AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಎಲ್ಲಾದರೂ ನಾಲ್ಕು ಕಾಲಿನ ಕೋಳಿ ನೋಡಿದ್ದೀರಾ? ಇಲ್ಲಿದೆ ನೋಡಿ ವಿಡಿಯೋ

ಮಹಾರಾಷ್ಟ್ರದ ಶಿಕ್ರಾಪುರ ಗ್ರಾಮದಲ್ಲಿ ನಾಲ್ಕು ಕಾಲಿನ ವಿಚಿತ್ರ ಕೋಳಿ ಪತ್ತೆಯಾಗಿದೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾವಿರಾರು ಜನರು ಇದನ್ನು ನೋಡಲು ಬರುತ್ತಿದ್ದಾರೆ. ಇದು ಪಾಲಿಮೆಲಿಯಾ ಎಂಬ ಅಪರೂಪದ ಅನುವಂಶಿಕ ದೋಷದಿಂದ ಉಂಟಾಗಿದೆ ಎಂದು ತಜ್ಞರು ಹೇಳಿದ್ದಾರೆ. ಈ ವಿಚಿತ್ರ ಘಟನೆ ಗ್ರಾಮಕ್ಕೆ ಪ್ರಸಿದ್ಧಿ ತಂದಿದೆ.

ನೀವು ಎಲ್ಲಾದರೂ ನಾಲ್ಕು ಕಾಲಿನ ಕೋಳಿ ನೋಡಿದ್ದೀರಾ? ಇಲ್ಲಿದೆ ನೋಡಿ ವಿಡಿಯೋ
ವೈರಲ್​​​ ವಿಡಿಯೋ
ಅಕ್ಷಯ್​ ಪಲ್ಲಮಜಲು​​
|

Updated on: Nov 19, 2025 | 1:51 PM

Share

ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಶಿರೂರು ತಾಲೂಕಿನ ಶಿಕ್ರಾಪುರ ಗ್ರಾಮದಲ್ಲಿ ನಾಲ್ಕು ಕಾಲಿನ ಕೋಳಿ (four legged chicken) ಪತ್ತೆಯಾಗಿದೆ. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ವಿಡಿಯೋ ವೈರಲ್​​ ಆಗುತ್ತಿದ್ದಂತೆ ನೂರಾರು ಜನ ಈ ಹಳ್ಳಿಯತ್ತ ಬಂದಿದ್ದಾರೆ. ನಾಲ್ಕು ಕಾಲಿನ ಕೋಳಿಯ ದೃಶ್ಯ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಪ್ರತಿ ಮನೆಯಲ್ಲೂ ಈ ಕೋಳಿಯ ಬಗ್ಗೆ ಚರ್ಚೆಯಾಗುತ್ತಿದೆ. ಬೇರೆ ಊರಿನಿಂದಲ್ಲೂ ಈ ಕೋಳಿಯನ್ನು ನೋಡಲು ಬರುತ್ತಿದ್ದಾರೆ. ಇದೀಗ ಈ ವಿಚಿತ್ರ ಘಟನೆಯಿಂದ ಶಿಕ್ರಾಪುರ ಗ್ರಾಮ ಕೂಡ ಜನಪ್ರಿಯತೆ ಪಡೆದುಕೊಂಡಿದೆ.

ಇದೀಗ ಈ ಕೋಳಿಗೆ ನಾಲ್ಕು ಕಾಲು ಬರಲು ಕಾರಣವೇನು? ಇದು ಇಲ್ಲಿಗೆ ಹೇಗೆ ಬಂತು ಎಂಬೆಲ್ಲ ಚರ್ಚೆಗಳು ನಡೆಯುತ್ತಿದೆ. ಮಾಹಿತಿಯ ಪ್ರಕಾರ, ಶಿಕ್ರಾಪುರದ ಸಿಕಂದರ್ ಶೇಖ್ ಎಂಬುವವರ ಕೋಳಿ ಅಂಗಡಿಯಲ್ಲಿ ಈ ಕೋಳಿ ಪತ್ತೆಯಾಗಿದೆ. ಪ್ರತಿದಿನ ಬೆಳಿಗ್ಗೆ ಬಾಯ್ಲರ್ ತಳಿಯ ಕೋಳಿಗಳು ಅವರ ಅಂಗಡಿಗೆ ಮಾರಾಟಕ್ಕೆ ಬರುತ್ತವೆ. ಆದರೆ ಈ ಬಾರಿ ಬಂದಿರುವ ಈ ನಾಲ್ಕು ಕಾಲಿನ ಕೋಳಿಯಿಂದ ಅಂಗಡಿಗೆ ಬರುವ ಪ್ರತಿಯೊಬ್ಬ ಗ್ರಾಹಕರ ಗಮನ ಸೆಳೆದಿದೆ.

ಇದನ್ನೂ ಓದಿ: 8 ಪ್ಯಾಕ್ ಬೆಳಸಿಕೊಳ್ಳಲು 5 ಕೋಟಿಯ ಇಂಜೆಕ್ಷನ್​​ ಪಡೆದ ಯುವಕ, ಕೊನೆಗೆ ಏನಾಯ್ತು ಗೊತ್ತಾ?

ವೈರಲ್​​ ಪೋಸ್ಟ್​​ ಇಲ್ಲಿದೆ ನೋಡಿ;

ಈ ಕೋಳಿಯಿಂದ ಸಿಕಂದರ್ ಶೇಖ್ ಅವರ ವ್ಯಾಪಾರ ಕೂಡ ಹೆಚ್ಚಾಗಿದೆ. ಇದೀಗ ಇವರ ಅಂಗಡಿಯ ಮುಂದೆ ಜನಸಂದಣಿ ಉಂಟಾಗಿದೆ. ಇನ್ನು ಈ ಬಗ್ಗೆ ಮಾತನಾಡಿದ ಸಿಕಂದರ್ ಶೇಖ್, ನಾನು ಇದೇ ಮೊದಲು ನಾಲ್ಕು ಕಾಲಿನ ಕೋಳಿಯನ್ನು ನೋಡುತ್ತಿರುವುದು. ಈ ಕೋಳಿ ಸಂಪೂರ್ಣವಾಗಿ ಬೆಳೆದಿದೆ. ನಾಲ್ಕು ಕಾಲುಗಳು ಪ್ರತ್ಯೇಕವಾಗಿದ್ದು, ಪ್ರತ್ಯೇಕ ಉಗುರುಗಳನ್ನು ಹೊಂದಿವೆ ಎಂದು ಹೇಳಿದ್ದಾರೆ.  ಇದು ಪಾಲಿಮೆಲಿಯಾ ಎಂಬ ಅಪರೂಪದ ಅನುವಂಶಿಕ ದೋಷದಿಂದ ಉಂಟಾಗಿದೆ. ಪಾಲಿಮೆಲಿಯಾ ಎಂದರೆ ಜನ್ಮಜಾತ ದೋಷ, ಈ ದೋಷದಿಂದ ಒಂದು ಪ್ರಾಣಿ ಅಥವಾ ಮನುಷ್ಯ ಎರಡಕ್ಕಿಂತ ಹೆಚ್ಚಿನ ಕೈಕಾಲುಗಳನ್ನು ಹೊಂದಿರುತ್ತದೆ. ಈ ಕಾಲುಗಳು ಯಾವುದೇ ಚಲನವಲನಗಳನ್ನು ಹೊಂದಿರುವುದಿಲ್ಲ ಎಂದು ನಿವೃತ್ತ ಸಹಾಯಕ ಪಶುವೈದ್ಯಕೀಯ ಆಯುಕ್ತ ರಾಜೇಂದ್ರ ತ್ರಿಂಬಕ್ ಹೇಳಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಮದುವೆ ಬಳಿಕ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಿಕ್ಕಣ್ಣ, ಪಾವನಾ ಭೇಟಿ
ಮದುವೆ ಬಳಿಕ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಿಕ್ಕಣ್ಣ, ಪಾವನಾ ಭೇಟಿ
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ