AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕಲಿಯುಗದಲ್ಲೂ ನಡೆಯಿತು ಸೀತಾಸ್ವಯಂವರ; ಬಿಲ್ಲು ಎತ್ತಿ ಮದುಮಗಳನ್ನು ವರಿಸಿದ ಹುಡುಗ! ವಿಡಿಯೋ ನೋಡಿ

ಮದುಮಗಳು ಮೊದಲು, ವಿವಾಹ ವೇದಿಕೆಯಲ್ಲಿ ಎರಡೂ ಕೈಜೋಡಿಸಿ ಶಿವನನ್ನು ಪ್ರಾರ್ಥನೆ ಮಾಡಿದ್ದಾಳೆ. ಬಳಿಕ, ಹುಡುಗ ಬಿಲ್ಲು ಎತ್ತಿ ಮುರಿದಿದ್ದಾನೆ.‌ ಧನಸ್ಸು ಎತ್ತಿ ಹುಡುಗಿಯನ್ನು ಮದುವೆಯಾಗಿದ್ದಾನೆ.‌

Viral Video: ಕಲಿಯುಗದಲ್ಲೂ ನಡೆಯಿತು ಸೀತಾಸ್ವಯಂವರ; ಬಿಲ್ಲು ಎತ್ತಿ ಮದುಮಗಳನ್ನು ವರಿಸಿದ ಹುಡುಗ! ವಿಡಿಯೋ ನೋಡಿ
ಕಲಿಯುಗದಲ್ಲೂ ಸೀತಾಸ್ವಯಂವರ
TV9 Web
| Edited By: |

Updated on: Jun 29, 2021 | 7:31 PM

Share

ಮದುವೆ ಸಮಾರಂಭ ಬಹಳ ವಿಜೃಂಭಣೆಯಿಂದ, ವಿಶೇಷವಾಗಿ ನಡೆಸಬೇಕು ಎಂಬುದು ಬಹುತೇಕ ಹೆತ್ತವರ ಮತ್ತು ಮದುಮಕ್ಕಳ ಕನಸು ಆಗಿರುತ್ತದೆ. ಎಲ್ಲೂ ಆಗದಂತಹ ರೀತಿಯಲ್ಲಿ ನಾವು ಮದುವೆ ಕಾರ್ಯಕ್ರಮ ಮಾಡಬೇಕು ಎಂದು ಆಸೆ ಇರುತ್ತದೆ. ಇತ್ತೀಚೆಗಂತೂ ಒಂದಿಲ್ಲೊಂದು ವಿಶೇಷ ಅಂಶಗಳನ್ನು ನಾವು ಬಹುತೇಕ ಮದುವೆಗಳಲ್ಲಿ ಕಾಣುತ್ತೇವೆ. ಅಂತಹುದೇ ಒಂದು ಘಟನೆ ಇಲ್ಲಿ ತಿಳಿದುಬಂದಿದೆ.

ಸೀತಾಸ್ವಯಂವರ ಹೋಲಿಕೆಯ ಘಟನೆಯೊಂದು ಬಿಹಾರದ ಸರನ್ ಜಿಲ್ಲೆಯಲ್ಲಿ ನಡೆದಿದೆ. ಕಲಿಯುಗದಲ್ಲಿ ತ್ರೇತಾಯುಗದಲ್ಲಿ‌ ನಡೆದಂತಹ ಘಟನೆ ನಡೆದಿದೆ. ಮದುಮಗ ಬಿಲ್ಲು ಎತ್ತಿ ಮದುವೆಯಾಗಿದ್ದಾರೆ. ಸರನ್ ಜಿಲ್ಲೆಯ ಸೋನ್‌ಪುರ್ ಬ್ಲಾಕ್‌ನ ಸಬಲ್‌ಪುರ್ ಈಸ್ಟ್ ವಿಭಾಗದಲ್ಲಿ ಈ ರೀತಿ ಮದುವೆ ನಡೆದಿದೆ.

ಮದುಮಗಳು ಮೊದಲು, ವಿವಾಹ ವೇದಿಕೆಯಲ್ಲಿ ಎರಡೂ ಕೈಜೋಡಿಸಿ ಶಿವನನ್ನು ಪ್ರಾರ್ಥನೆ ಮಾಡಿದ್ದಾಳೆ. ಬಳಿಕ, ಹುಡುಗ ಬಿಲ್ಲು ಎತ್ತಿ ಮುರಿದಿದ್ದಾನೆ.‌ ಧನಸ್ಸು ಎತ್ತಿ ಹುಡುಗಿಯನ್ನು ಮದುವೆಯಾಗಿದ್ದಾನೆ.‌ ಈ ಸಂದರ್ಭವನ್ನು ನೆರೆದ ಜನರೆಲ್ಲಾ ಸಂಭ್ರಮಿಸಿದ್ದಾರೆ. ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದ್ದಾರೆ. ವಿಶೇಷ ಎಂದರೆ ಈ ಸ್ವಯಂವರ ಕಾರ್ಯಕ್ರಮದಲ್ಲಿ ಇತರ ಸ್ಪರ್ಧಿಗಳೂ ಇದ್ದರು. ಆದರೆ, ವರ ಯಾರು ಎಂಬುದು ಮೊದಲೇ ನಿಗದಿಯಾಗಿತ್ತು.

ಸೀತಾಸ್ವಯಂವರ ರಾಮಾಯಣದ ಪ್ರಮುಖ ಭಾಗವಾಗಿದೆ. ಅದರಂತೆ ಈ ವಿವಾಹ ಕಾರ್ಯಕ್ರಮವನ್ನು ನಡೆಸಲಾಗಿದೆ. ರಾಮಾಯಣದಲ್ಲಿ ಸೀತೆಯ ವಿವಾಹಕ್ಕೆ ಸ್ವಯಂವರ ಸಮಾರಂಭವನ್ನು ಆಕೆಯ ತಂದೆ ಜನಕ ಮಹಾರಾಜ ಆಯೋಜಿಸುತ್ತಾನೆ. ಅದರಲ್ಲಿ ವರನು ಧನಸ್ಸು ಎತ್ತಿ ಹುಡುಗಿಯನ್ನು ವರಿಸಬೇಕಿರುತ್ತದೆ.

ರಾಮಾಯಣದ ಆ ಕಾರ್ಯಕ್ರಮಕ್ಕೆ ರಾವಣನೂ ಬಂದಿರುತ್ತಾನೆ. ಆದರೆ, ಧನಸ್ಸು ಬಹಳ ಭಾರವಾಗಿ ಇದ್ದದ್ದರಿಂದ ಯಾರಿಗೂ ಅದನ್ನು ಎತ್ತಲು ಆಗಿರುವುದಿಲ್ಲ. ಬಂದ ಎಲ್ಲಾ ರಾಜ ಮಹಾರಾಜರೂ ಬಿಲ್ಲು ಹೆದೆ ಏರಿಸಲು ಆಗದೆ ಇದ್ದಾಗ ರಾಮ‌ ಆ ಕಾರ್ಯ ಸಾಧನೆ ಮಾಡುತ್ತಾನೆ. ಹೀಗೆ ರಾಮ, ಸೀತೆಯನ್ನು ವರಿಸುತ್ತಾನೆ.

ಈ ಕಾರ್ಯಕ್ರಮದಲ್ಲೂ ಅದರಂತೆ ಮಾಡಲಾಗಿದೆ. ಮದುವೆ ಹುಡುಗಿ ವೇದಿಕೆಗೆ ಬರುತ್ತಿದ್ದಂತೆ ಆಕೆಯ ಮೇಲೆ ಹೂಮಳೆ ಸುರಿಸಲಾಗಿದೆ. ಉಳಿದಂತೆ ಮದುವೆ ಸಂಪ್ರದಾಯಗಳನ್ನೂ ಮಾಡಲಾಗಿದೆ. ಕೊರೊನಾ ಕಾಲದಲ್ಲೂ ಇಂತಹ ವಿಶೇಷ ಮದುವೆಯೊಂದು ಸುದ್ದಿಯಾಗಿದೆ. ಆದರೆ, ವಿವಾಹ ಸಮಾರಂಭದಲ್ಲಿ ಯಾರೂ ಕೊವಿಡ್ ನಿಯಮ ಪಾಲಿಸಿಲ್ಲ ಎಂಬುದು ವಿಷಾದನೀಯ ವಿಚಾರವಾಗಿದೆ.

ಇದನ್ನೂ ಓದಿ: ಕೈಗಳಿಲ್ಲದ ಯುವಕ ಕಾಲಿನಲ್ಲಿಯೇ ಕೇರಂ ಆಟ ಆಡ್ತಾರೆ! ನೆಟ್ಟಿಗರ ಹೃದಯ ಗೆದ್ದ ವಿಡಿಯೋ ವೈರಲ್

ಸಿಇಓ ಜತೆ ಆನ್​ಲೈನ್​ ಮೀಟಿಂಗ್​ ನಡೆಸುವಾಗ ಪೇಚಿಗೆ ಸಿಲುಕಿದ ಮಹಿಳಾ ಉದ್ಯೋಗಿ; ವೈರಲ್ ಆಯ್ತು ವಿಡಿಯೋ

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?