AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Trending : ಈ ನಾಯಿಯ ಹುಟ್ಟುಹಬ್ಬದ ಥೀಮ್ ಹೇಗಿದೆ?

Birthday Theme : ತಮ್ಮ ಸಾಕುಪ್ರಾಣಿಗಳ ಹುಟ್ಟುಹಬ್ಬವನ್ನೂ ಥೀಮ್​ನಡಿ ಸಂಭ್ರಮಿಸುವ ಟ್ರೆಂಡ್​ ಈಗ ಚಾಲ್ತಿಯಲ್ಲಿದೆ. ಪ್ರೀತಿಸುವವರಿಗೆ ಮಕ್ಕಳಾದರೇನು, ಪ್ರಾಣಿಗಳಾದರೇನು? ಎಲ್ಲವೂ ಒಂದೇ ಅಲ್ಲವೆ?

Trending : ಈ ನಾಯಿಯ ಹುಟ್ಟುಹಬ್ಬದ ಥೀಮ್ ಹೇಗಿದೆ?
ಹೇಗಿದೆ ನನ್ನ ಬರ್ತಡೇ ಥೀಮ್​ ಅಂತಿದೆ ಈ ನಾಯಿ
TV9 Web
| Edited By: ಶ್ರೀದೇವಿ ಕಳಸದ|

Updated on:Sep 03, 2022 | 12:24 PM

Share

Trending : ನಮ್ಮವು, ನಮ್ಮ ಮಕ್ಕಳು ಎಂದು ನೋಡಿಕೊಳ್ಳುವ ಪೋಷಕರಿಗೆ ಬೆಕ್ಕು, ನಾಯಿಗಳ ಹುಟ್ಟುಹಬ್ಬವನ್ನು ಹೇಗೆ ವಿಶೇಷವಾಗಿ ಆಚರಿಸಬೇಕು ಎನ್ನುವ ಆಲೋಚನೆ ಇರದಿದ್ದೀತೆ? ಈಗಂತೂ ಮುದ್ದು ಬೆಕ್ಕು ನಾಯಿಗಳ ಬರ್ತಡೇ ಆಚರಿಸುವುದು ಅವುಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದು ಚಾಲ್ತಿಯಲ್ಲಿರುವ ಟ್ರೆಂಡ್. ಏಕೆಂದರೆ ಲಾಕ್​ಡೌನ್​ ಶುರುವಾಗುತ್ತಿದ್ದ ಹಾಗೆ ಜೀವನವೇ ಆನ್​ಲೈನ್​ಮಯ ಆಗಿಹೋಯ್ತು. ಅದರಲ್ಲೂ ನಾಯಿಬೆಕ್ಕುಗಳಿಗಾಗಿಯೇ ಸಾಮಾಜಿಕ ಜಾಲತಾಣದಲ್ಲಿ ಪೇಜ್​ಗಳನ್ನು ನಿರ್ವಹಿಸುವವರ ಸಂಖ್ಯೆಯಂತೂ ಮಿಲಿಯಗಟ್ಟಲೆ ಮೀರಿದೆ. ನಿತ್ಯವೂ ಮಕ್ಕಳಂತೆ ಅವುಗಳನ್ನು ಪೋಷಿಸುವುದು. ಒಂದೊಂದು ವಿಡಿಯೋ ಅನ್ನು ಅಷ್ಟೇ ಶ್ರದ್ಧೆಯಿಂದ ಅಪ್​ಲೋಡ್ ಮಾಡುವುದು. ಬೆಳವಣಿಗೆಯನ್ನೆಲ್ಲ ದಾಖಲಿಸುವುದು. ಬದುಕು ಕೊಡುವ ಏರಿಳಿತಗಳನ್ನೆಲ್ಲ ಪ್ರಾಣಿಗಳನ್ನು ಪ್ರೀತಿಸುವುದರ ಮೂಲಕ ಹೀಗೆ ಇಲ್ಲಿ ಸಮದೂಗಿಸಿಕೊಳ್ಳುವ ಪ್ರಯತ್ನಗಳು ನಿರಂತರವಾಗಿ ಸಾಗಿವೆ. ಈಗಿಲ್ಲಿ ಕ್ರಿಸ್ಟಲ್​ ಎಂಬ ಟ್ವಿಟರಲ್​ ಪುಟದಲ್ಲಿ ಇರುವ ಮುದ್ದಿನ ನಾಯಿಗೆ ಎರಡನೇ ಹುಟ್ಟುಹಬ್ಬದ ಸಂತಸ. ಈ ಫೋಟೋಗಳು ವೈರಲ್ ಆಗಿವೆ. ಯಾಕೆ? ನೀವೇ ನೋಡಿ.

ನಾಯಿ ಧರಿಸಿರುವ ಆ ಬಟ್ಟೆಯ ವಿನ್ಯಾಸ ಗಮನಿಸಿ. ಬರ್ತಡೇ ಥೀಮ್​ ಗಮನಿಸಿ. ಈ ಮೂಲಕ ಅದರ ಪೋಷಕರ ಅಭಿರುಚಿಯನ್ನೂ ಗ್ರಹಿಸಬಹುದು. ಬಝ್​ ಲೈಟ್​ಇಯರ್ ಕಾಸ್ಟ್ಯೂಮ್ ಅನ್ನು ಅದು ಧರಿಸಿದೆ. ಈ ಪೋಸ್ಟ್​, ನಾಯಿಯನ್ನು ಸಾಕಿದ ಇತರರಿಂದ ಸಾಕಷ್ಟು ಲೈಕ್ಸ್​, ಕಮೆಂಟ್​ಗಳನ್ನು ಪಡೆಯುತ್ತಿದೆ. ಆಗಸ್ಟ್ 29ರಂದು ಮಾಡಿದ ಪೋಸ್ಟ್​ ಸುಮಾರು 20,000 ಲೈಕ್ಸ್​, 14,000 ರೀಟ್ವೀಟ್ ಪಡೆದಿದೆ.

ನೀವು ನಿಮ್ಮ ಸಾಕುಪ್ರಾಣಿಗಳ ಹುಟ್ಟುಹಬ್ಬವನ್ನು ಹೇಗೆ, ಯಾವ ಥೀಮ್​ನಲ್ಲಿ ಆಚರಿಸಬೇಕು ಎಂದು ಯೋಚಿಸುತ್ತಿದ್ದೀರಾ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:18 pm, Sat, 3 September 22

Follow Us
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ