AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check: ಇಂಡೋನೇಷ್ಯಾ ಬಾಲಿಯಲ್ಲಿ ನೀರೊಳಗೆ ವಿಷ್ಣುವಿನ ದೇವಾಲಯ ಪತ್ತೆ?: ಸುಳ್ಳು, ಇದು AI ವಿಡಿಯೋ

Vishnu Temple Bali Fact Check: ಇಂಡೋನೇಷ್ಯಾದ ಬಾಲಿ ದ್ವೀಪದ ಬಳಿಯ ಸಮುದ್ರದಲ್ಲಿ ವಿಜ್ಞಾನಿಗಳ ಜಂಟಿ ಪರಿಶೋಧನಾ ತಂಡವು ಈ ಪ್ರತಿಮೆಯನ್ನು ಕಂಡುಹಿಡಿದಿದೆ ಮತ್ತು ಈ ಪ್ರತಿಮೆ 5,000 ವರ್ಷಗಳಿಗಿಂತ ಹೆಚ್ಚು ಹಳೆಯದು ಎಂದು ಕೂಡ ಕೆಲ ಬಳಕೆದಾರರು ಹೇಳಿಕೊಳ್ಳುತ್ತಿದ್ದಾರೆ. ಆದಾಗ್ಯೂ, ವಾಸ್ತವ ಪರಿಶೀಲನೆಯ ಸಮಯದಲ್ಲಿ, ಈ ವೈರಲ್ ಹಕ್ಕು ಸಂಪೂರ್ಣವಾಗಿ ನಕಲಿ ಎಂದು ಸಾಬೀತಾಗಿದೆ.

Fact Check: ಇಂಡೋನೇಷ್ಯಾ ಬಾಲಿಯಲ್ಲಿ ನೀರೊಳಗೆ ವಿಷ್ಣುವಿನ ದೇವಾಲಯ ಪತ್ತೆ?: ಸುಳ್ಳು, ಇದು AI ವಿಡಿಯೋ
Bali Vishnu Idol Fact Check
Vinay Bhat
|

Updated on: Jun 02, 2025 | 4:58 PM

Share

ಬೆಂಗಳೂರು (ಜೂ. 02): ಸಾಮಾಜಿಕ ಮಾಧ್ಯಮ (Social Media) ಮತ್ತು ಕೃತಕ ಬುದ್ಧಿಮತ್ತೆಯ ಯುಗದಲ್ಲಿ, ಪ್ರತಿದಿನ ಅನೇಕ ನಕಲಿ ಸುದ್ದಿಗಳು ಮತ್ತು ನಕಲಿ ವಿಡಿಯೋಗಳು ವೈರಲ್ ಆಗುತ್ತವೆ. ಈ ಸುಳ್ಳು ಸುದ್ದಿಗಳ ವಿರುದ್ಧ ನಿಮ್ಮನ್ನು ಎಚ್ಚರಿಸಲು, ನಾವು ನಿಮಗೆ ಸತ್ಯ ಪರಿಶೀಲನೆಗಳನ್ನು ತರುತ್ತೇವೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸುದ್ದಿಯೊಂದು ಹರಿದಾಡುತ್ತಿದ್ದು ಇದು ವಿಷ್ಣುವಿನ ವಿಗ್ರಹಕ್ಕೆ ಸಂಬಂಧಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ, ಸ್ಕೂಬ ಡ್ರೈವರ್​ಗಳು ಸಮುದ್ರದೊಳಗೆ ಧುಮುಕಿ ಚಿತ್ರೀಕರಿಸಿದ್ದಾರೆ. ಇವರು ಒಂದು ಪ್ರತಿಮೆಯನ್ನು ಕೂಡ ತೋರಿಸುತ್ತಾರೆ. ಇದು ಹಿಂದೂ ಧರ್ಮದ ಭಗವಾನ್ ವಿಷ್ಣುವಿನ ಪ್ರತಿಮೆ ಎಂದು ಹೇಳಿಕೊಳ್ಳುತ್ತಿದ್ದಾರೆ.

ಇಂಡೋನೇಷ್ಯಾದ ಬಾಲಿ ದ್ವೀಪದ ಬಳಿಯ ಸಮುದ್ರದಲ್ಲಿ ವಿಜ್ಞಾನಿಗಳ ಜಂಟಿ ಪರಿಶೋಧನಾ ತಂಡವು ಈ ಪ್ರತಿಮೆಯನ್ನು ಕಂಡುಹಿಡಿದಿದೆ ಮತ್ತು ಈ ಪ್ರತಿಮೆ 5,000 ವರ್ಷಗಳಿಗಿಂತ ಹೆಚ್ಚು ಹಳೆಯದು ಎಂದು ಕೂಡ ಕೆಲ ಬಳಕೆದಾರರು ಹೇಳಿಕೊಳ್ಳುತ್ತಿದ್ದಾರೆ. ಆದಾಗ್ಯೂ, ವಾಸ್ತವ ಪರಿಶೀಲನೆಯ ಸಮಯದಲ್ಲಿ, ಈ ವೈರಲ್ ಹಕ್ಕು ಸಂಪೂರ್ಣವಾಗಿ ನಕಲಿ ಎಂದು ಸಾಬೀತಾಗಿದೆ. ನಮ್ಮ ತನಿಖೆಯಿಂದ ವೈರಲ್ ಆಗಿರುವ ವಿಡಿಯೋ ನಿಜವಲ್ಲ, ಬದಲಾಗಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿ ರಚಿಸಲಾಗಿದೆ ಎಂದು ತಿಳಿದುಬಂದಿದೆ. ಬಳಕೆದಾರರು ಈ AI ರಚಿತ ವಿಡಿಯೋವನ್ನು ದಾರಿತಪ್ಪಿಸುವ ಹಕ್ಕುಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ
Image
ಕೇವಲ 14 ಸಾವಿರಕ್ಕೆ ಪತಂಜಲಿಯಿಂದ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ?
Image
ಬಂಗೀ ಜಂಪಿಂಗ್ ಪ್ಲಾಟ್‌ಫಾರ್ಮ್ ಮುರಿದು ಹೋಗುವ ವಿಡಿಯೋದ ಸತ್ಯಾಂಶ ಏನು?
Image
ಭಾರತೀಯ ಯುದ್ಧ ವಿಮಾನ ಪಾಕಿಸ್ತಾನದಲ್ಲಿ ಪತನ?: ವೈರಲ್ ವಿಡಿಯೋದ ನಿಜಾಂಶ ಏನು?
Image
ಜಮ್ಮುವಿನ ಜನರು ಪಾಕಿಸ್ತಾನಿ ರೈಲನ್ನು ಸುಟ್ಟುಹಾಕಿದ್ದು ನಿಜವೇ?

ನಿಜಾಂಶವನ್ನು ತಿಳಿಯಲು ನಾವು ವೈರಲ್ ವಿಡಿಯೋದ ಪ್ರಮುಖ ಚೌಕಟ್ಟುಗಳ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದ್ದೇವೆ. ಈ ತನಿಖೆಯ ಸಮಯದಲ್ಲಿ, ಏಪ್ರಿಲ್ 09, 2025 ರಂದು ಪೋಸ್ಟ್ ಮಾಡಲಾದ @mbaiarts ಎಂಬ ಬಳಕೆದಾರರ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ನಮಗೆ ಕಂಡುಬಂದಿದೆ. ಅವರೇ ಶೀರ್ಷಿಕೆಯಲ್ಲಿ ವಿವರಿಸಿದಂತೆ, ಕಲಾತ್ಮಕ ಮತ್ತು ಸಾಂಸ್ಕೃತಿಕ ಕಥೆ ಹೇಳುವ ಉದ್ದೇಶಕ್ಕಾಗಿ ಈ ದೃಶ್ಯಗಳನ್ನು AI ನಿಂದ ರಚಿಸಲಾಗಿದೆ.

View this post on Instagram

A post shared by Mb Ai Arts (@mbaiarts)

ತನಿಖೆಯ ಮುಂದಿನ ಹಂತದಲ್ಲಿ, ವೈರಲ್ ವಿಡಿಯೋವನ್ನು ಪರಿಶೀಲಿಸಲು ಎಐ ವಿಡಿಯೋವನ್ನು ಪತ್ತೆ ಹಚ್ಚುವ ಹೈವ್ ಮಾಡರೇಶನ್ ವೆಬ್​ಸೈಟ್​ನಲ್ಲಿ ಪರೀಕ್ಷೆ ನಡೆಸಿದ್ದೇವೆ. ಈ ಉಪಕರಣದ ವರದಿಯು ಈ ವಿಡಿಯೋವನ್ನು ಕೃತಕ ಬುದ್ಧಿಮತ್ತೆ ಅಂದರೆ AI ಸಹಾಯದಿಂದ ಮಾಡಲಾಗಿದೆ ಎಂದು ಬಹಿರಂಗಪಡಿಸಿದೆ. ವರದಿಯ ಪ್ರಕಾರ, ಈ ಫೋಟೋ ಶೆ. 96 ರಷ್ಟು AI ಯಿಂದ ಕೂಡಿದೆ.

Patanjali EV Fact Check: ಕೇವಲ 14 ಸಾವಿರಕ್ಕೆ ಪತಂಜಲಿಯಿಂದ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ?

ಇನ್ನು ವೈರಲ್ ಹೇಳಿಕೆಗೆ ಸಂಬಂಧಿಸಿದಂತೆ ನಾವು ಗೂಗಲ್​ನಲ್ಲಿ ಗೂಗಲ್ ಸರ್ಚ್ ನಡೆಸಿದ್ದೇವೆ. ಇಂಡೋನೇಷ್ಯಾದ ಬಾಲಿ ಸಮುದ್ರದಲ್ಲಿ ಶ್ರೀ ಮಹಾ ವಿಷ್ಣು ದೇವಾಲಯದ ಅಸ್ತಿತ್ವದ ಕುರಿತು ಕೀವರ್ಡ್‌ಗಳನ್ನು ಬಳಸಿಕೊಂಡು ಹುಡುಕಿದೆವು. ಆದರೆ, ಯಾಔಉದೇ ಪ್ರಸಿದ್ಧ ಸುದ್ದಿ ಮಾಧ್ಯಮ ಈ ಹಕ್ಕನ್ನು ಬೆಂಬಲಿಸುವ ವಿಶ್ವಾಸಾರ್ಹ ಸುದ್ದಿ ವರದಿಗಳು ಅಥವಾ ಪುರಾವೆಗಳನ್ನು ಪ್ರಕಟಿಸಿಲ್ಲ.

ಹೀಗಾಗಿ ವೈರಲ್ ಆಗಿರುವ ವಿಡಿಯೋ ನಿಜವಲ್ಲ, ಇದನ್ನು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿ ರಚಿಸಲಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ. ಬಳಕೆದಾರರು ಈ AI ರಚಿತ ವಿಡಿಯೋವನ್ನು ದಾರಿತಪ್ಪಿಸುವ ಹಕ್ಕುಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಅಂತಹ ಯಾವುದೇ ಪೋಸ್ಟ್‌ಗಳ ಬಗ್ಗೆ ಜನರು ಜಾಗರೂಕರಾಗಿರಬೇಕು.

ಸಮುದ್ರದ ಆಳದಲ್ಲಿ ಹಿಂದೂ ದೇವಾಲಯ ಎಂದು ಈ ರೀತಿ ಕೃತಕ ಬುದ್ದಿಮತ್ತೆಯಿಂದ ರಚಿಸಿದ ವಿಡಿಯೋ ವೈರಲ್ ಆಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ರಾಮಸೇತು ಎಂದು ನೀರಿನ ಅಡಿಯ ವಿಡಿಯೋ ಎಲ್ಲೆಡೆ ಹರಿದಾಡಿತ್ತು. ಈ ಬಗ್ಗೆ ಆಗ ಟಿವಿ9 ಕನ್ನಡ ಫ್ಯಾಕ್ಟ್ ಚೆಕ್ ನಡೆಸಿತ್ತು. ಇದಕ್ಕೆ ಸಂಬಂಧಿಸಿದ ಸುದ್ದಿಯನ್ನು ನೀವು ಇಲ್ಲಿ ಓದಬಹುದು.

ಅಟೋಮೊಬೈಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ