AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಉಡುಪಿ; ಬಾವಿಯಲ್ಲಿ ಬಿದ್ದ ನವಿಲನ್ನು ರಕ್ಷಿಸಿದ ಅಪ್ಪ ಮಗ

Wildlife : ರಾಷ್ಟ್ರಪಕ್ಷಿಯನ್ನು ರಕ್ಷಿಸಿದ್ದೀರಿ ಎಂದು ಒಂದಿಷ್ಟು ಜನ. ನವಿಲನ್ನು ರಕ್ಷಿಸಲು ಹೋಗಿ ಅದರ ಜಾಗದಲ್ಲಿ ನಿಮ್ಮ ಮಗ ಇದ್ದಿದ್ದರೆ? ಎಂದು ಮತ್ತೊಂದಿಷ್ಟು ಜನ. ಆದರೆ ವನ್ಯಜೀವಿಗಳ ರಕ್ಷಣೆಗಾಗಿ ಅರಣ್ಯ ಇಲಾಖೆಯನ್ನು ಸಂಪರ್ಕಿಸುವುದು ಒಳಿತು.

Viral Video: ಉಡುಪಿ; ಬಾವಿಯಲ್ಲಿ ಬಿದ್ದ ನವಿಲನ್ನು ರಕ್ಷಿಸಿದ ಅಪ್ಪ ಮಗ
ಬಾವಿಯಲ್ಲಿ ಬಿದ್ದ ನವಿಲನ್ನು ರಕ್ಷಿಸುತ್ತಿರುವ ಅಪ್ಪ ಮಗ
Follow us
ಶ್ರೀದೇವಿ ಕಳಸದ
|

Updated on:Jul 19, 2023 | 6:11 PM

Udupi : ಉಡುಪಿಯ ಉದ್ಯಾವರದ ಕಲಾಯಿಬೈಲ್​ ಎಂಬ ಗ್ರಾಮದಲ್ಲಿ ನವಿಲೊಂದು (Peacock) ಅಕಸ್ಮಾತ್​ ಆಗಿ ಬಾವಿಗೆ ಬಿದ್ದಿದೆ. ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದ ಆ ಪಕ್ಷಿಯು ಗ್ರಾಮಸ್ಥರಾದ ವಿಜಯಕುಮಾರ್​ ಮತ್ತು ಅವರ ಮಗ ವಿಶಾಲ ಅವರ ಕಣ್ಣಿಗೆ ಬಿದ್ದಿದೆ. ತಕ್ಷಣವೇ ಅದನ್ನು ರಕ್ಷಿಸುವ ಉಪಾಯಕ್ಕೆ ಅವರಿಬ್ಬರೂ ಮುಂದಾಗಿದ್ದಾರೆ. ವಿಶಾಲ ತನ್ನ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಬಾವಿಗೆ ಇಳಿದಿದ್ದಾರೆ. ನಂತರ ತಮ್ಮ ಕಾಲುಗಳೊಳಗೆ ಆ ನವಿಲನ್ನು ಹಿಡಿದು ಬಾವಿನೀರಿನಿಂದ ಮೇಲೆಕ್ಕೆತ್ತಿದ್ದಾರೆ.

ತಂದೆ ಮಗ ಸೇರಿ ನವಿಲಿನ ಜೀವ ಉಳಿಸಿದ್ದಕ್ಕಾಗಿ ಹಲವಾರು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ. ಇನ್ನೂ ಕೆಲವರು ಈ ಸಾಹಸಕ್ಕಿಳಿದ ಮಗನ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ. ಉಳಿದವರು ತಮಾಷೆಯನ್ನೂ ಮಾಡಿದ್ದಾರೆ. ಇಂದು ಮಧ್ಯಾಹ್ನ 1 ಗಂಟೆಗೆ ಟ್ವೀಟ್ ಮಾಡಿದ ಈ ವಿಡಿಯೋ ಅನ್ನು ಈಗಾಗಲೇ 13,300 ಜನರು ನೋಡಿದ್ದಾರೆ. 75 ಜನ ರೀಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : Viral: ನೀಲಿಕಂಗಳ ಹುಡುಗನ ‘ಕೆಫೆ ಚಾಯ್​ವಾಲಾ ಅರ್ಷದ್​ ಖಾನ್​’ ಇದೀಗ ಲಂಡನ್​ನಲ್ಲಿ

ನೀವಿಬ್ಬರೂ ರಾಷ್ಟ್ರಪಕ್ಷಿಯ ಜೀವ ಉಳಿಸಿದ್ದೀರಿ, ನಿಮಗೆ ದೇವರು ಒಳ್ಳೆಯದನ್ನು ಮಾಡಲಿ ಎಂದಿದ್ದಾರೆ ಸಾಕಷ್ಟು ಜನರು. ಯಾಕೆ ಇಂಥ ಹುಚ್ಚು ಸಾಹಸಕ್ಕೆ ಇಳಿದಿರಿ? ನವಿಲಿನ ಜಾಗದಲ್ಲಿ ಅಕಸ್ಮಾತ್​ ನಿಮ್ಮ ಮಗ ಬಿದ್ದಿದ್ದರೆ ಎಂದಿದ್ದಾರೆ ಕೆಲವರು. ಇಂಥ ಕೆಲಸವನ್ನು ಮಕ್ಕಳಿಂದ ಮಾಡಿಸುವ ಬದಲು ಅರಣ್ಯ ಇಲಾಖೆಗೆ ತಿಳಿಸಿ ಎಂದು ಸಲಹೆ ನೀಡಿದ್ದಾರೆ ಒಬ್ಬರು.

ಇದನ್ನೂ ಓದಿ : Viral Video: ಒಂದೇ ತಟ್ಟೆಯಲ್ಲಿ ಸಿಂಹದೊಂದಿಗೆ ಊಟ ಮಾಡುತ್ತಿರುವ ಯುವತಿ

ವನ್ಯಮೃಗಗಳು ಪಕ್ಷಿಗಳು ಹೀಗೆ ಅಪಾಯದಲ್ಲಿದ್ದಾಗ ಅಥವಾ ನೀವಿದ್ದ ಜಾಗದಲ್ಲಿ ಬಂದಾಗ ತಕ್ಷಣವೇ ಅರಣ್ಯ ಇಲಾಖೆ ಅಥವಾ Wildlife SOS  ತಿಳಿಸುವುದು ಉತ್ತಮ. ವಿನಾಕಾರಣ ಅಪಾಯಕ್ಕೆ ಒಡ್ಡಿಕೊಳ್ಳುವುದು ಸಲ್ಲದು.

ಈ ವಿಡಿಯೋ ನೋಡಿದ ನಿಮ್ಮಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 6:09 pm, Wed, 19 July 23

6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಪತ್ರದಲ್ಲಿ ಷರತ್ತುಗಳಿರಲ್ಲ, 2 ಸಾಲಿನ ಸಾರಾಂಶ ಮಾತ್ರ ಇರುತ್ತದೆ: ಯತ್ನಾಳ್
ಪತ್ರದಲ್ಲಿ ಷರತ್ತುಗಳಿರಲ್ಲ, 2 ಸಾಲಿನ ಸಾರಾಂಶ ಮಾತ್ರ ಇರುತ್ತದೆ: ಯತ್ನಾಳ್
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ