AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಇಓ ಜತೆ ಆನ್​ಲೈನ್​ ಮೀಟಿಂಗ್​ ನಡೆಸುವಾಗ ಪೇಚಿಗೆ ಸಿಲುಕಿದ ಮಹಿಳಾ ಉದ್ಯೋಗಿ; ವೈರಲ್ ಆಯ್ತು ವಿಡಿಯೋ

ಚಾರ್ಲೋಟ್ ಕೊಜಿನೆಟ್ಸ್ ಎಂಬ ಮಹಿಳಾ ಉದ್ಯೋಗಿಯ ವಿಡಿಯೋ ವೈರಲ್​ ಆಗಿದ್ದು, ಸಂಸ್ಥೆಯ ಸಿಇಓ ಜತೆಗಿನ ಆನ್​ಲೈನ್​ ಮೀಟಿಂಗ್​ನಲ್ಲಿ ಭಾಗವಹಿಸಿದ್ದ ವೇಳೆ ಆಕೆ ಕುಳಿತಿದ್ದ ಕುರ್ಚಿ ಏಕಾಏಕಿ ಮುರಿದುಹೋದ ಕಾರಣ ಯಡವಟ್ಟಾಗಿದೆ.

ಸಿಇಓ ಜತೆ ಆನ್​ಲೈನ್​ ಮೀಟಿಂಗ್​ ನಡೆಸುವಾಗ ಪೇಚಿಗೆ ಸಿಲುಕಿದ ಮಹಿಳಾ ಉದ್ಯೋಗಿ; ವೈರಲ್ ಆಯ್ತು ವಿಡಿಯೋ
ವೈರಲ್​ ವಿಡಿಯೋದ ತುಣುಕು
TV9 Web
| Edited By: |

Updated on: Jun 28, 2021 | 11:41 AM

Share

ಕೊರೊನಾ ಸೋಂಕು ಜಗತ್ತಿನೆಲ್ಲೆಡೆ ವ್ಯಾಪಿಸಿ ಸರಿಸುಮಾರು ಒಂದೂವರೆ ವರ್ಷವೇ ಕಳೆದುಹೋಗಿದೆ. ಸೋಂಕು ನಿಯಂತ್ರಣದ ಸಲುವಾಗಿ ಸಾಮಾಜಿಕ ಜೀವಿ ಎಂದು ಕರೆದುಕೊಳ್ಳುತ್ತಿದ್ದ ನಮ್ಮನ್ನು ನಾಲ್ಕು ಗೋಡೆಯ ಮಧ್ಯೆ ಬಂಧಿಸಿಕೊಳ್ಳಬೇಕಾದ ದುಃಸ್ಥಿತಿಯನ್ನು ಅನುಭವಿಸಿದ್ದೇವೆ. ಎಲ್ಲರ ಜೀವನ ಶೈಲಿಯೇ ಬದಲಾಗಿ ಹೋಗಿದ್ದು ಹೆಚ್ಚಿನ ಕೆಲಸ ಕಾರ್ಯಗಳೆಲ್ಲಾ ಮನೆಯಿಂದಲೇ ಆಗುತ್ತಿವೆ. ಈಗಂತೂ ಅನೇಕ ಸಂಸ್ಥೆಗಳು ವರ್ಕ್​ ಫ್ರಂ ಹೋಮ್ ಪದ್ಧತಿಯನ್ನು ಖಾಯಂಗೊಳಿಸಿವೆ. ಎಷ್ಟಂದರೂ ಮನೆಯಲ್ಲಿ ಕುಳಿತು ಕೆಲಸ ಮಾಡುವಾಗ ಆಫೀಸಿಗೆ ಹೋಗುವಾಗ ತಯಾರಿ ಆಗುವಂತೆ ಸಿದ್ಧವಾಗುವ ಅವಶ್ಯಕತೆ ಇರುವುದಿಲ್ಲವೆಂದು ಜನ ಆರಾಮಾಗಿ ತಮಗೆ ಬೇಕಾದಂತೆ ಕುಳಿತು ಕೆಲಸ ಮಾಡುತ್ತಾರೆ. ಆದರೆ, ಅದುವೇ ಎಷ್ಟೋ ಬಾರಿ ಅನಾಹುತಗಳಿಗೆ ದಾರಿಯಾಗಿದ್ದು, ಕೆಲವರ ಮುಖಭಂಗಕ್ಕೂ ಕಾರಣವಾಗಿದೆ. ಇನ್ನು ಕೆಲವೊಮ್ಮೆ ಪರಿಸ್ಥಿತಿ ಕೈ ಮೀರಿ ಹೋಗಿ ಅಚಾನಕ್​ ಆಗಿ ಪೇಚಿಗೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿರುವುದೂ ಇದೆ. ಈಗ ಅಂಥದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳೆಯೊಬ್ಬರು ಸಂಸ್ಥೆಯ ಸಿಇಓ ಜತೆ ಮಾತನಾಡುವಾಗ ಕುರ್ಚಿ ಮುರಿದುಹೋಗಿ ಕೆಳಗೆ ಬಿದ್ದಿದ್ದಾರೆ.

ಈ ಘಟನೆ ನಡೆದಿರುವುದು ಕ್ಯಾಲಿಫೋರ್ನಿಯಾದಲ್ಲಾದರೂ ಇದರ ವಿಡಿಯೋ ಜಗತ್ತಿನ ಮೂಲೆಮೂಲೆಯಲ್ಲೂ ಹರಿದಾಡಿದೆ. ಇದನ್ನು ನೋಡಿದ ಎಷ್ಟೋ ಜನರು ತಮಗಾದ ಅವಸ್ಥೆಯನ್ನು ನೆನೆಸಿಕೊಂಡು ನಕ್ಕಿದ್ದಾರೆ. ಚಾರ್ಲೋಟ್ ಕೊಜಿನೆಟ್ಸ್ ಎಂಬ ಮಹಿಳಾ ಉದ್ಯೋಗಿಯ ವಿಡಿಯೋ ವೈರಲ್​ ಆಗಿದ್ದು, ಸಂಸ್ಥೆಯ ಸಿಇಓ ಜತೆಗಿನ ಆನ್​ಲೈನ್​ ಮೀಟಿಂಗ್​ನಲ್ಲಿ ಭಾಗವಹಿಸಿದ್ದ ವೇಳೆ ಆಕೆ ಕುಳಿತಿದ್ದ ಕುರ್ಚಿ ಏಕಾಏಕಿ ಮುರಿದುಹೋದ ಕಾರಣ ಯಡವಟ್ಟಾಗಿದೆ.

ಮೀಟಿಂಗ್​ ನಡೆಯುತ್ತಿದ್ದ ವೇಳೆ ಕುರ್ಚಿ ಮುರಿದುಹೋಗಿದ್ದು, ಚಾರ್ಲೋಟ್ ಕೊಜಿನೆಟ್ಸ್ ಪಲ್ಟಿ ಹೊಡೆದಿದ್ದಾರೆ. ಕೆಳಕ್ಕೆ ಬೀಳುತ್ತಲೇ ನಗಲಾರಂಭಿಸಿದ ಅವರು ಕೊನೆಗೆ ವಿಡಿಯೋ ಆಫ್​ ಮಾಡಿ ಬೇರೆ ಖುರ್ಚಿಯೊಂದನ್ನು ಹುಡುಕಿ ತಂದು ಕೂತರಾದರೂ, ಮೈಕ್ ಆಫ್ ಮಾಡಲು ಮರೆತಿದ್ದ ಕಾರಣ ಹಿಂಬದಿಯಲ್ಲಿ ಅವರು ಮಾತಾಡಿದ್ದೆಲ್ಲಾ ಕೇಳಿಸಿದೆ.

View this post on Instagram

A post shared by Charlotte (@charkozy)

ಅಲ್ಲದೇ, ಈ ವಿಡಿಯೋ ರೆಕಾರ್ಡ್​ ಆಗುತ್ತಿದ್ದ ಕಾರಣ ಈ ಎಲ್ಲವೂ ಮೀಟಿಂಗ್ ಮುಗಿದ ನಂತರವೂ ನೋಡಲು ಸಿಕ್ಕಿದ್ದು, ತಮ್ಮ ಅವಸ್ಥೆಯನ್ನು ನೆನೆಸಿಕೊಂಡು ಬಿದ್ದು ಬಿದ್ದು ನಕ್ಕಿದ್ದಾರಂತೆ. ಪುಣ್ಯಕ್ಕೆ ಸಿಇಓ ಜತೆ ನಾಲ್ಕೈದು ಜನ ಮಾತ್ರ ಮೀಟಿಂಗ್​ನಲ್ಲಿದ್ದರು. ನಮ್ಮ ಮಾರ್ಕೆಟಿಂಗ್ ವಿಭಾಗದ ಕೆಲ ವಿಚಾರಗಳಿಗೆ ಸಂಬಂಧಿಸಿದಂತೆ ಗಂಭೀರ ಚರ್ಚೆ ಮಾಡಬೇಕು ಎಂದುಕೊಂಡಾಗಲೇ ಹೀಗೆ ಕುರ್ಚಿ ಮುರಿದುಹೋಗಿ ಯಡವಟ್ಟಾಗಿದೆ. ಜಾಸ್ತಿ ಜನ ಏನಾದರೂ ಇದ್ದಿದ್ದರೆ ಭಾರೀ ಕಷ್ಟವಾಗುತ್ತಿತ್ತು ಎಂದು ಹೇಳಿಕೊಂಡಿದ್ದಾರೆ.

ಆದರೂ, ಧೈರ್ಯ ಮಾಡಿ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಚಾರ್ಲೋಟ್ ಕೊಜಿನೆಟ್ಸ್, ಸಹೋದ್ಯೋಗಿಗಳ ಪ್ರತಿಕ್ರಯೆಯನ್ನೂ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಪೋಸ್ಟ್ ಆಗುತ್ತಲೇ ಲಕ್ಷಾಂತರ ಜನರ ವೀಕ್ಷಣೆ ಗಿಟ್ಟಿಸಿಕೊಂಡಿದ್ದು, ಅನೇಕರು ಇದನ್ನು ಹಂಚಿಕೊಳ್ಳುವ ಮನಸ್ಸು ಮಾಡಿದ್ದಕ್ಕೆ ಚಾರ್ಲೋಟ್ ಕೊಜಿನೆಟ್ಸ್​ಗೆ ಭೇಷ್​ ಎಂದಿದ್ದಾರೆ. ಅಲ್ಲದೇ, ಈ ವಿಡಿಯೋವನ್ನು ಸೇವ್​ ಮಾಡಿಟ್ಟುಕೊಂಡು ಬೇಜಾರಾದಾಗಲೆಲ್ಲಾ ನೋಡುತ್ತಿರುವುದಾಗಿಯೂ ತಿಳಿಸಿದ್ದಾರೆ.

ಇದನ್ನೂ ಓದಿ: 30 ವರ್ಷ ದಾಟಿದ ಮಹಿಳಾವಾದಿಗೆ 25-28 ವರ್ಷದ, ಹೂಸು ಬಿಡದ, ತೇಗದ, ಅಡುಗೆ ಬಲ್ಲ ವರ ಬೇಕಾಗಿದ್ದಾನೆ: ವೈರಲ್​ ಆಯ್ತು ಜಾಹೀರಾತು 

ಪ್ರವಾಸಿಗರನ್ನು ಹೊತ್ತ ದೈತ್ಯ ಬೋಟ್​ಗೆ ಸವಾಲೊಡ್ಡಿದ 400 ಡಾಲ್ಫಿನ್​ಗಳ ಬೃಹತ್​ ಗುಂಪು: ಜಟಾಪಟಿಯ ವಿಡಿಯೋ ಇಲ್ಲಿದೆ ನೋಡಿ

ಎಲ್ಲವೂ ಓದಿದ್ರೂ ಪರೀಕ್ಷೆ ಹಾಲ್‌ನಲ್ಲಿ ಕೂತಾಗ ಮರೆತು ಹೋಗುವುದು ಯಾಕೆ?
ಎಲ್ಲವೂ ಓದಿದ್ರೂ ಪರೀಕ್ಷೆ ಹಾಲ್‌ನಲ್ಲಿ ಕೂತಾಗ ಮರೆತು ಹೋಗುವುದು ಯಾಕೆ?
ಮಂಡ್ಯ: ಪ್ರೀತಿಸಿ ಮದುವೆಯಾದ ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಾವ!
ಮಂಡ್ಯ: ಪ್ರೀತಿಸಿ ಮದುವೆಯಾದ ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಾವ!
ಸಿಎಂ ಸಿದ್ದರಾಮಯ್ಯರ ಟ್ವೀಟ್ ಬಗ್ಗೆ ಕೇಂದ್ರ ಸಚಿವ ಹೆಚ್​ಡಿಕೆ ಲೇವಡಿ
ಸಿಎಂ ಸಿದ್ದರಾಮಯ್ಯರ ಟ್ವೀಟ್ ಬಗ್ಗೆ ಕೇಂದ್ರ ಸಚಿವ ಹೆಚ್​ಡಿಕೆ ಲೇವಡಿ
ಕಮಿಷನ್​​ ಪಡೆಯುವಾಗಲೇ ಶಾಸಕ ಲಾಕ್​, ಇಲ್ಲಿದೆ ಎಕ್ಸ್​​ಕ್ಲೂಸಿವ್ ವಿಡಿಯೋ
ಕಮಿಷನ್​​ ಪಡೆಯುವಾಗಲೇ ಶಾಸಕ ಲಾಕ್​, ಇಲ್ಲಿದೆ ಎಕ್ಸ್​​ಕ್ಲೂಸಿವ್ ವಿಡಿಯೋ
ಅಭಿಮಾನಿಗಳ ಆ ಒಂದು ಮಹತ್ ಕಾರ್ಯಕ್ಕೆ ಜೈಲಿನಿಂದಲೇ ಧನ್ಯವಾದ ಹೇಳಿದ ದರ್ಶನ್
ಅಭಿಮಾನಿಗಳ ಆ ಒಂದು ಮಹತ್ ಕಾರ್ಯಕ್ಕೆ ಜೈಲಿನಿಂದಲೇ ಧನ್ಯವಾದ ಹೇಳಿದ ದರ್ಶನ್
ಹೆಲಿಕಾಪ್ಟರ್ ಘಟಕಕ್ಕೆ ವಿದ್ಯುತ್ ಕಟ್ ಮಾಡಿ ಎಂದ ಕೊತ್ತೂರು ಶಾಸಕ!
ಹೆಲಿಕಾಪ್ಟರ್ ಘಟಕಕ್ಕೆ ವಿದ್ಯುತ್ ಕಟ್ ಮಾಡಿ ಎಂದ ಕೊತ್ತೂರು ಶಾಸಕ!
ಕಾಂಗ್ರೆಸ್ ಕುರ್ಚಿ ಕದನ: ಖರ್ಗೆ ಭೇಟಿ ಬಳಿಕ ಜಾರಕಿಹೊಳಿ ಸ್ಫೋಟಕ ಮಾಹಿತಿ
ಕಾಂಗ್ರೆಸ್ ಕುರ್ಚಿ ಕದನ: ಖರ್ಗೆ ಭೇಟಿ ಬಳಿಕ ಜಾರಕಿಹೊಳಿ ಸ್ಫೋಟಕ ಮಾಹಿತಿ
ಬಂಧನದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಫಸ್ಟ್ ರಿಯಾಕ್ಷನ್
ಬಂಧನದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಫಸ್ಟ್ ರಿಯಾಕ್ಷನ್
ವೈರಿಯ ಮನೆಗೆ ಬೆಂಕಿ ಹಚ್ಚಲು ಹೋದವನ ಕಾರೇ ಬೆಂಕಿಗಾಹುತಿ
ವೈರಿಯ ಮನೆಗೆ ಬೆಂಕಿ ಹಚ್ಚಲು ಹೋದವನ ಕಾರೇ ಬೆಂಕಿಗಾಹುತಿ
‘ಸೀತಾಪಯಣ’ಕ್ಕೆ ಸಿಕ್ಕ ಪ್ರತಿಕ್ರಿಯೆಗೆ ಧನ್ಯವಾದ ಹೇಳಿದ ಉಪೇಂದ್ರ ಅಣ್ಣನ ಮಗ
‘ಸೀತಾಪಯಣ’ಕ್ಕೆ ಸಿಕ್ಕ ಪ್ರತಿಕ್ರಿಯೆಗೆ ಧನ್ಯವಾದ ಹೇಳಿದ ಉಪೇಂದ್ರ ಅಣ್ಣನ ಮಗ