AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮದುವೆ ದಿನ ಪತ್ನಿಯ ಜುಟ್ಟು ಹಿಡಿದು ತಲೆ ತಿರುಗಿಸಿ ಬಾಯಿಗೆ ಲಾಡು ತುರುಕಿದ ಪತಿ; ವಿಡಿಯೋ ನೋಡಿ ಕೋಪಗೊಂಡ ನೆಟ್ಟಿಗರು

ಈ ವಿಡಿಯೋವನ್ನು ಇನ್​ಸ್ಟಾಗ್ರಾಂ ಬಳಕೆದಾರರೊಬ್ಬರು ಶೇರ್ ಮಾಡಿಕೊಂಡು, ಇದೊಂದು ಫನ್ನಿ ಎಂದಿದ್ದಾರೆ. ಆದರೆ ನೆಟ್ಟಿಗರು ಇದು ಜೋಕ್​ ಅಲ್ಲ ಬದಲಿಗೆ ದೌರ್ಜನ್ಯ ಎಂದಿದ್ದಾರೆ.

Viral Video: ಮದುವೆ ದಿನ ಪತ್ನಿಯ ಜುಟ್ಟು ಹಿಡಿದು ತಲೆ ತಿರುಗಿಸಿ ಬಾಯಿಗೆ ಲಾಡು ತುರುಕಿದ ಪತಿ; ವಿಡಿಯೋ ನೋಡಿ ಕೋಪಗೊಂಡ ನೆಟ್ಟಿಗರು
ಬಲವಂತವಾಗಿ ಲಾಡು ತಿನ್ನಿಸಿದ ವರ
TV9 Web
| Edited By: |

Updated on:Jul 01, 2021 | 5:49 PM

Share

ಮದುವೆ ಎಂದರೆ ಅಲ್ಲಿ ಹಲವಾರು ಸಂಪ್ರದಾಯ, ಆಚರಣೆಗಳು ನಡೆಯುತ್ತದೆ. ಹಾಗೇ ಮದುವೆ ಮುಗಿದ ಬಳಿಕ ವಧು-ವರ ಪರಸ್ಪರ ಲಾಡು ಅಥವಾ ಇನ್ನಿತರ ಯಾವುದಾದರೂ ಒಂದು ಸಿಹಿಯನ್ನು ತಿನ್ನಿಸಿಕೊಳ್ಳುತ್ತಾರೆ. ಈ ಮದುವೆಯಲ್ಲಿ ಪತಿ ತನ್ನ ಪತ್ನಿಗೆ ಲಾಡು ತಿನ್ನಿಸಿದ ರೀತಿ ನಿಜಕ್ಕೂ ಕೋಪತರಿಸುವಂತಿದೆ. ವೈರಲ್​ ಆದ ವಿಡಿಯೋ ನೋಡಿ ನೆಟ್ಟಿಗರು, ಇದು ಪ್ರೀತಿಯಲ್ಲ..ದೌರ್ಜನ್ಯ. ಮದುವೆ ದಿನವೇ ಪತ್ನಿಯನ್ನು ಹಿಂಸಿಸಿದ ಈ ವ್ಯಕ್ತಿ ಇನ್ನು ಮುಂದೆಯೂ ಹಾಗೇ ನಡೆಸಿಕೊಳ್ಳುತ್ತಾನೆ ಎಂದೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆಗಿದ್ದಿಷ್ಟು..ಮದುವೆ ಮುಗಿದಿದೆ. ವಧು-ವರ ಇಬ್ಬರೂ ಹಾರ ಹಾಕಿಕೊಂಡೇ ಇದ್ದಾರೆ. ಬಂಧುಬಳಗದವರೂ ಸುತ್ತಲೂ ಇದ್ದಾರೆ. ವಧುವಿನ ಕೈಯಲ್ಲಿ ಲಾಡು ಕೊಟ್ಟು ಅದನ್ನು ಪತಿಗೆ ತಿನ್ನಿಸುವಂತೆ ಮೊದಲು ಹೇಳಲಾಯಿತು. ಅದರಂತೆ ಆಕೆ ಆತನ ಬಾಯಿಗೆ ಇಟ್ಟಳು. ಒಂದೇ ಗುಟುಕಿಗೆ ಆ ಲಾಡನ್ನು ಅವನೇನೋ ತಿಂದ. ಆದರೆ ತಿರುಗಿ ವರ ತನ್ನ ಪತ್ನಿಗೆ ಲಾಡು ತಿನ್ನಿಸಲು ಬಂದಾಗ ಅವಳು ನಾಚಿಕೆಯಿಂದ ಪಕ್ಕಕ್ಕೆ ಬಾಗಿ, ಮುಖ ತಿರುಗಿಸಿದಳು. ಅದೇನಾಯಿತೋ ಇವನಿಗೆ ಪತ್ನಿಯ ಜುಟ್ಟು ಹಿಡಿದು ತಲೆ ತಿರುಗಿಸಿ ಬಾಯಿಗೆ ತುರುಕೇಬಿಟ್ಟ… ಈ ವಿಡಿಯೋ ನೋಡಿದರೆ ನಿಮಗೂ ಒಂದು ಕ್ಷಣ ಕ್ರೂರತನ ಅನ್ನಿಸದೆ ಇರದು.

ಈ ವಿಡಿಯೋವನ್ನು ಇನ್​ಸ್ಟಾಗ್ರಾಂ ಬಳಕೆದಾರರೊಬ್ಬರು ಶೇರ್ ಮಾಡಿಕೊಂಡು, ಇದೊಂದು ಫನ್ನಿ ಎಂದಿದ್ದಾರೆ. ಆದರೆ ನೆಟ್ಟಿಗರು ಇದು ಜೋಕ್​ ಅಲ್ಲ ಬದಲಿಗೆ ದೌರ್ಜನ್ಯ ಎಂದಿದ್ದಾರೆ. ಪತಿಯಾದವನು ಮದುವೆ ದಿನ ಹೀಗೆ ನಡೆಸಿಕೊಳ್ಳುವುದಾ ಎಂದೂ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Covishield ಕೊವಿಶೀಲ್ಡ್‌ ಲಸಿಕೆ ಪಡೆದವರ ಪ್ರಯಾಣಕ್ಕೆ ಐರೋಪ್ಯ ಒಕ್ಕೂಟದ ಏಳು ದೇಶಗಳಿಂದ ಅನುಮತಿ

Groom Forcefully Shoves Ladoo Into Bride’s Mouth

Published On - 5:48 pm, Thu, 1 July 21

Follow Us
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ
ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ
ವಿಚಿತ್ರ ಮನೆ: 3*20 ಅಡಿಯಲ್ಲಿ ಕಟ್ಟಡ; ನೋಡಿದ್ರೆ ದಿಗ್ಭ್ರಮೆ ಗ್ಯಾರಂಟಿ
ವಿಚಿತ್ರ ಮನೆ: 3*20 ಅಡಿಯಲ್ಲಿ ಕಟ್ಟಡ; ನೋಡಿದ್ರೆ ದಿಗ್ಭ್ರಮೆ ಗ್ಯಾರಂಟಿ
ಚಾರ್ಮಾಡಿ ಘಾಟ್, ಕೊಟ್ಟಿಗೆಹಾರದಲ್ಲಿ ಧಾರಾಕಾರ ಮಳೆ
ಚಾರ್ಮಾಡಿ ಘಾಟ್, ಕೊಟ್ಟಿಗೆಹಾರದಲ್ಲಿ ಧಾರಾಕಾರ ಮಳೆ