AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಲೈಕ್​​ ಮಸುಕಾಗುತ್ತದೆ, ಡಿಜಿಟಲ್​ ಗುರುತು ಉಳಿಯುತ್ತದೆ; ಅಸ್ಸಾಂ ಪೊಲೀಸರ ಟ್ವೀಟ್​

Digital Footprint : 'ಸಾಮಾಜಿಕ ಜಾಲತಾಣಗಲ್ಲಿ ಗಮನ ಸೆಳೆಯಲು ನಿಮ್ಮ ಮಕ್ಕಳ ಫೋಟೋ, ವೈಯಕ್ತಿಕವನ್ನು ಸರಕಾಗಿಸಿಕೊಂಡರೆ ಅಪಾಯ ತಪ್ಪಿದ್ದಲ್ಲ' ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದೆ ಪೊಲೀಸರ ಈ ವಿನೂತನ ಪರಿಕಲ್ಪನೆ.

Viral: ಲೈಕ್​​ ಮಸುಕಾಗುತ್ತದೆ, ಡಿಜಿಟಲ್​ ಗುರುತು ಉಳಿಯುತ್ತದೆ; ಅಸ್ಸಾಂ ಪೊಲೀಸರ ಟ್ವೀಟ್​
ಅಸ್ಸಾಂ ಪೊಲೀಸರ ಪರಿಕಲ್ಪನೆಯಂತೆ ಎಐ ಕಲಾವಿದರ ಸೃಷ್ಟಿಯಲ್ಲಿ ಮೂಡಿದ ಮಕ್ಕಳು
ಶ್ರೀದೇವಿ ಕಳಸದ
|

Updated on:Jul 18, 2023 | 5:20 PM

Share

Children : ಮಗುವೊಂದು ಮಡಿಲಿಗೆ ಬರುತ್ತಿದ್ದಂತೆ ಅನೇಕ ಪೋಷಕರು ಮಗುವಿನ ಫೋಟೋಗಳೊಂದಿಗೆ  ಸಂಬಂಧಿಸಿದ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ((Social Media) ಕ್ಷಣಕ್ಷಣಕ್ಕೂ ಅಪ್​ಡೇಟ್ ಮಾಡುವ ಪ್ರವೃತ್ತಿಗೆ ಬಿದ್ದುಬಿಡುತ್ತಾರೆ. ಬಂದು ಬೀಳುವ ಲೈಕ್, ಕಮೆಂಟ್​ಗಳಿಂದ ವಾಸ್ತವನ್ನೇ ಮರೆತುಬಿಡುತ್ತಾರೆ. ಆದರೆ ಡಿಜಿಟಲ್​ ದಾಖಲೆಗಳಿಂದಾಗಿ ಮಕ್ಕಳ ಭವಿಷ್ಯದ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗಬಹುದು ಎಂಬ ಅರಿವು ಅನೇಕರಿಗೆ ಇದ್ದಂತಿಲ್ಲ. ಈ ಹಿನ್ನೆಲೆಯಲ್ಲಿ ಅಸ್ಸಾಂನ ಪೊಲೀಸ್​ ಇಲಾಖೆಯು ಸಾರ್ವಜನಿಕರಲ್ಲಿ ಈ ಕುರಿತು ಅರಿವು ಮೂಡಿಸುವುದಕ್ಕೋಸ್ಕರ ಮಾಡಿದ ಟ್ವೀಟ್ ಇದೀಗ ಜಾಲತಾಣಿಗರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

ಎಐ (Artificial Intelligence) ಮೂಲಕ ಸೃಷ್ಟಿಸಿದ ನಾಲ್ಕು ಮಕ್ಕಳ ಚಿತ್ರಗಳನ್ನು ಟ್ವೀಟ್ ಮಾಡಿದ ಅಸ್ಸಾಂ ಪೊಲೀಸರು, ‘ನಿಮ್ಮ ಮಕ್ಕಳ ಫೋಟೋಗಳಿಗೆ ಮಾಡಿದ ಲೈಕ್ಸ್​ ಮಸುಕಾಗುತ್ತವೆ. ಆದರೆ ಡಿಜಿಟಲ್​ನ ಗುರುತುಗಳು ಹಾಗೇ ಉಳಿಯುತ್ತವೆ. ಶೇರ್​ಗಳಿಂದಾಗಿ ಅಪಾಯಕ್ಕೆ ಒಳಗಾಗುವ ನಿಮ್ಮ ಮಗುವನ್ನು ರಕ್ಷಿಸಿ. ಸಾಮಾಜಿಕ ಮಾಧ್ಯಮದಲ್ಲಿ ನೀವು ಏನನ್ನು ಹಂಚಿಕೊಳ್ಳುತ್ತೀರಿ ಎನ್ನುವುದರ ಬಗ್ಗೆ ಗಮನವಿರಲಿ’ ಎಂಬ ಒಕ್ಕಣೆ ಬರೆದು #DontBeASharent ಹ್ಯಾಷ್​ಟ್ಯಾಗ್​ ಸೃಷ್ಟಿಸಿದ್ದಾರೆ.

ಇದನ್ನೂ ಓದಿ : Viral: ಐಕಿಯಾ; ಪರಭಾಷೆಗಳ ಹೇರಿಕೆ ನಿಲ್ಲಲಿ, ಕರ್ನಾಟಕದಲ್ಲಿ ಕನ್ನಡವೇ ಇರಲಿ

ಒಂದೊಂದು ಮಗುವಿನ ಚಿತ್ರಕ್ಕೂ ಮನಮುಟ್ಟುವಂತೆ ಸಾಲುಗಳನ್ನು ರಚಿಸಿದ್ದಾರೆ; ಮಕ್ಕಳು ಸಾಮಾಜಿಕ ಮಾಧ್ಯಮದ ಟ್ರೋಫಿಗಳಲ್ಲ. ಮುಗ್ಧತೆಯ ಕ್ಷಣಗಳನ್ನು ಅಂತರ್ಜಾಲವು ಕದ್ದಿದೆ. ಸಾಮಾಜಿಕ ಜಾಲತಾಣಗಲ್ಲಿ ಗಮನ ಸೆಳೆಯಲು ಅವರ ವೈಯಕ್ತಿಕವನ್ನು ಸರಕಾಗಿಸಿಕೊಳ್ಳದಿರಿ. ನಿಮ್ಮ ಮಕ್ಕಳ ಕಥೆ, ಹೇಳುವುದು ಅವರದೇ ಆಯ್ಕೆ.

ಇದನ್ನೂ ಓದಿ : Viral: ಮೈಲ್ಯಾಂಗ್​ ಆಡಿಯೋ ಸ್ಟೋರಿ ಚಾಲೇಂಜ್​ನಲ್ಲಿ ಪಾಲ್ಗೊಳ್ಳಿ ರೂ.10000 ಬಹುಮಾನ ಗೆಲ್ಲಿ

ಜು. 15ರಂದು ಇದನ್ನು ಟ್ವೀಟ್ ಮಾಡಲಾಗಿದೆ. ಈತನಕ 23,000 ಕ್ಕೂ ಹೆಚ್ಚು ಜನ ನೋಡಿದ್ದಾರೆ. ಸುಮಾರು 200 ಜನರು ರೀಟ್ವೀಟ್ ಮಾಡಿದ್ದಾರೆ. ಅತ್ಯಂತ ಸೂಕ್ಷ್ಮವಾಗಿ, ಮಾರ್ಮಿಕವಾಗಿ ಮತ್ತು ಉಪಯುಕ್ತವಾಗಿ ಈ ಸಂದೇಶವನ್ನು ನೀಡಲಾಗಿದೆ ಎಂದು ಅನೇಕರು ಪೊಲೀಸರ ಈ ಪರಿಕಲ್ಪನೆ ಮತ್ತು ನಡೆಯನ್ನು ಶ್ಲಾಘಿಸಿದ್ದಾರೆ. ಇದೇ ರೀತಿ ಎಲ್ಲ ಪೊಲೀಸ್ ಇಲಾಖೆಗಳು, ಸಾಮಾಜಿಕ ಜಾಲತಾಣಗಳಲ್ಲಿನ ಇನ್ನಿತರೇ ವಿಷಯಗಳಿಗೆ ಸಂಬಂಧಿಸಿದ ನಡೆನುಡಿಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಸಾಕಷ್ಟು ಜನರು ವಿನಂತಿಸಿಕೊಂಡಿದ್ದಾರೆ.

ಈ ಕುರಿತು ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 5:16 pm, Tue, 18 July 23

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ