AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಉಡುಪಿ; ಬಾವಿಯಲ್ಲಿ ಬಿದ್ದ ನವಿಲನ್ನು ರಕ್ಷಿಸಿದ ಅಪ್ಪ ಮಗ

Wildlife : ರಾಷ್ಟ್ರಪಕ್ಷಿಯನ್ನು ರಕ್ಷಿಸಿದ್ದೀರಿ ಎಂದು ಒಂದಿಷ್ಟು ಜನ. ನವಿಲನ್ನು ರಕ್ಷಿಸಲು ಹೋಗಿ ಅದರ ಜಾಗದಲ್ಲಿ ನಿಮ್ಮ ಮಗ ಇದ್ದಿದ್ದರೆ? ಎಂದು ಮತ್ತೊಂದಿಷ್ಟು ಜನ. ಆದರೆ ವನ್ಯಜೀವಿಗಳ ರಕ್ಷಣೆಗಾಗಿ ಅರಣ್ಯ ಇಲಾಖೆಯನ್ನು ಸಂಪರ್ಕಿಸುವುದು ಒಳಿತು.

Viral Video: ಉಡುಪಿ; ಬಾವಿಯಲ್ಲಿ ಬಿದ್ದ ನವಿಲನ್ನು ರಕ್ಷಿಸಿದ ಅಪ್ಪ ಮಗ
ಬಾವಿಯಲ್ಲಿ ಬಿದ್ದ ನವಿಲನ್ನು ರಕ್ಷಿಸುತ್ತಿರುವ ಅಪ್ಪ ಮಗ
ಶ್ರೀದೇವಿ ಕಳಸದ
|

Updated on:Jul 19, 2023 | 6:11 PM

Share

Udupi : ಉಡುಪಿಯ ಉದ್ಯಾವರದ ಕಲಾಯಿಬೈಲ್​ ಎಂಬ ಗ್ರಾಮದಲ್ಲಿ ನವಿಲೊಂದು (Peacock) ಅಕಸ್ಮಾತ್​ ಆಗಿ ಬಾವಿಗೆ ಬಿದ್ದಿದೆ. ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದ ಆ ಪಕ್ಷಿಯು ಗ್ರಾಮಸ್ಥರಾದ ವಿಜಯಕುಮಾರ್​ ಮತ್ತು ಅವರ ಮಗ ವಿಶಾಲ ಅವರ ಕಣ್ಣಿಗೆ ಬಿದ್ದಿದೆ. ತಕ್ಷಣವೇ ಅದನ್ನು ರಕ್ಷಿಸುವ ಉಪಾಯಕ್ಕೆ ಅವರಿಬ್ಬರೂ ಮುಂದಾಗಿದ್ದಾರೆ. ವಿಶಾಲ ತನ್ನ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಬಾವಿಗೆ ಇಳಿದಿದ್ದಾರೆ. ನಂತರ ತಮ್ಮ ಕಾಲುಗಳೊಳಗೆ ಆ ನವಿಲನ್ನು ಹಿಡಿದು ಬಾವಿನೀರಿನಿಂದ ಮೇಲೆಕ್ಕೆತ್ತಿದ್ದಾರೆ.

ತಂದೆ ಮಗ ಸೇರಿ ನವಿಲಿನ ಜೀವ ಉಳಿಸಿದ್ದಕ್ಕಾಗಿ ಹಲವಾರು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ. ಇನ್ನೂ ಕೆಲವರು ಈ ಸಾಹಸಕ್ಕಿಳಿದ ಮಗನ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ. ಉಳಿದವರು ತಮಾಷೆಯನ್ನೂ ಮಾಡಿದ್ದಾರೆ. ಇಂದು ಮಧ್ಯಾಹ್ನ 1 ಗಂಟೆಗೆ ಟ್ವೀಟ್ ಮಾಡಿದ ಈ ವಿಡಿಯೋ ಅನ್ನು ಈಗಾಗಲೇ 13,300 ಜನರು ನೋಡಿದ್ದಾರೆ. 75 ಜನ ರೀಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : Viral: ನೀಲಿಕಂಗಳ ಹುಡುಗನ ‘ಕೆಫೆ ಚಾಯ್​ವಾಲಾ ಅರ್ಷದ್​ ಖಾನ್​’ ಇದೀಗ ಲಂಡನ್​ನಲ್ಲಿ

ನೀವಿಬ್ಬರೂ ರಾಷ್ಟ್ರಪಕ್ಷಿಯ ಜೀವ ಉಳಿಸಿದ್ದೀರಿ, ನಿಮಗೆ ದೇವರು ಒಳ್ಳೆಯದನ್ನು ಮಾಡಲಿ ಎಂದಿದ್ದಾರೆ ಸಾಕಷ್ಟು ಜನರು. ಯಾಕೆ ಇಂಥ ಹುಚ್ಚು ಸಾಹಸಕ್ಕೆ ಇಳಿದಿರಿ? ನವಿಲಿನ ಜಾಗದಲ್ಲಿ ಅಕಸ್ಮಾತ್​ ನಿಮ್ಮ ಮಗ ಬಿದ್ದಿದ್ದರೆ ಎಂದಿದ್ದಾರೆ ಕೆಲವರು. ಇಂಥ ಕೆಲಸವನ್ನು ಮಕ್ಕಳಿಂದ ಮಾಡಿಸುವ ಬದಲು ಅರಣ್ಯ ಇಲಾಖೆಗೆ ತಿಳಿಸಿ ಎಂದು ಸಲಹೆ ನೀಡಿದ್ದಾರೆ ಒಬ್ಬರು.

ಇದನ್ನೂ ಓದಿ : Viral Video: ಒಂದೇ ತಟ್ಟೆಯಲ್ಲಿ ಸಿಂಹದೊಂದಿಗೆ ಊಟ ಮಾಡುತ್ತಿರುವ ಯುವತಿ

ವನ್ಯಮೃಗಗಳು ಪಕ್ಷಿಗಳು ಹೀಗೆ ಅಪಾಯದಲ್ಲಿದ್ದಾಗ ಅಥವಾ ನೀವಿದ್ದ ಜಾಗದಲ್ಲಿ ಬಂದಾಗ ತಕ್ಷಣವೇ ಅರಣ್ಯ ಇಲಾಖೆ ಅಥವಾ Wildlife SOS  ತಿಳಿಸುವುದು ಉತ್ತಮ. ವಿನಾಕಾರಣ ಅಪಾಯಕ್ಕೆ ಒಡ್ಡಿಕೊಳ್ಳುವುದು ಸಲ್ಲದು.

ಈ ವಿಡಿಯೋ ನೋಡಿದ ನಿಮ್ಮಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 6:09 pm, Wed, 19 July 23

ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ