Fact Check: ಸ್ಕೂಬಾ ಡ್ರೈವರ್ಗಳು ನಿಜಕ್ಕೂ ರಾಮ ಸೇತುವಿನ ವಿಡಿಯೋ ತೋರಿಸಿದ್ದಾರೆಯೇ?: ವೈರಲ್ ಪೋಸ್ಟ್ನ ಸತ್ಯ ಇಲ್ಲಿದೆ
Ram Sethu AI Video: ಕೆಲವು ಸ್ಕೂಬಾ ಚಾಲಕರು ನೀರಿನ ಅಡಿಯಲ್ಲಿ ಅನೇಕ ಬೃಹತ್ ಕಲ್ಲಿನ ಆಕಾರಗಳನ್ನು ಅನ್ವೇಷಿಸುತ್ತಿರುವುದನ್ನು ಕಾಣುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವನ್ನು ಹಂಚಿಕೊಳ್ಳುತ್ತಿರುವ ಜನರು, ಈ ವಿಡಿಯೋ ರಾಮಸೇತುವನ್ನು ನಿರ್ಮಿಸಲಾದ ನೀರಿನ ಅಡಿಯಲ್ಲಿ ಅದೇ ಸ್ಥಳದ ವಿಡಿಯೋ ಎಂದು ಹೇಳುತ್ತಿದ್ದಾರೆ.

ಬೆಂಗಳೂರು (ಏ. 14): ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಏಪ್ರಿಲ್ 6 ರಂದು ಶ್ರೀಲಂಕಾದಿಂದ ಭಾರತಕ್ಕೆ ಹಿಂದಿರುಗುವಾಗ, ರಾಮನವಮಿಯ ಸಂದರ್ಭದಲ್ಲಿ ತಮ್ಮ ವಿಮಾನದಿಂದಲೇ ರಾಮಸೇತುವಿಗೆ ಭೇಟಿ ನೀಡಿದ್ದರು, ಅದರ ವಿಡಿಯೋವನ್ನು ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಅದೇ ದಿನ, ಪ್ರಧಾನಿ ಮೋದಿ ಅವರು ತಮಿಳುನಾಡಿನ ರಾಮೇಶ್ವರಂನಲ್ಲಿ ರಾಮಸೇತುವಿನ ಮೇಲೆ ನಿರ್ಮಿಸಲಾದ ಐತಿಹಾಸಿಕ ಹೊಸ ಪಂಬನ್ ಸೇತುವೆಯನ್ನು ಕೂಡ ಉದ್ಘಾಟಿಸಿದರು.
ಏತನ್ಮಧ್ಯೆ, ಕೆಲವು ಸ್ಕೂಬಾ ಚಾಲಕರು ನೀರಿನ ಅಡಿಯಲ್ಲಿ ಅನೇಕ ಬೃಹತ್ ಕಲ್ಲಿನ ಆಕಾರಗಳನ್ನು ಅನ್ವೇಷಿಸುತ್ತಿರುವುದನ್ನು ಕಾಣುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವನ್ನು ಹಂಚಿಕೊಳ್ಳುತ್ತಿರುವ ಜನರು, ಈ ವಿಡಿಯೋ ರಾಮಸೇತುವನ್ನು ನಿರ್ಮಿಸಲಾದ ನೀರಿನ ಅಡಿಯಲ್ಲಿ ಅದೇ ಸ್ಥಳದ ವಿಡಿಯೋ ಎಂದು ಹೇಳುತ್ತಿದ್ದಾರೆ.
ಇದು ರಾಮ ಸೇತುವಿನ ವಿಡಿಯೋ ಅಲ್ಲ:
ವೈರಲ್ ಆಗಿರುವ ಈ ವಿಡಿಯೋಗೂ ರಾಮ ಸೇತುವಿಗೂ ಯಾವುದೇ ಸಂಬಂಧವಿಲ್ಲ ಎಂದು ಟಿವಿ9 ಕನ್ನಡ ಫ್ಯಾಕ್ಟ್ ಚೆಕ್ ಕಂಡುಕೊಂಡಿದೆ. ಇದನ್ನು ಕೃತಕ ಬುದ್ಧಿಮತ್ತೆ (AI) ಸಹಾಯದಿಂದ ರಚಿಸಲಾಗಿದೆ. ವೈರಲ್ ವಿಡಿಯೋದ ಪ್ರಮುಖ ಚೌಕಟ್ಟುಗಳನ್ನು ರಿವರ್ಸ್ ಸರ್ಚ್ ಮಾಡಿದಾಗ, ಮಾರ್ಚ್ 27, 2025 ರಂದು bharathfx1 ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾದ ಮೂಲ ವಿಡಿಯೋ ನಮಗೆ ಸಿಕ್ಕಿತು. ಪೋಸ್ಟ್ನ ಶೀರ್ಷಿಕೆಯು ವಿಡಿಯೋವನ್ನು AI- ರಚಿತವಾಗಿದೆ ಎಂದು ಸ್ಪಷ್ಟವಾಗಿ ಹೇಳುತ್ತದೆ. ಇದನ್ನು ಮನರಂಜನಾ ಉದ್ದೇಶಗಳಿಗಾಗಿ ಮಾತ್ರ ಮಾಡಲಾಗಿದೆ.
View this post on Instagram
ನಾವು bharathfx1 ನ ಇನ್ಸ್ಟಾಗ್ರಾಮ್ ಖಾತೆಯನ್ನು ಹುಡುಕಿದಾಗ, ವೈರಲ್ ವಿಡಿಯೋದಂತೆಯೇ ಭಾರತೀಯ ಇತಿಹಾಸ, ಧರ್ಮ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಅನೇಕ AI- ರಚಿತ ವಿಡಿಯೋಗಳು ಇರುವುದು ಕಂಡುಬಂದಿದೆ. ಖಾತೆಯ ಬಯೋದಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಈ ವಿಡಿಯೋಗಳನ್ನು ಮಾಡಿದ ಕಲಾವಿದನ ಹೆಸರು ಭರತ್ ಎಫ್ಎಕ್ಸ್ ಮತ್ತು ಅವರು 3D ಕಂಪ್ಯೂಟರ್ ಗ್ರಾಫಿಕ್ಸ್, ವಿಎಫ್ಎಕ್ಸ್, ಅನಿಮೇಷನ್, ವಿಡಿಯೋ ಎಡಿಟಿಂಗ್ನಲ್ಲಿ ಕೆಲಸ ಮಾಡುತ್ತಾರೆ.
View this post on Instagram
ರಾಮ ಸೇತು ಎಂದರೇನು?
ರಾಮ ಸೇತುವನ್ನು ಆಡಮ್ ಸೇತುವೆ, ನಳ ಸೇತು ಮತ್ತು ಸೇತು ಅಣೆಕಟ್ಟು ಮುಂತಾದ ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ಪುರಾಣಗಳ ಪ್ರಕಾರ, ರಾಮ ಸೇತು ರಾಮಾಯಣಕ್ಕೆ ಸಂಬಂಧಿಸಿದೆ. ಶ್ರೀರಾಮ ಮತ್ತು ವಾನರ ಸೇನೆಯು ತಾಯಿ ಸೀತೆಯನ್ನು ರಾವಣನಿಂದ ಬಿಡಿಸಲು ಸೇತುವೆಯನ್ನು ನಿರ್ಮಿಸಿದರು, ಅದಕ್ಕೆ ರಾಮ ಸೇತು ಎಂದು ಹೆಸರಿಸಲಾಯಿತು. ರಾಮ ಸೇತು ಬಳಿಯ ರಾಮೇಶ್ವರದಲ್ಲಿ ಇಂದಿಗೂ ಅಂತಹ ತೇಲುವ ಕಲ್ಲುಗಳನ್ನು ಕಾಣಬಹುದು. ಆದರೆ, ಈ ಸೇತುವೆ ಮಾನವ ನಿರ್ಮಿತವೋ ಅಥವಾ ನೈಸರ್ಗಿಕವೋ ಎಂಬ ಬಗ್ಗೆ ಹಲವು ವರ್ಷಗಳಿಂದ ಚರ್ಚೆ ನಡೆಯುತ್ತಿದೆ.
Fact Check: ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರಿಯಾಂಕಾ ಗಾಂಧಿ ಪ್ರತಿಭಟನೆ ಎಂದು 2022ರ ವಿಡಿಯೋ ವೈರಲ್
ಪ್ರಧಾನಿ ಮೋದಿಯಿಂದ ಪಂಬನ್ ಸೇತುವೆ ಉದ್ಘಾಟನೆ:
ರಾಮೇಶ್ವರಕ್ಕೆ ಪ್ರಮುಖ ಸಂಪರ್ಕ ರಸ್ತೆಯಾದ ಪಂಬನ್ ರೈಲು ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ (ಏಪ್ರಿಲ್ 6) ಉದ್ಘಾಟಿಸಿದ್ದು, ಈ ಸೇತುವೆ ಭಾರತದ ಮೊದಲ ವರ್ಟಿಕಲ್ ಲಿಫ್ಟ್ ರೈಲ್ವೆ ಸಮುದ್ರ ಸೇತುವೆ ಎಂಬ ಹೆಗ್ಗಳಿಕೆ ಗಳಿಸಿದೆ. ಈ ಸೇತುವೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲಾಗಿದ್ದು, ಇದನ್ನು 550 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದರ ಉದ್ದ 2.08 ಕಿಲೋಮೀಟರ್. ಇದು 99 ಸ್ಪ್ಯಾನ್ಗಳನ್ನು ಮತ್ತು 72.5 ಮೀಟರ್ಗಳ ವರ್ಟಿಕಲ್ ಲಿಫ್ಟ್ ಸ್ಪ್ಯಾನ್ ಅನ್ನು ಹೊಂದಿದ್ದು, 17 ಮೀಟರ್ ಎತ್ತರಕ್ಕೆ ಏರುತ್ತದೆ. ದೊಡ್ಡ ಹಡಗುಗಳು ಇದರ ಅಡಿಯಲ್ಲಿ ಸಾಗಲು ಸಾಧ್ಯವಾಗುತ್ತದೆ. ರೈಲುಗಳು ಸಹ ಇದರ ಮೇಲೆ ಅತಿ ವೇಗವಾಗಿ ಪ್ರಯಾಣಿಸಲಿವೆ. ಇದು ರಾಮೇಶ್ವರಂನಿಂದ ಚೆನ್ನೈ ಮತ್ತು ದೇಶದ ಇತರ ಭಾಗಗಳಿಗೆ ಸಂಪರ್ಕವನ್ನು ಕಲ್ಪಿಸುತ್ತದೆ.
ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ