AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: 14 ತಿಂಗಳ ಬಳಿಕ ಮಾಲೀಕನನ್ನು ನೋಡಿ ಓಡೋಡಿ ಬಂದ ಆನೆಗಳು

14 ತಿಂಗಳ ಬಳಿಕ ತಮ್ಮ ಮಾಲೀಕನನ್ನು ಕಂಡು ಆನೆಗಳ ಹಿಂಡು ಆತನನ್ನು ಸುತ್ತುವರೆದು ಮುದ್ದಿಸಿದ ಹೃದಯಸ್ಪರ್ಶಿ ವೀಡಿಯೋ ವೈರಲ್​​ ಆಗಿದೆ.

Viral Video: 14 ತಿಂಗಳ ಬಳಿಕ ಮಾಲೀಕನನ್ನು ನೋಡಿ ಓಡೋಡಿ ಬಂದ ಆನೆಗಳು
TV9 Web
| Edited By: |

Updated on: Dec 26, 2021 | 4:38 PM

Share

ಪ್ರಾಣಿಗಳ ಪ್ರೀತಿಯೇ ಹಾಗೆ. ನಿಷ್ಕಲ್ಮಶವಾದ ಎಂದಿಗೂ ಮರೆಯದ ಪ್ರೀತಿ. ತಮ್ಮನ್ನು ಸಾಕಿದ ಮಾಲೀಕರಿಗೆ ವಿಧೇಯರಾಗಿ, ಅವರ ಪ್ರೀತಿಗೆ, ಕಾಳಜಿಗೆ ತಮ್ಮದೇ ರೀತಿಯಲ್ಲಿ ಪ್ರೀತಿಯನ್ನು ವ್ಯಕ್ತಪಡಿಸುವುದು ಪ್ರಾಣಿಗಳ ವಿಶೇಷತೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಆನೆಗಳ ವೀಡಿಯೋವೊಂದು ವೈರಲ್​ ಆಗಿದೆ. 14 ತಿಂಗಳ ಬಳಿಕ ತಮ್ಮ ಮಾಲೀಕನನ್ನು ಕಂಡು ಆನೆಗಳ ಹಿಂಡು ಆತನನ್ನು ಸುತ್ತುವರೆದು ಮುದ್ದಿಸಿದ ಹೃದಯಸ್ಪರ್ಶಿ ವೀಡಿಯೋ ವೈರಲ್​​ ಆಗಿದೆ. ನಟ್ಟಿಗರು ವೀಡಿಯೋ ನೋಡಿ ಪುಳಕಿತರಾಗಿದ್ದಾರೆ. ಆನೆಗಳಿಗೆ 14 ತಿಂಗಳ ಬಳಿಕವೂ ತಮ್ಮ ಹಳೆಯ ಮಾಲೀಕನ ಮೇಲಿರುವ ಪ್ರೀತಿ ಕಂಡು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. 

ವೀಡಿಯೋದಲ್ಲಿ ನೀರಿನ ಮಧ್ಯದಲ್ಲಿ ಆನೆಗಳ ಹಳೆ ಮಾಲೀಕ ನಿಂತಿರುತ್ತಾನೆ. ದೂರದಲ್ಲಿರುವ ಆನೆಗಳು ಆತನನ್ನು ಕಂಡು ಓಡೋಡಿ ಬರುತ್ತವೆ. ಮೂರು ಆನೆಗಳು ವ್ಯಕ್ತಿಯನ್ನು ಸುತ್ತುವರೆದು ಮುದ್ದಿಸುತ್ತವೆ. ಆನೆಗಳು ತಮ್ಮದೇ ರೀತಿಯಲ್ಲಿ ಮಾಲೀಕನನ್ನು ಮುದ್ದಿಸುವ ಕ್ಯೂಟ್​ ವೀಡಿಯೋ ಈಗ ನೋಡುಗರ ಮನ ಗೆದ್ದಿದೆ.  ನೆದರ್​ಲ್ಯಾಂಡ್​ನ ಟ್ವಿಟರ್​​ ಬಳಕೆದಾರರೊಬ್ಬರು ಈ ವೀಡಿಯೋ ಹಂಚಿಕೊಂಡಿದ್ದು  3 ಮಿಲಿಯನ್​ ಗೂ ಅಧಿಕ ವೀಕ್ಷಣೆ ಪಡೆದಿದೆ.

ವೀಡಿಯೋದಲ್ಲಿರುವ ವ್ಯಕ್ತಿಯನ್ನು ಡೆರೆಕ್​ ಥಾಂಪ್ಸನ್​ ಎಂದು ಗುರುತಿಸಲಾಗಿದ್ದು, ಅವರು ಟೊರೆಂಟೋದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಯಾಗಿದ್ದರು ಎನ್ನಲಾಗಿದೆ. ಇವರು ತಮ್ಮ ವೃತ್ತಿ ಜೀವನದಲ್ಲಿ  ಆನೆಗಳ ಆರೈಕೆ ಮಾಡಿಯೇ ಹೆಚ್ಚು ಪರಿಚಿತರು ಎಂದು ಬಳಕೆದಾರೊಬ್ಬರು ಕಾಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ:

Viral Video: ತಪ್ಪು ಮಾಡಿದ ಮಗನಿಗೆ ‘ನಾನು ಪುಂಡ’ ಎಂದು ಬೋರ್ಡ್​ ಹಿಡಿಸಿ ರಸ್ತೆ ಪಕ್ಕ ನಿಲ್ಲಿಸಿದ ಪೋಷಕರು

Follow Us
Web contact
Web contact

TV9 Kannada

Read More
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ