Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ರಾಜಕುಮಾರನ ಗೆಟಪ್​ನಲ್ಲಿ ಬಂದ ವರ ಕುದುರೆ ಮೇಲೆ ಏರಲ್ಲ ಅಂದ: ಅಸಲಿ ಕಾರಣವೇ ಬೇರೆಯಿತ್ತು..!

Trending News: ಸಾಮಾನ್ಯವಾಗಿ ವೀರನಂತೆ ಕಾಣಲು ರಾಜರ ಗೆಟಪ್ ಜೊತೆ ಕುದುರೆಯಲ್ಲಿ ಮೆರವಣಿಗೆ ಮಾಡಿಸುವುದು ಕೆಲ ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಟ್ರೆಂಡ್.

Viral Video: ರಾಜಕುಮಾರನ ಗೆಟಪ್​ನಲ್ಲಿ ಬಂದ ವರ ಕುದುರೆ ಮೇಲೆ ಏರಲ್ಲ ಅಂದ: ಅಸಲಿ ಕಾರಣವೇ ಬೇರೆಯಿತ್ತು..!
ವೈರಲ್ ಸುದ್ದಿ
Follow us
TV9 Web
| Updated By: ಝಾಹಿರ್ ಯೂಸುಫ್

Updated on:Dec 26, 2021 | 10:06 PM

ಮದುವೆ ಮನೆಯಲ್ಲಿ ನಡೆಯುವ ಕೆಲ ಹಾಸ್ಯ ಪ್ರಸಂಗಗಳು ಇತ್ತೀಚಿನ ದಿನಗಳಲ್ಲಿ ವಿಡಿಯೋ ಮೂಲಕ ಹೊರಬರುತ್ತಿವೆ. ಅದರಲ್ಲೂ ಸೋಷಿಯಲ್ ಮೀಡಿಯಾ ಯುಗದಲ್ಲಿ ಮದುವೆ ಮನೆಯ ಹಲವು ತಮಾಷೆಯ ವಿಡಿಯೋಗಳನ್ನು ನೀವು ಕೂಡ ನೋಡಿರುತ್ತೀರಿ. ಆದರೆ ಇಲ್ಲೊಬ್ಬರು ಹಂಚಿಕೊಂಡಿರುವ ವಿಡಿಯೋ ನೋಡಿ ನಗಬೇಕೋ ಬೇಡ್ವೊ ಎಂದು ನೀವೇ ನಿರ್ಧರಿಸಿಕೊಳ್ಳಿ. ಏಕೆಂದರೆ ಇಲ್ಲಿ ವರನಿಗೆ ಪ್ರಾಣ ಸಂಕಟವಾದರೆ, ವಿಡಿಯೋ ನೋಡಿದವರಿಗೆ ಚೆಲ್ಲಾಟ.

ಹೌದು, ಮದುವೆಯ ದಿನ ವಧು ಅಥವಾ ವರನ ಬಗ್ಗೆ ಎಲ್ಲರೂ ತುಂಬಾ ಕಾಳಜಿವಹಿಸುತ್ತಾರೆ. ಅದರಲ್ಲೂ ಮದುವೆ ಗಂಡು ಅಥವಾ ಹೆಣ್ಣು ಯಾವ ಗೆಟಪ್​ನಲ್ಲಿರಬೇಕೆಂದು ಬಹಳ ದಿನಗಳ ಮುಂಚಿತವಾಗಿ ಕುಟುಂಬಸ್ಥರು ನಿರ್ಧರಿಸುತ್ತಾರೆ. ಅದರಲ್ಲೂ ಗಂಡಿನ ಕಡೆಯವರು ಸಾಮಾನ್ಯವಾಗಿ ವೀರನಂತೆ ಕಾಣಲು ರಾಜರ ಗೆಟಪ್ ಜೊತೆ ಕುದುರೆಯಲ್ಲಿ ಮೆರವಣಿಗೆ ಮಾಡಿಸುವುದು ಕೆಲ ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಟ್ರೆಂಡ್. ಆದರೆ ವರನು ಕುದುರೆ ಹತ್ತುವಾಗ ಪ್ಯಾಂಟ್ ಹರಿದು ಹೋದರೆ…ಆತನ ಪರಿಸ್ಥಿತಿ ಏನಾಗಬೇಡ..?

ಇಲ್ಲಿ ಆಗಿರುವುದು ಕೂಡ ಅದೇ. ವರನು ಕುದುರೆ ಹತ್ತುವಾಗ ಪ್ಯಾಂಟ್ ಹರಿದು ಹೋಗಿದೆ. ಇತ್ತ ಕುಟುಂಬಸ್ಥರು ಕುದುರೆ ಮೇಲೇರಲು ಸೂಚಿಸುತ್ತಿದ್ದಾರೆ. ಆದರೆ ಅತ್ತ ರಾಜಕುಮಾರನ ಗೆಟಪ್​ನಲ್ಲಿರುವ ವರ ಮಾತ್ರ ಬಿಲ್ಕುಲ್ ಒಪ್ಪುತ್ತಿಲ್ಲ. ಇದಾಗ್ಯೂ ಕುಟುಂಬದವರು ಬಿಡಬೇಕಲ್ವಾ. ಮತ್ತೆ ಮತ್ತೆ ಒತ್ತಾಯ ಮಾಡಿದಾಗ, ಅತ್ತ ವರನ ಸಹನೆಯ ಕಟ್ಟೆ ಹೊಡೆದಿದೆ. ಅಷ್ಟೇ ಅಲ್ಲದೆ ಸಿಟ್ಟಿನಿಂದ ನನ್ನ ಪ್ಯಾಂಟ್ ಹರಿದಿದೆ ಎಂದು ತನ್ನ ಕೋಪವನ್ನು ಹೊರಹಾಕಿದ್ದಾನೆ.

ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೆಲವರು ಆತನ ಪರಿಸ್ಥಿತಿ ನೋಡಿ ಮರುಗಿದರೆ, ಇನ್ನು ಕೆಲವರು ವರನ ಅವಸ್ಥೆಯನ್ನು ಟ್ರೋಲ್ ಮಾಡುತ್ತಿದ್ದಾರೆ. ಮತ್ತೆ ಕೆಲವರು ಗೆಟಪ್ ಯಾವುದೇ ಇದ್ದರೂ, ಸ್ಟಿಚ್ ಸ್ಟ್ರಾಂಗ್​ ಆಗಿರಬೇಕು ಎಂದು ಕಮೆಂಟಿಸಿ ಕಿಚಾಯಿಸುತ್ತಿದ್ದಾರೆ. ಒಟ್ಟಿನಲ್ಲಿ ರಾಜಕುಮಾರನ ಗೆಟಪ್​ನಲ್ಲಿ ಕಾಣಿಸಿಕೊಂಡ ವರ ಇದೀಗ ವೈರಲ್ ಆಗಿದ್ದಾನೆ. ಆದರೆ ಗೆಟಪ್​ನ ಕಾರಣದಿಂದಲ್ಲ ಎಂಬುದಷ್ಟೇ ಇಲ್ಲಿ ವ್ಯತ್ಯಾಸ.

ಇದನ್ನೂ ಓದಿ: IPL 2022: RCB ಮನೀಷ್ ಪಾಂಡೆಯನ್ನು ಯಾಕೆ ಖರೀದಿಸಬೇಕು ಅಂದರೆ…

ಇದನ್ನೂ ಓದಿ: IPL 2022: ಇವರೇ RCB ತಂಡದ ಮುಂದಿನ ಕ್ಯಾಪ್ಟನ್ ಎಂದ ಮಾಜಿ ಆರ್​ಸಿಬಿ ನಾಯಕ

Published On - 10:05 pm, Sun, 26 December 21

ವಿಧಾನಸಭೆಯಲ್ಲಿ ಮೊಬೈಲ್ ಬಳಸಿದ್ದಕ್ಕೆ ಕೋಪಗೊಂಡ ಬಿಹಾರ ಸಿಎಂ ನಿತೀಶ್ ಕುಮಾರ್
ವಿಧಾನಸಭೆಯಲ್ಲಿ ಮೊಬೈಲ್ ಬಳಸಿದ್ದಕ್ಕೆ ಕೋಪಗೊಂಡ ಬಿಹಾರ ಸಿಎಂ ನಿತೀಶ್ ಕುಮಾರ್
ಗೊತ್ತಿರದ ವಿಷಯದ ಬಗ್ಗೆ ಮಾತಾಡುವ ಜಾಯಮಾನ ನನ್ನದಲ್ಲ: ಪಾಟೀಲ್
ಗೊತ್ತಿರದ ವಿಷಯದ ಬಗ್ಗೆ ಮಾತಾಡುವ ಜಾಯಮಾನ ನನ್ನದಲ್ಲ: ಪಾಟೀಲ್
ಹರಪನಹಳ್ಳಿಯಲ್ಲಿ ಆಲಿಕಲ್ಲು ಸಹಿತ ಮಳೆ: ವರ್ಷದ ಮೊದಲ ಮಳೆಗೆ ಜನರು ಖುಷ್
ಹರಪನಹಳ್ಳಿಯಲ್ಲಿ ಆಲಿಕಲ್ಲು ಸಹಿತ ಮಳೆ: ವರ್ಷದ ಮೊದಲ ಮಳೆಗೆ ಜನರು ಖುಷ್
ಯತ್ನಾಳ್​ರನ್ನು ದೇಶದ್ರೋಹಿ ಎಂದು ಜರಿದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್
ಯತ್ನಾಳ್​ರನ್ನು ದೇಶದ್ರೋಹಿ ಎಂದು ಜರಿದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್
ಹನಿಟ್ರ್ಯಾಪ್​ ಕೇಸ್: ಡಿಕೆಶಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ಬಿಜೆಪಿ ಶಾಸಕ
ಹನಿಟ್ರ್ಯಾಪ್​ ಕೇಸ್: ಡಿಕೆಶಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ಬಿಜೆಪಿ ಶಾಸಕ
ಸದನದಲ್ಲಿ ರೋಷಾವೇಶದಿಂದ ಕೂಗಾಡಿದ ಶಾಸಕ ಮುನಿರತ್ನ ನಾಯ್ಡು
ಸದನದಲ್ಲಿ ರೋಷಾವೇಶದಿಂದ ಕೂಗಾಡಿದ ಶಾಸಕ ಮುನಿರತ್ನ ನಾಯ್ಡು
ರಾಜಣ್ಣಗೆ ಮಾತ್ರವಲ್ಲ ಪುತ್ರನಿಗೂ ಹನಿಟ್ರ್ಯಾಪ್​​​​​ ಬಲೆಗೆ ಬೀಳಿಸುವ ಸಂಚು!
ರಾಜಣ್ಣಗೆ ಮಾತ್ರವಲ್ಲ ಪುತ್ರನಿಗೂ ಹನಿಟ್ರ್ಯಾಪ್​​​​​ ಬಲೆಗೆ ಬೀಳಿಸುವ ಸಂಚು!
ಹನಿಟ್ರ್ಯಾಪ್ ಕೇಸ್ ಉನ್ನತ ಮಟ್ಟದ ತನಿಖೆಗೆ: ಸದನದಲ್ಲೇ ಘೋಷಿಸಿದ ಗೃಹ ಸಚಿವ
ಹನಿಟ್ರ್ಯಾಪ್ ಕೇಸ್ ಉನ್ನತ ಮಟ್ಟದ ತನಿಖೆಗೆ: ಸದನದಲ್ಲೇ ಘೋಷಿಸಿದ ಗೃಹ ಸಚಿವ
ಯಾರು ಮಾಡಿಸುತ್ತಿದ್ದಾರೆ ಅಂತ ಹೇಳಿದರೆ ರಾಜಕೀಯ ಆರೋಪವಾಗುತ್ತದೆ: ಸಚಿವ
ಯಾರು ಮಾಡಿಸುತ್ತಿದ್ದಾರೆ ಅಂತ ಹೇಳಿದರೆ ರಾಜಕೀಯ ಆರೋಪವಾಗುತ್ತದೆ: ಸಚಿವ
ರಾಯರೆಡ್ಡಿ ಇಂಗ್ಲಿಷಲ್ಲಿ ಮಾತು; ಯತ್ನಾಳ್ ಸಹ ಇಂಗ್ಲಿಷ್ ಭಾಷೆಯಲ್ಲೇ ಉತ್ತರ!
ರಾಯರೆಡ್ಡಿ ಇಂಗ್ಲಿಷಲ್ಲಿ ಮಾತು; ಯತ್ನಾಳ್ ಸಹ ಇಂಗ್ಲಿಷ್ ಭಾಷೆಯಲ್ಲೇ ಉತ್ತರ!