Viral Video: ‘ನೀರಿನೊಳಗೆ ಹಾಕಿದ ಮೇಲೂ ನೀ ಯಾಕೆ ಈಜುತ್ತಿಲ್ಲ, ಒಮ್ಮೆ ಮಿಸುಕಾಡು ಪ್ಲೀಸ್​’

Dog Love : ನಾಯಿಯೆಂದರೆ ಬರೀ ಪ್ರಾಣಿಯೇ, ಅದಿರುವುದು ಮನೆ ಕಾಯಲು, ಬೊಗಳಲು ಮಾತ್ರವೆ? ಈ ವಿಡಿಯೋ ನೋಡಿದ ಮೇಲೆ ನೀವೇಷ್ಟು ಕಠಿಣಹೃದಯಿಯಾದರೂ ನಿಮ್ಮ ಬಾಯಿಯಿಂದ 'ಹೌದು' ಎಂಬ ಶಬ್ದ ಹೊಮ್ಮಲು ಸಾಧ್ಯವೇ ಇಲ್ಲ!

Viral Video: 'ನೀರಿನೊಳಗೆ ಹಾಕಿದ ಮೇಲೂ ನೀ ಯಾಕೆ ಈಜುತ್ತಿಲ್ಲ, ಒಮ್ಮೆ ಮಿಸುಕಾಡು ಪ್ಲೀಸ್​'
'ನೀರಿನೊಳಗೆ ಹಾಕಿದ ಮೇಲೂ ನೀ ಯಾಕೆ ಈಜುತ್ತಿಲ್ಲ?'
Follow us
|

Updated on: Jul 20, 2023 | 11:03 AM

Kindness : ಆಹಾ! ಅದೃಷ್ಟ ಎಂದರೆ ಇದು, ನಾನಿದ್ದಲ್ಲಿಯೇ ಬಂದು ಬಿದ್ದಿತಲ್ಲ ಈ ಕೇಸರಿಮೀನು (Fish) ಎಂದು ಆ ನಾಯಿ ಗುಳುಮ್ಮಿಸಿದ್ದರೆ ಅದು ಆಸೆ ಮತ್ತು ಸ್ವಾರ್ಥ. ಅಯ್ಯೋ ಈ ಮೀನು ನೀರಿನಲ್ಲಿರುವುದು ಬಿಟ್ಟು ಇಲ್ಲಿಗೇಕೆ ಬಂದಿದೆ? ಎಂದು ಅದನ್ನು ನೀರಿನಲ್ಲಿ ಬಿಟ್ಟು ಹೋಗುವುದು ಕರ್ತವ್ಯ. ಬಾಯಿಯಿಂದ ಹಿಡಿದು ಎತ್ತಿ ನೀರಿಗೆ ಹಾಕಿದ ಮೇಲೂ ಮೀನು ಯಾಕೆ ಈಜುತ್ತಿಲ್ಲ? ಎಂದು ಚಡಪಡಿಸುವುದು, ಅದು ಮಿಸುಕಾಡಲಿ ಎಂದು  ಪ್ರಯತ್ನಿಸುವುದು ಇದೆಯಲ್ಲ ಅದು ಸಹಾನುಭೂತಿ, ಪ್ರೀತಿ ಮತ್ತು ಅಂತಃಕರಣ. 

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Śh Iv à (@natureferver)

ಒಮ್ಮೆ ಈ ಮೀನಿನ ಎದೆಗೂಡಿನಿಂದ ಒಮ್ಮೆ ಉಸಿರು ಹೊಮ್ಮಿ ಅದು ಪಟಪಟಿಸಿದರೆ ಈ ನಾಯಿಗೆ ಅದೆಷ್ಟೋ ಸಮಾಧಾನವೆನ್ನಿಸುತ್ತಿತ್ತು. ಆದರೆ ಹಾಗಾಗಲಿಲ್ಲ. ದುರಾದೃಷ್ಟ, ಅದರ ಉಸಿರು ನಿಂತು ಹೋಗಿತ್ತು. ಮನುಷ್ಯರಿಗಿಂತ ಸೂಕ್ಷ್ಮಗ್ರಾಹಿಯೂ, ತಿಳಿವಳಿಕೆ ಮತ್ತು ಅಂತಃಕರಣವುಳ್ಳ ಈ ಪ್ರಾಣಿಯನ್ನು ನಾಯಿ ಎಂದು ಕರೆಯಲು ಕೂಡ ಮನಸ್ಸು ಬಾರದು. ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್ ಮಾಡಲಾದ ಈ ವಿಡಿಯೋ ಅನ್ನು ಈ ತನಕ ಆರೂವರೆ ಲಕ್ಷಕ್ಕಿಂತಲೂ ಹೆಚ್ಚು ಜನ ನೋಡಿದ್ದಾರೆ. ಅನೇಕರ ಹೃದಯಗಳು ಈ ದೃಶ್ಯಕ್ಕೆ ಮರುಗಿವೆ.

ಇದನ್ನೂ ಓದಿ : Viral Video: ಬಲೆಗೆ ಬಿದ್ದಾಗ ನೀ ಅರಿವೆ ಈ ಸಂಚು! ಜೋಕೆ ನೀವು ಪಾಪದ ಇಲಿಗಳೇ? 

ಆ ಮೀನು ಅದರ ತಮ್ಮನಿದ್ದಂತೆ, ತಮ್ಮನನ್ನು ಅಣ್ಣ ತಿನ್ನುವುದಿಲ್ಲ. ಯಾಕೆ ಈ ನಾಯಿಗಳಿಗೆ ಮನುಷ್ಯರಿಗಿಂತ ಮಿಗಿಲಾದ ಹೃದಯ ಇದೆಯೋ. ಈ ಮೀನು  ಮರಳಿ ಈಜುತ್ತದೆಯೆಂದು ನಿರೀಕ್ಷಿಸುತ್ತಿದ್ದೆ. ನಾನು ಮನುಷ್ಯರಿಗಿಂಥ ನಾಯಿಯನ್ನು ಹೆಚ್ಚು ಪ್ರೀತಿಸುತ್ತೇನೆ, ಅವುಗಳಿಗೆ ನನ್ನ ಹೃದಯದಲ್ಲಿ ಜಾಗ ಕೊಡುತ್ತೇನೆ… ಹೀಗೆಲ್ಲ ಪ್ರತಿಕ್ರಿಯಿಸುತ್ತಿದ್ದಾರೆ ನೆಟ್ಟಿಗರು.

ನೀವು ನಾಯಿಪ್ರೇಮಿಗಳಾಗಿದ್ದಲ್ಲಿ ಖಂಡಿತ ಈ ದೃಶ್ಯ ನಿಮ್ಮ ಕಣ್ಣಂಚನ್ನು ಈಗಾಗಲೇ ಒದ್ದೆ ಮಾಡಿರುತ್ತದೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್