AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮದುವೆ ದಿನ ಪತ್ನಿಯ ಜುಟ್ಟು ಹಿಡಿದು ತಲೆ ತಿರುಗಿಸಿ ಬಾಯಿಗೆ ಲಾಡು ತುರುಕಿದ ಪತಿ; ವಿಡಿಯೋ ನೋಡಿ ಕೋಪಗೊಂಡ ನೆಟ್ಟಿಗರು

ಈ ವಿಡಿಯೋವನ್ನು ಇನ್​ಸ್ಟಾಗ್ರಾಂ ಬಳಕೆದಾರರೊಬ್ಬರು ಶೇರ್ ಮಾಡಿಕೊಂಡು, ಇದೊಂದು ಫನ್ನಿ ಎಂದಿದ್ದಾರೆ. ಆದರೆ ನೆಟ್ಟಿಗರು ಇದು ಜೋಕ್​ ಅಲ್ಲ ಬದಲಿಗೆ ದೌರ್ಜನ್ಯ ಎಂದಿದ್ದಾರೆ.

Viral Video: ಮದುವೆ ದಿನ ಪತ್ನಿಯ ಜುಟ್ಟು ಹಿಡಿದು ತಲೆ ತಿರುಗಿಸಿ ಬಾಯಿಗೆ ಲಾಡು ತುರುಕಿದ ಪತಿ; ವಿಡಿಯೋ ನೋಡಿ ಕೋಪಗೊಂಡ ನೆಟ್ಟಿಗರು
ಬಲವಂತವಾಗಿ ಲಾಡು ತಿನ್ನಿಸಿದ ವರ
TV9 Web
| Edited By: |

Updated on:Jul 01, 2021 | 5:49 PM

Share

ಮದುವೆ ಎಂದರೆ ಅಲ್ಲಿ ಹಲವಾರು ಸಂಪ್ರದಾಯ, ಆಚರಣೆಗಳು ನಡೆಯುತ್ತದೆ. ಹಾಗೇ ಮದುವೆ ಮುಗಿದ ಬಳಿಕ ವಧು-ವರ ಪರಸ್ಪರ ಲಾಡು ಅಥವಾ ಇನ್ನಿತರ ಯಾವುದಾದರೂ ಒಂದು ಸಿಹಿಯನ್ನು ತಿನ್ನಿಸಿಕೊಳ್ಳುತ್ತಾರೆ. ಈ ಮದುವೆಯಲ್ಲಿ ಪತಿ ತನ್ನ ಪತ್ನಿಗೆ ಲಾಡು ತಿನ್ನಿಸಿದ ರೀತಿ ನಿಜಕ್ಕೂ ಕೋಪತರಿಸುವಂತಿದೆ. ವೈರಲ್​ ಆದ ವಿಡಿಯೋ ನೋಡಿ ನೆಟ್ಟಿಗರು, ಇದು ಪ್ರೀತಿಯಲ್ಲ..ದೌರ್ಜನ್ಯ. ಮದುವೆ ದಿನವೇ ಪತ್ನಿಯನ್ನು ಹಿಂಸಿಸಿದ ಈ ವ್ಯಕ್ತಿ ಇನ್ನು ಮುಂದೆಯೂ ಹಾಗೇ ನಡೆಸಿಕೊಳ್ಳುತ್ತಾನೆ ಎಂದೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆಗಿದ್ದಿಷ್ಟು..ಮದುವೆ ಮುಗಿದಿದೆ. ವಧು-ವರ ಇಬ್ಬರೂ ಹಾರ ಹಾಕಿಕೊಂಡೇ ಇದ್ದಾರೆ. ಬಂಧುಬಳಗದವರೂ ಸುತ್ತಲೂ ಇದ್ದಾರೆ. ವಧುವಿನ ಕೈಯಲ್ಲಿ ಲಾಡು ಕೊಟ್ಟು ಅದನ್ನು ಪತಿಗೆ ತಿನ್ನಿಸುವಂತೆ ಮೊದಲು ಹೇಳಲಾಯಿತು. ಅದರಂತೆ ಆಕೆ ಆತನ ಬಾಯಿಗೆ ಇಟ್ಟಳು. ಒಂದೇ ಗುಟುಕಿಗೆ ಆ ಲಾಡನ್ನು ಅವನೇನೋ ತಿಂದ. ಆದರೆ ತಿರುಗಿ ವರ ತನ್ನ ಪತ್ನಿಗೆ ಲಾಡು ತಿನ್ನಿಸಲು ಬಂದಾಗ ಅವಳು ನಾಚಿಕೆಯಿಂದ ಪಕ್ಕಕ್ಕೆ ಬಾಗಿ, ಮುಖ ತಿರುಗಿಸಿದಳು. ಅದೇನಾಯಿತೋ ಇವನಿಗೆ ಪತ್ನಿಯ ಜುಟ್ಟು ಹಿಡಿದು ತಲೆ ತಿರುಗಿಸಿ ಬಾಯಿಗೆ ತುರುಕೇಬಿಟ್ಟ… ಈ ವಿಡಿಯೋ ನೋಡಿದರೆ ನಿಮಗೂ ಒಂದು ಕ್ಷಣ ಕ್ರೂರತನ ಅನ್ನಿಸದೆ ಇರದು.

ಈ ವಿಡಿಯೋವನ್ನು ಇನ್​ಸ್ಟಾಗ್ರಾಂ ಬಳಕೆದಾರರೊಬ್ಬರು ಶೇರ್ ಮಾಡಿಕೊಂಡು, ಇದೊಂದು ಫನ್ನಿ ಎಂದಿದ್ದಾರೆ. ಆದರೆ ನೆಟ್ಟಿಗರು ಇದು ಜೋಕ್​ ಅಲ್ಲ ಬದಲಿಗೆ ದೌರ್ಜನ್ಯ ಎಂದಿದ್ದಾರೆ. ಪತಿಯಾದವನು ಮದುವೆ ದಿನ ಹೀಗೆ ನಡೆಸಿಕೊಳ್ಳುವುದಾ ಎಂದೂ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Covishield ಕೊವಿಶೀಲ್ಡ್‌ ಲಸಿಕೆ ಪಡೆದವರ ಪ್ರಯಾಣಕ್ಕೆ ಐರೋಪ್ಯ ಒಕ್ಕೂಟದ ಏಳು ದೇಶಗಳಿಂದ ಅನುಮತಿ

Groom Forcefully Shoves Ladoo Into Bride’s Mouth

Published On - 5:48 pm, Thu, 1 July 21

Follow Us
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?