Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: 14 ತಿಂಗಳ ಬಳಿಕ ಮಾಲೀಕನನ್ನು ನೋಡಿ ಓಡೋಡಿ ಬಂದ ಆನೆಗಳು

14 ತಿಂಗಳ ಬಳಿಕ ತಮ್ಮ ಮಾಲೀಕನನ್ನು ಕಂಡು ಆನೆಗಳ ಹಿಂಡು ಆತನನ್ನು ಸುತ್ತುವರೆದು ಮುದ್ದಿಸಿದ ಹೃದಯಸ್ಪರ್ಶಿ ವೀಡಿಯೋ ವೈರಲ್​​ ಆಗಿದೆ.

Viral Video: 14 ತಿಂಗಳ ಬಳಿಕ ಮಾಲೀಕನನ್ನು ನೋಡಿ ಓಡೋಡಿ ಬಂದ ಆನೆಗಳು
Follow us
TV9 Web
| Updated By: Pavitra Bhat Jigalemane

Updated on: Dec 26, 2021 | 4:38 PM

ಪ್ರಾಣಿಗಳ ಪ್ರೀತಿಯೇ ಹಾಗೆ. ನಿಷ್ಕಲ್ಮಶವಾದ ಎಂದಿಗೂ ಮರೆಯದ ಪ್ರೀತಿ. ತಮ್ಮನ್ನು ಸಾಕಿದ ಮಾಲೀಕರಿಗೆ ವಿಧೇಯರಾಗಿ, ಅವರ ಪ್ರೀತಿಗೆ, ಕಾಳಜಿಗೆ ತಮ್ಮದೇ ರೀತಿಯಲ್ಲಿ ಪ್ರೀತಿಯನ್ನು ವ್ಯಕ್ತಪಡಿಸುವುದು ಪ್ರಾಣಿಗಳ ವಿಶೇಷತೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಆನೆಗಳ ವೀಡಿಯೋವೊಂದು ವೈರಲ್​ ಆಗಿದೆ. 14 ತಿಂಗಳ ಬಳಿಕ ತಮ್ಮ ಮಾಲೀಕನನ್ನು ಕಂಡು ಆನೆಗಳ ಹಿಂಡು ಆತನನ್ನು ಸುತ್ತುವರೆದು ಮುದ್ದಿಸಿದ ಹೃದಯಸ್ಪರ್ಶಿ ವೀಡಿಯೋ ವೈರಲ್​​ ಆಗಿದೆ. ನಟ್ಟಿಗರು ವೀಡಿಯೋ ನೋಡಿ ಪುಳಕಿತರಾಗಿದ್ದಾರೆ. ಆನೆಗಳಿಗೆ 14 ತಿಂಗಳ ಬಳಿಕವೂ ತಮ್ಮ ಹಳೆಯ ಮಾಲೀಕನ ಮೇಲಿರುವ ಪ್ರೀತಿ ಕಂಡು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. 

ವೀಡಿಯೋದಲ್ಲಿ ನೀರಿನ ಮಧ್ಯದಲ್ಲಿ ಆನೆಗಳ ಹಳೆ ಮಾಲೀಕ ನಿಂತಿರುತ್ತಾನೆ. ದೂರದಲ್ಲಿರುವ ಆನೆಗಳು ಆತನನ್ನು ಕಂಡು ಓಡೋಡಿ ಬರುತ್ತವೆ. ಮೂರು ಆನೆಗಳು ವ್ಯಕ್ತಿಯನ್ನು ಸುತ್ತುವರೆದು ಮುದ್ದಿಸುತ್ತವೆ. ಆನೆಗಳು ತಮ್ಮದೇ ರೀತಿಯಲ್ಲಿ ಮಾಲೀಕನನ್ನು ಮುದ್ದಿಸುವ ಕ್ಯೂಟ್​ ವೀಡಿಯೋ ಈಗ ನೋಡುಗರ ಮನ ಗೆದ್ದಿದೆ.  ನೆದರ್​ಲ್ಯಾಂಡ್​ನ ಟ್ವಿಟರ್​​ ಬಳಕೆದಾರರೊಬ್ಬರು ಈ ವೀಡಿಯೋ ಹಂಚಿಕೊಂಡಿದ್ದು  3 ಮಿಲಿಯನ್​ ಗೂ ಅಧಿಕ ವೀಕ್ಷಣೆ ಪಡೆದಿದೆ.

ವೀಡಿಯೋದಲ್ಲಿರುವ ವ್ಯಕ್ತಿಯನ್ನು ಡೆರೆಕ್​ ಥಾಂಪ್ಸನ್​ ಎಂದು ಗುರುತಿಸಲಾಗಿದ್ದು, ಅವರು ಟೊರೆಂಟೋದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಯಾಗಿದ್ದರು ಎನ್ನಲಾಗಿದೆ. ಇವರು ತಮ್ಮ ವೃತ್ತಿ ಜೀವನದಲ್ಲಿ  ಆನೆಗಳ ಆರೈಕೆ ಮಾಡಿಯೇ ಹೆಚ್ಚು ಪರಿಚಿತರು ಎಂದು ಬಳಕೆದಾರೊಬ್ಬರು ಕಾಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ:

Viral Video: ತಪ್ಪು ಮಾಡಿದ ಮಗನಿಗೆ ‘ನಾನು ಪುಂಡ’ ಎಂದು ಬೋರ್ಡ್​ ಹಿಡಿಸಿ ರಸ್ತೆ ಪಕ್ಕ ನಿಲ್ಲಿಸಿದ ಪೋಷಕರು

ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ
ಕಾಂಗ್ರೆಸ್ 2009ರಲ್ಲಿ ಸ್ಪೀಕರ್ ಜೊತೆ ನಡೆದುಕೊಂಡ ರೀತಿ ಗೊತ್ತಿದೆ: ಶಾಸಕ
ಕಾಂಗ್ರೆಸ್ 2009ರಲ್ಲಿ ಸ್ಪೀಕರ್ ಜೊತೆ ನಡೆದುಕೊಂಡ ರೀತಿ ಗೊತ್ತಿದೆ: ಶಾಸಕ