AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕಲಿಯುಗದಲ್ಲೂ ನಡೆಯಿತು ಸೀತಾಸ್ವಯಂವರ; ಬಿಲ್ಲು ಎತ್ತಿ ಮದುಮಗಳನ್ನು ವರಿಸಿದ ಹುಡುಗ! ವಿಡಿಯೋ ನೋಡಿ

ಮದುಮಗಳು ಮೊದಲು, ವಿವಾಹ ವೇದಿಕೆಯಲ್ಲಿ ಎರಡೂ ಕೈಜೋಡಿಸಿ ಶಿವನನ್ನು ಪ್ರಾರ್ಥನೆ ಮಾಡಿದ್ದಾಳೆ. ಬಳಿಕ, ಹುಡುಗ ಬಿಲ್ಲು ಎತ್ತಿ ಮುರಿದಿದ್ದಾನೆ.‌ ಧನಸ್ಸು ಎತ್ತಿ ಹುಡುಗಿಯನ್ನು ಮದುವೆಯಾಗಿದ್ದಾನೆ.‌

Viral Video: ಕಲಿಯುಗದಲ್ಲೂ ನಡೆಯಿತು ಸೀತಾಸ್ವಯಂವರ; ಬಿಲ್ಲು ಎತ್ತಿ ಮದುಮಗಳನ್ನು ವರಿಸಿದ ಹುಡುಗ! ವಿಡಿಯೋ ನೋಡಿ
ಕಲಿಯುಗದಲ್ಲೂ ಸೀತಾಸ್ವಯಂವರ
TV9 Web
| Updated By: ganapathi bhat|

Updated on: Jun 29, 2021 | 7:31 PM

Share

ಮದುವೆ ಸಮಾರಂಭ ಬಹಳ ವಿಜೃಂಭಣೆಯಿಂದ, ವಿಶೇಷವಾಗಿ ನಡೆಸಬೇಕು ಎಂಬುದು ಬಹುತೇಕ ಹೆತ್ತವರ ಮತ್ತು ಮದುಮಕ್ಕಳ ಕನಸು ಆಗಿರುತ್ತದೆ. ಎಲ್ಲೂ ಆಗದಂತಹ ರೀತಿಯಲ್ಲಿ ನಾವು ಮದುವೆ ಕಾರ್ಯಕ್ರಮ ಮಾಡಬೇಕು ಎಂದು ಆಸೆ ಇರುತ್ತದೆ. ಇತ್ತೀಚೆಗಂತೂ ಒಂದಿಲ್ಲೊಂದು ವಿಶೇಷ ಅಂಶಗಳನ್ನು ನಾವು ಬಹುತೇಕ ಮದುವೆಗಳಲ್ಲಿ ಕಾಣುತ್ತೇವೆ. ಅಂತಹುದೇ ಒಂದು ಘಟನೆ ಇಲ್ಲಿ ತಿಳಿದುಬಂದಿದೆ.

ಸೀತಾಸ್ವಯಂವರ ಹೋಲಿಕೆಯ ಘಟನೆಯೊಂದು ಬಿಹಾರದ ಸರನ್ ಜಿಲ್ಲೆಯಲ್ಲಿ ನಡೆದಿದೆ. ಕಲಿಯುಗದಲ್ಲಿ ತ್ರೇತಾಯುಗದಲ್ಲಿ‌ ನಡೆದಂತಹ ಘಟನೆ ನಡೆದಿದೆ. ಮದುಮಗ ಬಿಲ್ಲು ಎತ್ತಿ ಮದುವೆಯಾಗಿದ್ದಾರೆ. ಸರನ್ ಜಿಲ್ಲೆಯ ಸೋನ್‌ಪುರ್ ಬ್ಲಾಕ್‌ನ ಸಬಲ್‌ಪುರ್ ಈಸ್ಟ್ ವಿಭಾಗದಲ್ಲಿ ಈ ರೀತಿ ಮದುವೆ ನಡೆದಿದೆ.

ಮದುಮಗಳು ಮೊದಲು, ವಿವಾಹ ವೇದಿಕೆಯಲ್ಲಿ ಎರಡೂ ಕೈಜೋಡಿಸಿ ಶಿವನನ್ನು ಪ್ರಾರ್ಥನೆ ಮಾಡಿದ್ದಾಳೆ. ಬಳಿಕ, ಹುಡುಗ ಬಿಲ್ಲು ಎತ್ತಿ ಮುರಿದಿದ್ದಾನೆ.‌ ಧನಸ್ಸು ಎತ್ತಿ ಹುಡುಗಿಯನ್ನು ಮದುವೆಯಾಗಿದ್ದಾನೆ.‌ ಈ ಸಂದರ್ಭವನ್ನು ನೆರೆದ ಜನರೆಲ್ಲಾ ಸಂಭ್ರಮಿಸಿದ್ದಾರೆ. ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದ್ದಾರೆ. ವಿಶೇಷ ಎಂದರೆ ಈ ಸ್ವಯಂವರ ಕಾರ್ಯಕ್ರಮದಲ್ಲಿ ಇತರ ಸ್ಪರ್ಧಿಗಳೂ ಇದ್ದರು. ಆದರೆ, ವರ ಯಾರು ಎಂಬುದು ಮೊದಲೇ ನಿಗದಿಯಾಗಿತ್ತು.

ಸೀತಾಸ್ವಯಂವರ ರಾಮಾಯಣದ ಪ್ರಮುಖ ಭಾಗವಾಗಿದೆ. ಅದರಂತೆ ಈ ವಿವಾಹ ಕಾರ್ಯಕ್ರಮವನ್ನು ನಡೆಸಲಾಗಿದೆ. ರಾಮಾಯಣದಲ್ಲಿ ಸೀತೆಯ ವಿವಾಹಕ್ಕೆ ಸ್ವಯಂವರ ಸಮಾರಂಭವನ್ನು ಆಕೆಯ ತಂದೆ ಜನಕ ಮಹಾರಾಜ ಆಯೋಜಿಸುತ್ತಾನೆ. ಅದರಲ್ಲಿ ವರನು ಧನಸ್ಸು ಎತ್ತಿ ಹುಡುಗಿಯನ್ನು ವರಿಸಬೇಕಿರುತ್ತದೆ.

ರಾಮಾಯಣದ ಆ ಕಾರ್ಯಕ್ರಮಕ್ಕೆ ರಾವಣನೂ ಬಂದಿರುತ್ತಾನೆ. ಆದರೆ, ಧನಸ್ಸು ಬಹಳ ಭಾರವಾಗಿ ಇದ್ದದ್ದರಿಂದ ಯಾರಿಗೂ ಅದನ್ನು ಎತ್ತಲು ಆಗಿರುವುದಿಲ್ಲ. ಬಂದ ಎಲ್ಲಾ ರಾಜ ಮಹಾರಾಜರೂ ಬಿಲ್ಲು ಹೆದೆ ಏರಿಸಲು ಆಗದೆ ಇದ್ದಾಗ ರಾಮ‌ ಆ ಕಾರ್ಯ ಸಾಧನೆ ಮಾಡುತ್ತಾನೆ. ಹೀಗೆ ರಾಮ, ಸೀತೆಯನ್ನು ವರಿಸುತ್ತಾನೆ.

ಈ ಕಾರ್ಯಕ್ರಮದಲ್ಲೂ ಅದರಂತೆ ಮಾಡಲಾಗಿದೆ. ಮದುವೆ ಹುಡುಗಿ ವೇದಿಕೆಗೆ ಬರುತ್ತಿದ್ದಂತೆ ಆಕೆಯ ಮೇಲೆ ಹೂಮಳೆ ಸುರಿಸಲಾಗಿದೆ. ಉಳಿದಂತೆ ಮದುವೆ ಸಂಪ್ರದಾಯಗಳನ್ನೂ ಮಾಡಲಾಗಿದೆ. ಕೊರೊನಾ ಕಾಲದಲ್ಲೂ ಇಂತಹ ವಿಶೇಷ ಮದುವೆಯೊಂದು ಸುದ್ದಿಯಾಗಿದೆ. ಆದರೆ, ವಿವಾಹ ಸಮಾರಂಭದಲ್ಲಿ ಯಾರೂ ಕೊವಿಡ್ ನಿಯಮ ಪಾಲಿಸಿಲ್ಲ ಎಂಬುದು ವಿಷಾದನೀಯ ವಿಚಾರವಾಗಿದೆ.

ಇದನ್ನೂ ಓದಿ: ಕೈಗಳಿಲ್ಲದ ಯುವಕ ಕಾಲಿನಲ್ಲಿಯೇ ಕೇರಂ ಆಟ ಆಡ್ತಾರೆ! ನೆಟ್ಟಿಗರ ಹೃದಯ ಗೆದ್ದ ವಿಡಿಯೋ ವೈರಲ್

ಸಿಇಓ ಜತೆ ಆನ್​ಲೈನ್​ ಮೀಟಿಂಗ್​ ನಡೆಸುವಾಗ ಪೇಚಿಗೆ ಸಿಲುಕಿದ ಮಹಿಳಾ ಉದ್ಯೋಗಿ; ವೈರಲ್ ಆಯ್ತು ವಿಡಿಯೋ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ