ್ತು. ಕೆಲವರು ತಮ್ಮ ಉತ್ಪನ್ನಗಳ ಹೆಸರನ್ನು ತಮಾಷೆಯ ಧ್ವನಿಯಲ್ಲಿ ಹೇಳುವ ಮೂಲಕ ಜನರ ಗಮನವನ್ನು ಸೆಳೆಯಲು ಪ್ರಯತ್ನಿಸುತ್ತಾರೆ, ಆದರೆ ಕೆಲವರು ಆಕರ್ಷಕವಾದ ಜಿಂಗಲ್ಸ್ ಅನ್ನು ರಚಿಸುತ್ತಾರೆ. ಭುವನ್ ಬಡ್ಯಾಕರ್ ಅವರ ‘ಕಚಾ ಬಾದಾಮ್’ (Kacha Badam) ಜಿಂಗಲ್ ಪ್ರಪಂಚದಾದ್ಯಂತ ಭಾರೀ ವೈರಲ್ ಆದ ನಂತರ, ಇದೇ ರೀತಿಯ ಮಾರಾಟಗಾರರ ವೀಡಿಯೊಗಳು ಅಂತರ್ಜಾಲದಲ್ಲಿ ಕಾಣಿಸಿಕೊಳ್ಳುತ್ತಿವೆ ಈಗ, ಲಿಂಬೆ ಸೋಡಾ ಮಾರಾಟಗಾರ ಮತ್ತು ನಿಂಬೆ ಜ್ಯೂಸ್ ಮಾರಾಟ ಮಾಡುವ ವ್ಯಕ್ತಿಯ ತಮಾಷೆಯ ವೀಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಈ ವೀಡಿಯೊದ ನಿಖರವಾದ ಸ್ಥಳ ಇನ್ನೂ ತಿಳಿದಿಲ್ಲ.

ಈ ವೈರಲ್ ವಿಡಿಯೋದಲ್ಲಿ ಆ ಮಾರಾಟಗಾರ ತನ್ನದೇ ಆದ ಸ್ಟೈಲ್​ನಲ್ಲಿ ನಿಂಬೆ ಪಾನಕವನ್ನು ತಯಾರಿಸುತ್ತಾರೆ. ಅಲ್ಲದೆ, ತಮ್ಮ ಗ್ರಾಹಕರನ್ನು ರಂಜಿಸಲು ತಮಾಷೆಯ ಜಿಂಗಲ್ ಅನ್ನು ಹಾಡುತ್ತಾರೆ. ಬಾಕಿ ನಿಂಬು ಬಾದ್ ವಿಚ್ ಪೌಂಗಾ (ನಾನು ಉಳಿದ ನಿಂಬೆಹಣ್ಣುಗಳನ್ನು ನಂತರ ಬಳಸುತ್ತೇನೆ) ಎಂದು ಹಾಡುವ ಆ ವ್ಯಕ್ತಿ ನಂತರ ನಾಟಕೀಯ ರೀತಿಯಲ್ಲಿ ಸೋಡಾ ಬಾಟಲಿಗಳನ್ನು ತೆರೆಯುತ್ತಾನೆ. ಆಗ “ಏಕ್ ಬಾರ್ ಪಿಯೋಗೆ, ತೋ ಬಾರ್ ಬಾರ್ ಮಾಂಗೋಗೆ ನಿಂಬು ಪಾನಿ, ದೋ ದಿನ್ ಪ್ಯಾಸ್ ನಹಿ ಲಗೂಗಿ. (ಒಂದು ಬಾರಿ ಕುಡಿದರೆ ಮತ್ತೆ ಮತ್ತೆ ಲಿಂಬೆ ಜ್ಯೂಸ್ ಬೇಕು ಎನ್ನುತ್ತೀರಿ, 2 ದಿನ ಬಾಯಾರಿಕೆ ಆಗೋದಿಲ್ಲ)” ಎನ್ನುತ್ತಾ ಉರಿ ಬಿಸಿಲಿನಲ್ಲಿ ಲಿಂಬೆ ಜ್ಯೂಸ್ ಕುಡಿಯುವುದರ ಉಪಯೋಗವನ್ನು ಹೇಳುತ್ತಾ ಲಿಂಬೆ ಶರಬತ್ ತಯಾರಿಸುತ್ತಾರೆ.

ಈ ವಿಡಿಯೋ ವೈರಲ್ ಆಗಿದ್ದು, 9,00,000ಕ್ಕೂ ಹೆಚ್ಚು ಲೈಕ್ಸ್ ಮತ್ತು ಹಲವಾರು ಕಾಮೆಂಟ್‌ಗಳು ಬಂದಿವೆ. ಲಿಂಬೆ ಜ್ಯೂಸ್ ಮಾರುವ ಉಲ್ಲಾಸದ ವಿಧಾನವನ್ನು ಕಂಡು ಜನರು ಖುಷಿಪಟ್ಟಿದ್ದಾರೆ. ಅನೇಕರು ಆತನ ಆತ್ಮವಿಶ್ವಾಸವನ್ನು ಶ್ಲಾಘಿಸಿದ್ದಾರೆ. “ಇವನು ‘ಕಚ್ಚಾ ಬಾದಾಮ್’ ಗಾಯಕನ ಮಗ” ಎಂದು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ