AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್ಡರ್ ಮಾಡಿದ್ದು ವೆಜ್​​ ಬರ್ಗರ್​​; ತಿಂದಿದ್ದು ನಾನ್​​​​​ ವೆಜ್​​ ಬರ್ಗರ್​​​!

ಆರ್ಡರ್ ಮಾಡಿದ್ದು ವೆಜ್​​ ಬರ್ಗರ್, ಆದ್ರೆ ಬರ್ಗರ್ ತಿಂದಾಗ ವಿಚಿತ್ರವಾದ ರುಚಿ ಅನ್ನಿಸಿದ ಕಾರಣ ಮಧ್ಯದ ಸ್ಲೈಸ್ ಅನ್ನು ತೆರೆದಾಗ ಅದರಲ್ಲಿ ಮಾಂಸ ಕಂಡುಬಂದಿದೆ. ನಾನ್ ವೆಜ್ ಬರ್ಗರ್ ತಿಂದ ಕುಟುಂಬಸ್ಥರ ಆರೋಗ್ಯ ಹದಗೆಟ್ಟಿದೆ. ಈ ವಿಚಾರವಾಗಿ ಗ್ರಾಹಕರ ವೇದಿಕೆ ಮೆಟ್ಟಿಲೇರಿದ್ದಾರೆ ಶುದ್ಧ ಸಸ್ಯಹಾರಿ ಕುಟುಂಬ.

ಆರ್ಡರ್ ಮಾಡಿದ್ದು ವೆಜ್​​ ಬರ್ಗರ್​​; ತಿಂದಿದ್ದು ನಾನ್​​​​​ ವೆಜ್​​ ಬರ್ಗರ್​​​!
Non-Veg BurgerImage Credit source: Pinterest
ಅಕ್ಷತಾ ವರ್ಕಾಡಿ
|

Updated on: Feb 06, 2024 | 5:37 PM

Share

ಮಧ್ಯಪ್ರದೇಶದ ಗ್ವಾಲಿಯರ್‌ನ ಶುದ್ಧ ಸಸ್ಯಹಾರಿ (Pure Vegetarian)  ಕುಟುಂಬವೊಂದು ರಾತ್ರಿಯ ಊಟಕ್ಕೆ ಆನ್‌ಲೈನ್‌ನಲ್ಲಿ ವೆಜ್​​ ಬರ್ಗರ್(Veg Burger)​​ ಆರ್ಡರ್​​​ ಮಾಡಿದೆ. ಆದರೆ ಬರ್ಗರ್​​ ಅರ್ಧ ತಿಂದ ಬಳಿಕ ಅದು ನಾನ್​​ ವೆಜ್​​ ಎಂದು ತಿಳಿದಿದೆ. ಆಹಾರ ಸೇವಿಸಿದ ಕುಟುಂಬ ಸದಸ್ಯರು ಅಸ್ವಸ್ಥತೆ ಒಳಗಾಗಿದ್ದಾರೆ. ಈ ಕುಟುಂಬ ವಿತರಣಾ ಕಂಪನಿ ಮತ್ತು ರೆಸ್ಟೋರೆಂಟ್ ವಿರುದ್ಧ ಗ್ರಾಹಕರ ರೂಪದಲ್ಲಿ ದೂರು ದಾಖಲಿಸಿದ್ದಾರೆ.

ವೆಜ್ ಬರ್ಗರ್ ಮತ್ತು ಚಾಕೊ ಲಾವಾ ಆರ್ಡರ್ :

ಫೆಬ್ರವರಿ 2 ರ ರಾತ್ರಿ ಕುಟುಂಬದೊಂದಿಗೆ ಬರ್ಗರ್ ಮತ್ತು ಚಾಕೊ ಲಾವಾ ತಿನ್ನಲು ನಿರ್ಧರಿಸಿದ್ದರು ಎಂದು ಥಾಟಿಪುರ ನಿವಾಸಿ ಆಶಿಶ್ ಶರ್ಮಾ ಮಾಹಿತಿ ನೀಡಿದ್ದಾರೆ. ಆಶಿಶ್ ನಗರದ ಬರ್ಗರ್ ಬಡಿ ರೆಸ್ಟೋರೆಂಟ್‌ನಿಂದ ಝೊಮಾಟೊ ಆಪ್ ಮೂಲಕ ವೆಜ್ ಬರ್ಗರ್ ಮತ್ತು ಚಾಕೊ ಲಾವಾ ಆರ್ಡರ್ ಮಾಡಿದ್ದರು. ಸ್ವಲ್ಪ ಸಮಯದ ನಂತರ, Zomato ಕಂಪನಿಯ ಡೆಲಿವರಿ ಬಾಯ್ ಆಹಾರವನ್ನು ವಿತರಿಸಿ ಹೊರಟುಹೋಗಿದ್ದಾನೆ. ಮನೆಯವರು ಬರ್ಗರ್ ತಿಂದಾಗ ವಿಚಿತ್ರವಾದ ರುಚಿ ಅನ್ನಿಸಿತು. ನಂತರ ಮಧ್ಯದ ಸ್ಲೈಸ್ ಅನ್ನು ತೆರೆದಾಗ ಅದರಲ್ಲಿ ಮಾಂಸ ಕಂಡುಬಂದಿದೆ.

ಇದನ್ನೂ ಓದಿ: ನೋಡಲು ತುಕ್ಕು ಹಿಡಿದಂತಿರುವ ಈ ಬೆಲ್ಟ್​​​ನ ಬೆಲೆ ಕೇಳಿದ್ರೆ ನೀವು​​​ ಶಾಕ್ ಆಗುವುದಂತೂ ಖಂಡಿತಾ!

ಚೋಕೋ ಲಾವಾದ ರ್ಯಾಪರ್ ಅನ್ನು ತೆರೆದಾಗ ಅದು ನಾನ್ ವೆಜ್ ಆಗಿತ್ತು. ನಾನ್ ವೆಜ್ ಬರ್ಗರ್ ತಿಂದ ಕುಟುಂಬಸ್ಥರ ಆರೋಗ್ಯ ಹದಗೆಟ್ಟಿದೆ. ಈ ಬಗ್ಗೆ ಝೊಮಾಟೊ ಕಂಪನಿ ಹಾಗೂ ದೊಡ್ಡ ರೆಸ್ಟೊರೆಂಟ್ ನಿರ್ವಾಹಕರಿಗೆ ಆಶಿಶ್ ದೂರು ನೀಡಿದರೂ ಅಲ್ಲಿಂದ ಯಾವುದೇ ಪರಿಹಾರ ಸಿಕ್ಕಿಲ್ಲ. ಈ ವಿಚಾರವಾಗಿ ಗ್ರಾಹಕರ ವೇದಿಕೆ ಮೆಟ್ಟಿಲೇರಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Akshatha Vorkady
Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!