Viral Video: ಮದುವೆ ದಿನ ಪತ್ನಿಯ ಜುಟ್ಟು ಹಿಡಿದು ತಲೆ ತಿರುಗಿಸಿ ಬಾಯಿಗೆ ಲಾಡು ತುರುಕಿದ ಪತಿ; ವಿಡಿಯೋ ನೋಡಿ ಕೋಪಗೊಂಡ ನೆಟ್ಟಿಗರು

ಈ ವಿಡಿಯೋವನ್ನು ಇನ್​ಸ್ಟಾಗ್ರಾಂ ಬಳಕೆದಾರರೊಬ್ಬರು ಶೇರ್ ಮಾಡಿಕೊಂಡು, ಇದೊಂದು ಫನ್ನಿ ಎಂದಿದ್ದಾರೆ. ಆದರೆ ನೆಟ್ಟಿಗರು ಇದು ಜೋಕ್​ ಅಲ್ಲ ಬದಲಿಗೆ ದೌರ್ಜನ್ಯ ಎಂದಿದ್ದಾರೆ.

Viral Video: ಮದುವೆ ದಿನ ಪತ್ನಿಯ ಜುಟ್ಟು ಹಿಡಿದು ತಲೆ ತಿರುಗಿಸಿ ಬಾಯಿಗೆ ಲಾಡು ತುರುಕಿದ ಪತಿ; ವಿಡಿಯೋ ನೋಡಿ ಕೋಪಗೊಂಡ ನೆಟ್ಟಿಗರು
ಬಲವಂತವಾಗಿ ಲಾಡು ತಿನ್ನಿಸಿದ ವರ
Follow us
| Updated By: Lakshmi Hegde

Updated on:Jul 01, 2021 | 5:49 PM

ಮದುವೆ ಎಂದರೆ ಅಲ್ಲಿ ಹಲವಾರು ಸಂಪ್ರದಾಯ, ಆಚರಣೆಗಳು ನಡೆಯುತ್ತದೆ. ಹಾಗೇ ಮದುವೆ ಮುಗಿದ ಬಳಿಕ ವಧು-ವರ ಪರಸ್ಪರ ಲಾಡು ಅಥವಾ ಇನ್ನಿತರ ಯಾವುದಾದರೂ ಒಂದು ಸಿಹಿಯನ್ನು ತಿನ್ನಿಸಿಕೊಳ್ಳುತ್ತಾರೆ. ಈ ಮದುವೆಯಲ್ಲಿ ಪತಿ ತನ್ನ ಪತ್ನಿಗೆ ಲಾಡು ತಿನ್ನಿಸಿದ ರೀತಿ ನಿಜಕ್ಕೂ ಕೋಪತರಿಸುವಂತಿದೆ. ವೈರಲ್​ ಆದ ವಿಡಿಯೋ ನೋಡಿ ನೆಟ್ಟಿಗರು, ಇದು ಪ್ರೀತಿಯಲ್ಲ..ದೌರ್ಜನ್ಯ. ಮದುವೆ ದಿನವೇ ಪತ್ನಿಯನ್ನು ಹಿಂಸಿಸಿದ ಈ ವ್ಯಕ್ತಿ ಇನ್ನು ಮುಂದೆಯೂ ಹಾಗೇ ನಡೆಸಿಕೊಳ್ಳುತ್ತಾನೆ ಎಂದೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆಗಿದ್ದಿಷ್ಟು..ಮದುವೆ ಮುಗಿದಿದೆ. ವಧು-ವರ ಇಬ್ಬರೂ ಹಾರ ಹಾಕಿಕೊಂಡೇ ಇದ್ದಾರೆ. ಬಂಧುಬಳಗದವರೂ ಸುತ್ತಲೂ ಇದ್ದಾರೆ. ವಧುವಿನ ಕೈಯಲ್ಲಿ ಲಾಡು ಕೊಟ್ಟು ಅದನ್ನು ಪತಿಗೆ ತಿನ್ನಿಸುವಂತೆ ಮೊದಲು ಹೇಳಲಾಯಿತು. ಅದರಂತೆ ಆಕೆ ಆತನ ಬಾಯಿಗೆ ಇಟ್ಟಳು. ಒಂದೇ ಗುಟುಕಿಗೆ ಆ ಲಾಡನ್ನು ಅವನೇನೋ ತಿಂದ. ಆದರೆ ತಿರುಗಿ ವರ ತನ್ನ ಪತ್ನಿಗೆ ಲಾಡು ತಿನ್ನಿಸಲು ಬಂದಾಗ ಅವಳು ನಾಚಿಕೆಯಿಂದ ಪಕ್ಕಕ್ಕೆ ಬಾಗಿ, ಮುಖ ತಿರುಗಿಸಿದಳು. ಅದೇನಾಯಿತೋ ಇವನಿಗೆ ಪತ್ನಿಯ ಜುಟ್ಟು ಹಿಡಿದು ತಲೆ ತಿರುಗಿಸಿ ಬಾಯಿಗೆ ತುರುಕೇಬಿಟ್ಟ… ಈ ವಿಡಿಯೋ ನೋಡಿದರೆ ನಿಮಗೂ ಒಂದು ಕ್ಷಣ ಕ್ರೂರತನ ಅನ್ನಿಸದೆ ಇರದು.

ಈ ವಿಡಿಯೋವನ್ನು ಇನ್​ಸ್ಟಾಗ್ರಾಂ ಬಳಕೆದಾರರೊಬ್ಬರು ಶೇರ್ ಮಾಡಿಕೊಂಡು, ಇದೊಂದು ಫನ್ನಿ ಎಂದಿದ್ದಾರೆ. ಆದರೆ ನೆಟ್ಟಿಗರು ಇದು ಜೋಕ್​ ಅಲ್ಲ ಬದಲಿಗೆ ದೌರ್ಜನ್ಯ ಎಂದಿದ್ದಾರೆ. ಪತಿಯಾದವನು ಮದುವೆ ದಿನ ಹೀಗೆ ನಡೆಸಿಕೊಳ್ಳುವುದಾ ಎಂದೂ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Covishield ಕೊವಿಶೀಲ್ಡ್‌ ಲಸಿಕೆ ಪಡೆದವರ ಪ್ರಯಾಣಕ್ಕೆ ಐರೋಪ್ಯ ಒಕ್ಕೂಟದ ಏಳು ದೇಶಗಳಿಂದ ಅನುಮತಿ

Groom Forcefully Shoves Ladoo Into Bride’s Mouth

Published On - 5:48 pm, Thu, 1 July 21

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ