AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral video: ಪ್ರವಾಹದ ಮಧ್ಯೆ ವಧುವನ್ನು ಹೆಗಲ ಮೇಲೆ ಹೊತ್ತು ನಡೆದ ವರ; ’ರೊಮ್ಯಾಂಟಿಕ್ ಕಪಲ್​’ ಎಂದ ನೆಟ್ಟಿಗರು

ಭಾರೀ ಮಳೆಯಿಂದಾಗಿ ಕಿಶನ್​ಗಂಜ್​ ಜಿಲ್ಲೆಯ ಕಂಕೈ ನದಿ ನದಿ ತುಂಬಿ ಹರಿಯುತ್ತಿದೆ. ಈಗತಾನೆ ಮದುವೆಯಾದ ಜೋಡಿ ಮನೆಗೆ ಹಿಂತಿರುಗುವಾಗ ದೋಣಿಯ ಸಹಾಯ ಬಳಸಿಕೊಂಡಿದ್ದಾರೆ. ಆದರೆ ದಡ ಸೇರಲು ಇನ್ನೇನು ಸ್ವಲ್ಪ ದೂರ ಇರುವಾಗಲೇ ದೋಣಿ ಸಿಲುಕಿಕೊಂಡಿದೆ.

Viral video: ಪ್ರವಾಹದ ಮಧ್ಯೆ ವಧುವನ್ನು ಹೆಗಲ ಮೇಲೆ ಹೊತ್ತು ನಡೆದ ವರ; ’ರೊಮ್ಯಾಂಟಿಕ್ ಕಪಲ್​’ ಎಂದ ನೆಟ್ಟಿಗರು
ಪ್ರವಾಹದ ಮಧ್ಯೆ ವಧುವನ್ನು ಹೆಗಲ ಮೇಲೆ ಹೊತ್ತು ನಡೆದ ವರ
Follow us
TV9 Web
| Updated By: shruti hegde

Updated on: Jun 30, 2021 | 11:04 AM

ಮಳೆಯ ಆರ್ಭಟ ಜೋರಾಗಿಯೇ ಇದೆ. ಅದೆಷ್ಟೋ ಜನರು ಅತಿಯಾದ ಮಳೆಯಿಂದಾದ ಪ್ರವಾಹಕ್ಕೆ ಸಿಲುಕಿದ್ದಾರೆ. ಇನ್ನೆಷ್ಟೋ ಜನರ ಮನೆಗಳು ಕುಸಿದು ಬಿದ್ದಿವೆ. ಮಳೆಯ ಆರ್ಭಟದಿಂದಾದ ಅವಘಡಗಳು ಒಂದಲ್ಲ.. ಎರಡಲ್ಲ. ಪ್ರಕೃತಿ ವಿಕೋಪದ ಮಧ್ಯೆ ಜನರು ನಲುಗಿ ಹೋಗಿದ್ದಾರೆ. ಈ ನಡುವೆಯೇ ಈಗ ತಾನೆ ಮದುವೆಯಾದ ನವಜೋಡಿಗಳು ಮನೆಗೆ ಹಿಂತಿರುಗುವಾಗ ತುಂಬಿ ಹರಿಯುತ್ತಿರುವ ನದಿಯಿಂದ ದಾಟುವುದಕ್ಕೆ ಕಷ್ಪಡುವಂತಹ ಪರಿಸ್ಥಿತಿ ಎದುರಾಗಿದೆ. ಅದು ಹೇಗೋ ಕಷ್ಟಪಟ್ಟು ನವಜೋಡಿಗಳು ಸುರಕ್ಷಿತವಾಗಿ ನದಿದಾಟಿ ಮನೆ ತಲುಪಿದ್ದಾರೆ. ಮಧುವಿನ ರಕ್ಷಣೆಗಾಗಿ ವರ ತನ್ನ ಹೆಗಲ ಮೇಲೆ ಸಂಗಾತಿಯನ್ನು ಹೊತ್ತುಕೊಂಡು ನದಿ ದಾಟುತ್ತಿರುವ ವಿಡಿಯೋ ಇದೀಗ ಭಾರೀ ಸುದ್ದಿಯಲ್ಲಿದೆ.

ಭಾರೀ ಮಳೆಯಿಂದಾಗಿ ಕಿಶನ್​ಗಂಜ್​ ಜಿಲ್ಲೆಯ ಕಂಕೈ ನದಿ ನದಿ ತುಂಬಿ ಹರಿಯುತ್ತಿದೆ. ಈಗತಾನೆ ಮದುವೆಯಾದ ಜೋಡಿ ಮನೆಗೆ ಹಿಂತಿರುಗುವಾಗ ದೋಣಿಯ ಸಹಾಯ ಬಳಸಿಕೊಂಡಿದ್ದಾರೆ. ಆದರೆ ದಡ ಸೇರಲು ಇನ್ನೇನು ಸ್ವಲ್ಪ ದೂರ ಇರುವಾಗಲೇ ದೋಣಿ ಸಿಲುಕಿಕೊಂಡಿದೆ. ಮದುವೆಯ ಉಡುಗೆಯಲ್ಲೇ ಇದ್ದ ವರನು ವಧುವನ್ನು ಹೆಗಲ ಮೇಲೆ ಹೊತ್ತು ದಡ ತಲುಪಿಸಿದ್ದಾರೆ. ಜತೆಯಲ್ಲಿದ್ದ ಕುಟುಂಬ ಅವರನ್ನು ಪ್ರೋತ್ಸಾಗಿಸಿದೆ.

ವರ ಶಿವ ಕುಮಾರ್​ ವಿವಾಹದ ಮೆರವಣಿಗೆಯೊಂದಿಗೆ ಮನೆಗೆ ಹಿಂತಿರುಗುತ್ತಿದ್ದರು. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ‘ರೊಮ್ಯಾಂಟಿಕ್​ ಕಪಲ್​’ ಎಂದು ಮೆಚ್ಚಿಕೊಂಡಿದ್ದಾರೆ. ಇನ್ನು ಕೆಲವರು, ಜನರಿಗೆ ಓಡಾಡಲು ಸೇತುವೆಯ ಅವಶ್ಯಕತೆ ಇದೆ ಎಂದು ಹೇಳಿದರು. ಜೋರಾಗಿ ಮಳೆ ಸುರಿದು ಪ್ರವಾಹದ ಪರಿಣಾಮ ವರ ತನ್ನ ಸಂಗಾತಿಯನ್ನು ಹೆಗಲ ಮೇಲೆ ಹೊತ್ತು ನದಿ ದಾಟಿದ್ದಾನೆ ಎಂದು ವಿಡಿಯೋ ನೋಡಿದ ನೆಟ್ಟಿಗರು ಈ ನವ ಜೋಡಿಗಳನ್ನು ಮೆಚ್ಚಿಕೊಂಡಿದ್ದಾರೆ.

ಇದನ್ನೂ ಓದಿ:

Karnataka Weather: ಕರ್ನಾಟಕದ ಕರಾವಳಿ ತೀರದಲ್ಲಿ ಮುಂದುವರಿಯಲಿದೆ ವರುಣಾರ್ಭಟ: ಈಶಾನ್ಯ ರಾಜ್ಯಗಳಲ್ಲಿ ಭಾರಿ ಮಳೆ, ಪ್ರವಾಹದ ಎಚ್ಚರಿಕೆ

Viral Video: ಸೀರೆಯುಟ್ಟು ಪ್ರೇಯಸಿಯ ಮನೆಗೆ ಹೋದ ಭೂಪ; ಹಿಗ್ಗಾಮುಗ್ಗಾ ಥಳಿಸಿ ವಾಪಾಸ್ಸು ಕಳಿಸಿದ ಹುಡುಗಿ ಮನೆಯವರು

ಪ್ರಧಾನಿ ಮೋದಿ ತೆಗೆದುಕೊಳ್ಳುತ್ತಿರುವ ಕ್ರಮಗಳ ಜೊತೆಗಿದ್ದೇವೆ: ಮುಸಲ್ಮಾನರು
ಪ್ರಧಾನಿ ಮೋದಿ ತೆಗೆದುಕೊಳ್ಳುತ್ತಿರುವ ಕ್ರಮಗಳ ಜೊತೆಗಿದ್ದೇವೆ: ಮುಸಲ್ಮಾನರು
ದಿನೇದಿನೆ ಅತೀವ ಹಾನಿಗೊಳಗಾಗುತ್ತಿದ್ದರೂ ಬುದ್ಧಿ ಕಲಿಯದ ಪಾಕಿಸ್ತಾನ
ದಿನೇದಿನೆ ಅತೀವ ಹಾನಿಗೊಳಗಾಗುತ್ತಿದ್ದರೂ ಬುದ್ಧಿ ಕಲಿಯದ ಪಾಕಿಸ್ತಾನ
ಕಾಶ್ಮೀರ ಗಡಿಯಲ್ಲಿ ಉಗ್ರ ನೆಲೆಗಳು ಉಡೀಸ್: ಸೇನೆಯ ಅಧಿಕೃತ ವಿಡಿಯೋ ಇಲ್ಲಿದೆ
ಕಾಶ್ಮೀರ ಗಡಿಯಲ್ಲಿ ಉಗ್ರ ನೆಲೆಗಳು ಉಡೀಸ್: ಸೇನೆಯ ಅಧಿಕೃತ ವಿಡಿಯೋ ಇಲ್ಲಿದೆ
ಕೇಂದ್ರ ಗೃಹ ಇಲಾಖೆಯಿಂದ ಕರ್ನಾಟಕಕ್ಕೂ ಎಚ್ಚರಿಕೆ ಸೂಚನೆ ಬಂದಿದೆ: ಡಿಕೆಶಿ
ಕೇಂದ್ರ ಗೃಹ ಇಲಾಖೆಯಿಂದ ಕರ್ನಾಟಕಕ್ಕೂ ಎಚ್ಚರಿಕೆ ಸೂಚನೆ ಬಂದಿದೆ: ಡಿಕೆಶಿ
ಇವತ್ತು ಸಾಯಂಕಾಲ ಸಿಎಂ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ: ಪರಮೇಶ್ವರ್
ಇವತ್ತು ಸಾಯಂಕಾಲ ಸಿಎಂ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ: ಪರಮೇಶ್ವರ್
ಮನೆ ಹಾಳಾದರೂ ಪಾಕಿಸ್ತಾನಕ್ಕೆ ಸದ್ಬುದ್ಧಿ ಬರಲಿ ಎನ್ನುವ ಮನೆ ಯಜಮಾನಿ
ಮನೆ ಹಾಳಾದರೂ ಪಾಕಿಸ್ತಾನಕ್ಕೆ ಸದ್ಬುದ್ಧಿ ಬರಲಿ ಎನ್ನುವ ಮನೆ ಯಜಮಾನಿ
Live: ರಕ್ಷಣಾ, ವಿದೇಶಾಂಗ ಸಚಿವಾಲಯ ತುರ್ತು ಸುದ್ದಿಗೋಷ್ಠಿಯ ನೇರ ಪ್ರಸಾರ
Live: ರಕ್ಷಣಾ, ವಿದೇಶಾಂಗ ಸಚಿವಾಲಯ ತುರ್ತು ಸುದ್ದಿಗೋಷ್ಠಿಯ ನೇರ ಪ್ರಸಾರ
ಹೇಗಿದೆ ನೋಡಿ ‘ಭರ್ಜರಿ ಬ್ಯಾಚುಲರ್ಸ್​’ ಹಳ್ಳಿ ಜೀವನ; ಸಾರ್ಥಕತೆಯ ಭಾವನೆ
ಹೇಗಿದೆ ನೋಡಿ ‘ಭರ್ಜರಿ ಬ್ಯಾಚುಲರ್ಸ್​’ ಹಳ್ಳಿ ಜೀವನ; ಸಾರ್ಥಕತೆಯ ಭಾವನೆ
ಅಮೃತಸರ ಬಳಿ ಪಾಕಿಸ್ತಾನದ ಛಿದ್ರಗೊಂಡ ಡ್ರೋಣ್ ಪತ್ತೆ, ಪರಿಶೀಲನೆ
ಅಮೃತಸರ ಬಳಿ ಪಾಕಿಸ್ತಾನದ ಛಿದ್ರಗೊಂಡ ಡ್ರೋಣ್ ಪತ್ತೆ, ಪರಿಶೀಲನೆ
ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?
ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?