AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕಲಿಯುಗದಲ್ಲೂ ನಡೆಯಿತು ಸೀತಾಸ್ವಯಂವರ; ಬಿಲ್ಲು ಎತ್ತಿ ಮದುಮಗಳನ್ನು ವರಿಸಿದ ಹುಡುಗ! ವಿಡಿಯೋ ನೋಡಿ

ಮದುಮಗಳು ಮೊದಲು, ವಿವಾಹ ವೇದಿಕೆಯಲ್ಲಿ ಎರಡೂ ಕೈಜೋಡಿಸಿ ಶಿವನನ್ನು ಪ್ರಾರ್ಥನೆ ಮಾಡಿದ್ದಾಳೆ. ಬಳಿಕ, ಹುಡುಗ ಬಿಲ್ಲು ಎತ್ತಿ ಮುರಿದಿದ್ದಾನೆ.‌ ಧನಸ್ಸು ಎತ್ತಿ ಹುಡುಗಿಯನ್ನು ಮದುವೆಯಾಗಿದ್ದಾನೆ.‌

Viral Video: ಕಲಿಯುಗದಲ್ಲೂ ನಡೆಯಿತು ಸೀತಾಸ್ವಯಂವರ; ಬಿಲ್ಲು ಎತ್ತಿ ಮದುಮಗಳನ್ನು ವರಿಸಿದ ಹುಡುಗ! ವಿಡಿಯೋ ನೋಡಿ
ಕಲಿಯುಗದಲ್ಲೂ ಸೀತಾಸ್ವಯಂವರ
TV9 Web
| Edited By: |

Updated on: Jun 29, 2021 | 7:31 PM

Share

ಮದುವೆ ಸಮಾರಂಭ ಬಹಳ ವಿಜೃಂಭಣೆಯಿಂದ, ವಿಶೇಷವಾಗಿ ನಡೆಸಬೇಕು ಎಂಬುದು ಬಹುತೇಕ ಹೆತ್ತವರ ಮತ್ತು ಮದುಮಕ್ಕಳ ಕನಸು ಆಗಿರುತ್ತದೆ. ಎಲ್ಲೂ ಆಗದಂತಹ ರೀತಿಯಲ್ಲಿ ನಾವು ಮದುವೆ ಕಾರ್ಯಕ್ರಮ ಮಾಡಬೇಕು ಎಂದು ಆಸೆ ಇರುತ್ತದೆ. ಇತ್ತೀಚೆಗಂತೂ ಒಂದಿಲ್ಲೊಂದು ವಿಶೇಷ ಅಂಶಗಳನ್ನು ನಾವು ಬಹುತೇಕ ಮದುವೆಗಳಲ್ಲಿ ಕಾಣುತ್ತೇವೆ. ಅಂತಹುದೇ ಒಂದು ಘಟನೆ ಇಲ್ಲಿ ತಿಳಿದುಬಂದಿದೆ.

ಸೀತಾಸ್ವಯಂವರ ಹೋಲಿಕೆಯ ಘಟನೆಯೊಂದು ಬಿಹಾರದ ಸರನ್ ಜಿಲ್ಲೆಯಲ್ಲಿ ನಡೆದಿದೆ. ಕಲಿಯುಗದಲ್ಲಿ ತ್ರೇತಾಯುಗದಲ್ಲಿ‌ ನಡೆದಂತಹ ಘಟನೆ ನಡೆದಿದೆ. ಮದುಮಗ ಬಿಲ್ಲು ಎತ್ತಿ ಮದುವೆಯಾಗಿದ್ದಾರೆ. ಸರನ್ ಜಿಲ್ಲೆಯ ಸೋನ್‌ಪುರ್ ಬ್ಲಾಕ್‌ನ ಸಬಲ್‌ಪುರ್ ಈಸ್ಟ್ ವಿಭಾಗದಲ್ಲಿ ಈ ರೀತಿ ಮದುವೆ ನಡೆದಿದೆ.

ಮದುಮಗಳು ಮೊದಲು, ವಿವಾಹ ವೇದಿಕೆಯಲ್ಲಿ ಎರಡೂ ಕೈಜೋಡಿಸಿ ಶಿವನನ್ನು ಪ್ರಾರ್ಥನೆ ಮಾಡಿದ್ದಾಳೆ. ಬಳಿಕ, ಹುಡುಗ ಬಿಲ್ಲು ಎತ್ತಿ ಮುರಿದಿದ್ದಾನೆ.‌ ಧನಸ್ಸು ಎತ್ತಿ ಹುಡುಗಿಯನ್ನು ಮದುವೆಯಾಗಿದ್ದಾನೆ.‌ ಈ ಸಂದರ್ಭವನ್ನು ನೆರೆದ ಜನರೆಲ್ಲಾ ಸಂಭ್ರಮಿಸಿದ್ದಾರೆ. ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದ್ದಾರೆ. ವಿಶೇಷ ಎಂದರೆ ಈ ಸ್ವಯಂವರ ಕಾರ್ಯಕ್ರಮದಲ್ಲಿ ಇತರ ಸ್ಪರ್ಧಿಗಳೂ ಇದ್ದರು. ಆದರೆ, ವರ ಯಾರು ಎಂಬುದು ಮೊದಲೇ ನಿಗದಿಯಾಗಿತ್ತು.

ಸೀತಾಸ್ವಯಂವರ ರಾಮಾಯಣದ ಪ್ರಮುಖ ಭಾಗವಾಗಿದೆ. ಅದರಂತೆ ಈ ವಿವಾಹ ಕಾರ್ಯಕ್ರಮವನ್ನು ನಡೆಸಲಾಗಿದೆ. ರಾಮಾಯಣದಲ್ಲಿ ಸೀತೆಯ ವಿವಾಹಕ್ಕೆ ಸ್ವಯಂವರ ಸಮಾರಂಭವನ್ನು ಆಕೆಯ ತಂದೆ ಜನಕ ಮಹಾರಾಜ ಆಯೋಜಿಸುತ್ತಾನೆ. ಅದರಲ್ಲಿ ವರನು ಧನಸ್ಸು ಎತ್ತಿ ಹುಡುಗಿಯನ್ನು ವರಿಸಬೇಕಿರುತ್ತದೆ.

ರಾಮಾಯಣದ ಆ ಕಾರ್ಯಕ್ರಮಕ್ಕೆ ರಾವಣನೂ ಬಂದಿರುತ್ತಾನೆ. ಆದರೆ, ಧನಸ್ಸು ಬಹಳ ಭಾರವಾಗಿ ಇದ್ದದ್ದರಿಂದ ಯಾರಿಗೂ ಅದನ್ನು ಎತ್ತಲು ಆಗಿರುವುದಿಲ್ಲ. ಬಂದ ಎಲ್ಲಾ ರಾಜ ಮಹಾರಾಜರೂ ಬಿಲ್ಲು ಹೆದೆ ಏರಿಸಲು ಆಗದೆ ಇದ್ದಾಗ ರಾಮ‌ ಆ ಕಾರ್ಯ ಸಾಧನೆ ಮಾಡುತ್ತಾನೆ. ಹೀಗೆ ರಾಮ, ಸೀತೆಯನ್ನು ವರಿಸುತ್ತಾನೆ.

ಈ ಕಾರ್ಯಕ್ರಮದಲ್ಲೂ ಅದರಂತೆ ಮಾಡಲಾಗಿದೆ. ಮದುವೆ ಹುಡುಗಿ ವೇದಿಕೆಗೆ ಬರುತ್ತಿದ್ದಂತೆ ಆಕೆಯ ಮೇಲೆ ಹೂಮಳೆ ಸುರಿಸಲಾಗಿದೆ. ಉಳಿದಂತೆ ಮದುವೆ ಸಂಪ್ರದಾಯಗಳನ್ನೂ ಮಾಡಲಾಗಿದೆ. ಕೊರೊನಾ ಕಾಲದಲ್ಲೂ ಇಂತಹ ವಿಶೇಷ ಮದುವೆಯೊಂದು ಸುದ್ದಿಯಾಗಿದೆ. ಆದರೆ, ವಿವಾಹ ಸಮಾರಂಭದಲ್ಲಿ ಯಾರೂ ಕೊವಿಡ್ ನಿಯಮ ಪಾಲಿಸಿಲ್ಲ ಎಂಬುದು ವಿಷಾದನೀಯ ವಿಚಾರವಾಗಿದೆ.

ಇದನ್ನೂ ಓದಿ: ಕೈಗಳಿಲ್ಲದ ಯುವಕ ಕಾಲಿನಲ್ಲಿಯೇ ಕೇರಂ ಆಟ ಆಡ್ತಾರೆ! ನೆಟ್ಟಿಗರ ಹೃದಯ ಗೆದ್ದ ವಿಡಿಯೋ ವೈರಲ್

ಸಿಇಓ ಜತೆ ಆನ್​ಲೈನ್​ ಮೀಟಿಂಗ್​ ನಡೆಸುವಾಗ ಪೇಚಿಗೆ ಸಿಲುಕಿದ ಮಹಿಳಾ ಉದ್ಯೋಗಿ; ವೈರಲ್ ಆಯ್ತು ವಿಡಿಯೋ

ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ