AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಬೆಂಗಳೂರಿನಲ್ಲಿ ಸ್ಯಾಂಡ್‌ವಿಚ್‌ ಮಾರಾಟ ಮಾಡಿ ವರ್ಷಕ್ಕೆ 50 ಕೋಟಿ ರೂ. ಗಳಿಸುತ್ತಿರುವ ಫ್ರೆಂಚ್‌ ವ್ಯಕ್ತಿ

ವಿದೇಶಕ್ಕೆ ಹೋಗಿ ಹಣ ಗಳಿಸಬೇಕೆಂಬ ಆಸೆ ಅನೇಕರಿಗೆ ಇರುತ್ತೆ ಅಲ್ವಾ. ಆದ್ರೆ ಇಲ್ಲೊಬ್ರು ಫ್ರೆಂಚ್‌ ಮೂಲದ ವ್ಯಕ್ತಿ ಭಾರತಕ್ಕೆ ಬಂದು ಕೋಟ್ಯಾಧಿಪತಿಯಾಗಿದ್ದಾರೆ. ಹೌದು ಓದಿನ ಉದ್ದೇಶಕ್ಕಾಗಿ ಭಾರತಕ್ಕೆ ಬಂದ ಇವರು ನಮ್ಮ ಬೆಂಗಳೂರಿನಲ್ಲಿ ಸ್ಯಾಂಡ್‌ವಿಚ್‌ ಮಾರಾಟ ಮಾಡಿ ಕೋಟಿ ಕೋಟಿ ಹಣವನ್ನು ಗಳಿಸುತ್ತಿದ್ದಾರೆ. ಈ ಸುದ್ದಿ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

Viral: ಬೆಂಗಳೂರಿನಲ್ಲಿ ಸ್ಯಾಂಡ್‌ವಿಚ್‌ ಮಾರಾಟ ಮಾಡಿ ವರ್ಷಕ್ಕೆ 50 ಕೋಟಿ ರೂ. ಗಳಿಸುತ್ತಿರುವ ಫ್ರೆಂಚ್‌ ವ್ಯಕ್ತಿ
ನಿಕೋಲಸ್
ಮಾಲಾಶ್ರೀ ಅಂಚನ್​
| Edited By: |

Updated on: Dec 09, 2024 | 1:55 PM

Share

ವಿದೇಶದಲ್ಲಿ ದೇಶಿಯ ಸೊಗಡಿನ ಸ್ವಾದವನ್ನು ಹರಡುವ ಭಾರತೀಯ ರೆಸ್ಟೋರೆಂಟ್‌ಗಳನ್ನು ತೆರೆದು, ಹೋಟೆಲ್‌ ಉದ್ಯಮದಲ್ಲಿ ಯಶಸ್ಸು ಕಂಡವರ ಕಥೆಗಳ ಬಗ್ಗೆ ಕೇಳಿರುತ್ತೀರಿ ಅಲ್ವಾ. ಅದೇ ರೀತಿ ಫ್ರೆಂಚ್‌ ಮೂಲದ ವ್ಯಕ್ತಿಯೊಬ್ಬರು ಭಾರತಕ್ಕೆ ಬಂದು ಸ್ಯಾಂಡ್‌ವಿಚ್‌ ಉದ್ಯಮವನ್ನು ಆರಂಭಿಸಿ ಯಶಸ್ಸನ್ನು ಕಂಡಿದ್ದಾರೆ. ಹೌದು ಉನ್ನತ ಶಿಕ್ಷಣಕ್ಕಾಗಿ ಫ್ರೆಂಚ್‌ನಿಂದ ಭಾರತಕ್ಕೆ ಬಂದ ಇವರು ನಮ್ಮ ಬೆಂಗಳೂರಿನಲ್ಲಿ ಸ್ಯಾಂಡ್‌ವಿಚ್‌ ಮಾರಾಟ ಮಾಡಿ ಕೋಟಿ ಕೋಟಿ ಹಣವನ್ನು ಗಳಿಸುತ್ತಿದ್ದಾರೆ. ಈ ಸುದ್ದಿ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಫ್ರಾನ್ಸ್‌ನ ನಿಕೋಲಸ್‌ ಗ್ರೊಸೆಮಿ ಬೆಂಗಳೂರಿನಲ್ಲಿ ಸ್ಯಾಂಡ್‌ವಿಚ್‌ ಉದ್ಯಮವನ್ನು ಆರಂಭಿಸಿ ದೊಡ್ಡ ಉದ್ಯಮಿ ಎನಿಸಿಕೊಂಡಿದ್ದಾರೆ. ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದ ಇವರು ಇಲ್ಲಿ ಪ್ಯಾರಿಸ್‌ ಪಾನಿನಿ ಎಂಬ ಸ್ಯಾಂಡ್‌ವಿಚ್‌ ಬ್ರ್ಯಾಂಡ್‌ ಪ್ರಾರಂಭಿಸಿ ಇದೀಗ ಕೋಟಿ ಕೋಟಿ ಸಂಪಾದನೆ ಮಾಡುತ್ತಿದ್ದಾರೆ. ಹೌದು ಬೆಂಗಳೂರಿನಲ್ಲಿ ಅನೇಕ ಬ್ರ್ಯಾಂಚ್‌ಗಳನ್ನು ಹೊಂದಿರುವ ಇವರು ಸ್ಯಾಂಡ್‌ವಿಚ್ ಮಾರಾಟ ಮಾಡಿಯೇ ವಾರ್ಷಿಕವಾಗಿ 50 ಕೋಟಿ ಆದಾಯ ಗಳಿಸುತ್ತಿದ್ದಾರೆ.

ಫ್ರಾನ್ಸ್‌ನ ಒಂದು ಸಾಮಾನ್ಯ ಕುಟುಂಬದಲ್ಲಿ ಜನಿಸಿದ ನಿಕೋಲಸ್‌ ತನ್ನ 22 ನೇ ವಯಸ್ಸಿನಲ್ಲಿ ಉನ್ನತ ಶಿಕ್ಷಣಕ್ಕಾಗಿ ಭಾರತಕ್ಕೆ ಬಂದರು. ಇವರ ಪೋಷಕರು ಶಿಕ್ಷಕರಾಗಿದ್ದು, ಇವರು ತಮ್ಮ ತಾಯಿಯಿಂದ ಅಡುಗೆ ಕಲಿಯುವ ಆಸಕ್ತಿಯನ್ನು ಬೆಳೆಸಿದರು. ಇದೇ ಅಡುಗೆಯ ಆಸಕ್ತಿ ಇವರನ್ನು ಇಂದು ಒಬ್ಬ ಯಶಸ್ವಿ ಉದ್ಯಮಿಯನ್ನಾಗಿ ಮಾಡಿದೆ.

ಭಾರತದಲ್ಲಿ ಸ್ನಾತ್ತಕೋತ್ತರ ಪದವಿಯನ್ನು ಮುಗಿಸಿದ ನಂತರ 2015 ರಲ್ಲಿ ಫುಡ್‌ ಟ್ರಕ್‌ ಮೂಲಕ ಸ್ಯಾಂಡ್‌ವಿಚ್‌ ಮಾರಾಟ ಮಾಡುವ ಬ್ಯುಸಿನೆಸ್‌ ಆರಂಭ ಮಾಡಿದ ಇವರು ಇದೀಗ ಬೆಂಗಳೂರಿನಲ್ಲಿ 8 ರೆಸ್ಟೋರೆಂಟ್‌ ಮತ್ತು 7 ಕ್ಲೌಡ್‌ ಕಿಚನ್‌ಗಳನ್ನು ಹೊಂದಿದ್ದಾರೆ.

ನಿಕೋಲಸ್ ಅವರಿಗೆ ಬಾಲ್ಯದಿಂದಲೂ ಸ್ಯಾಂಡ್ವಿಚ್‌ಗಳೆಂದರೆ ಬಹಳ ಅಚ್ಚುಮೆಚ್ಚು. ಈ ಕಾರಣದಿಂದಲೇ ಇವರು ಸ್ಯಾಂಡ್‌ವಿಚ್‌ ಉದ್ಯಮವನ್ನು ಆರಂಭಿಸಿದರು. ಇಂದು ಅವರ ಬ್ರ್ಯಾಂಡ್ ಪ್ಯಾರಿಸ್ ಪಾನಿನಿ ವಿವಿಧ ಸ್ಯಾಂಡ್‌ವಿಚ್‌ಗಳನ್ನು ಮಾರಾಟ ಮಾಡುತ್ತಿದೆ. 70% ಶೇಕಡದಷ್ಟು ಆನ್‌ಲೈನ್‌ನಲ್ಲಿ ಸ್ಯಾಂಡ್‌ವಿಚ್‌ ಸೇಲ್‌ ಆದ್ರೆ, ರೆಸ್ಟೋರೆಂಟ್‌ನಲ್ಲಿ 30% ನಷ್ಟು ವ್ಯಾಪಾರ ನಡೆಯುತ್ತೆ ಎಂದು ನಿಕೋಲಸ್‌ ಹೇಳಿದ್ದಾರೆ.

ಇದನ್ನೂ ಓದಿ: ಡಿಜಿಟಲ್‌ ಅರೆಸ್ಟ್; ಸೈಬರ್‌ ಜಗತ್ತಿನ ಹೊಸ ಬಗೆಯ ವಂಚನೆ ಬಗ್ಗೆ ಇರಲಿ ಎಚ್ಚರ !ಈ ಜಾಲದ ಬಗ್ಗೆ ಹಂಚಿಕೊಂಡ ನವೀನ್‌ ಶೌರಿ

ತಿಂಗಳಿಗೆ 4 ಕೋಟಿ ರೂ. ಗಳಿಸುವ ನಿಕೋಲಸ್:

ನಿಕೋಲಸ್ ತಾನು ಗಳಿಸುವ ಆದಾಯಗಳ ಬಗ್ಗೆಯೂ ಹೇಳಿದ್ದಾರೆ. ಇವರು ತಿಂಗಳಿಗೆ ನಾಲ್ಕು ಕೋಟಿ ಹಾಗೂ ವಾರ್ಷಿಕವಾಗಿ ಸುಮಾರು 50 ಕೋಟಿ ರೂ. ಹಣವನ್ನು ಗಳಿಸುತ್ತಿದ್ದಾರೆ. ಒಟ್ಟು ಆದಾಯದಲ್ಲಿ ಆಹಾರ ವೆಚ್ಚದ ಪಾಲು ಶೇ.28% ರಷ್ಟಿದೆ, 10% ರಷ್ಟು ಹಣವನ್ನು ಬಾಡಿಗೆ ಪಾವತಿಸಲು ಖರ್ಚು ಮಾಡಲಾಗುತ್ತದೆ. 35% ರಷ್ಟು ಮೊತ್ತವನ್ನು ಕೆಲಸಗಾರರಿಗೆ ಸಂಬಳ ನೀಡಲು ಖರ್ಚು ಮಾಡಲಾಗುತ್ತಿದೆ. 10% ರಷ್ಟು ಹಣವನ್ನು ಮಾರ್ಕೆಟಿಂಗ್‌ಗಾಗಿ ಖರ್ಚು ಮಾಡಲಾಗುತ್ತದೆ. ಇವೆಲ್ಲಾ ಖರ್ಚು ಕಳೆದು ಶೇಕಡಾ 15% ನಷ್ಟು ಲಾಭಂಶ ಉಳಿಯುತ್ತದೆ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ದಿಲೀಪ್ ರಾಜ್​​ ವಿಶೇಷ ನೆನಪು; ಹೇಗಿತ್ತು ನೋಡಿ ಅವರ ಜರ್ನಿ
ದಿಲೀಪ್ ರಾಜ್​​ ವಿಶೇಷ ನೆನಪು; ಹೇಗಿತ್ತು ನೋಡಿ ಅವರ ಜರ್ನಿ