AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral video: ಪ್ರವಾಹದ ಮಧ್ಯೆ ವಧುವನ್ನು ಹೆಗಲ ಮೇಲೆ ಹೊತ್ತು ನಡೆದ ವರ; ’ರೊಮ್ಯಾಂಟಿಕ್ ಕಪಲ್​’ ಎಂದ ನೆಟ್ಟಿಗರು

ಭಾರೀ ಮಳೆಯಿಂದಾಗಿ ಕಿಶನ್​ಗಂಜ್​ ಜಿಲ್ಲೆಯ ಕಂಕೈ ನದಿ ನದಿ ತುಂಬಿ ಹರಿಯುತ್ತಿದೆ. ಈಗತಾನೆ ಮದುವೆಯಾದ ಜೋಡಿ ಮನೆಗೆ ಹಿಂತಿರುಗುವಾಗ ದೋಣಿಯ ಸಹಾಯ ಬಳಸಿಕೊಂಡಿದ್ದಾರೆ. ಆದರೆ ದಡ ಸೇರಲು ಇನ್ನೇನು ಸ್ವಲ್ಪ ದೂರ ಇರುವಾಗಲೇ ದೋಣಿ ಸಿಲುಕಿಕೊಂಡಿದೆ.

Viral video: ಪ್ರವಾಹದ ಮಧ್ಯೆ ವಧುವನ್ನು ಹೆಗಲ ಮೇಲೆ ಹೊತ್ತು ನಡೆದ ವರ; ’ರೊಮ್ಯಾಂಟಿಕ್ ಕಪಲ್​’ ಎಂದ ನೆಟ್ಟಿಗರು
ಪ್ರವಾಹದ ಮಧ್ಯೆ ವಧುವನ್ನು ಹೆಗಲ ಮೇಲೆ ಹೊತ್ತು ನಡೆದ ವರ
TV9 Web
| Edited By: |

Updated on: Jun 30, 2021 | 11:04 AM

Share

ಮಳೆಯ ಆರ್ಭಟ ಜೋರಾಗಿಯೇ ಇದೆ. ಅದೆಷ್ಟೋ ಜನರು ಅತಿಯಾದ ಮಳೆಯಿಂದಾದ ಪ್ರವಾಹಕ್ಕೆ ಸಿಲುಕಿದ್ದಾರೆ. ಇನ್ನೆಷ್ಟೋ ಜನರ ಮನೆಗಳು ಕುಸಿದು ಬಿದ್ದಿವೆ. ಮಳೆಯ ಆರ್ಭಟದಿಂದಾದ ಅವಘಡಗಳು ಒಂದಲ್ಲ.. ಎರಡಲ್ಲ. ಪ್ರಕೃತಿ ವಿಕೋಪದ ಮಧ್ಯೆ ಜನರು ನಲುಗಿ ಹೋಗಿದ್ದಾರೆ. ಈ ನಡುವೆಯೇ ಈಗ ತಾನೆ ಮದುವೆಯಾದ ನವಜೋಡಿಗಳು ಮನೆಗೆ ಹಿಂತಿರುಗುವಾಗ ತುಂಬಿ ಹರಿಯುತ್ತಿರುವ ನದಿಯಿಂದ ದಾಟುವುದಕ್ಕೆ ಕಷ್ಪಡುವಂತಹ ಪರಿಸ್ಥಿತಿ ಎದುರಾಗಿದೆ. ಅದು ಹೇಗೋ ಕಷ್ಟಪಟ್ಟು ನವಜೋಡಿಗಳು ಸುರಕ್ಷಿತವಾಗಿ ನದಿದಾಟಿ ಮನೆ ತಲುಪಿದ್ದಾರೆ. ಮಧುವಿನ ರಕ್ಷಣೆಗಾಗಿ ವರ ತನ್ನ ಹೆಗಲ ಮೇಲೆ ಸಂಗಾತಿಯನ್ನು ಹೊತ್ತುಕೊಂಡು ನದಿ ದಾಟುತ್ತಿರುವ ವಿಡಿಯೋ ಇದೀಗ ಭಾರೀ ಸುದ್ದಿಯಲ್ಲಿದೆ.

ಭಾರೀ ಮಳೆಯಿಂದಾಗಿ ಕಿಶನ್​ಗಂಜ್​ ಜಿಲ್ಲೆಯ ಕಂಕೈ ನದಿ ನದಿ ತುಂಬಿ ಹರಿಯುತ್ತಿದೆ. ಈಗತಾನೆ ಮದುವೆಯಾದ ಜೋಡಿ ಮನೆಗೆ ಹಿಂತಿರುಗುವಾಗ ದೋಣಿಯ ಸಹಾಯ ಬಳಸಿಕೊಂಡಿದ್ದಾರೆ. ಆದರೆ ದಡ ಸೇರಲು ಇನ್ನೇನು ಸ್ವಲ್ಪ ದೂರ ಇರುವಾಗಲೇ ದೋಣಿ ಸಿಲುಕಿಕೊಂಡಿದೆ. ಮದುವೆಯ ಉಡುಗೆಯಲ್ಲೇ ಇದ್ದ ವರನು ವಧುವನ್ನು ಹೆಗಲ ಮೇಲೆ ಹೊತ್ತು ದಡ ತಲುಪಿಸಿದ್ದಾರೆ. ಜತೆಯಲ್ಲಿದ್ದ ಕುಟುಂಬ ಅವರನ್ನು ಪ್ರೋತ್ಸಾಗಿಸಿದೆ.

ವರ ಶಿವ ಕುಮಾರ್​ ವಿವಾಹದ ಮೆರವಣಿಗೆಯೊಂದಿಗೆ ಮನೆಗೆ ಹಿಂತಿರುಗುತ್ತಿದ್ದರು. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ‘ರೊಮ್ಯಾಂಟಿಕ್​ ಕಪಲ್​’ ಎಂದು ಮೆಚ್ಚಿಕೊಂಡಿದ್ದಾರೆ. ಇನ್ನು ಕೆಲವರು, ಜನರಿಗೆ ಓಡಾಡಲು ಸೇತುವೆಯ ಅವಶ್ಯಕತೆ ಇದೆ ಎಂದು ಹೇಳಿದರು. ಜೋರಾಗಿ ಮಳೆ ಸುರಿದು ಪ್ರವಾಹದ ಪರಿಣಾಮ ವರ ತನ್ನ ಸಂಗಾತಿಯನ್ನು ಹೆಗಲ ಮೇಲೆ ಹೊತ್ತು ನದಿ ದಾಟಿದ್ದಾನೆ ಎಂದು ವಿಡಿಯೋ ನೋಡಿದ ನೆಟ್ಟಿಗರು ಈ ನವ ಜೋಡಿಗಳನ್ನು ಮೆಚ್ಚಿಕೊಂಡಿದ್ದಾರೆ.

ಇದನ್ನೂ ಓದಿ:

Karnataka Weather: ಕರ್ನಾಟಕದ ಕರಾವಳಿ ತೀರದಲ್ಲಿ ಮುಂದುವರಿಯಲಿದೆ ವರುಣಾರ್ಭಟ: ಈಶಾನ್ಯ ರಾಜ್ಯಗಳಲ್ಲಿ ಭಾರಿ ಮಳೆ, ಪ್ರವಾಹದ ಎಚ್ಚರಿಕೆ

Viral Video: ಸೀರೆಯುಟ್ಟು ಪ್ರೇಯಸಿಯ ಮನೆಗೆ ಹೋದ ಭೂಪ; ಹಿಗ್ಗಾಮುಗ್ಗಾ ಥಳಿಸಿ ವಾಪಾಸ್ಸು ಕಳಿಸಿದ ಹುಡುಗಿ ಮನೆಯವರು

ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
ಹೇಗಿದೆ ನೋಡಿ ‘ಗಿಚ್ಚಿ ಗಿಲಿಗಿಲಿ’ ಜೂನಿಯರ್ ಟೀಂ
ಹೇಗಿದೆ ನೋಡಿ ‘ಗಿಚ್ಚಿ ಗಿಲಿಗಿಲಿ’ ಜೂನಿಯರ್ ಟೀಂ
3 ಮದುವೆಯಾಗಿ ಲಕ್ಷಾಂತರ ರೂ ಪಟಾಯಿಸಿದ ಮಹಿಳೆಯ ಮೋಸದಾಟ ಬಿಚ್ಚಿಟ್ಟ 2ನೇ ಗಂಡ!
3 ಮದುವೆಯಾಗಿ ಲಕ್ಷಾಂತರ ರೂ ಪಟಾಯಿಸಿದ ಮಹಿಳೆಯ ಮೋಸದಾಟ ಬಿಚ್ಚಿಟ್ಟ 2ನೇ ಗಂಡ!