AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಮನಬಿಲ್ಲಿನ ಬಣ್ಣಕ್ಕೆ ತಿರುಗಿದ ನೀಲಗಿರಿ ಮರದ ತೊಗಟೆ: ಫೋಟೋ ನೋಡಿ ಅಚ್ಚರಿಗೊಂಡ ನೆಟ್ಟಿಗರು

ನೀಲಗಿರಿ ಮರಗಳು ಕಾಮನಬಿಲ್ಲಿನ ಬಣ್ಣದ ತೊಗಟೆಯನ್ನು ಹೊಂದಿರುವ ಫೋಟೋ ಸಾಮಾಜಿಕ  ಜಾಲತಾಣದಲ್ಲಿ ವೈರಲ್​ ಆಗಿದೆ. ಐಎಫ್​ಎಸ್​ ಅಧಿಕಾರಿ ಸುಸಾಂತ್​ ನಂದ ಅವರು ಇದರ ಫೋಟೋವನ್ನು ಹಂಚಿಕೊಂಡಿದ್ದಾರೆ.

ಕಾಮನಬಿಲ್ಲಿನ ಬಣ್ಣಕ್ಕೆ ತಿರುಗಿದ ನೀಲಗಿರಿ ಮರದ ತೊಗಟೆ: ಫೋಟೋ ನೋಡಿ ಅಚ್ಚರಿಗೊಂಡ ನೆಟ್ಟಿಗರು
ನೀಲಗಿರಿ ಮರ
Follow us
TV9 Web
| Updated By: Pavitra Bhat Jigalemane

Updated on:Mar 17, 2022 | 3:40 PM

ಪ್ರಕೃತಿ ಸದಾ ಸೋಜಿಗದ ತಾಣ. ಒಂದಲ್ಲ ಒಂದು ವಿಸ್ಮಯವನ್ನು ತನ್ನೊಳಗಿಟ್ಟುಕೊಂಡು ಅಚ್ಚರಿಯನ್ನು ಉಂಟುಮಾಡುತ್ತದೆ. ಇದೀಗ ನೀಲಗಿರಿ ಮರಗಳು (Eucalyptus Tree) ಕಾಮನಬಿಲ್ಲಿನ ಬಣ್ಣದ ತೊಗಟೆಯನ್ನು ಹೊಂದಿರುವ ಫೋಟೋ ಸಾಮಾಜಿಕ  ಜಾಲತಾಣದಲ್ಲಿ ವೈರಲ್​ ಆಗಿದೆ. ಐಎಫ್​ಎಸ್​ ಅಧಿಕಾರಿ ಸುಸಾಂತ್​ ನಂದ ಅವರು ಇದರ ಫೋಟೋವನ್ನು ಹಂಚಿಕೊಂಡಿದ್ದಾರೆ. ನೀಲಗಿರ ಮರವೊಂದು ಕಾಮನಬಿಲ್ಲಿನ ಬಣ್ಣವನ್ನು ಹೊಂದಿರುವುದು ಸದ್ಯ ನೆಟ್ಟಿಗರನ್ನು ಅಚ್ಚರಿಗೊಳಿಸಿದೆ. ನೈಜವಾಗಿಯೂ ಮರ ಅದೇ ರೀತಿ ಇದೆ ಎಂದು ಹೇಳಲಾಗಿದೆ.

ಫೋಟೋ ಹಂಚಿಕೊಂಡ ಸುಸಾಂತ್​ ಅವರು  ಕಾಮನಬಿಲ್ಲಿನಂತೆ ಕಾಣುವ ನೀಲಗಿರಿ ಮರವು ಉತ್ತರ ಗೋಳಾರ್ಧದಲ್ಲಿ ಸ್ಥಳೀಯವಾಗಿರುವ ಏಕೈಕ ನೀಲಗಿರಿ ಮರವಾಗಿದೆ. ಇದು ವಿಶ್ವದ ಅತ್ಯಂತ ವರ್ಣರಂಜಿತ ಮರವಾಗಿದೆ. ಪ್ರತಿ ಋತುವಿನ ಅಂತ್ಯದಲ್ಲಿಯೂ ತೊಗಟೆಯು ಸಿಪ್ಪೆ ಸುಲಿಯುವುದರಿಂದ ಮಳೆಬಿಲ್ಲಿನಂತೆ ಕಾಣುತ್ತದೆ, ಇದು ಕೆಳಗಿನ ತಾಜಾ, ಗಾಢ ಬಣ್ಣದ ತೊಗಟೆಯನ್ನು ಬಹಿರಂಗಪಡಿಸುತ್ತದೆಎಂದು ಪೋಸ್ಟ್‌ನ ಕ್ಯಾಪ್ಷನ್​ನಲ್ಲಿ ಕಾಮನಬಿಲ್ಲಿನ ನೀಲಗಿರಿ ಮರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಸುಂದರವಾದ ಮರವನ್ನು ನೋಡಿ ನೆಟ್ಟಿಗರು ವಿಸ್ಮಯಗೊಂಡಿದ್ದಾರೆ. ಇದನ್ನು ಪ್ರಕೃತಿಯ ವಿಶಿಷ್ಟ ಚಿತ್ರ ಎಂದು ಕರೆದಿದ್ದಾರೆ. ಕಾಮನಬಿಲ್ಲಿನ ಯೂಕಲಿಪ್ಟಸ್​ ಮರಗಳು ತಗ್ಗು ಪ್ರದೇಶ ಮಳೆಕಾಡಿನಲ್ಲಿ ಸಮುದ್ರ ಮಟ್ಟದಿಂದ 1,800 ಮೀ (5,900 ಅಡಿ) ಎತ್ತರದಲ್ಲಿ ಬೆಳೆಯುತ್ತದೆ. ಇದು ಇಂಡೋನೇಷ್ಯಾ, ಪಪುವಾ ನ್ಯೂ ಗಿನಿಯಾ ಮತ್ತು ಫಿಲಿಪೈನ್ಸ್‌ಗೆ ಸ್ಥಳೀಯವಾಗಿದೆ, ಆದರೆ ಅನೇಕ ಇತರ ದೇಶಗಳಲ್ಲಿ ವ್ಯಾಪಕವಾಗಿ ನೆಡಲಾಗಿದೆ.

ಇದನ್ನೂ ಓದಿ:

Viral Video: ಮೂರು ನಾಗರ ಹಾವುಗಳೊಂದಿಗೆ ಯುವಕನ ಸಾಹಸ: ಸಿಟ್ಟಿಗೆದ್ದು ಕಚ್ಚಿದ ಹಾವು

Published On - 3:40 pm, Thu, 17 March 22

ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ತುಟಿಗೆ ಕಚ್ಚಿದ ಹುಚ್ಚುನಾಯಿ
ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ತುಟಿಗೆ ಕಚ್ಚಿದ ಹುಚ್ಚುನಾಯಿ
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್