AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಮನುಷ್ಯನ ದುರಾಸೆಗೆ ಕ್ರೂರತನಕ್ಕೆ ಕೊನೆಯೇ ಇಲ್ಲವೆ?

Baby birds fall to death : ಸಾಕಷ್ಟು ಪುಟ್ಟಹಕ್ಕಿಗಳು ಒಂದೇ ಏಟಿಗೆ ಜೀವಕಳೆದುಕೊಳ್ಳುವಂಥ ಹೃದಯವಿದ್ರಾವಕ ಘಟನೆಯಿದು. ಇದು ನಡೆದದ್ದು ಕೇರಳದ ಮಲಪ್ಪುರಂನಲ್ಲಿ.

Viral Video : ಮನುಷ್ಯನ ದುರಾಸೆಗೆ ಕ್ರೂರತನಕ್ಕೆ ಕೊನೆಯೇ ಇಲ್ಲವೆ?
ಪಕ್ಷಿಗಳ ಮಾರಣಹೋಮ
TV9 Web
| Updated By: ಶ್ರೀದೇವಿ ಕಳಸದ|

Updated on:Sep 02, 2022 | 5:02 PM

Share

Viral Video : ಬೃಹತ್ ಮರವನ್ನು ಬುಡಸಮೇತ ನೆಲಕ್ಕುರುಳಿಸಿದಾಗ ಅದರಲ್ಲಿದ್ದ ಸಾಕಷ್ಟು ಹಕ್ಕಿಮರಿಗಳು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಕೇರಳದ ಮಲಪ್ಪುರಂನಲ್ಲಿ ನಡೆದಿದೆ. ಈ ವಿಡಿಯೋ ಟ್ವಿಟರ್​ನಲ್ಲಿ ಹರಿದಾಡುತ್ತ ವೈರಲ್ ಆಗಿದೆ. ಏಳು ಗಂಟೆಗಳಲ್ಲಿ ಸುಮಾರು 7,000 ಕ್ಕೂ ಹೆಚ್ಚು ರೀಟ್ವೀಟ್​ ಪಡೆದಿದೆ. ಈ ವಿಡಿಯೋ ಅನ್ನು ಟ್ವಿಟರ್​ನಲ್ಲಿ ಹಂಚಿಕೊಂಡವರು ಐಎಫ್​ಎಸ್​ ಅಧಿಕಾರಿ ಪರವೀನ್ ಕಸ್ವಾನ್. ‘ಪ್ರತಿಯೊಬ್ಬರಿಗೂ ಮನೆ ಬೇಕು. ಆದರೆ, ನಾವು ಅದೆಷ್ಟು ಕ್ರೂರಿಗಳಾದೆವು’ ಎಂಬ ನೋಟ್ ಅವರ ಪೋಸ್ಟ್​ನಲ್ಲಿದೆ. 44 ಸೆಕೆಂಡುಗಳ ಜೀವ ಚುರುಗುಟ್ಟುವ ಈ ವಿಡಿಯೋ ನೋಡಲು ನಿಜಕ್ಕೂ ಕಷ್ಟವಾಗುತ್ತದೆ. ಇನ್ನು ಜೀವ ಕಳೆದುಕೊಂಡ ಆ ಹಕ್ಕಿಗಳು, ಅವುಗಳ ಅಪ್ಪ ಅಮ್ಮ ಬಳಗ…

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ಕ್ಲಿಪ್​ ಕೇರಳದ ಮಲಪ್ಪುರಂ ಜಿಲ್ಲೆಯ ತಿರುರಂಗಡಿಯ ವಿಕೆ ಪಾಡಿಯಿಂದ ವರದಿಯಾಗಿದೆ. ಈ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗಾಗಿ ಈ ಮರವನ್ನು ಜೆಸಿಬಿಯಿಂದ ನೆಲಕ್ಕುರುಳಿಸಲಾಗಿದೆ. ಮರ ಉರುಳಿ ಬೀಳುತ್ತಿದ್ದಂತೆ ಜನರೇ ಗಾಬರಿಯಾಗಿದ್ದಾರೆ, ಇನ್ನು ಸಣ್ಣಪುಟ್ಟ ಹಕ್ಕಿಗಳು?  ಅದೂ ಅವುಗಳು ತಮ್ಮತಮ್ಮ ಮರಿಗಳೊಡನೆ ಗೂಡಿನೊಳಗೆ ಇರುವಾಗ ಹೇಗಾಗಿರಬೇಡ?

ಈ ಘಟನೆ ಕುರಿತು ಕೇರಳ ಅರಣ್ಯ ಇಲಾಖೆಯು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದೆ. ವರದಿಗಳ ಪ್ರಕಾರ, ಅಧಿಕೃತ ಪರವಾನಿಗೆ ಇಲ್ಲದೆ ಈ ಮರವನ್ನು ಕಡಿಯಲಾಗಿದೆ. ಹಾಗಾಗಿ ಜೆಸಿಬಿ ಚಾಲಕನೊಂದಿಗೆ ವಿಚಾರಣೆ ನಡೆಸಿ ಆತನನ್ನು ಬಂಧಿಸಲಾಗಿದೆ.

ಅರಣ್ಯ ಸಚಿವ ಎ.ಕೆ. ಸಸೀಂದ್ರನ್, ಈ ಘಟನೆ ಅತ್ಯಂತ ಕ್ರೂರ ಎಂದಿದ್ದಾರೆ. ಇಲಾಖೆಯ ಅನುಮತಿಯಿಲ್ಲದೆ ಹೀಗೆ ಮಾಡಿರುವುದು ಅಪರಾಧ. ಅದರಲ್ಲೂ ಪಕ್ಷಿಗಳು ಮತ್ತು ಗೂಡುಗಳಿದ್ದ ಮರವನ್ನು ಇದ್ದಕ್ಕಿದ್ದ ಹಾಗೆ ಹೀಗೆ ಕಡಿಯಬಾರದು. ಮರ ಕಡಿಯಲು ಅರಣ್ಯ ಇಲಾಖೆಯಿಂದ ಕಟ್ಟುನಿಟ್ಟಾದ ಮಾರ್ಗಸೂಚಿಗಳಿದ್ದು ಅವುಗಳನ್ನು ಪಾಲಿಸಬೇಕಾಗುತ್ತದೆ. ಈ ಘಟನೆಗೆ ಸಂಬಂಧಿಸಿ ಹೆಚ್ಚಿನ ತನಿಖೆ ಮಾಡಲಾಗುವುದು ಎಂದಿದ್ದಾರೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 5:00 pm, Fri, 2 September 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ