AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Palace on Wheels: ಅಯೋಧ್ಯೆ ಯಾತ್ರೆ ಪ್ರಾರಂಭಿಸಿದ ವಿಶ್ವದ ಐಷಾರಾಮಿ ರೈಲು; 42 ವರ್ಷಗಳ ಬಳಿಕ ರೈಲಿನ ಮಾರ್ಗ ಬದಲಾವಣೆ

ಪ್ಯಾಲೇಸ್ ಆನ್ ವೀಲ್ಸ್ ಶೀಘ್ರದಲ್ಲೇ ಧಾರ್ಮಿಕ ಪ್ರಯಾಣವನ್ನು ಕೈಗೊಳ್ಳಲಿದೆ. ಈ ರೈಲು ಧಾರ್ಮಿಕ ಸ್ಥಳಗಳಿಗೆ ಪ್ರವಾಸಕ್ಕೆ ಹೋಗುವುದರಿಂದ ಅದರಲ್ಲಿ ಪ್ರಯಾಣಿಸುವ ಪ್ರಯಾಣಿಕರ ಆಹಾರ ಮೆನುವನ್ನು ಬದಲಾಯಿಸಲಾಗಿದ್ದು, ಪ್ರಯಾಣಿಕರಿಗೆ ಮದ್ಯವನ್ನು ನೀಡಲಾಗುವುದಿಲ್ಲ. ಜೊತೆಗೆ ಮಧ್ಯಾಹ್ನ ಅಥವಾ ರಾತ್ರಿಯ ಊಟದಲ್ಲಿ ಬೆಳ್ಳುಳ್ಳಿ ಮತ್ತು ಈರುಳ್ಳಿ ಕರಿಯನ್ನು ನಿಷೇಧಿಸಿದೆ. ಈ ರೈಲು ವಾರಣಾಸಿ, ಮಥುರಾ, ವೃಂದಾವನ ಮತ್ತು ಅಯೋಧ್ಯೆ ಮುಂತಾದ ಧಾರ್ಮಿಕ ನಗರಗಳಿಗೆ ಭೇಟಿ ನೀಡಲಿದೆ.

Palace on Wheels: ಅಯೋಧ್ಯೆ ಯಾತ್ರೆ ಪ್ರಾರಂಭಿಸಿದ ವಿಶ್ವದ ಐಷಾರಾಮಿ ರೈಲು; 42 ವರ್ಷಗಳ ಬಳಿಕ ರೈಲಿನ ಮಾರ್ಗ ಬದಲಾವಣೆ
Palace on Wheels on religious journey
ಅಕ್ಷತಾ ವರ್ಕಾಡಿ
|

Updated on:Feb 07, 2024 | 12:37 PM

Share

42 ವರ್ಷಗಳ ನಂತರ ಮೊದಲ ಬಾರಿಗೆ ರಾಜಸ್ಥಾನದ ರಾಯಲ್ ಟ್ರೈನ್ ಎಂದು ಕರೆಯಲ್ಪಡುವ ಪ್ಯಾಲೇಸ್ ಆನ್ ವೀಲ್ಸ್(Palace on Wheels) ಶೀಘ್ರದಲ್ಲೇ ಧಾರ್ಮಿಕ ಪ್ರಯಾಣವನ್ನು ಕೈಗೊಳ್ಳಲಿದೆ. ಈ ರೈಲು ಪ್ರಯಾಗರಾಜ್, ವಾರಣಾಸಿ ಮೂಲಕ ರಾಮನಗರ ಅಯೋಧ್ಯೆಗೆ ಹೋಗಲಿದೆ. ಇಲ್ಲಿಂದ ಈ ರೈಲು ಆರು ದಿನಗಳ ನಂತರ ಮಥುರಾ ವೃಂದಾವನದ ಮೂಲಕ ದೆಹಲಿಗೆ ಮರಳಲಿದೆ. ಈ ರೈಲು ಧಾರ್ಮಿಕ ಸ್ಥಳಗಳಿಗೆ ಪ್ರವಾಸಕ್ಕೆ ಹೋಗುವುದರಿಂದ ಅದರಲ್ಲಿ ಪ್ರಯಾಣಿಸುವ ಪ್ರಯಾಣಿಕರ ಆಹಾರ ಮೆನುವನ್ನು ಬದಲಾಯಿಸಲಾಗಿದೆ. ಹೊಸ ಬದಲಾವಣೆಯ ಪ್ರಕಾರ, ಪ್ರಯಾಣಿಕರಿಗೆ ಮದ್ಯವನ್ನು ನೀಡಲಾಗುವುದಿಲ್ಲ ಅಥವಾ ಮಧ್ಯಾಹ್ನ ಅಥವಾ ರಾತ್ರಿಯ ಊಟದಲ್ಲಿ ಬೆಳ್ಳುಳ್ಳಿ ಮತ್ತು ಈರುಳ್ಳಿ ಕರಿಯನ್ನು ನಿಷೇಧಿಸಿದೆ. ಈ ರೈಲನ್ನು ಆರ್‌ಟಿಡಿಸಿಯಿಂದ 7 ವರ್ಷಗಳ ಕಾಲ ಗುತ್ತಿಗೆ ಪಡೆದಿರುವ ಕಂಪನಿಯು ಈ ಹೊಸ ಪ್ರಯಾಣದ ನೀಲಿನಕ್ಷೆಯನ್ನು ಆರ್‌ಟಿಡಿಸಿ ಮುಂದೆ ಸಲ್ಲಿಸಿದೆ.

ಪ್ಯಾಲೇಸ್ ಆನ್ ವೀಲ್ಸ್ ಟಿಕೇಟ್​​ ದರ ಎಷ್ಟು?

ಪ್ಯಾಲೇಸ್ ಆನ್ ವೀಲ್ಸ್‌ನ ನಿರ್ದೇಶಕ ಪ್ರದೀಪ್ ಬೋಹ್ರಾ ಪ್ರಕಾರ, ಈ ರೈಲಿನಲ್ಲಿ ಪ್ರಯಾಣಿಸಲು ದಿನಕ್ಕೆ 70 ಸಾವಿರ ರೂ ಪಾವತಿಸಬೇಕು. ಈ 70 ಸಾವಿರ ನಿಮಗೆ ಹೆಚ್ಚೆನಿಸಬಹುದು ಆದರೆ ಇದು ಸೆಮಿ-ಡೀಲಕ್ಸ್ ಕೋಚ್‌ನ ದರ. ಈ ರೈಲಿನ ಡಿಲಕ್ಸ್ ಕೋಚ್ ನಲ್ಲಿ ಪ್ರಯಾಣಿಸಲು ಪ್ರಯಾಣಿಕರು ದಿನಕ್ಕೆ 95 ಸಾವಿರ ರೂ. ಇದಲ್ಲದೇ ಸೂಪರ್ ಡಿಲಕ್ಸ್‌ನ ದರವು ದಿನಕ್ಕೆ ಸುಮಾರು 2 ಲಕ್ಷ ರೂ. ಒಟ್ಟಾಗಿ ನೀವು ಈ ರೈಲಿನಲ್ಲಿ ಪ್ರಯಾಣಿಸಲು 13 ಲಕ್ಷ ರೂ. ಖರ್ಚು ಮಾಡಬೇಕಿದೆ. ರೈಲಿನಲ್ಲಿ ಒಂದು ಬಾರಿಗೆ ಒಟ್ಟು 46 ಪ್ರಯಾಣಿಕರು ಪ್ರಯಾಣಿಸಬಹುದು. ಈಗ ಈ ರೈಲು ನಾಲ್ಕನೇ ತಲೆಮಾರಿನದ್ದಾಗಿದೆ ಎಂದು ತಿಳಿಸಿದರು. ಅದರ ನಾಲ್ಕನೇ ನವೀಕರಣವನ್ನು ಹೊಸ ಕಂಪನಿಯೇ ಮಾಡಿದೆ. ವಿಶ್ವದರ್ಜೆಯ ಸೌಲಭ್ಯಗಳನ್ನು ಹೊಂದಿರುವ ಈ ರೈಲಿನಲ್ಲಿ ಮಲಗುವ ಕೋಣೆ, ವಿಶ್ರಾಂತಿ ಕೋಣೆ, ಅಡುಗೆಮನೆ ಹೀಗೆ ಸಾಕಷ್ಟು ಐಷಾರಾಮಿ ಸೌಲಭ್ಯಗಳಿವೆ.

ಇದನ್ನೂ ಓದಿ: ಭಾರತದಲ್ಲಿ ನಿರ್ಮಾಣವಾಗುತ್ತಿದೆ ವಿಶ್ವದ ಮೊದಲ ‘ಓಂ’ ಆಕಾರದ ದೇವಾಲಯ

ಪ್ಯಾಲೇಸ್ ಆನ್ ವೀಲ್ಸ್ ಧಾರ್ಮಿಕ ಪ್ರಯಾಣ ಆರಂಭ ಯಾವಾಗ?

ಬೋಹ್ರಾ ಪ್ರಕಾರ, ಕಂಪನಿಯು ಈ ರೈಲನ್ನು ಮೇ ತಿಂಗಳಿನಿಂದ ಧಾರ್ಮಿಕ ಪ್ರಯಾಣಕ್ಕೆ ಕಳುಹಿಸಲು ಪ್ರಯತ್ನಿಸುತ್ತಿದೆ. ಈ ಯಾತ್ರೆಯು 6 ಹಗಲು ಮತ್ತು 7 ರಾತ್ರಿಗಳ ಕಾಲ ನಡೆಯಲಿದೆ . ಈ ಅವಧಿಯಲ್ಲಿ, ಪ್ರಯಾಗ್ರಾಜ್, ವಾರಣಾಸಿ, ಮಥುರಾ, ವೃಂದಾವನ ಮತ್ತು ಅಯೋಧ್ಯೆ ಮುಂತಾದ ಧಾರ್ಮಿಕ ನಗರಗಳಿಗೆ ಭೇಟಿ ನೀಡಲು ಪ್ರಯಾಣಿಕರನ್ನು ಕರೆದೊಯ್ಯಲಾಗುತ್ತದೆ ಎಂದು ತಿಳಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:35 pm, Wed, 7 February 24

Follow Us
Akshatha Vorkady
Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!