Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral video: ಪ್ರವಾಹದ ಮಧ್ಯೆ ವಧುವನ್ನು ಹೆಗಲ ಮೇಲೆ ಹೊತ್ತು ನಡೆದ ವರ; ’ರೊಮ್ಯಾಂಟಿಕ್ ಕಪಲ್​’ ಎಂದ ನೆಟ್ಟಿಗರು

ಭಾರೀ ಮಳೆಯಿಂದಾಗಿ ಕಿಶನ್​ಗಂಜ್​ ಜಿಲ್ಲೆಯ ಕಂಕೈ ನದಿ ನದಿ ತುಂಬಿ ಹರಿಯುತ್ತಿದೆ. ಈಗತಾನೆ ಮದುವೆಯಾದ ಜೋಡಿ ಮನೆಗೆ ಹಿಂತಿರುಗುವಾಗ ದೋಣಿಯ ಸಹಾಯ ಬಳಸಿಕೊಂಡಿದ್ದಾರೆ. ಆದರೆ ದಡ ಸೇರಲು ಇನ್ನೇನು ಸ್ವಲ್ಪ ದೂರ ಇರುವಾಗಲೇ ದೋಣಿ ಸಿಲುಕಿಕೊಂಡಿದೆ.

Viral video: ಪ್ರವಾಹದ ಮಧ್ಯೆ ವಧುವನ್ನು ಹೆಗಲ ಮೇಲೆ ಹೊತ್ತು ನಡೆದ ವರ; ’ರೊಮ್ಯಾಂಟಿಕ್ ಕಪಲ್​’ ಎಂದ ನೆಟ್ಟಿಗರು
ಪ್ರವಾಹದ ಮಧ್ಯೆ ವಧುವನ್ನು ಹೆಗಲ ಮೇಲೆ ಹೊತ್ತು ನಡೆದ ವರ
Follow us
TV9 Web
| Updated By: shruti hegde

Updated on: Jun 30, 2021 | 11:04 AM

ಮಳೆಯ ಆರ್ಭಟ ಜೋರಾಗಿಯೇ ಇದೆ. ಅದೆಷ್ಟೋ ಜನರು ಅತಿಯಾದ ಮಳೆಯಿಂದಾದ ಪ್ರವಾಹಕ್ಕೆ ಸಿಲುಕಿದ್ದಾರೆ. ಇನ್ನೆಷ್ಟೋ ಜನರ ಮನೆಗಳು ಕುಸಿದು ಬಿದ್ದಿವೆ. ಮಳೆಯ ಆರ್ಭಟದಿಂದಾದ ಅವಘಡಗಳು ಒಂದಲ್ಲ.. ಎರಡಲ್ಲ. ಪ್ರಕೃತಿ ವಿಕೋಪದ ಮಧ್ಯೆ ಜನರು ನಲುಗಿ ಹೋಗಿದ್ದಾರೆ. ಈ ನಡುವೆಯೇ ಈಗ ತಾನೆ ಮದುವೆಯಾದ ನವಜೋಡಿಗಳು ಮನೆಗೆ ಹಿಂತಿರುಗುವಾಗ ತುಂಬಿ ಹರಿಯುತ್ತಿರುವ ನದಿಯಿಂದ ದಾಟುವುದಕ್ಕೆ ಕಷ್ಪಡುವಂತಹ ಪರಿಸ್ಥಿತಿ ಎದುರಾಗಿದೆ. ಅದು ಹೇಗೋ ಕಷ್ಟಪಟ್ಟು ನವಜೋಡಿಗಳು ಸುರಕ್ಷಿತವಾಗಿ ನದಿದಾಟಿ ಮನೆ ತಲುಪಿದ್ದಾರೆ. ಮಧುವಿನ ರಕ್ಷಣೆಗಾಗಿ ವರ ತನ್ನ ಹೆಗಲ ಮೇಲೆ ಸಂಗಾತಿಯನ್ನು ಹೊತ್ತುಕೊಂಡು ನದಿ ದಾಟುತ್ತಿರುವ ವಿಡಿಯೋ ಇದೀಗ ಭಾರೀ ಸುದ್ದಿಯಲ್ಲಿದೆ.

ಭಾರೀ ಮಳೆಯಿಂದಾಗಿ ಕಿಶನ್​ಗಂಜ್​ ಜಿಲ್ಲೆಯ ಕಂಕೈ ನದಿ ನದಿ ತುಂಬಿ ಹರಿಯುತ್ತಿದೆ. ಈಗತಾನೆ ಮದುವೆಯಾದ ಜೋಡಿ ಮನೆಗೆ ಹಿಂತಿರುಗುವಾಗ ದೋಣಿಯ ಸಹಾಯ ಬಳಸಿಕೊಂಡಿದ್ದಾರೆ. ಆದರೆ ದಡ ಸೇರಲು ಇನ್ನೇನು ಸ್ವಲ್ಪ ದೂರ ಇರುವಾಗಲೇ ದೋಣಿ ಸಿಲುಕಿಕೊಂಡಿದೆ. ಮದುವೆಯ ಉಡುಗೆಯಲ್ಲೇ ಇದ್ದ ವರನು ವಧುವನ್ನು ಹೆಗಲ ಮೇಲೆ ಹೊತ್ತು ದಡ ತಲುಪಿಸಿದ್ದಾರೆ. ಜತೆಯಲ್ಲಿದ್ದ ಕುಟುಂಬ ಅವರನ್ನು ಪ್ರೋತ್ಸಾಗಿಸಿದೆ.

ವರ ಶಿವ ಕುಮಾರ್​ ವಿವಾಹದ ಮೆರವಣಿಗೆಯೊಂದಿಗೆ ಮನೆಗೆ ಹಿಂತಿರುಗುತ್ತಿದ್ದರು. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ‘ರೊಮ್ಯಾಂಟಿಕ್​ ಕಪಲ್​’ ಎಂದು ಮೆಚ್ಚಿಕೊಂಡಿದ್ದಾರೆ. ಇನ್ನು ಕೆಲವರು, ಜನರಿಗೆ ಓಡಾಡಲು ಸೇತುವೆಯ ಅವಶ್ಯಕತೆ ಇದೆ ಎಂದು ಹೇಳಿದರು. ಜೋರಾಗಿ ಮಳೆ ಸುರಿದು ಪ್ರವಾಹದ ಪರಿಣಾಮ ವರ ತನ್ನ ಸಂಗಾತಿಯನ್ನು ಹೆಗಲ ಮೇಲೆ ಹೊತ್ತು ನದಿ ದಾಟಿದ್ದಾನೆ ಎಂದು ವಿಡಿಯೋ ನೋಡಿದ ನೆಟ್ಟಿಗರು ಈ ನವ ಜೋಡಿಗಳನ್ನು ಮೆಚ್ಚಿಕೊಂಡಿದ್ದಾರೆ.

ಇದನ್ನೂ ಓದಿ:

Karnataka Weather: ಕರ್ನಾಟಕದ ಕರಾವಳಿ ತೀರದಲ್ಲಿ ಮುಂದುವರಿಯಲಿದೆ ವರುಣಾರ್ಭಟ: ಈಶಾನ್ಯ ರಾಜ್ಯಗಳಲ್ಲಿ ಭಾರಿ ಮಳೆ, ಪ್ರವಾಹದ ಎಚ್ಚರಿಕೆ

Viral Video: ಸೀರೆಯುಟ್ಟು ಪ್ರೇಯಸಿಯ ಮನೆಗೆ ಹೋದ ಭೂಪ; ಹಿಗ್ಗಾಮುಗ್ಗಾ ಥಳಿಸಿ ವಾಪಾಸ್ಸು ಕಳಿಸಿದ ಹುಡುಗಿ ಮನೆಯವರು

ಉಪ ಚುನಾವಣೆಯಲ್ಲಿ ಎಲ್ಲ ಸಮುದಾಯ ಕಾಂಗ್ರೆಸ್​ಗೆ ಮತ ನೀಡಿದೆ: ಸಿದ್ದರಾಮಯ್ಯ
ಉಪ ಚುನಾವಣೆಯಲ್ಲಿ ಎಲ್ಲ ಸಮುದಾಯ ಕಾಂಗ್ರೆಸ್​ಗೆ ಮತ ನೀಡಿದೆ: ಸಿದ್ದರಾಮಯ್ಯ
‘ಪುನೀತ್ ಕೊಟ್ಟ ಪ್ರೀತಿಯ ಭಿಕ್ಷೆ’; ಅಪ್ಪು ಬಗ್ಗೆ ಅನುಶ್ರೀ ಪ್ರೀತಿಯ ಮಾತು
‘ಪುನೀತ್ ಕೊಟ್ಟ ಪ್ರೀತಿಯ ಭಿಕ್ಷೆ’; ಅಪ್ಪು ಬಗ್ಗೆ ಅನುಶ್ರೀ ಪ್ರೀತಿಯ ಮಾತು
ಬಿಜೆಪಿ ನಾಯಕರು ಹೇಳುವ ಸುಳ್ಳುಗಳನ್ನು ನಂಬಲು ಜನ ತಯಾರಿಲ್ಲ: ಸಿದ್ದರಾಮಯ್ಯ
ಬಿಜೆಪಿ ನಾಯಕರು ಹೇಳುವ ಸುಳ್ಳುಗಳನ್ನು ನಂಬಲು ಜನ ತಯಾರಿಲ್ಲ: ಸಿದ್ದರಾಮಯ್ಯ
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ತಂದೆ ನಿಧನ, ಪ್ರಧಾನಿ ಮೋದಿ ಅಂತಿಮ ನಮನ
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ತಂದೆ ನಿಧನ, ಪ್ರಧಾನಿ ಮೋದಿ ಅಂತಿಮ ನಮನ
ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ4 ರಷ್ಟು ಮೀಸಲಾತಿ ಅಸವಿಂಧಾನಿಕ: ಸೂರ್ಯ
ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ4 ರಷ್ಟು ಮೀಸಲಾತಿ ಅಸವಿಂಧಾನಿಕ: ಸೂರ್ಯ
ಕೇಂದ್ರ ನೀಡಿರೋದು ₹ 10,000 ಕೋಟಿ ಅಲ್ಲ, ₹1030 ಕೋಟಿ ಮಾತ್ರ: ಸಿದ್ದರಾಮಯ್ಯ
ಕೇಂದ್ರ ನೀಡಿರೋದು ₹ 10,000 ಕೋಟಿ ಅಲ್ಲ, ₹1030 ಕೋಟಿ ಮಾತ್ರ: ಸಿದ್ದರಾಮಯ್ಯ
ಕಾರಿಂದ ಇಳಿಯುವ ಮೊದಲು ಸುಮಾರು ಹೊತ್ತು ಫೋನಲ್ಲಿ ಸಿಎಂ ಮಾತು!
ಕಾರಿಂದ ಇಳಿಯುವ ಮೊದಲು ಸುಮಾರು ಹೊತ್ತು ಫೋನಲ್ಲಿ ಸಿಎಂ ಮಾತು!
ಮಕ್ಕಳ ಜೊತೆ ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ ಪುನೀತ್
ಮಕ್ಕಳ ಜೊತೆ ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ ಪುನೀತ್
ಪುನೀತ್ ತರಹೇವಾರಿ ಅಭಿಮಾನಿಗಳು, ಆದರೆ ಇಂಥ ಅಭಿಮಾನಿ ಪ್ರಾಯಶಃ ಕಾಣಸಿಗರು!
ಪುನೀತ್ ತರಹೇವಾರಿ ಅಭಿಮಾನಿಗಳು, ಆದರೆ ಇಂಥ ಅಭಿಮಾನಿ ಪ್ರಾಯಶಃ ಕಾಣಸಿಗರು!
ನಟನ ಹೆಸರಲ್ಲಿ ಅನ್ನದಾನ ಕಾರ್ಯಕ್ರಮ ಏರ್ಪಡಿಸಿರುವ ಬೀದಿಬದಿ ವ್ಯಾಪಾರಿಗಳು
ನಟನ ಹೆಸರಲ್ಲಿ ಅನ್ನದಾನ ಕಾರ್ಯಕ್ರಮ ಏರ್ಪಡಿಸಿರುವ ಬೀದಿಬದಿ ವ್ಯಾಪಾರಿಗಳು